Site icon Vistara News

BBK SEASON 10: ಬಿಗ್‌ ಬಾಸ್‌ ಮನೆಯಿಂದ ಈ ವಾರ ಸಿರಿ ಔಟ್‌!

Siri out of Bigg Boss house this week

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10 (BBK SEASON 10), ಹದಿಮೂರನೇ ವಾರಕ್ಕೆ ಕಾಲಿಟ್ಟಿದೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ಹೆಚ್ಚಾಗಿದೆ. ಈ ವಾರ ಒಟ್ಟೂ ಎಂಟು ಮಂದಿ ನಾಮಿನೇಟ್‌ ಆಗಿದ್ದಾರೆ. ವರ್ತೂರು ಸಂತೋಷ್, ತುಕಾಲಿ ಸಂತೋಷ್, ವಿನಯ್ ಗೌಡ, ಮೈಕಲ್, ಸಂಗೀತಾ, ಕಾರ್ತಿಕ್, ಸಿರಿ ಹಾಗೂ ತನಿಷಾ ನಾಮಿನೇಟ್ ಆಗಿದ್ದಾರೆ. ನಮ್ರತಾ ಹಾಗೂ ಪ್ರತಾಪ್ ನಾಮಿನೇಷ್​ನಿಂದ ಬಚಾವ್ ಆಗಿದ್ದಾರೆ. ಇದೀಗ ಮೂಲಗಳ ಪ್ರಕಾರ ಈ ವಾರ ಸಿರಿ ಮನೆಯಿಂದ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ.

ಕಳೆದ ವಾರವೇ ಸಿರಿ ಹೋಗಬೇಕಿತ್ತು ಎಂದು ವೀಕ್ಷಕರು ಅಭಿಪ್ರಾಯ ಹೊರ ಹಾಕಿದ್ದರು. ಕಳೆದ ವಾರವೇ ಮೈಕಲ್ ಮನೆಯಿಂದ ಆಚೆ ಬರಬೇಕಿತ್ತು. ಕಾರು ಏರಿ ಮನೆಯಿಂದ ಹೊರಟೂ ಬಿಟ್ಟಿದ್ದರು. ಆದರೆ, ಬಿಗ್ ಬಾಸ್ ಅಲ್ಲೊಂದು ಟ್ವಿಸ್ಟ್ ಕೊಟ್ಟಿದ್ದರು. ಪರಿಣಾಮ ಮೈಕಲ್ ಸೇಫ್ ಆದರು. ಆದರೆ, ಈ ಬಾರಿಯಾದರೂ ಮೈಕಲ್ ಮನೆಯಿಂದ ಹೊರ ಬರಲಿದ್ದಾರೆ ಎಂಬ ಲೆಕ್ಕಾಚಾರವಿತ್ತು. ಅದು ಸುಳ್ಳಾದಂತೆ ಕಾಣುತ್ತಿದೆ. ಸಿರಿ ಕೂಡ ಸ್ಟ್ರಾಂಗ್‌ ಸ್ಪರ್ಧಿ ಆಗಿರಲಿಲ್ಲ.

ಅಷ್ಟೇ ಅಲ್ಲದೇ ಶನಿವಾರ ವೀಕೆಂಡ್‌ ಪಂಚಾಯಿತಿಯಲ್ಲಿ ಸಿರಿ ಅವರನ್ನು ಯಾವೊಬ್ಬ ಸ್ಪರ್ಧಿಗಳು ಟಾಪ್‌ 3ಯಲ್ಲಿ ಇರಿಸಿರಲಿಲ್ಲ. ಸಿರಿ ಅವರ ಬೇಸರಕ್ಕೂ ಕಾರಣವಾಗಿತ್ತು. ಇದೀಗ ಸಿರಿ ಅವರು ಮನೆಯಿಂದ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ. ಟಾಸ್ಕ್‌ ವಿಚಾರ ಬಂತೆಂದರೆ ಅಷ್ಟಾಗಿ ಸಿರಿ ಅವರು ಹಿಂದೆ ಇರುತ್ತಿರಲಿಲ್ಲ. ನಮ್ರತಾ ಅವರು ಕೂಡ ಈ ಹಿಂದೆ ತುಕಾಲಿ ಜತೆ ಫೈನಲ್‌ವರೆಗೆ ಸಿರಿ ಬರುತ್ತಾರೇನೋ ಎಂದು ಕಳವಳ ವ್ಯಕ್ತಪಡಿಸಿದ್ದರು. ಆದರೀಗ ಸಿರಿ ಅವರು ಆಟದ ಜರ್ನಿಯನ್ನು ಮುಗಿಸಿದ್ದಾರೆ ಎನ್ನಾಲಾಗುತ್ತಿದೆ.

ಇದನ್ನೂ ಓದಿ: BBK SEASON 10: ಅಗ್ರೆಸಿವ್‌ ಆಗಲ್ಲ ಅಂದಿದ್ದ ವಿನಯ್‌ ಕೆಂಡಾಮಂಡಲ; ಕಾರ್ತಿಕ್‌ ಸಖತ್‌ ಕ್ಲಾಸ್‌!

ಸಿರಿಗೆ ವಿಶೇಷ ಅಧಿಕಾರ ಕೊಟ್ಟಿದ್ದ ಸುದೀಪ್‌!

ಕ್ಯಾಪ್ಟನ್ ಇದ್ದಾಗ ಬೆಲೆ ಕೊಡಲಿಲ್ಲ. ಕ್ಯಾಪ್ಟನ್ ಇಲ್ಲದಿರುವಾಗಲೂ ನಿಯಮಗಳು ಫಾಲೋ ಆಗ್ತಿಲ್ಲ ಎಂಬ ಕಾರಣಕ್ಕೆ ಕಿಚ್ಚ ಸುದೀಪ್‌ ಕೋಪಗೊಂಡಿದ್ದರು. ‘ಬಿಗ್ ಬಾಸ್‌’ ಮನೆಯಲ್ಲಿ ರೂಲ್ಸ್ ಸರಿಯಾಗಿ ಫಾಲೋ ಆಗದ ಕಾರಣ, ‘’ಯಾರು ಪಕ್ಕಾ ರೂಲ್ಸ್ ಫಾಲೋ ಮಾಡ್ತಾರೆ?’’ಎಂದು ಕಿಚ್ಚ ಸುದೀಪ್ ಕೇಳಿದ್ದರು. ಅದಕ್ಕೆ, ಬಹುತೇಕ ಮಂದಿ ಸಿರಿ ಹೆಸರು ಹೇಳಿದ್ದರು. ಹೀಗಾಗಿ, ‘’ನಿಯಮಗಳನ್ನ ಎಲ್ಲರೂ ಫಾಲೋ ಮಾಡುವ ಹಾಗೆ ನೋಡಿಕೊಳ್ಳಿ. ಈ ಅಧಿಕಾರವನ್ನ ನಾನು ನಿಮಗೆ ಕೊಡ್ತಾ ಇದ್ದೇನೆ. ಯಾರಿಗೆ ಏನೇ ಶಿಕ್ಷೆ ಕೊಡಬೇಕಾದರೂ ಕೊಡಬಹುದು’’ ಎಂದು ಸಿರಿಗೆ ಕಿಚ್ಚ ಸುದೀಪ್‌ ವಿಶೇಷ ಅಧಿಕಾರ ನೀಡಿದ್ದರು. ಈ ಮೂಲಕ ಸಾಕಷ್ಡು ಸುದ್ದಿಯಾಗಿದ್ದರು ಸಿರಿ.

ಇದನ್ನೂ ಓದಿ: BBK SEASON 10: ಕಾರ್ತಿಕ್‌ ʻಬಿಗ್‌ ಬಾಸ್‌ʼ ವಿನ್‌ ಆಗಲ್ಲ ಎಂದ ಸಂಗೀತಾ; ಟಾಪ್ 3ಯಲ್ಲಿ ಇರೋರು ಯಾರು?

‘ರಂಗೋಲಿ’, ‘ಮನೆಯೊಂದು ಮೂರು ಬಾಗಿಲು’, ‘ಬದುಕು’ ಮುಂತಾದ ಧಾರಾವಾಹಿಗಳನ್ನು ಪ್ರೇಕ್ಷಕರು ಮನಗೆದ್ದಿದ್ದರು ಸಿರಿ. ಕನ್ನಡದಲ್ಲಿ ವಿಷ್ಣುವರ್ಧನ್ ನಟನೆಯ ‘ಸಿಂಹಾದ್ರಿಯ ಸಿಂಹ’, ಕಿಚ್ಚ ಸುದೀಪ್ ನಟನೆಯ ‘ಚಂದು’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.ಕನ್ನಡದ ʻರಾಮಾಚಾರಿʼ ಧಾರಾವಾಹಿಯಲ್ಲಿ ನಟಿ ಬಣ್ಣ ಹಚ್ಚಿದ್ದರು. 30 ವರ್ಷಗಳ ಕಾಲ ಕನ್ನಡ ಕಿರುತೆರೆಯಲ್ಲಿ ಸಿರಿವಂತೆಯಾಗಿ ಮೆರೆದ ಸಿರಿ ಯಾಕೆ ಮದುವೆಯಾಗಲಿಲ್ಲ ಎಂದು ನೆಟ್ಟಿಗರು ನಟಿಗೆ ಹಲವು ಬಾರಿ ಪ್ರಶ್ನೆ ಮಾಡಿದ್ದೂ ಇದೆ.

Exit mobile version