Site icon Vistara News

BBK Season 10: ಮನೆಯ ಊಸರವಳ್ಳಿ ಯಾರು? ಭಾಗ್ಯಶ್ರೀಗೆ ಮನವರಿಕೆ ಮಾಡಿಕೊಟ್ಟ ಕಿಚ್ಚ!

Bhagyashree Bigg boss

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK Season 10) ಮೊದಲ ಕಿಚ್ಚನ ಪಂಚಾಯಿತಿಯಲ್ಲಿ ಸ್ಪರ್ಧಿಗಳನ್ನು ಕಿಚ್ಚ ನಗಿಸಿ, ವಾರ್ನ್‌ ಕೂಡ ಮಾಡಿದ್ದಾರೆ. ಅಷ್ಟೇ ಅಲ್ಲದೇ ಸ್ಪರ್ಧಿಗಳ ತಪ್ಪುಗಳನ್ನು ಮನವರಿಕೆ ಮಾಡಿದ್ದಾರೆ. ಈ ಮನೆಯಲ್ಲಿ ಊಸರವಳ್ಳಿ ಯಾರು? ವಿಷಕಾರಿ ಯಾರು? ಡಿಪ್ಲೊಮ್ಯಾಟಿಕ್ ಯಾರು? ಇನೋಸೆಂಟ್ ಯಾರು? ಎಂಬೆಲ್ಲ ಪ್ರಶ್ನೆಗಳು ಕಿಚ್ಚನ ಬಾಯಿಯಿಂದ ಬಂತು. ಅದಕ್ಕೆ ಗೌರೀಶ್, ತನಿಷಾ, ಸಂಗೀತಾ ಎಲ್ಲರೂ ಬೇರೆ ಬೇರೆ ವ್ಯಕ್ತಿಗಳ ಹೆಸರು ಹೇಳಿದರು. ಈ ಮಧ್ಯೆ ತನಿಷಾ ಮತ್ತು ಭಾಗ್ಯಶ್ರೀ ಅವರ ನಡುವೆ ಸಣ್ಣ ಕಿಡಿಯೂ ಹೊತ್ತಿಕೊಂಡಿತು. ಇದಾದ ಬಳಿಕ ಮತ್ತೆ ಮಾತುಕತೆ ನಡೆದದ್ದು ಭಾಗ್ಯಶ್ರೀ ಹಾಗೂ ಡ್ರೋನ್‌ ಅವರ ರೊಟ್ಟಿ ಕಥೆ.

ನಾನು ಕೇಳೇ ಇಲ್ಲ!

ಭಾಗ್ಯಶ್ರೀ ಹಸಿವು ಎಂದಿದ್ದಕ್ಕೆ ಡ್ರೋನ್ ಪ್ರತಾಪ್ ರೊಟ್ಟಿ ಮಾಡಿಕೊಟ್ಟಿದ್ದರು. ಆದರೆ, ಆಮೇಲೆ ‘’ನಾನು ಕೇಳೇ ಇಲ್ಲ. ಅವರೇ ಮಾಡಿಕೊಟ್ಟಿದ್ದು’’ ಎಂದು ಭಾಗ್ಯಶ್ರೀ ಹೇಳಿಬಿಟ್ಟರು. ಇದರಿಂದ ಡ್ರೋನ್ ಪ್ರತಾಪ್ ಕೆಲವರ ಕಣ್ಣಿಗೆ ವಿಲನ್ ಆಗಿ ಕಂಡರು. ಕಿಚ್ಚ ಸುದೀಪ್ ಪಂಚಾಯಿತಿ ನಡೆಸಿದರು. ‘’ನಿಮ್ಮನ್ನ ನೀವು ಡಿಫೆನ್ಸ್ ಮಾಡಿಕೊಳ್ಳಲು ಹೋಗಿ, ಡ್ರೋನ್ ಪ್ರತಾಪ್‌ನ ವಿಲನ್ ಮಾಡಿದ್ರಿ’’ ಎಂದು ಭಾಗ್ಯಶ್ರೀಗೆ ಕಿಚ್ಚ ಸುದೀಪ್ ಹೇಳಿದರು.

ಭಾಗ್ಯಶ್ರೀ ಹೇಳಿದ್ದೇನು?

ʻʻರಾತ್ರಿ ನನಗೆ ತುಂಬಾ ಹಸಿವಾಗಿತ್ತು. ಸಕ್ಕರೆ ತಿಂದು ನೀರು ಕುಡಿಯೋಣ ಎಂದು ಬಂದೆ. ಡ್ರೋನ್‌ ಅವರು ರೊಟ್ಟಿ ಬಳೀಲಾ? ಎಂದು ಕೇಳಿದ್ರು. ನಾನು ರೊಟ್ಟಿ ಬಳಿಯೋದು (ತಟ್ಟುವುದು) ಏನು? ಎಂದು ಕೇಳಿದೆ. ಗೋಧಿ ಹಿಟ್ಟಲ್ಲಿ ಮಾಡೋದು, ಸಂತು ಅವರಿಗೂ ಮಾಡಿಕೊಟ್ಟಿದ್ದೆ ಎಂದರು ಪ್ರತಾಪ್‌. ಆಗ ನಾನೇ ಗ್ಯಾಸ್‌ ಆಪ್‌ ಮಾಡಿ ಬೇಡ ಅಂದೆ. ಅಷ್ಟೊತ್ತಿಗೆ ತನಿಷಾ ಹಾಗೂ ಸಂಗೀತಾ ಮಾತನಾಡಿದ್ದು ಇಷ್ಟವಾಗಿಲ್ಲ. ಅಷ್ಟರಲ್ಲಿ ತನಿಷಾ ಬಂದು ‘’ಬೇರೆ ಯಾರಿಗೂ ಕಾಣಿಸೋದು ಬೇಡ. ಕೆಳಗಡೆ ಕೂತು ತಿನ್ನಿ’’ ಎಂದರು. ಬಳಿಕ ಪ್ರತಾಪ್‌ಗೆ ‘’ಯಾಕೆ ಮಾಡಿಕೊಟ್ಟೆ ಅಂತ ಬೈಯ್ಯುತ್ತಿದ್ದರು’’. ಅದು ನನಗೆ ಬೇಜಾರಾಯಿತು. ಅದಕ್ಕೆ ನಾನು ‘’ಕೇಳಲೇ ಇಲ್ಲ. ಅವರೇ ಮಾಡಿಕೊಟ್ಟಿದ್ದು’’ ಅಂತ ಹೇಳಿದೆ ಅಷ್ಟೇ. ನನಗೆ ಊಸರವಳ್ಳಿ ಅನ್ನುತ್ತಾರಲ್ಲ. ನನಗೆ ಅನನ್ನಿಸುತ್ತೆ. ತನಿಷಾ ಹಾಗೂ ಸಂಗೀತಾ ಅವರೇ ಊಸರವಳ್ಳಿʼʼಎಂದರು.

ಇದನ್ನೂ ಓದಿ: BBK Season 10: ಒಬ್ಬರನ್ನು ಅಳಿಸಿ ತಾವು ನಗೋದು ಕಾಮಿಡಿ ಅನಿಸುತ್ತಾ? ‘ಡ್ರೋನ್‌’ ಬೆಂಬಲಕ್ಕೆ ನಿಂತ ಕಿಚ್ಚ!

ಇದೆಲ್ಲ ಮಾತು ಕತೆ ಆದಮೇಲೆ ಕಿಚ್ಚ ‘’ನಿಮ್ಮನ್ನ ನೀವು ಡಿಫೆನ್ಸ್ ಮಾಡಿಕೊಳ್ಳಲು ಹೋಗಿ, ಡ್ರೋನ್ ಪ್ರತಾಪ್‌ನ ವಿಲನ್ ಮಾಡಿದ್ರಿ. ಸಿಂಪಲ್ ಆಗಿ ಹೊಟ್ಟೆ ತುಂಬಿತು ಥ್ಯಾಂಕ್ಯೂ ಎಂದಿದ್ದರೆ ಮುಗಿಯುತ್ತಿತ್ತು. ’ಲೈಫ್‌ನಲ್ಲಿ ಒಂದು ಪಾಲಿಸಿ ಇದೆ. ಸಿಂಪಲ್ ಲೈಫ್‌ ಎನ್ನುವುದು ಇಲ್ಲ. ಆದರೆ, ನಾವು ಲೈಫ್‌ನ ಸಿಂಪ್ಲಿಫೈ ಮಾಡಿಕೊಳ್ಳಬಹುದು. ತಪ್ಪು ನಡೆದಾಗ ಒಬ್ಬರು ಇರುತ್ತಾರೆ, ಇಬ್ಬರು ಇರುತ್ತಾರೆ. ಒಬ್ಬ ವ್ಯಕ್ತಿ ನನಗಾಗಿ ನಿಂತ. ನಿಂತಿದ್ದು ಯಾರಿಗಾಗಿ ಅಂದಾಗ ಕೈಕೊಟ್ಟು ಎತ್ತೋಕೆ ಪ್ರಯತ್ನ ಪಡಿ. ಅರ್ಥ ಆಯ್ತು ಅಂದುಕೊಳ್ತೀನಿ’’ ಎಂದರು ಸುದೀಪ್.

ಇದನ್ನೂ ಓದಿ: BBK Season 10: ಉರಗಪ್ರಪಂಚದ ವಿಸ್ಮಯ‌ ಬಿಚ್ಚಿಟ್ಟ ಸ್ನೇಕ್‌ ಶ್ಯಾಮ್‌; ಬೆಚ್ಚಿ ಬಿದ್ದ ಸ್ಪರ್ಧಿಗಳು

ಊಸರವಳ್ಳಿ ಪಟ್ಟ ಕೊಟ್ಟ ಸ್ಪರ್ಧಿಗಳು

ಈ ಮನೆಯಲ್ಲಿ ಊಸರವಳ್ಳಿ ಯಾರು? ವಿಷಕಾರಿ ಯಾರು? ಡಿಪ್ಲೊಮ್ಯಾಟಿಕ್ ಯಾರು? ಇನೋಸೆಂಟ್ ಯಾರು? ಎಂಬೆಲ್ಲ ಪ್ರಶ್ನೆಗಳು ಕಿಚ್ಚನ ಬಾಯಿಯಿಂದ ಬಂತು. ಅದಕ್ಕೆ ಗೌರೀಶ್, ತನಿಷಾ, ಸಂಗೀತಾ ಎಲ್ಲರೂ ಬೇರೆ ಬೇರೆ ವ್ಯಕ್ತಿಗಳ ಹೆಸರು ಹೇಳಿದರು. ಈ ಮಧ್ಯೆ ತನಿಷಾ ಮತ್ತು ಭಾಗ್ಯಶ್ರೀ ಅವರ ನಡುವೆ ಸಣ್ಣ ಕಿಡಿಯೂ ಹೊತ್ತಿಕೊಂಡಿತು. ಅದರಲ್ಲಿ ಸಂಗೀತಾ ಹಾಗೂ ತನಿಷಾ ಅವರು ಭಾಗ್ಯಶ್ರೀ ಅವರು ಊಸರವಳ್ಳಿ ಎಂಬ ಪಟ್ಟ ಕೊಟ್ಟರು. ತನಿಷಾ ಅವರು ಈ ಬಗ್ಗೆ ಮಾತನಾಡಿ ʻʻಭಾಗ್ಯಶ್ರೀ. ಅವರ ಇನೋಸೆಂಟ್ ಫೇಸ್‌ಗೂ ಮಾತಿಗೂ ಸಂಬಂಧ ಇರಲ್ಲ. ತಾವು ಒಳ್ಳೆಯವರು ಅಂತ ಪ್ರೂವ್ ಮಾಡಿಕೊಳ್ಳುವ ಪ್ರಯತ್ನದಲ್ಲಿ ಇರುತ್ತಾರೆʼʼಎಂದರು.

Exit mobile version