Site icon Vistara News

BBK Season 10: ನಮ್ರತಾ ಮುಖವಾಡ ಕಳಚಿ ಬಿತ್ತು; ತನಿಷಾಗೆ ಹೆಚ್ಚಾಯ್ತು ಸಪೋರ್ಟ್‌; ಹೇಗಿದೆ ಸೋಷಿಯಲ್‌ ಮೀಡಿಯಾ ರೆಸ್ಪಾನ್ಸ್‌?

tanisha kuppanda namratha gowda

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK Season 10) ಮೂರನೇ ವಾರ ವೀಕೆಂಡ್‌ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್‌ ಪ್ರತಿ ಸ್ಪರ್ಧಿಗಳ ಮುಖವಾಡವನ್ನು ಕಳಚಿದ್ದಾರೆ. ಆದರೆ ಈಗ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಲ್ಲಿರುವುದು ನಮ್ರತಾ ಅವರು.ʻʻನಾಗಿಣಿ ಭಾರಿ ಬುಸುಗುಡುತ್ತಿದ್ದಾಳೆ, ಚಮಚ ನಮ್ರತಾ ಅವರನ್ನ ಬಿಗ್ ಬಾಸ್ ಇಂದ ಹೊರಗಡೆ ಹಾಕಬೇಕುʼʼಎಂದು ಕಮೆಂಟ್‌ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.

‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಸ್ಪರ್ಧಿಗಳಿಗೆ ಉಡುಗೊರೆಯನ್ನು ಕಳುಹಿಸಿದ್ದರು ಬಿಗ್‌ಬಾಸ್‌. ಆದರೆ ಇದು ಪ್ರೆಕ್ಷಕರು ಸ್ಪರ್ಧಿಗಳಿಗೆ ನೀಡಿದ ಉಡುಗೊರೆ. ನಮ್ರತಾಗೆ ಚಮಚ ಉಡುಗೊರೆಯಾಗಿ ಬಂತು. ಪತ್ರದಲ್ಲಿ ʻನಿಮಗೆ ದಾದಾಗಿರಿ ಮಾಡುವುದಕ್ಕೆ ಬರುವುದಿಲ್ಲ. ಚಮಚಾಗಿರಿ ಮಾಡಿಕೊಂಡು ಇರಬೇಡಿ. ನಮ್ರತಾರನ್ನ ನಮ್ಮ ಕಣ್ಣಲ್ಲಿ ಹಾಗೆ ನೋಡೋಕೆ ಆಗ್ತಾಯಿಲ್ಲ’’ ಎಂದು ಬರೆಯಲಾಗಿತ್ತು.

ಏಕಾಏಕಿ ಚರ್ಚೆಯಾಗುತ್ತಿರುವುದು ಯಾಕೆ?

ನಮ್ರತಾ ಹಾಗೂ ತನಿಷಾ ಮಧ್ಯೆ ಮೊದಲ ವಾರದಿಂದಲೂ ಸರಿಯಿರಲಿಲ್ಲ. ಮೂರನೇ ವಾರ ನಮೃತಾ ಹಾಗೂ ತನಿಷಾ ನಡುವೆ ಭರ್ಜರಿ ಕಾಳಗವೇ ಆಗಿದೆ. ಯಾರು ಯಾರನ್ನು ಡಾಮಿನೇಟ್ ಮಾಡುತ್ತಿದ್ದಾರೆ? ಎಂದು ನಮ್ರತಾ ಅವರು ತನಿಷಾಗೆ ಸಖತ್‌ ಕೂಗಾಡಿದ್ದಾರೆ. ಈಗಾಗಲೇ ನಮ್ರತಾ ಅವರು ಕ್ರಿಕೆಟ್‌ ಟಾಸ್ಕ್‌ ಆದ ಬಳಿಕ ಆ್ಯಸಿಡ್ ಹಾಕಿ ತನಿಷಾ ಬಾಯಿ ತೊಳಿಯಿರಿ ಎಂದು ಕಾರ್ತಿಕ್‌ ಹಾಗೂ ವಿನಯ್‌ ಮುಂದೆ ಹೇಳಿದ್ದರು. ಅಷ್ಟೇ ಅಲ್ಲದೇ ಇದಕ್ಕೂ ಮುಂಚೆ ಕಾರ್ತಿಕ್‌ ವಿಚಾರದಲ್ಲೂ ಹೀಗೆ ಆಯ್ತು.

ಇದನ್ನೂ ಓದಿ: BBK Season 10: ‘ಕಥಾ ಸಂಗಮ’ದಲ್ಲಿ ದಾರಿ ತಪ್ಪಿದ ಸ್ಪರ್ಧಿಗಳು; ಹೇಗಿತ್ತು ಫನ್‌ ಫ್ರೈಡೇ?

ಥ್ರೆಟ್‌ ವಿಚಾರ ಮತ್ತೆ ಮುನ್ನೆಲೆಗೆ

ವಿನಯ್‌ ಹಾಗೂ ಸಂಗೀತಾ ಥ್ರೆಟ್‌ ಎಂಬ ವಿಚಾರಕ್ಕೆ ಕೂಗಾಡಿದ್ದರು. ಇದಕ್ಕೆ ಕಾರ್ತಿಕ್‌ ಕೂಡ ಸಂಗೀತಾ ಅವರಿಗೆ ಸಪೋರ್ಟ್‌ ಮಾಡಿದ್ದರು. ಇದಾದ ಬಳಿಕ ಕಾರ್ತಿಕ್ ಮಹೇಶ್ ಅವರು ರಕ್ಷಕ್‌ಗೆ ಒಮ್ಮೆ ಏರುದನಿಯಲ್ಲಿ ಮಾತನಾಡಿದಾಗ ನಮ್ರತಾ ಗೌಡ ಅವರು, “ನೀವು ಈ ರೀತಿ ಕೂಗಾಡೋದು ನಂಗೆ ಹೆದರಿಸುವಂತಿದೆ. ನಾನು ಈ ರೀತಿ ಕೂಗಾಡುವ ವಾತಾವರಣದಲ್ಲಿ ಬೆಳೆದಿಲ್ಲ” ಎಂತಲೂ ಹೇಳಿದ್ದರು. ಇಷ್ಟೆಲ್ಲ ಹೇಳಿದ ನಮ್ರತಾ ಅವರು ತನಿಷಾ ಅವರಿಗೆ ಕ್ರಿಕೆಟ್‌ ಟಾಸ್ಕ್‌ ಆದ ಬಳಿಕ ಆ್ಯಸಿಡ್ ಹಾಕಿ ತನಿಷಾ ಬಾಯಿ ತೊಳಿಯಿರಿ ಎಂದು ಕಾರ್ತಿಕ್‌ ಹಾಗೂ ವಿನಯ್‌ ಮುಂದೆ ಹೇಳಿದ್ದಾರೆ. ಆದರೀಗ ನಮ್ರತಾ ಅವರೇ ತನಿಷಾಗೆ ಮನಬಂದಂತೆ ಅರಚಿಕೊಂಡು ಕೂಗಾಡಿದ್ದಾರೆ.

ನಮ್ರತಾ ಗೌಡ ನಿಜವಾದ ಬಣ್ಣ

ನಮ್ರತಾ ಅವರು ತನಿಷಾಗೆ ʻʻನಿಮಗೆ ಒಬ್ರಿಗೆ ಮಾತ್ರ ಧ್ವನಿ ಇದೆ ಅಂತ ಕಿರಿಚೋದು ಅಲ್ಲಾ. ನೀವಲ್ಲ ಬಿಗ್‌ ಬಾಸ್‌. ಅಲ್ಲಿ ಇರೋರು ಬಿಗ್‌ ಬಾಸ್‌. ಬಾಯಿ ಮುಚ್ಚಲ್ಲ ಅವಳು ಗುರು! ಇನ್ಮುಂದೆ ನನ್ನ ಹತ್ರ ಮಾತಾಡಬೇಕಾದ್ರೆ ವಾಯ್ಸ್‌ ಕಮ್ಮಿ ಇರಬೇಕು. ನಾನು ನಿನ್ನೆ ತಡಕ್ಕೊಂಡಿದ್ದೀನಿ. ಇವತ್ತು ನಾಟ್‌ ಒಕೆ. ಅವಳು ಯಾವಳು ನನ್ನ ಡಾಮಿನೇಟ್‌ ಮಾಡೋಕೆʼʼಎಂದು ಕೂಗಿದ್ದರು. ಹಾಗಾದರೆ ತನಿಷಾ ಮುಂದೆ ನಮ್ರತಾ ಗೌಡ ಅವರು ಗಂಟಲು ಕಿರುಚುವ ರೀತಿಯಲ್ಲಿ ಕೂಗಿದ್ರಲ್ವಾ..ನಮ್ರತಾ ಮಾತು ಕೇಳಿ ಸ್ಪರ್ಧಿಗಳೇ ಹೆದರಿ ಸುಮ್ಮನಾದರಲ್ವಾ.? ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ನಮ್ರತಾ ಗೌಡ ಅವರ ನಿಜವಾದ ಬಣ್ಣ ಬಯಲಾಯ್ತು, ಮುಖವಾಡ ಕಳಚಿ ಬಿತ್ತು ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

ನಮ್ರತಾ ಚಮಚಾಗಿರಿ

‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಸ್ಪರ್ಧಿಗಳಿಗೆ ಉಡುಗೊರೆಯನ್ನು ಕಳುಹಿಸಿದ್ದರು ಬಿಗ್‌ಬಾಸ್‌. ಆದರೆ ಇದು ಪ್ರೆಕ್ಷಕರು ಸ್ಪರ್ಧಿಗಳಿಗೆ ನೀಡಿದ ಉಡುಗೊರೆ. ನಮ್ರತಾಗೆ ಚಮಚ ಉಡುಗೊರೆಯಾಗಿ ಬಂತು. ಪತ್ರದಲ್ಲಿ ʻನಿಮಗೆ ದಾದಾಗಿರಿ ಮಾಡುವುದಕ್ಕೆ ಬರುವುದಿಲ್ಲ. ಚಮಚಾಗಿರಿ ಮಾಡಿಕೊಂಡು ಇರಬೇಡಿ. ನಮ್ರತಾರನ್ನ ನಮ್ಮ ಕಣ್ಣಲ್ಲಿ ಹಾಗೆ ನೋಡೋಕೆ ಆಗ್ತಾಯಿಲ್ಲ’’ ಎಂದು ಬರೆಯಲಾಗಿತ್ತು. ನಮ್ರತಾ ಕೂಡ ತಕ್ಷಣ ʻʻಜನರಿಗೆ ಹಾಗೆ ಅನಿಸದೇ ಎಂತಾದರೆ ನಾನು ಎಲ್ಲೋ ಎಡವಿದ್ದೀನಿ ಅಂತರ್ಥ. ಇನ್ಮೇಲೆ ನಾನು ಸ್ವಂತ ಸ್ಟ್ಯಾಂಡ್ ತಗೋತೀನಿʼʼಎಂದರು.

ಇದನ್ನೂ ಓದಿ: BBK Season 10: ಈಗಲೇ ಫೈನಲಿಸ್ಟ್‌ ಹೆಸರು ಹೇಳಿದ ಕಿಚ್ಚ; ಒಂಟಿ ಸಲಗ ʻವಿನಯ್‌ʼ ಕಂಡ್ರೆ ಸ್ಪರ್ಧಿಗಳಿಗೆ ಭಯನಾ?

ನೆಟ್ಟಿಗರು ಹೇಳೋದೇನು?

ಸದ್ಯಕ್ಕೆ ಬಿಗ್ ಬಾಸ್‌ನಲ್ಲಿ ಎಲ್ಲಾ ಸ್ಪರ್ಧಿಗಳ ನಡುವೆ ಇರುವ ಪ್ರಬಲ ಮಹಿಳಾ ಸ್ಪರ್ಧಿ ಎಂದರೆ ಅದುವೇ ತನಿಷಾ. ಬಿಗ್ ಬಾಸ್ ಎಲ್ಲಾ ಸ್ಪರ್ಧಿಗಳ ಜತೆ ಪೈಪೋಟಿ ನೀಡುತ್ತಾ..ಕೊಟ್ಟ ಗೇಮ್ ಅನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ .. ಮನೆಯ ಎಲ್ಲಾ ಕೆಲಸಗಳನ್ನು ಶ್ರಮವಹಿಸಿ .. ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ನಮ್ರತಾಗೆ ಚಮಚ ಬದಲು ಬಕೆಟ್ ಕಳಿಸಬೇಕಿತ್ತು ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. ʻʻತನಿಷಾ ಇದದ್ದು ಇದ್ದಂಗೆ ಹೇಳ್ತಾರೆ. ಅವರೇ ಬೆಸ್ಟ್‌ʼʼಎಂತಿದ್ದಾರೆ ನೆಟ್ಟಿಗರು.

ಸೋಷಿಯಲ್‌ ಮೀಡಿಯಾದಲ್ಲಿ ನಮ್ರತಾ ಬಗ್ಗೆ ನೆಗೆಟಿವ್ ಪ್ರತಿಕ್ರಿಯೆ ಹೆಚ್ಚಾಗಿ ಸಿಗುತ್ತಿದೆ. ʻʻತನಿಷಾ ಎಲ್ಲಾ ಟಾಸ್ಕ್ ಗೆದ್ದರು ಅಂತ ನಮ್ರತಾಗೆ ಹೊಟ್ಟೆ ಉರಿʼʼಎಂದು ಕಮೆಂಟ್‌ ಮಾಡಿದ್ದಾರೆ. ʻʻನಮ್ರತಾಗೆ ಬಿಗ್ ಬಾಸ್ ಗೆ ಬಂದ ಮೊದಲ ವಾರದಲ್ಲಿ ಕಿರುಚಾಡೋದು ಅಂದ್ರೆ ಆಗ್ತಿರ್ಲಿಲ್ವಂತೆ ಪಾಪ. ಈ ವಾರ ನೋಡಿ ಅವಳ ನಾಗಿಣಿ, ನಾಗವಲ್ಲಿ ರೂಪ ಹೇಗೆ ಹೊರಬಂತು ಅಂತʼʼ ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. ʻʻನಾಗಿಣಿಯ ರಿಯಲ್ ಬಣ್ಣ ಆಚೆ ಬರ್ತಿದೆ.. ತನಿಷಾಗೆ ಅಲ್ಲಾ ನಿನ್ನ ಬಾಯಿನ ಮೊದಲು ಫಿನೈಲ್ ಹಾಕಿ ತೊಳಿಬೇಕುʼʼಎಂದು ಕಮೆಂಟ್‌ ಮಾಡಿದ್ದಾರೆ. ಹೀಗಾಗಿ ವಿನಯ್‌ ಅವರ ಮೇಲೆ ಬಿಗ್‌ ಬಾಸ್‌ ಪ್ರೇಕ್ಷಕರಿಗೆ ನಿರೀಕ್ಷೆ ಹೆಚ್ಚಾಗಿದೆ.

ಬಿಗ್​ಬಾಸ್ ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

Exit mobile version