Site icon Vistara News

BBK Season 10: ಸ್ಪರ್ಧಿಗಳ ಕಪಾಳಕ್ಕೆ ಹೊಡೆದಂತೆ ಇತ್ತು ಪ್ರೇಕ್ಷಕರ ಗಿಫ್ಟ್‌; ಚಮಚ, ಉಪ್ಪಿನಕಾಯಿ, ರಿಟರ್ನ್ ಟಿಕೆಟ್ ಯಾರಿಗೆ?

The audience's gift was like slapping the contestants on the forehead BBK 10

ಬೆಂಗಳೂರು: ಬಿಗ್‌ ಬಾಸ್‌ ಸೀನ್‌ 10ರ (BBK Season 10) ಮೂರನೇ ವಾರ ʻವಾರದ ಕತೆ ಕಿಚ್ಚ ಜೊತೆʼ ವೀಕೆಂಡ್‌ ಪಂಚಾಯಿತಿಯಲ್ಲಿ ಊಹಿಸಲಾಗದೆ ಇರುವ ಟ್ವಿಸ್ಟ್ ಇತ್ತು. ವೀಕ್ಷಕರ ಅಭಿಪ್ರಾಯ ಸ್ಪರ್ಧಿಗಳ ಕಪಾಳಕ್ಕೆ ಹೊಡೆದಂತೆ ಬಿದ್ದಿದೆ. ಚಮಚ, ಎಲೆಕೋಸು, ಸೈಕಲ್, ಉಪ್ಪಿನಕಾಯಿ, ಖಡ್ಗ ಹೀಗೆ ಹಲವು ಉಡುಗೊರೆಗಳನ್ನು ಕೊಟ್ಟು ಖಡಕ್‌ ಸಂದೇಶವನ್ನು ಸ್ಪರ್ಧಿಗಳಿಗೆ ನೀಡಲಾಗಿತ್ತು.

ಏನದು ಉಡುಗೊರೆ?

‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಸ್ಪರ್ಧಿಗಳಿಗೆ ಉಡುಗೊರೆಯನ್ನು ಕಳುಹಿಸಿದ್ದರು ಬಿಗ್‌ಬಾಸ್‌. ಆದರೆ ಇದು ಪ್ರೆಕ್ಷಕರು ಸ್ಪರ್ಧಿಗಳಿಗೆ ನೀಡಿದ ಉಡುಗೊರೆ. ಕಿಚ್ಚ ಸುದೀಪ್‌ ಈ ಬಗ್ಗೆ ವಿವರಿಸಿ ʻʻಈ ಉಡುಗೊರೆ ಕಳುಹಿಸಿದ್ದು ನಿಮ್ಮನ್ನು ನೋಡುತ್ತಿರುವ ಜನ. ಪ್ರತಿಯೊಂದು ಗಿಫ್ಟ್‌ನಲ್ಲೂ ಎಮೋಷನ್ ಇದೆ, ಎಕ್ಸ್‌ಪೆಕ್ಟೇಷನ್ ಇದೆ. ನಿಮ್ಮ ಕಡೆಯಿಂದ ಜನ ಏನು ನಿರೀಕ್ಷೆ ಮಾಡ್ತಿದ್ದಾರೆ ಎಂದು ಉಡುಗೊರೆ ಮೂಲಕ ಜನ ತಮ್ಮ ಅಭಿಪ್ರಾಯವನ್ನ ನಿಮಗೆ ತಿಳಿಸಿದ್ದಾರೆʼʼಎಂದರು. ಉಡುಗೊರೆಯೊಂದಿಗೆ ಪತ್ರವೂ ಇತ್ತು.

ತುಕಾಲಿ ಸಂತುಗೆ ಲೌಡ್‌ ಸ್ಪೀಕರ್‌

ಪತ್ರದಲ್ಲಿ ʻʻನಿಮ್ಮ ಮಾತಿಗೆ, ಮಿಮಿಕ್ರಿಗೆ ನಾವೆಲ್ಲಾ ಫಿದಾ ಆಗಿದ್ದೀವಿ. ಎಲ್ಲರ ಬಗ್ಗೆ ಧೈರ್ಯವಾಗಿ ಮಾತಾಡ್ತೀರಲ್ಲ.. ಹಾಗೆ ವಿನಯ್ – ಸಂಗೀತಾ ಅವರ ಕಿವಿಗೆ ಮುಟ್ಟುವ ಹಾಗೆ ಮಾತನಾಡಿದರೆ ಇನ್ನೂ ಒಳ್ಳೆಯದ್ದುʼʼಎಂದು ಬರೆದಿತ್ತು. ಆದರೆ ಸಂತುಗೆ ಸುದೀಪ್‌ ಅರ್ಥ ಮಾಡಿಸಿದ್ದು ಹೀಗೆ ʻʻನೀವು ನಿಮ್ಮ ಗುಂಪಿನಲ್ಲಿ ಸಭೆ ನಡೆಸುವಾಗ, ಗಾಸಿಪ್‌ನಲ್ಲಿ ಎಲ್ಲರ ಬಗ್ಗೆ ಅಭಿಪ್ರಾಯ ಹೇಳುತ್ತೀರಿ. ಹಾಗೇ ಅದೂ ವಿನಯ್‌ ಹಾಗೂ ಸಂಗೀತಾ ಕಿವಿಗೂ ಬೀಳಲಿʼʼಎಂದರು.

ಮೈಕಲ್‌ಗೆ ಉಡುಗೊರೆಯಾಗಿ ಬಂತು ಬ್ರೈನ್‌

ಪತ್ರದಲ್ಲಿ ‘’ಬಾಡಿಯಲ್ಲಿರುವ ಎಲ್ಲಾ ಪಾರ್ಟ್‌ಗಳನ್ನು ಸರಿಯಾಗಿ ಉಪಯೋಗಿಸುತ್ತಿದ್ದೀರಾ. ಬ್ರೇನ್ ಮಾತ್ರ ಇನ್ನೂ ಫ್ರೆಶ್ ಆಗಿ ಇಟ್ಟುಕೊಂಡಿದ್ದೀರಾ. ಯಾವಾಗ ಅದಕ್ಕೆ ಕೆಲಸ ಕೊಡುತ್ತೀರೋ ಎಂದು ಕಾಯ್ತಿದ್ದೇವೆ. ಇದು ಮೈಂಡ್ ಗೇಮ್ ಬಾಸ್’’ ಎಂದು ಬರೆಯಲಾಗಿತ್ತು. ಕಿಚ್ಚ ಸುದೀಪ್‌ ಈ ಬಗ್ಗೆ ವಿವರಣೆ ನೀಡಿʻʻ ಬಿಗ್‌ ಬಾಸ್‌ನಲ್ಲಿ ಕೇವಲ ಟಾಸ್ಕ್‌ ಒಂದೇ ಅಲ್ಲ. ಸ್ಟ್ರಾಟೆಜಿ ಕೂಡ ಬೇಕುʼʼಎಂದರು.

ಸಿರಿಗೆ ಆಮೆ

ಪತ್ರದಲ್ಲಿ ‘’ಇದು ಜಿಂಕೆ, ಕುದುರೆ, ಚಿರತೆ ಓಡುತ್ತಿರುವ ರೇಸ್. ಮೊಲ ನಿದ್ದೆ ಮಾಡುವ ತನಕ ಕಾಯಬೇಡಿ. ಇನ್ನೂ ಸ್ವಲ್ಪ ಜೋರಾಗಿ ಓಡೋಕೆ ಶುರು ಮಾಡಿ’’ ಎಂದು ಬರೆದಿತ್ತು. ಇದು ಸುದೀಪ್‌ ಅವರು ಕ್ಲೀಯರ್‌ ಆಗಿದೆ. ಇದಕ್ಕೆ ವಿವರಣೆ ಅಗತ್ಯವಿಲ್ಲ ಎಂದು ಹೇಳಿದರು.

ಭಾಗ್ಯಶ್ರೀ ಅವರಿಗೆ ಕ್ಯಾಬೇಜ್

ಪತ್ರದಲ್ಲಿ ‘’ನಿಮ್ಮನ್ನ ಉಪಯೋಗ ಇಲ್ಲ ಅಂತ ಸೈಡ್‌ಗೆ ಇಡುವುದಕ್ಕೂ ಬರಲ್ಲ. ಏನಾದರೂ ಸಿಗುತ್ತೇನೋ ಅಂತ ಸಿಪ್ಪೆ ತೆಗೀತಾ ಹೋದರೆ ಹೊಸದಾಗಿ ಏನೂ ಸಿಗುತ್ತಲೂ ಇಲ್ಲ. ತಿರುಗಿ ನೋಡುವ ತರಹ ಏನಾದರೂ ಮಾಡಿ. ನಾವೂ ಕಾಯ್ತಿರ್ತೀವಿ’’ ಎಂದು ಬರೆದಿತ್ತು. ಇದಕ್ಕೆ ಕೂಡ ಸುದೀಪ್‌ ನೀವು ಏನು ಎಂಬುದು ಕ್ಲೀಯರ್‌ ಇದೆ ಅಲ್ಲವೇ ಎಂದು ಹೇಳಿದರು.

ನಮ್ರತಾಗೆ ಚಮಚ

ಪತ್ರದಲ್ಲಿ ʻನಿಮಗೆ ದಾದಾಗಿರಿ ಮಾಡುವುದಕ್ಕೆ ಬರುವುದಿಲ್ಲ. ಚಮಚಾಗಿರಿ ಮಾಡಿಕೊಂಡು ಇರಬೇಡಿ. ನಮ್ರತಾರನ್ನ ನಮ್ಮ ಕಣ್ಣಲ್ಲಿ ಹಾಗೆ ನೋಡೋಕೆ ಆಗ್ತಾಯಿಲ್ಲ’’ ಎಂದು ಬರೆಯಲಾಗಿತ್ತು. ಆಗ ನಮ್ರತಾ ಅವರು ʻನಾನು ಯಾರಿಗೂ ಚಮಚ ಆಗಿಲ್ಲ. ಇರೋದೂ ಇಲ್ಲʼ ಎಂದರು ಕಿಚ್ಚ ಅವರು ʻʻಹಾಗೇ ಆಗಬೇಡಿʼʼಎಂದದ್ದು ಎಂದರು. ನಮ್ರತಾ ಕೂಡ ತಕ್ಷಣ ʻʻಜನರಿಗೆ ಹಾಗೆ ಅನಿಸದೇ ಎಂತಾದರೆ ನಾನು ಎಲ್ಲೋ ಎಡವಿದ್ದೀನಿ ಅಂತರ್ಥ. ಇನ್ಮೇಲೆ ನಾನು ಸ್ವಂತ ಸ್ಟ್ಯಾಂಡ್ ತಗೋತೀನಿʼʼಎಂದರು.

ಇಶಾನಿಗೆ ಉಪ್ಪಿನಕಾಯಿ

’ಊಟಕ್ಕೆ ಉಪ್ಪಿನಕಾಯಿ ಇರಬೇಕು ಅಂತಾರೆ. ಆದರೆ, ಇರಲೇಬೇಕು ಅಂತೇನಿಲ್ಲ. ಆದಷ್ಟು ಬೇಗ ಮೇನ್ ಡಿಶ್ ಆಗಿ’’ ಎಂದು ಬರೆಯಲಾಗಿತ್ತು. ಇದು ಮೊದಲಿಗೆ ಇಶಾನಿಒಗೆ ಅರ್ಥವಾಗಿಲ್ಲ. ಕಿಚ್ಚ ಸುದೀಪ್‌ ಅವರು ಇದನ್ನು ಬಹುಬೇಗ ಅರ್ಥ ಮಾಡಿಸಿದರು. ʻʻನಿಮ್ಮ ಪೊಸಿಷನ್‌ ಉಪ್ಪಿನಕಾಯಿ ಅಷ್ಟೇ. ಪಲ್ಯಕ್ಕೂ ತೂಕ ಇರುತ್ತದೆʼʼಎಂದರು.

ಇದನ್ನೂ ಓದಿ: BBK Season 10: ಆ್ಯಸಿಡ್ ಹಾಕಿ ತನಿಷಾ ಬಾಯಿ ತೊಳಿಯಿರಿ ಎಂದ ನಮ್ರತಾ!

ನೀತುಗೆ ಗಾಳಿ ಇಲ್ಲದ ಫುಟ್‌ಬಾಲ್

‘’ಆಟ ಆಡೋಕೆ ಎಂದು ಇಳಿದಮೇಲೆ ಕೋರ್ಟ್ ಒಳಗೆ ಆಗಾಗ ಕಾಣ್ತಾ ಇರಬೇಕು. ಇಲ್ಲದೆ ಹೋದರೆ ಗಾಳಿ ತೆಗೆದು ಸೈಡ್‌ಗೆ ಇಟ್ಟುಬಿಡ್ತಾರೆ. ಜೋಪಾನ’’ ಎಂದು ಬರೆಯಲಾಗಿತ್ತು. ಇದನ್ನು ನೀತು ಕೂಡ ಒಪ್ಪಿದರು. ʻʻಕಳೆದ ಎರಡು ವಾರ ಹೀಗೆ ನನ್ನ ಸ್ಥಿತಿ ಇತ್ತು. ಆದರೀಗ ನಾನು ಸ್ಟ್ಯಾಂಡ್‌ ತೆಗೆದುಕೊಂಡೆʼ ಎಂದಿದ್ದಾರೆ.

ತನಿಷಾಗೆ ಶಾರ್ಪನರ್

ಮಾತುಗಳು ಮೊಟುಕಾಗಿ ನಿಮ್ಮಲ್ಲೇ ಮುಗಿದುಹೋದರೆ ಯಾರೂ ಸೊಪ್ಪು ಹಾಕಲ್ಲ. ಶೈನ್ ಆಗಬೇಕು ಅಂದ್ರೆ ಸ್ವಲ್ಪ ಶಾರ್ಪ್ ಆಗಬೇಕು ಕಣ್ರೀ!’’ ಎಂದು ಬರೆಯಲಾಗಿತ್ತು. ಇಷ್ಟೂ ಉಡುಗೊರೆಯಲ್ಲಿ ಇದು ಬೆಸ್ಟ್‌ ಗಿಫ್ಟ್‌ ಎಂದರು ಕಿಚ್ಚ. ತನಿಷಾ ಕೂಡ ಈ ಬಗ್ಗೆ ಮಾತನಾಡಿ ʻʻಎಲ್ಲೋ ಒಂದು ಕಡೆ ನಾನು ಧ್ವನಿ ಎತ್ತುವಲ್ಲಿ ಮಾತನಾಡಿಲ್ಲ. ನನ್ನಲ್ಲೇ ಎಷ್ಟೋ ವಿಚಾರ ಇಟ್ಟುಕೊಂಡೆʼʼಎಂದರು. ಕಿಚ್ಚ ಈ ಬಗ್ಗೆ ಮಾತನಾಡಿ, “ಡಿಪ್ಲೊಮ್ಯಾಟಿಕ್ ಮಾತಾಡೋಕೆ ತಾಕತ್ತು ಇದೆ ಬಳಸಿʼʼಎಂದರು.

ವಿನಯ್‌ ಗೌಡಗೆ ಆನೆ

‘’ಈ ಮನೆಯಲ್ಲಿ ನಿಮ್ಮಂಥ ಆನೆಯನ್ನ ಕೆಡವಿ ಬೀಳಿಸುವವರಿಲ್ಲ. ಖಡಕ್ ಆಗಿ ಮಾತನಾಡಿ ಖೆಡ್ಡಾ ತೋಡುವವರೂ ಇಲ್ಲ. ನೀವು ಸಾಟಿನೇ ಇಲ್ಲದಿರುವ ಸಲಗ ಅಂತ ಅಂದುಕೊಂಡು ದಿಕ್ಕು ಮಾತ್ರ ತಪ್ಪಬೇಡಿ. ಅದು ತುಂಬಾ ಡೇಂಜರ್’’ ಎಂದು ಬರೆಯಲಾಗಿತ್ತು. ಇದಕ್ಕೆ ವಿನಯ್‌ ಮುಗುಳ್‌ ನಕ್ಕರು. ಕಿಚ್ಚ ಸುದೀಪ್ ಈ ಬಗ್ಗೆ ಮಾತನಾಡಿ ʻʻನೀವು ಸ್ಟ್ರಾಂಗ್ ಆಗಿದ್ದೀರಿ. ನಿಮಗೆ ಎದುರಾಳಿನೇ ಇಲ್ಲ ಎಂದು ಬಂದಿದೆ. ಇದು ಬೇರೆಯವರ ಮುಖಕ್ಕೆ ಹೊಡೆದ ಹಾಗಿದೆ. ವಿನಯ್‌ಗೆ ಇದು ಕಾಂಪ್ಲಿಮೆಂಟ್‌ ಮತ್ತು ಎಚ್ಚರಿಕೆ. ಇತರರಿಗೂ ಇದು ಎಚ್ಚರಿಕೆʼʼಎಂದರು.

ಇದನ್ನೂ ಓದಿ: BBK Season 10: ಮತ್ತಷ್ಟು ಮನಸ್ತಾಪಗಳಿಗೆ ನಾಂದಿ ಹಾಡ್ತು ಉತ್ತಮ-ಕಳಪೆ; ನೀತು ಮನೆಯ ಕ್ಯಾಪ್ಟನ್‌!

ರಕ್ಷಕ್‌ಗೆ ಸೈಕಲ್

‘’ಬುಲೆಟ್‌ ಸಿಕ್ಕಾಪಟ್ಟೆ ಸೌಂಡ್‌ ಮಾಡುತ್ತೆ ಎಂದು ಕಳಿಸಿದರೆ ಇನ್ನೂ ಸೈಕಲ್ ಹೊಡ್ಕೊಂಡ್ ಇದ್ದೀರಾ. ಸ್ಪೀಡು ಸಾಕಾಗುತ್ತಿಲ್ಲ ಬಾಸ್’’ ಎಂದು ಬರೆಯಲಾಗಿತ್ತು. ಕಿಚ್ಚ ಕೂಡ ಈ ಬಗ್ಗೆ ಪ್ರಸ್ತಾಪಿಸಿದರು. ರಕ್ಷಕ್‌ ಕಾರಣವನ್ನೂ ನೀಡಿ ʻʻಮೊದಲ ವಾರ ನಾನು ಅಷ್ಟಾಗಿ ನನ್ನನ್ನು ತೊಡಗಿಸಿಕೊಂಡಿಲ್ಲ. ಬರ ಬರುತ್ತಾ ಅರ್ಥ ಮಾಡಿಕೊಂಡು ಬಂದೆ. ಮೂರನೇ ವಾರ ಕ್ಯಾಪ್ಟನ್‌ ಕೂಡ ಆದೆ. ಆದರೆ ಸೈಕಲ್ ಗಿಫ್ಟ್‌ ಸರಿಯಾಗೇ ಇದೆ. ನಾನು ಒಪ್ಪುತ್ತೇನೆʼʼಎಂದರು.

ಡ್ರೋನ್ ಪ್ರತಾಪ್‌ಗೆ ಕರ್ಚೀಫ್

‘’ಚುಚ್ಚು ಮಾತುಗಳಿಗೆ ಅಳು ಬಂದರೆ ಬಾತ್‌ರೂಮ್‌ಗೆ ಓಡಿ ಹೋಗಬೇಡಿ. ಕರ್ಚೀಫ್‌ನಲ್ಲಿ ಒರೆಸಿಕೊಂಡು ಮಾತಾಡೋಕೆ ಶುರು ಮಾಡಿ. ನಾವಿದ್ದೀವಿ’’ ಎಂದು ಬರೆಯಲಾಗಿತ್ತು.

ಸಂಗೀತಾಗೆ ಕ್ರಶ್ಡ್‌ ಪೇಪರ್

‘’ಮೊದಲನೇ ವಾರ ಒಂದೇ ಬಟ್ಟೆಯಲ್ಲಿ ಇದ್ದರೂ ಕರ್ನಾಟಕದ ಕ್ರಶ್ ಆದ್ರಿ. ಮೂರನೇ ವಾರದ ಪರ್ಫಾಮೆನ್ಸ್ ನೋಡಿ ಕ್ರಶ್ ಆದ ಹಾರ್ಟ್‌ ಎಲ್ಲಾ ಕ್ರ್ಯಾಶ್ ಆಗೋಯ್ತು!’’ ಎಂದು ಬರೆಯಲಾಗಿತ್ತು. ಇದನ್ನೂ ಕೂಡ ಸಂಗೀತಾ ಒಪ್ಪಿಕೊಂಡರು. ಬ್ರೇಕ್‌ ಸಮಯದಲ್ಲಿ ಕಾರ್ತಿಕ್‌ ಜತೆ ಈ ಬಗ್ಗೆ ಚರ್ಚಿಸಿದರು. ಅಷ್ಟೇ ಅಲ್ಲದೇ ಕ್ಯಾಮೆರಾ ಮುಂದೆ ʻʻಜನ ನನ್ನನ್ನು ಕ್ರಶ್‌ ಎಂದು ಟ್ರೀಟ್‌ ಮಾಡಿದ್ರು. ಮೊದಲ ವಾರ ನಾನು ನಾನಾಗಿದ್ದೇ. ಏನೇ ಆದರೂ ಮುಖಕ್ಕೆ ಹೊಡೆಯುವ ಹಾಗೆ ಹೇಳುತ್ತಿದ್ದೆʼʼಎಂದು ಬೇಸರ ಹೊರ ಹಾಕಿದರು.

ಸ್ನೇಹಿತ್‌ಗೆ ರಿಟರ್ನ್ ಟಿಕೆಟ್

‘’ಮೊದಲನೇ ವಾರ ಕ್ಯಾಪ್ಟನ್ ಆಗಿ ಟೇಕ್ ಆಫ್ ಆದವರು. ಮೂರನೇ ವಾರ ಜೈಲಿನಲ್ಲಿ ಲ್ಯಾಂಡ್ ಆಗಿದ್ದೀರಾ. ಬೇಜಾರು ಮಾಡಿಕೊಳ್ಳಬೇಡಿ. ರಿಟರ್ನ್ ಟಿಕೆಟ್ ರೆಡಿ ಇದೆ’’ ಎಂದು ಬರೆದಿತ್ತು. ಇದಕ್ಕೆ ಸ್ನೇಹಿತ್‌ ಅವರು ʻʻಮೊದಲಎರಡು ವಾರ ನಾನು ತುಂಬಾ ಆಕ್ಟಿವ್‌ ಇದ್ದೆ. ಬರಬರುತ್ತಾ ನಾನು ಜೈಲಿಗೆ ಕೂಡ ಹೋದೆ. ಇದು ಸರಿಯಾಗಿದೆ. ಗ್ರಾಫ್‌ ಯಾವತ್ತೂ ಕೆಳಗೆ ಹೋಗಬಾರದುʼʼಎಂದರು.

ಕಾರ್ತಿಕ್‌ಗೆ ಕತ್ತಿ

‘’ಯುದ್ಧ ಮಾಡಿದರೆ ಮಾತ್ರ ಖಡ್ಗಕ್ಕೆ ಬೆಲೆ. ಸರಿಯಾದ ಎದುರಾಳಿ ಮೇಲೆ ಅದನ್ನ ಬಳಸದೇ ಹೋದರೆ ಆ ಖಡ್ಗ ಶೋ ಕೇಸ್‌ನಲ್ಲಿ ಇಡೋಕಷ್ಟೇ ಲಾಯಕ್ಕು’’ ಎಂದು ಬರೆಯಲಾಗಿತ್ತು. ಇದರ ಜತೆ ತರಕಾರಿಗಳು ಇದ್ದವು. ಸರಿಯಾದ ಎದುರಾಳಿ ಮೇಲೆ ಪ್ರಯೋಗ ಮಾಡಿ ಎಂದು ಕಿಚ್ಚ ಅವರು ಕಾರ್ತಿಕ್‌ಗೆ ಕಿವಿಮಾತು ಹೇಳಿದರು. ಈ ವಾರ ಕೂಡ ಎಲಿಮಿನೇಶನ್‌ನಿಂದ ಪಾರಾಗಿದ್ದಾರೆ ಕಾರ್ತಿಕ್‌.

ಇದಾದ ಬಳಿಕ ಮನೆಯವರೆಲ್ಲರೂ ಈ ಉಡುಗೊರೆಗಳ ಬಗ್ಗೆ ಚರ್ಚಿಸಿದರು. ಹಾಗೂ ಒಪ್ಪಿಕೊಂಡರು. ವೇದಿಕೆಯಲ್ಲಿ ಕಿಚ್ಚ ಸುದೀಪ್‌ ʻʻನಿಮ್ಮ ಉಡುಗೊರೆ, ಬೇರೆಯವರ ಉಡುಗೊರೆಯನ್ನು ಆಗಾಗ ಗಮನಿಸಿ. ಮೋಟಿವೇಶನ್ ಬೇಕು ಅಂದರೆ ಲೆಟರ್ ಓದಿʼʼಎಂದು ಸ್ಪರ್ಧಿಗಳಿಗೆ ಹೇಳಿದರು.

ಬಿಗ್​ಬಾಸ್ ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

Exit mobile version