Site icon Vistara News

BBK Season 10: ಶತ್ರುವಿನ ಶತ್ರು ಮಿತ್ರ ಅಂತೆ! ವಿನಯ್ ಪಾಲಿಗೆ ಪ್ರತಾಪ್ ಹಾಗೇನಾ?

Drone Prathap Vinay gowda Bbk 10

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK Season 10) ಐದನೇ ವಾರ ಡ್ರೋನ್‌ ಪ್ರತಾಪ್‌ ಅವರು ವಾರವಿಡೀ ಪ್ರಮುಖ ಹೈಲೈಟ್‌ ಆಗಿದ್ದಾರೆ. ʻಗಂಧದ ಗುಡಿʼ ಹಾಗೂ ʻವಜ್ರಕಾಯ ಟೀಂʼ ಎಂದು ಎರಡು ಟೀಂ ಮಾಡಿತ್ತು ಬಿಗ್‌ ಬಾಸ್‌. ಗಂಧದ ಗುಡಿಗೆ ಪ್ರತಾಪ್‌ ಕ್ಯಾಪ್ಟನ್‌ ಆದರೆ, ವಜ್ರಕಾಯಕ್ಕೆ ಸಿರಿ ಕ್ಯಾಪ್ಟನ್‌. ಆದರೆ ಕೊನೆಗೆ ಎಲ್ಲ ಟಾಸ್ಕ್‌ನಲ್ಲಿ ಗೆದ್ದು ಬೀಗಿದ್ದು ಮಾತ್ರ ಪ್ರತಾಪ್‌ ತಂಡ. ಇಷ್ಟಾದರೂ ಪ್ರತಾಪ್‌ಗೆ ತಮ್ಮದೇ ಟೀಂ ಬಗ್ಗೆ ಅಸಮಾಧಾನ ಇತ್ತು. ಮೊದಲಿಗೆ ಅವರದ್ದೇ ಟೀಂ ಪ್ರತಾಪ್‌ ಅವರನ್ನು ಹೊಗಳಿ, ಬಳಿಕ ಅವರ ಮೇಲೆ ಅಸಮಾಧಾನ ಹೊರಹಾಕಿದ್ದರು. ಆದರೆ ಪ್ರತಾಪ್‌ ಮಾತ್ರ ತನ್ನ ತಂಡಕ್ಕೆ ನೇರವಾಗಿ ಆಟದ ಗೆಲುವು ಇಷ್ಟವಾಗಿರಲಿಲ್ಲ. ಏಕೆಂದರೆ ತಮ್ಮ ತಂಡ ಆ ಟಾಸ್ಕ್​ನಲ್ಲಿ ನಿಯತ್ತಿನಿಂದ ಆಡಲಿಲ್ಲ ಎಂಬುದು ಅಭಿಪ್ರಾಯ ಹೊರ ಹಾಕಿದ್ದರು. ತಮ್ಮ ಅಭಿಪ್ರಾಯವನ್ನು ತಮ್ಮ ತಂಡದ ಮುಂದೆ ಧೈರ್ಯವಾಗಿಯೇ ಪ್ರತಾಪ್ ಹೇಳಿಕೊಂಡರು. ಇದಾದ ಬಳಿಕ ಯಾರು ಹೆಚ್ಚಾಗಿ ಪ್ರತಾಪ್‌ ಅವರನ್ನು ದ್ವೇಷ ಮಾಡುತ್ತಿತ್ತೋ, ಆ ಟೀಂ ಪ್ರತಾಪ್‌ ಅವರನ್ನು ಹಾಡಿ ಹೊಗಳಿದೆ. ಅದುವೇ ವಿನಯ್‌ ಟೀಂ.

ಹೌದು ವಿನಯ್‌ ಅವರ ಗುಂಪು ಪ್ರತಾಪ್‌ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಶತ್ರುವಿನ ಶತ್ರು ಮಿತ್ರ ಎನ್ನುತ್ತಾರೆ. ವಿನಯ್ ಪಾಲಿಗೆ ಪ್ರತಾಪ್ ಹಾಗೇ ಆಗಿದ್ದಾರೆ. ಪ್ರತಾಪ್‌ ಅವರು ತಮ್ಮ ತಂಡ ನಿಯತ್ತಿನಿಂದ ಆಡಲಿಲ್ಲ ಎಂದು ನೇರವಾಗಿ ಹೇಳಿದ ಕೂಡಲೇ , ಕಾರ್ತಿಕ್, ವರ್ತೂರು ಸಂತೋಷ್ ಅವರಿಗೆ ಹಿಡಿಸಲಿಲ್ಲ. ವರ್ತೂರು ಅವರಿಗೆ ಇನ್ನೂ ಹೆಚ್ಚೇ ಹಿಡಿಸಲಿಲ್ಲ. ಆ ಅಸಮಾಧಾನವನ್ನು ತುಕಾಲಿ ಬಳಿ ತೋಡಿಕೊಂಡದ್ದೂ ಇದೆ. ತಮ್ಮ ತಂಡದ ಆಟದ ಬಗ್ಗೆ ಸಿರಿ ಬಳಿ ಕೂಡ ಪ್ರತಾಪ್‌ ಹೇಳಿಕೊಂಡರು. ಆಗ ವಿನಯ್, ಪ್ರತಾಪ್ ಬಗ್ಗೆ ತಂಡದ ಎದುರೇ ಮೆಚ್ಚುಗೆ ಮಾತನ್ನಾಡಿ, ಪ್ರತಾಪ್ ನಿಜಕ್ಕೂ ತಮ್ಮ ತಂಡದ ಎದುರು ನೀವು ಸರಿಯಾಗಿ ಆಡಿಲ್ಲ ಎಂದು ಹೇಳಿದರು ಅವನ ಬಗ್ಗೆ ಗೌರವ ಹೆಚ್ಚಾಗುತ್ತದೆ ಎಂದರು.

ಇದನ್ನೂ ಓದಿ: BBK Season 10: ಸೋಲಿನ ಭೀತಿ ʻವಜ್ರಕಾಯʼ ತಂಡವನ್ನು ಕಾಡ್ತಿದ್ಯಾ? ಸಂಗೀತಾ-ವಿನಯ್‌ ಜಿದ್ದಾಜಿದ್ದಿ!

ಹೊಗಳಿದ ವಿನಯ್‌

ವಿನಯ್‌ ಅವರು ಪ್ರತಾಪ್‌ಗೆ ಮಾತನಾಡಿ ʻʻನಮಗೆ ಇಷ್ಟು ದಿನ ನಿನ್ನ ಮೇಲೆ ಬೇರೆ ತರಹ ಒಪಿನಿಯನ್‌ ಇದ್ದಿತ್ತು. ಆದರೆ ಈ ವಾರ ನೀನು ಆಡಿದ ಆಟ ನೋಡಿದರೆ, ನಿನ್ನ ಮೇಲೆ ನಮ್ಮ ಇಡೀ ಟೀಂಗೆ ಗೌರವ ಬಂದಿದೆ. ಸೀರಿಯೆಸ್‌ ಆಗಿ ಹೇಳ್ತಾ ಇದ್ದೀನಿ. ನಾವು ಅದ್ಕೊಂಡ ಹಾಗೇ ಇಲ್ಲ ನೀನು. ಇನ್ಮೇಲೆ ನೀನು ನಮ್ಮ ಹತ್ರ ಬಂದು ಏನು ಬೇಕಾದರೂ ಮಾತನಾಡಬಹುದು. ಹೇಗ್‌ ಬೇಕಾದರೂ ಇರಬಹುದು. ಅದು ನಿಂಗೆ ಬಿಟ್ಟಿದ್ದುʼʼಎಂದರು.

ತನಿಷಾ ಬಗ್ಗೆ ಪ್ರತಾಪ್ ಎದುರು ನಮ್ರತಾ ದೂರುಗಳನ್ನು ಸಹ ಹೇಳಿದರು. ʻʻನೀನು ತನಿಷಾರನ್ನು ಸೇಫ್ ಮಾಡಿದ್ದೀಯ. ಅದಕ್ಕೆ ನಿನ್ನ ಜತೆ ಹಾಗೆ ನಡೆದುಕೊಂಡರುʼʼ ಎಂದು ನಮ್ರತಾ ಹೇಳಿದರು.

ಇತ್ತ ತುಕಾಲಿ ಸಂತೋಷ್‌ ಕೂಡ ʻಪ್ರತಾಪ್‌ ಚೆನ್ನಾಗಿ ಆಡ್ತಾ ಇದ್ದಾನೆ ಅಲ್ವಾ?ʼ ಎಂದು ವರ್ತೂರ್‌ ಮುಂದೆ ಹೇಳಿದ್ದಾರೆ. ವರ್ತೂರ್‌ ಈ ಬಗ್ಗೆ ʻʻಅವನ ಬಗ್ಗೆ ಮಾತಾಡಕ್ಕೆ ನಾವು ಯಾರಣ್ಣ? ಅದೊಂದು ಕ್ಯಾರೆಕ್ಟರ್‌ ಬಗ್ಗೆ ನಾನು ಮಾತಾಡೋದೆ ಇಲ್ಲʼʼಎಂದರು.

ವಿನಯ್‌ ಅವರು ಈ ರೀತಿ ಪ್ರತಾಪ್‌ ಬಗ್ಗೆ ಹೇಳುತ್ತಿದ್ದಂತೆ ಕಮೆಂಟ್‌ನಲ್ಲಿ ನೆಟ್ಟಿಗರು, ತಮ್ಮ ಟೀಂಗೆ ಪ್ರತಾಪ್‌ ಅವರನ್ನು ಸೆಳೆಯುವ ಹುನ್ನಾರ ಇರಬೇಕು ಎಂದು ಬರೆದುಕೊಂಡಿದ್ದಾರೆ. ಅದೇನೇ ಇದ್ದರೂ ಪ್ರತಾಪ್‌ ಅವರಿಗೆ ಈ ಬಾರಿ ಉತ್ತಮ ಬರಬೇಕು ಎಂಬುದು ಅವರ ಫ್ಯಾನ್ಸ್‌ ಆಸೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version