Site icon Vistara News

BBK SEASON 10: ಇಂಟರ್‌ವ್ಯೂ ವೇಳೆ ಬರುವ ವಾಲ್ಯೂಮ್ ಇಲ್ಲಿ ಯಾಕಿಲ್ಲ ರಕ್ಷಕ್‌? ಕಿಚ್ಚ ಗರಂ!

The volume that comes from sitting in an interview is not here questioned sudeep to Rakshak Bullet

ಬೆಂಗಳೂರು: ಜ.27ರಂದು ಬಿಗ್‌ ಬಾಸ್‌ ಸೀಸನ್‌ 10ರ (BBK SEASON 10) ಫಿನಾಲೆ ಅದ್ಧೂರಿಯಾಗಿ ನಡೆದಿದೆ. ಇಂದು ಟ್ರೋಪಿ ಯಾರ ಕೈಗೆ ಸೇರಲಿದೆ ಎಂಬುದು ಗೊತ್ತಾಗಲಿದೆ. ಜತೆಗೆ ರಕ್ಷಕ್‌ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದು ಕಿಚ್ಚ ಸುದೀಪ್‌ ಅವರ ಅಭಿಮಾನಿಗಳನ್ನು ಕೆರಳಿಸಿತ್ತು. ಸಂದರ್ಶನಗಳಲ್ಲಿ ‘ಬಿಗ್ ಬಾಸ್’ ವಿರುದ್ಧ ಮಾತನಾಡಿದ್ದರು ರಕ್ಷಕ್‌. ಸುದೀಪ್ ಅವರು ‘ವಾರದ ಕತೆ ಕಿಚ್ಚನ ಜೊತೆ’ ಎಪಿಸೋಡ್‌ನಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿ, ರಕ್ಷಕ್‌ಗೆ ಕ್ಲಾಸ್‌ ಕೂಡ ತೆಗೆದುಕೊಂಡಿದ್ದರು. ಆದರೀಗ ಮತ್ತೆ ಫಿನಾಲೆಯಲ್ಲಿ ಸುದೀಪ್‌ ಸರಿಯಾಗಿ ರಕ್ಷಕ್‌ ಅವರನ್ನು ಬೆಂಡೆತ್ತಿದ್ದಾರೆ.

ಇಂಟರ್‌ವ್ಯೂನಲ್ಲಿ ಕೂತ್ಕೊಂಡಾಗ ಬರುವ ವಾಲ್ಯೂಮ್ ಇಲ್ಲಿ ಬರ್ತಿಲ್ಲ?

ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ರಕ್ಷಕ್ ಬುಲೆಟ್‌ಗೆ ಕಿಚ್ಚ ಸುದೀಪ್‌ ತಿರುಗೇಟು ಕೊಟ್ಟಿದ್ದಾರೆ. ’ಮಿಸ್ಟರ್‌ ರಕ್ಷಕ್ ಹೇಗಿದ್ದೀರಿ? ಹೇಗಿತ್ತು ರೆಸ್ಪಾನ್ಸ್’’ ಎಂದು ಕಿಚ್ಚ ಸುದೀಪ್ ಕೇಳಿದಾಗ,ಫ್ಯಾಮಿಲಿ ಮೆಂಬರ್ಸ್ ಗುರುತು ಹಿಡಿಯುತ್ತಿದ್ದಾರೆ. ತುಂಬಾ ಸ್ಪೆಷಲ್ ಎನಿಸುತ್ತಿ ಎಂದು ರಕ್ಷಕ್‌. ‘’ಇಂಟರ್‌ವ್ಯೂನಲ್ಲಿ ಕೂತ್ಕೊಂಡಾಗ ಬರುವ ವಾಲ್ಯೂಮ್ ಇಲ್ಲಿ ಬರ್ತಿಲ್ಲ?’’ ಎಂದು ಕಿಚ್ಚ ಸುದೀಪ್‌ ಕೇಳಿದಾಗ, ‘’ನಿಮಗೆ ನಾನು ಸಾರಿ ಕೇಳ್ತೀನಿ ಅಣ್ಣ’’ ಎಂದರು ರಕ್ಷಕ್. ಇಲ್ಲಿಗೆ ಸುದೀಪ್‌ ಅವರು ರಕ್ಞಕ್‌ ಅವರನ್ನು ಬಿಟ್ಟಿಲ್ಲ.

ಯಾವ ಪುಟಗೋಸಿ ಬದನೆಕಾಯಿ ಇಲ್ಲ. ತಾವೇನು ಮಾಡಿದ್ದೀರೋ ಅದನ್ನ ಮಾತ್ರ ತೋರಿಸೋಕೆ ಸಾಧ್ಯ

ಡ್ರೋನ್‌ ಪ್ರತಾಪ್‌ ಅವರು ಸುದೀಪ್‌ ಅವರ ಜತೆ ಮಾತನಾಡುವಾಗ ʻʻಈ ವೇದಿಕೆಗೆ ಹಾಗೂ ತಂಡಕ್ಕೆ ನನ್ನ ಧನ್ಯವಾದ. ಏನು ತೋರಿಸಿದ್ದೀರೋ, ನನ್ನನ್ನ ಹೇಗೆ ತೋರಿಸಿದ್ದೀರೋ.. ಅದೂ ನನಗೆ ಗೊತ್ತಿಲ್ಲ. ಹೊರಗೆ ಬಂದ್ಮೇಲೆ ಗೊತ್ತಾಗೋದು’’ ಎಂದು ಹೇಳಿದರು. ಇದನ್ನೇ ಇಟ್ಟುಕೊಂಡು ಸುದೀಪ್‌ ಅವರು ಮಾತನಾಡಿ ʻʻನಮ್ಮನ್ನ ಹಾಗೆ ತೋರಿಸಿದ್ರು, ಹೀಗೆ ತೋರಿಸಿದ್ರು, ನೆಗೆಟಿವ್ ಆಗಿ ತೋರಿಸಿದ್ರು ಅಂತೆಲ್ಲಾ ಹೇಳ್ತೀರಿ. ಯಾವ ಪುಟಗೋಸಿ ಬದನೆಕಾಯಿ ಇಲ್ಲ. ತಾವೇನು ಮಾಡಿದ್ದೀರೋ ಅದನ್ನ ಮಾತ್ರ ತೋರಿಸೋಕೆ ಸಾಧ್ಯ. ಇದನ್ನು ನೀವು ಹೊರಗಡೆ ಬಂದು ಸಂದರ್ಶನ ಕೊಡುವಾಗಲೂ ತಲೆಯಲ್ಲಿ ಇಟ್ಟುಕೊಳ್ಳಬೇಕುʼʼಎಂದು ಪರೋಕ್ಷವಾಗಿ ರಕ್ಷಕ್‌ಗೆ ತಿರುಗೇಟು ಕೊಟ್ಟರು.

ಇದನ್ನೂ ಓದಿ: BBK SEASON 10: ಇದ್ದಷ್ಟೂ ದಿನ ಮನೆಯಲ್ಲಿ ರಂಜಿಸಿ, ಹೊರಗೆ ಬಂದ ತುಕಾಲಿ ಜರ್ನಿ ಹೇಗಿತ್ತು?

ನೀವು ಬದುಕುವ ರೀತಿ ಒಂದು ಪುಸ್ತಕ ಆಗಬೇಕು

ಇನ್ನು ವರ್ತೂರ್‌ ಸಂತೋಷ್‌ ವಿಚಾರ ಕೂಡ ಬಂದಾಗ, ವರ್ತೂರ್‌ ಸಂತೋಷ್‌ ಮಾತನಾಡಿ ʻʻಹುಲಿ ಉಗುರು ವಿಚಾರ ಬಂದಾಗ ನಾನು ಹೊರಗಡೆ ಒಂದು ಸ್ಟೇಟ್‌ಮೆಂಟ್‌ ಕೂಡ ಕೊಡದಂತೆ ಬಂದುಬಿಟ್ಟೆ. ಅದೊಂದು ನನಗೆ ತುಂಬಾ ಕಾಡುತ್ತಿತ್ತುʼʼಎಂದರು. ಆಗ ಸುದೀಪ್‌ ಮತ್ತೆ ಈ ಬಗ್ಗೆ ಮಾತನಾಡಿ ʻʻನಮ್ಮ ಲೈಫ್ ಸ್ಟೈಲ್ ಸ್ಟೇಟ್‌ಮೆಂಟ್ ಆಗಬೇಕು. ನಾವು ಇರುವ ರೀತಿ ಸ್ಟೇಟ್‌ಮೆಂಟ್‌ ಆಗಬೇಕು. ಮಾತಲ್ಲಿ ಏನಿದೆ ಬದನೆಕಾಯಿ? ನಾವು ಇರುವ ರೀತಿ, ನಡೆದುಕೊಳ್ಳುವ ರೀತಿ ಸ್ಟೇಟ್‌ಮೆಂಟ್‌ ಆಗಬೇಕು. ಹೊರಗಡೆ ಬಂದಾಗ ನೀವು ಬದುಕುವ ರೀತಿ ಒಂದು ಪುಸ್ತಕ ಆಗಬೇಕು’’ಎಂದು ಮತ್ತೆ ಪರೋಕ್ಷವಾಗಿ ರಕ್ಷಕ್‌ ವರಿಗೆ ರಿರುಗೇಟು ಕೊಟ್ಟರು.

ನನಗೆ ಹಿಂದೊಂದು ಮುಂದೊಂದು ಬರಲ್ಲ

ಸಂದರ್ಶನದ ವಿಚಾರವಾಗಿ ಸುದೀಪ್‌ ಮಾತನಾಡಿ ʻʻಈ ಶೋ ಬಗ್ಗೆ ವಿಮರ್ಶೆ ಮಾಡುವ ಅಧಿಕಾರ ಎಲ್ಲರಿಗೂ ಇದೆ. ನೋವು ಕೊಡುವ ವೇದಿಕೆ ಇದಾಗಿದ್ದರೆ, 10 ವರ್ಷಗಳಿಂದ ನಾನು ಈ ವೇದಿಕೆ ಮೇಲೆ ನಿಲ್ಲುತ್ತಲೇ ಇರಲಿಲ್ಲ. ಇಲ್ಲಿ ಇದ್ದಾಗ ಒಂದು ಮಾತು, ಸಂದರ್ಶನದಲ್ಲಿ ಒಂದು ಮಾತು..ಇದೆಲ್ಲ ಬೇಕಾ? ಎಂದು ಅನ್ನಿಸುತ್ತದೆ. ರಕ್ಷಕ್‌ ಅವರೇ ನಿಮಗೆ ಇದೆಲ್ಲ ಬೇಕಾ? ಆವೇಷದಲ್ಲಿ ನೀವು ಈ ರೀತಿ ಮಾತನಾಡಿದರೆ, ಎಷ್ಟು ಜನರನ್ನು ನೀವು ಕಳೆದುಕೊಳ್ಳುತ್ತೀರಿ ಗೊತ್ತಾ ನಿಮಗೆ? ನಿಮ್ಮಲ್ಲಿ ಯಾರೇ ಏನೇ ಸಂದರ್ಶನ ಕೊಟ್ಟರೂ, ನನಗೆ ಸಮಸ್ಯೆ ಇಲ್ಲ. ಆದರೆ, ಸಹ ಸ್ಪರ್ಧಿಗಳ ಬಗ್ಗೆ ಏನಾದರೂ ಬರ್ತಿದೆ ಅಂದ್ರೆ ಅದರ ಬಗ್ಗೆ ತಿಳಿದುಕೊಂಡೇ ನಾನು ಮಾತಾಡ್ತೀನಿ. ಆದರೆ, ನನಗೆ ಹಿಂದೊಂದು ಮುಂದೊಂದು ಬರಲ್ಲ. ನಮ್ಮ ಆಪ್ತ ಬಳಗದಲ್ಲಿ ಇದ್ದವರು ಬುಲೆಟ್‌ ಪ್ರಕಾಶ್. ಅವರನ್ನ ನಾವಿನ್ನೂ ಮನಸ್ಸಿನಲ್ಲಿ ಇಟ್ಟುಕೊಂಡಿದ್ದೇವೆʼʼಎನದು ರಕ್ಷಕ್‌ಗೆ ಸೇರಿಸಿ ಉಳಿದ ಸ್ಪರ್ಧಿಗಳಿಗೆ ಬುದ್ಧಿವಾದ ಹೇಳಿದರು. ಇನ್ನು ರಕ್ಷಕ್‌ ಕೂಡ ಸುದೀಪ್‌ ಅವರಿಗೆ ಕ್ಷಮೆ ಕೇಳಿದರು.

Exit mobile version