Site icon Vistara News

BBK Season 10: ಮಹಿಳೆಯರು ಬಿಗ್ ಬಾಸ್ ಗೆಲ್ತಿಲ್ಲ ಅಂದ್ರೆ ಇದೇ ಕಾರಣಕ್ಕೆ; ಇದು ಕಿಚ್ಚನ ಕ್ಲಾಸ್‌!

Kiccha Sudeep

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK Season 10) ಎರಡನೇ ವಾರ ವಾರದ ಕತೆ ಕಿಚ್ಚನ ಜತೆ ಪಂಚಾಯಿತಿಯಲ್ಲಿ ಸ್ಪರ್ಧಿಗಳಿಗೆ ಸುದೀಪ್‌ ಸಖತ್‌ ಕ್ಲಾಸ್‌ ತೆಗೆದುಕೊಂಡರು. ಅಷ್ಟೇ ಅಲ್ಲದೇ ಇಷ್ಟು ವರ್ಷ, ಇಷ್ಟು ಸೀಸನ್​ನಲ್ಲಿ ಬಳಸದ ಅಧಿಕಾರವೊಂದನ್ನು ಸುದೀಪ್ ಸೀಸನ್‌ನಲ್ಲಿ ಬಳಿಸಿದರು. ಮನೆಯ ಸದಸ್ಯರನ್ನು ಭೇಟಿಯಾಗುತ್ತಲೇ, ‘ನೀವು ನೀವೇ ಡಿಸ್ಕಸ್ ಮಾಡಿಕೊಂಡು ಇಬ್ಬರನ್ನು ನಾಮಿನೇಟ್ ಮಾಡಿ’ ಎಂದರು. ಅದಕ್ಕೆ ಪ್ರತಾಪ್ ಮತ್ತು ಗೌರೀಶ್ ಅಕ್ಕಿ ಅವರ ಹೆಸರುಗಳನ್ನು ಫೈನಲ್ ಮಾಡಲಾಯಿತು. ಇದಾದ ಬಳಿಕ ಕಿಚ್ಚ ಒಂದೊದೇ ವಿಚಾರಗಳ ಬಗ್ಗೆ ಪ್ರಸ್ತಾವನೆ ಮಾಡಿದರು.

ಇಷ್ಟೂ ಸೀಸನ್‌ನಲ್ಲಿ ಸುದೀಪ್‌ ಅವರು ಬರಬರುತ್ತಲೇ ಸ್ಪರ್ಧಿಗಳಿಗೆ ಕ್ಲಾಸ್‌ ತೆಗೆದುಕೊಂಡವರಲ್ಲ. ಅಷ್ಟೇ ಅಲ್ಲದೇ ತಮಾಷೆಯಾಗಿಯೇ ಸ್ಪರ್ಧಿಗಳ ಜತೆ ಆರಂಭದಲ್ಲಿಯೇ ಮಾತನಾಡುತ್ತಿದ್ದರು. ಆದರೆ ಈ ಬಾರಿ ವಿಶೇಷವಾಗಿ ಮಹಿಳೆಯರ ಮೇಲೆ ಸುದೀಪ್‌ ಗರಂ ಆದರು.

ಮಹಿಳೆಯರ ಮೇಲೆ ಕಿಚ್ಚ ಗರಂ

ʻʻಇಷ್ಟೂ ಸೀಸನ್‌ನಲ್ಲಿ ಮಹಿಳೆಯರು ಗೆದಿದ್ದು ಒಬ್ಬರೇ. ಅದು ಶ್ರುತಿ ಮಾತ್ರ. ಉಳಿದ ಎಲ್ಲಾ ವಿನ್ನರ್​ಗಳು ಪುರುಷರೇ. ಮಹಿಳೆಯರು ಏಕೆ ವಿನ್ ಆಗೋಕೆ ಆಗಲ್ಲ ಎಂದು ಅನೇಕರು ಪ್ರಶ್ನೆ ಮಾಡುತ್ತಾರೆ. ಈ ಬಾರಿ ಕ್ಯಾಪ್ಟನ್‌ ಆಯ್ಕೆಯಲ್ಲಿಯೂ ವಿನಯ್‌ ಹಾಗೂ ಕಾರ್ತಿಕ್‌ ಆದರು. ಆದರೆ ಯಾವೊಬ್ಬ ಮಹಿಳೆಯರು ಮುಂದೆ ಬರಲಿಲ್ಲ. ಮುಂದಿನ ವಾರ ನೇರವಾಗಿ ನಾಮಿನೇಟ್‌ ಮಾಡುವ ಇಬ್ಬರು ಸ್ಪರ್ಧಿಗಳ ಹೆಸರು ಹೇಳಿ ಎಂದರೆ ಸಮಯ ತೆಗೆದುಕೊಂಡಿರಿ. ಆದರೆ ನೀವು ಕ್ಯಾಪ್ಟನ್‌ ಆಗಬಹುದಾ ಎಂಬ ಯೋಚನೆ ಕೂಡ ಮಾಡಿಲ್ಲ. ನೀವೆಲ್ಲರೂ ಆಡೋಕೆ ಎಂದೇ ಬಿಗ್ ಬಾಸ್ ಮನೆಗೆ ಹೋಗಿದ್ದೀರಿ. ಹಾಗಿದ್ದರೂ ಬೇರೆಯವರಿಗೆ ಆಟವನ್ನು ಬಿಟ್ಟುಕೊಡೋದು ಏಕೆ? ನಿಮ್ಮ ಈ ಮನಸ್ಥಿತಿಯಿಂದಲೇ ಮಹಿಳೆಯರು ಬಿಗ್ ಬಾಸ್ ಗೆಲ್ಲುತ್ತಿಲ್ಲ. ನಾನ್ಯಾಕೆ ಕ್ಯಾಪ್ಟನ್ ಆಗಬಾರದು ಅಂತ ನಿಮಗೆ ಅನ್ನಿಸಲಿಲ್ವಾ? ಯುದ್ಧಕ್ಕೆ ಇಳಿದ ಮೇಲೆ ಸೋತರೂ ಪರವಾಗಿಲ್ಲ, ಸತ್ತಾದಾರೂ ಗೆಲ್ಲಿ. ಹೇಗಿರಬೇಕು ಅನ್ನೋದು ನಿಮಗೆ ಬಿಟ್ಟಿದ್ದು. ಆದರೆ ಈ ರೀತಿ ಮಾತ್ರ ಇರಬೇಡಿ.’ʼ ಎಂದು ಸುದೀಪ್ ಅವರು ಕ್ಲಾಸ್ ತೆಗೆದುಕೊಂಡರು. ಬಳಿಕ ಎಲ್ಲರೂ ತಪ್ಪನ್ನು ತಿದ್ದುಕೊಳ್ಳುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: BBK Season 10: ಕಿಚ್ಚ ಫುಲ್‌ ಗರಂ; ಮನೆಯ ಮೇನ್‌ ಗೇಟ್ ಓಪನ್‌ ಮಾಡಿದ್ದೇಕೆ?

ವಿಶೇಷ ಅಧಿಕಾರ ಬಳಸಿದ ಕಿಚ್ಚ

ʻವಿನಯ್‌ ಹಾಗೂ ಕಾರ್ತಿಕ್‌ ಅವರನ್ನು ಬಿಟ್ಟು ಸೋಫಾ ಹಿಂದೆ ಎಲ್ಲ ಸ್ಪರ್ಧಿಗಳು ನಿಲ್ಲಬೇಕು ಎಂದರು ಕಿಚ್ಚ. ಎರಡು ಟೀಂ ಲೀಡರ್‌ ಅವರನ್ನು ಆಯ್ಕೆ ಮಾಡಿ ಎಂದಾಗ, ನೀವೆಲ್ಲ ಇವರಿಬ್ಬರನ್ನು ಆಯ್ಕೆ ಮಾಡಿದ್ರಿ. ಅದಕ್ಕೆ 20 ಸೆಕೆಂಡ್‌ ಕೂಡ ತೆಗೆದುಕೊಂಡಿಲ್ಲ. ನಾನ್‌ ಯಾಕೆ ಕ್ಯಾಪ್ಟನ್‌ ಆಗಬಾರದು ಎಂದು ಯಾರಿಗೂ ಅನ್ನಿಸಿಲ್ವಾ?ʼʼಎಂದು ಕಿಚ್ಚ ಗರಂ ಆದರು. ಆಗ ಇಶಾನಿ ʻʻನಮ್ಮ ಮೇಲೆ ನಂಬಿಕೆ ಇಲ್ಲ ಅಂತʼʼಎಂದರು. ಸಂಗೀತಾ ಅವರು ಈ ಬಗ್ಗೆ ಮಾತನಾಡಿʻʻನಾನು ಏನಾದರು ಹೇಳಿದರೆ ನನ್ನ ವಿರುದ್ಧ ಎಲ್ಲ ಆಗಿ ಬಿಡುತ್ತಾರೆʼʼಎಂದರು. ಇದಾದ ಕೂಡಲೇ ಕಿಚ್ಚ ಗರಂ ಆಗಿ ʻʻಆ ಭಯ ಇರೋರು ಯಾಕಿದ್ದೀರಾ ಒಳಗಡೆ?ನಾನು ನೋಡಿದ್ದು ನನಗೆ ಇಷ್ಟ ಆಗಿಲ್ಲ. ಹೀಗೆ ಇರ್ತೀರಾ ಅಂದರೆ ಈ ಕ್ಷಣಕ್ಕೆ ನಾನು ಬಾಗಿಲು ಓಪನ್‌ ಮಾಡ್ತೀನಿ. ಖಂಡಿತ ಇರಬೇಡಿ. ಗೇಟ್‌ ಓಪನ್‌ ಪ್ಲೀಸ್‌ʼʼಎಂದು ಮನೆಯ ಬಾಗಿಲು ಓಪನ್‌ ಮಾಡಿಸಿಯೇ ಬಿಟ್ಟರು.

ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು ಜಿಯೋ ಸಿನಿಮಾದಲ್ಲಿ ವೀಕ್ಷಿಸಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು ಕಲರ್ಸ್‌ಕನ್ನಡದಲ್ಲಿ ಪ್ರತಿದಿನ ರಾತ್ರಿ 9.30ಗೆ ಪ್ರಸಾರ ಕಾಣುತ್ತಿದೆ.

Exit mobile version