Site icon Vistara News

BBK Season 10: ಇಲ್ಲಿ ಥ್ರೆಟ್‌ ಅದೆಲ್ಲ ಇಲ್ಲ, ಎಚ್ಚರಿಕೆ ಇರಲಿ ಎಂದ ಕಿಚ್ಚ! 

sangeetha sringeri, Vinay Gowda

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK Season 10) ಎರಡನೇ ವಾರ ವಾರದ ಕತೆ ಕಿಚ್ಚನ ಜೊತೆ ಸೀಸನ್‌ನಲ್ಲಿ ಸುದೀಪ್‌ ಅವರು ಸ್ಪರ್ಧಿಗಳಿಗೆ ಖಡಕ್‌ ಎಚ್ಚರಿಕೆಗಳ ಜತೆಗೆ ಸ್ಪರ್ಧಿಗಳ ಮಧ್ಯೆ ಇರುವ ಮನಸ್ತಾಪಗಳನ್ನೂ ಚರ್ಚಿಸಿದ್ದಾರೆ. ಸಂಗೀತಾ ಹಾಗೂ ವಿನಯ್‌ ಜಗಳ ಕಳೆದ ವಾರದಿಂದ ನಿರಂತರವಾಗಿ ಮನೆಯಲ್ಲಿ ನಡೆಯುತ್ತಲೇ ಇತ್ತು. ಬಳಿಕ ವಿನಯ್‌ ಹಾಗೂ ಸಂಗೀತಾ ಅವರು ರಾಜಿಯಾದರು. ಆದರೀಗ ಕಿಚ್ಚ ಅವರು ವಿನಯ್‌ ಅವರಿಂದ ಥ್ರೆಟ್‌ ಆಗ್ತಿದೆ ಎಂದ ಸಂಗೀತಾ ಬಗ್ಗೆ ಚರ್ಚಿಸಿದ್ದಾರೆ. ಈ ರೀತಿಯ ಪದ ಬಳಕೆ ಮಾಡುವ ಮೊದಲು ಎಚ್ಚರಿಕೆಯಿಂದ ಇರಿ ಎಂದು ಹೇಳಿದ್ದಾರೆ ಸುದೀಪ್. ಅಷ್ಟೇ ಅಲ್ಲದೇ ಈ ಬಗ್ಗೆ ಸ್ಪರ್ಧಿಗಳಿಗೆ ಮನದಟ್ಟು ಮಾಡಿದ್ದಾರೆ.

ವಿನಯ್‌ ಹಾಗೂ ಸಂಗೀತಾ ನಡುವೆ ವಾರ್‌ ಆಗಿತ್ತು. ನಿಮ್ಮ ಜೋರು ಧ್ವನಿಯಿಂದ ನನಗೆ ಭಯವಾಗುತ್ತಿದೆ ಎಂದು ಸಂಗೀತಾ ಅವರು ವಿನಯ್‌ ಅವರಿಗೆ ಹೇಳಿದ್ದರು. ಈ ವಿಚಾರವಾಗಿ ದೊಡ್ಡ ಕಾಳಗವೇ ಮನೆಯಲ್ಲಿ ಆಗಿತ್ತು. ಈ ವಿಷಯ ಇದೀಗ ಕಿಚ್ಚನ ಮುಂದೆ ಬಂದು ನಿಂತಿದೆ. ಈ ಬಗ್ಗೆ ಕಿಚ್ಚ ಅವರು ಖಡಕ್‌ ಆಗಿ ವಾರ್ನಿಂಗ್‌ ಕೊಟ್ಟಿದ್ದಾರೆ ʻʻಇಲ್ಲಿ ಯಾರಿಗೂ ಥ್ರೆಟ್ ಇಲ್ಲ. ಥ್ರೆಟ್ ಬಂತು ಎಂದರೆ ಅಂಥವರಿಗೆ ಡೋರ್ ಓಪನ್ ಆಗುತ್ತದೆ. ಅವರು ನೇರವಾಗಿ ಮನೆಯಿಂದ ಹೋಗುತ್ತಾರೆ. ಮಾತನಾಡುವ ಮೊದಲು ಎಚ್ಚರಿಕೆ ಇರಲಿ. ಅತೀ ಸುರಕ್ಷಿತ ಮನೆ ಎಂದರೆ ಅದು ಬಿಗ್ ಬಾಸ್. ಇಲ್ಲಿ ಯಾರಿಗೂ ಏನೂ ಆಗುವುದಿಲ್ಲ’ ಎಂದರು ಸುದೀಪ್.

ಅಸಮರ್ಥರ ಗುಂಪಿಗೆ ಸೇರಿದ್ದ ಸಂಗೀತಾ

ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಡುವಾಗ ಅಷ್ಟಾಗಿ ಸಂಗೀತಾ ಅವರಿಗೆ ವೋಟ್‌ ಲಭಿಸಿರಲಿಲ್ಲ. ಹೀಗಾಗಿ ಅವರನ್ನು ಮೊದಲು ವೇಯ್ಟಿಂಗ್ ಲಿಸ್ಟ್‌ನಲ್ಲಿ ಇಡಲಾಗಿತ್ತು. ಆನಂತರ ‘ಅಸಮರ್ಥರು’ ಪಟ್ಟ ಕೊಟ್ಟು ಸಂಗೀತಾ ಶೃಂಗೇರಿ ಮತ್ತು ಇತರೆ ಐವರನ್ನ ‘ಬಿಗ್ ಬಾಸ್’ ಮನೆಯೊಳಗೆ ಕಳುಹಿಸಲಾಯಿತು. ಅಸಮರ್ಥರಾದವರಿಗೆ ಯಾವುದೇ ಮನೆಯ ವಸ್ತುಗಳನ್ನು ಮುಟ್ಟುವಂತಿರಲಿಲ್ಲ. ಅಷ್ಟೇ ಅಲ್ಲದೇ ಬಟ್ಟೆ ಕೂಟ ಬದಲಿಸುವಂತಿರಲಿಲ್ಲ.

ಇದನ್ನೂ ಓದಿ: BBK Season 10: ಮಹಿಳೆಯರು ಬಿಗ್ ಬಾಸ್ ಗೆಲ್ತಿಲ್ಲ ಅಂದ್ರೆ ಇದೇ ಕಾರಣಕ್ಕೆ; ಇದು ಕಿಚ್ಚನ ಕ್ಲಾಸ್‌!

ಶುರುವಾಗಿತ್ತು ವಿನಯ್‌- ಸಂಗೀತಾ ಜಗಳ

ಅಸಮರ್ಥರಿಗೆ ಮನೆಯ ವಸ್ತುಗಳನ್ನು ಬಳಸುವಂತಿಲ್ಲ ಎಂದು ಬಿಗ್‌ ಬಾಸ್‌ ರೂಲ್ಸ್‌ ಮಾಡಿದ್ದರು. ಆದರೆ ಸಂಗೀತಾ ಅವರು ಸೋಫಾದಲ್ಲಿ ಕೂತಿದ್ದರು. ಇದನ್ನೇ ವಿನಯ್‌ ಅವರು ಇಟ್ಟುಕೊಂಡು ಸಂಗೀತಾ ಅವರನ್ನು ನಾಮಿನೇಟ್‌ ಮಾಡಿದ್ದರು. ಈ ವೇಳೆ ವಿನಯ್ ಗೌಡ – ಸಂಗೀತಾ ಮಧ್ಯೆ ಮಾತಿನ ಚಕಮಕಿ ನಡೆಯಿತು. ಅಲ್ಲಿಂದ ಇವರಿಬ್ಬರ ಮಧ್ಯೆ ಜಗಳವೂ ಹೆಚ್ಚಾಗುತ್ತಲೇ ಹೋಯ್ತು.

ಎರಡನೇ ವಾರ ಶಿಕ್ಷೆಗೆ ಒಳಗಾದ ಸಂಗೀತಾ

‘ಜೋಡಿ ಮೋಡಿ’ ಟಾಸ್ಕ್‌ನಲ್ಲಿ ಸಂಗೀತಾ – ನೀತು ಸೋತರು. ಹೀಗಾಗಿ ಮಾಣಿಕ್ಯ ತಂಡ ವಿನಯ್‌ ಅವರದ್ದು. ಇದರ ಪ್ರಕಾರ ಯಾರೇ ಆ ವಾರದ ಟಾಸ್ಕ್‌ನಲ್ಲಿ ಸೋತರೆ ಶಿಕ್ಷಗೆ ಗುರಿಯಾಗಬೇಕು. ವಿನಯ್‌ ಅವರ ತಂಡ ಸಂಗೀತಾ ಅವರನ್ನು ಆಯ್ಕೆ ಮಾಡಿಕೊಂಡಿತು. ಹಾಗೇ ಸಗಣಿ ಸ್ನಾನ ಶಿಕ್ಷಗೆ ಗುರಿಯಾದರು ಸಂಗೀತಾ. ಅಲ್ಲಿಂದ ಮತ್ತೆ ಕಿಡಿ ಹೆಚ್ಚುತ್ತಲೇ ಹೋಯ್ತು. ಸಂಗೀತಾ ಕೂಡ ವಿನಯ್‌ ಅವರು ಮತ್ತೆ ಮತ್ತೆ ತನ್ನನ್ನೇ ಟಾರ್ಗೆಟ್‌ ಮಾಡುತ್ತಿದ್ದಾರೆ ಎಂತಲೂ ಭಾವಿಸಿದರು.

ಇದನ್ನೂ ಓದಿ: BBK Season 10: ಕಿಚ್ಚ ಫುಲ್‌ ಗರಂ; ಮನೆಯ ಮೇನ್‌ ಗೇಟ್ ಓಪನ್‌ ಮಾಡಿದ್ದೇಕೆ?

ಇಲ್ಲಿ ಇರೋಕೆ ಇಷ್ಟವಿಲ್ಲ ಎಂದು ಕಣ್ಣೀರಿಟ್ಟ ಸಂಗೀತಾ

ಇಷ್ಟೆಲ್ಲಾ ಆದ್ಮೇಲೆ ಸಂಗೀತಾ ಶೃಂಗೇರಿ ಭಾವುಕರಾದರು. ‘’ನಂಗೆ ಇಲ್ಲಿ ಇರೋಕೆ ಇಷ್ಟ ಇಲ್ಲ. ನನಗೆ ಆಗಲ್ಲ. ನಾನು ಬರಲೇ ಬಾರದಿತ್ತು. ನಾನು ವಾಪಸ್ ಮನೆಗೆ ಹೋಗಬೇಕು. ನಾವು ಗೆಲ್ಲೋಕೆ ಆಗಲ್ಲ. ನಾವು ಯಾವ ಟಾಸ್ಕ್‌ನಲ್ಲೂ ಗೆಲ್ಲೋಕೆ ಆಗಲ್ಲ. ಸೋತರೂ ಪರ್ವಾಗಿಲ್ಲ. ಈ ತರಹ ಶಿಕ್ಷೆ ತಗೊಂಡು, ಹೀಗೆಲ್ಲ ಬೈಸಿಕೊಳ್ಳಬೇಕಾ? ಇನ್ಮುಂದೆ ಆಡೋಕೆ ನನಗೆ ಇಷ್ಟ ಇಲ್ಲʼʼ ಎಂದು ಅಂತ ಕಾರ್ತಿಕ್ ಮಹೇಶ್ ಜತೆಗೆ ಮಾತನಾಡುತ್ತಾ ಸಂಗೀತಾ ಶೃಂಗೇರಿ ಕಣ್ಣೀರು ಸುರಿಸಿದ್ದರು.

Exit mobile version