Site icon Vistara News

BBK SEASON 10: ಅಬ್ಬರಿಸಿದ ʻವಿನಯ್‌ʼ; ಅವರವರ ಗತ್ತು ಅವರಿಗೆ ಗೊತ್ತು ಎಂದು ಡೈಲಾಗ್‌ ಹೊಡೆದ ವರ್ತೂರ್‌!

Vinay Gowda And Tukali Santosh varthur Fighting Each Other

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10 (BBK SEASON 10), ಫಿನಾಲೆಗೆ ಹತ್ತಿರದಲ್ಲಿದೆ. ಹೀಗಿರುವಾಗ ಸ್ಪರ್ಧಿಗಳ ಮಧ್ಯೆ ಭಾರಿ ಪೈಪೋಟಿ ಶುರುವಾಗಿದೆ. ಬಿಗ್ ಬಾಸ್‌ ಸ್ಪರ್ಧೆಯ ಭಾರಿ ಟಫ್‌ ಸ್ಪರ್ಧಿ ಎಂದೇ ಗುರುತಿಸಿಕೊಂಡಿದ್ದ ವರ್ತೂರು ಸಂತೋಷ್ ಹಿಂದಿನ ವಾರ ಸೇಫ್‌ ಆಗಿ ಇಲ್ಲಿಯ ತನಕ ಇದ್ದಾರೆ. ಹಾಗೇ ಸಂತು ಪಂತು ಕೂಡ ಇದೀಗ ಬಿಗ್‌ ಬಾಸ್‌ ಮನೆಯಲ್ಲಿ ಡರ್ಟಿ ಪಾಲಿಟಿಕ್ಸ್ ಆರಂಭಿಸಿದ್ದಾರೆ. ಇದರಿಂದ ವಿನಯ್ ಗೌಡ ಅವರು ಸಿಟ್ಟಾಗಿದ್ದಾರೆ. ʻಅವರವರ ಗತ್ತು ಅವರಿಗೆ ಗೊತ್ತು’ ಎಂದು ವರ್ತೂರು ಸಂತೋಷ್ ಡೈಲಾಗ್ ಹೊಡೆದಿದ್ದಾರೆ.

ಜಿಯೋ ಸಿನಿಮಾ ಹೊಸ ಪ್ರೋಮೊವನ್ನು ಪೋಸ್ಟ್‌ ಮಾಡಿದೆ. ಬಿಗ್‌ ಬಾಸ್‌ ಒಂದು ಟಾಸ್ಕ್‌ ನೀಡಿದ್ದರು. ಸಂಗೀತಾ ತಮ್ಮ ಅಭಿಪ್ರಾಯ ಹಂಚಿಕೊಂಡಾಗ ತುಕಾಲಿ ಅವರು ʻʻವೋಟ್‌ ಮೇಲೆʼʼ ನಿರ್ಧಾರ ಆಗಬೇಕು ಎಂದಿದ್ದಾರೆ. ಟಾಸ್ಕ್ ಯಾರು ಆಡಬೇಕು ಎನ್ನೋದನ್ನು ವೋಟ್ ಹಾಕಿ ತಾವು ನಿರ್ಧಾರ ಮಾಡಬೇಕು ಎಂದು ಅವರು ಪ್ಲ್ಯಾನ್ ಮಾಡಿದ್ದಾರೆ. ಇದರಿಂದ ವಿನಯ್ ಗೌಡ ಅವರು ಸಿಟ್ಟಾಗಿದ್ದಾರೆ. ವಿನಯ್‌ ಅವರು ತುಕಾಲಿ ಮೇಲೆ ಕೂಗಿದ್ದು ʻʻಜೋರಾಗಿ ಮಾತನಾಡಿದ್ದ ತಕ್ಷಣ ಏನು ಕಿತ್ತುಕೊಳ್ಳೋಕೆ ಆಗಲ್ಲ. ಫಸ್ಟ್‌ ಡೇ ಇಂದ ನೀನು ಏನು ಕಿತ್ತಾಕ್ಕೊಂಡು ಬಂದಿದ್ದೀಯಾ ಎಂದು ನನಗೆ ಗೊತ್ತು. ಏನ್‌ ಮಾಡ್ತೀಯಾ ನೀನುʼʼಎಂದು ಅಬ್ಬರಿಸಿದ್ದಾರೆ. ಅಲ್ಲದೇ ವರ್ತೂರ್‌ ಕೂಡ ‘ಅವರವರ ಗತ್ತು ಅವರಿಗೆ ಗೊತ್ತು’ ಎಂದು ಡೈಲಾಗ್ ಹೊಡೆದಿದ್ದಾರೆ.

ಬಿಗ್‌ ಬಾಸ್‌ನಲ್ಲಿ 15ನೇ (BBK SEASON 10) ವಾರ ಚಾಲ್ತಿಯಲ್ಲಿದೆ. ಹೀಗಿರುವಾಗ ಹಿಂದಿನ ವಾರ ಎಲಿಮಿನೇಷನ್‌ ನಡೆಯಲಿಲ್ಲ. ಇದೀಗ ‘ಬಿಗ್ ಬಾಸ್‌’ ಮನೆಯಲ್ಲಿ ʻಮಿಡ್‌ ವೀಕ್ ಎಲಿಮಿನೇಷನ್ʼ ನಡೆದಿದೆ. ‘ಬಿಗ್ ಬಾಸ್‌’ ಮನೆಯಿಂದ ಮಿಡ್‌ ವೀಕ್‌ನಲ್ಲಿ ತನಿಷಾ ಕುಪ್ಪಂಡ ಔಟ್‌ ಆಗಿದ್ದಾರೆ.

ಇದನ್ನೂ ಓದಿ: BBK SEASON 10: ಬೆಡ್‌ಶೀಟ್‌ ವಿಚಾರ; ರಕ್ಷಕ್‌ಗೆ ಮಕ್ಕಳ ತರ ಆಡಬೇಡಿ ಎಂದ ಪ್ರತಾಪ್‌!

ತನಿಷಾ ಅವರ ಕಾಲು ಯಾವಾಗ ಪೆಟ್ಟು ಆಯ್ತೋ ಅಲ್ಲಿಂದ ತುಂಬ ಸ್ಲೋ ಆದರು ತನಿಷಾ. ಮನೆಯಲ್ಲಿ ನೇರ, ದಿಟ್ಟ ಮಾತಿಗೆ ಹೆಸರುವಾಸಿ. ಫಿಲ್ಟರ್‌ಲೆಸ್‌ ಮಾತುಗಳಿಂದಲೇ ತನಿಷಾ ಹೆಸರುವಾಸಿ. ಇದೇ ಕಾರಣಕ್ಕೆ ಉಳಿದ ಸ್ಪರ್ಧಿಗಳು ಇವರನ್ನ ‘ಬೆಂಕಿ’ ಎಂದು ಕರೆಯುತ್ತಿದ್ದರು. ಕಳೆದ ವಾರ ಸುದೀಪ್‌ ಅವರು ಎಲಿಮಿನೇಷನ್‌ ಈ ವಾರ ಇಲ್ಲ ಎಂದು ವರ್ತೂರ್‌ ಸಂತೋಷ್‌ ಅವರನ್ನು ಸೇಫ್‌ ಮಾಡಿದ್ದರು.ಮುಂದಿನ ವಾರ ಫಿನಾಲೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಫಿನಾಲೆಗೆ ಸಂಗೀತಾ ಅವರು ನೇರವಾಗಿ ಟಿಕೆಟ್‌ ಪಡೆದುಕೊಂಡಿದ್ದಾರೆ. ಉಳಿದ 7 ಸ್ಪರ್ಧಿಗಳ ಪೈಕಿ ಟಾಪ್‌ 5 ಹಂತಕ್ಕೆ ಯಾರು ಹೋಗಲಿದ್ದಾರೆ ಎಂಬ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version