Site icon Vistara News

BBK Season 10: ಕೊನೇ ಕ್ಷಣದಲ್ಲಿ ವಿನಯ್‌ ಎದೆಯಲ್ಲಿ ಢವ ಢವ; ʻಆನೆʼಗೆ ಇಂಥ ಪರಿಸ್ಥಿತಿ!

vinay gowda bbk 10

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK Season 10) ನಾಲ್ಕನೇ ವಾರ ರಕ್ಷಕ್‌ ಬುಲೆಟ್‌ ಮನೆಯಿಂದ ಹೊರ ನಡೆದರು. ಇಡೀ ಕರ್ನಾಟಕ ಸೇರಿದಂತೆ ಮನೆಯ ಸದಸ್ಯರು ನಿನ್ನೆಯ (ನ.5) ಎಲಿಮಿನೇಶನ್‌ ಸಂಚಿಕೆಯಲ್ಲಿ ಅಚ್ಚರಿಗೆ ಒಳಗಾದರು. ಕಾರಣ ಇಷ್ಟೇ, ಕಳೆದ ವಾರವಷ್ಟೇ ಸುದೀಪ್‌ ಅವರು ವಿನಯ್‌ ಅವರಿಗೆ ಫೈನಲಿಸ್ಟ್‌ ಎಂದು ಕರೆದಿದ್ದರು. ಆದರೆ ಈ ಬಾರಿ ವಿನಯ್ ಗೌಡ ಅವರ ಪರಿಸ್ಥಿತಿ ಇನ್ನೇನು ಹೊರಗೆ ಹೋಗಿಯೇ ಬಿಟ್ಟರು ಎಂಬಂತಿತ್ತು. ಕೊನೇಯ ಕ್ಷಣದವರೆಗೂ ಸಾಕಷ್ಟು ಕ್ಯೂರಿಯಾಸಿಟಿ ಹುಟ್ಟುಹಾಕಿ ಬಿಗ್‌ ಬಾಸ್‌ ಸಖತ್‌ ಟೆನ್ಷನ್ ನೀಡಿದರು.

ವಿನಯ್ ಗೌಡ, ಮೈಕಲ್ ಅಜಯ್, ಕಾರ್ತಿಕ್ ಮಹೇಶ್, ವರ್ತೂರು ಸಂತೋಷ್, ಸಿರಿ, ತುಕಾಲಿ ಸಂತು, ರಕ್ಷಕ್, ತನಿಷಾ ಕುಪ್ಪಂಡ, ಸ್ನೇಹಿತ್ ಗೌಡ ಹೀಗೆ ಒಟ್ಟು 9 ಮಂದಿ ನಾಮಿನೇಟ್ ಆಗಿದ್ದರು. ವರ್ತೂರು ಸಂತೋಷ್ ಮತ್ತು ಸಿರಿ ಮೊದಲೇ ಸೇಫ್ ಆದರು. ಕೊನೆಯದಾಗಿ ಉಳಿದ ಎರಡು ಹೆಸರು ವಿನಯ್ ಗೌಡ ಮತ್ತು ರಕ್ಷಕ್‌.

ವಿನಯ್‌ಗೆ ಇಂಥ ಪರಿಸ್ಥಿತಿ

ಬಿಗ್‌ ಬಾಸ್‌ ʻಆನೆಗೆʼ ಕೊನೆಯ ಹಂತದಲ್ಲಿ ಢವ ಢವ ಶುರುವಾಯ್ತು.  ರಕ್ಷಕ್‌ ಹಾಗೂ ವಿನಯ್‌ ಇಬ್ಬರಲ್ಲಿ ಒಬ್ಬರು ಮನೆಯಿಂದ ಹೊರ ಹೋಗುತ್ತಾರೆ ಎಂದು ಸುದೀಪ್‌ ಅನೌನ್ಸ್‌ ಮಾಡಿದ್ದರು. ಅದೇ ರೀತಿ ವಿನಯ್‌ ಅವರು ಇರುವ ಈ ಹಂತವನ್ನು ನೋಡಲು ಯಾರಿಗೆ ಖುಷಿಯಾಗುತ್ತಿದೆ? ಎಂದು ಸುದೀಪ್‌ ಪ್ರಶ್ನೆ ಇಟ್ಟಾಗ, ಸಂಗೀತಾ ಅವರು ʼʻನನಗೆ ಖುಷಿಯಾಗಿದೆʼʼ ಎಂದು ಉತ್ತರ ನೀಡಿದರು. ಸಂಗೀತಾ ಮಾತನಾಡಿ ʻʻಅವರ ಆಡಿರುವಂತಹ ಮಾತು ತುಂಬ ಹಾರ್ಷ್‌ ಆಗಿತ್ತು. ಅದು ಯಾರೇ ಆಗಿರಲಿʼʼ ಎಂದು ಹೇಳಿದರು. 

ಇನ್ನು ಸ್ನೇಹಿತ್‌ ಈ ಬಗ್ಗೆ ಮಾತನಾಡಿ ʻʻವಿನಯ್‌ ಅವರು ಹಳ್ಳಿ ಟಾಸ್ಕ್‌ನಲ್ಲಿ ಜೀವ ಕೊಟ್ಟು ಆಡಬೇಕು ಎಂದರು. ಅದನ್ನು ನಾನು ಅವರಲ್ಲಿ ನೋಡಿದ್ದೇನೆ. ಮೈಕಲ್‌ ಅವರನ್ನೂ ಸೇವ್‌ ಮಾಡುವಲ್ಲೂ ಆಡಿದ್ದಾರೆʼʼ ಎಂದರು. ನಮ್ರತಾ ಮಾತನಾಡಿ ʻʻವಿನಯ್‌ ಅವರ ನೇರ ಮಾತುಗಳು ಜನರಿಗೆ ಇಷ್ಟವಾಗುತ್ತದೆ ಅಂದುಕೊಂಡಿದ್ದೆ. ಮೊದಲು ಅವರೇ ಸೇಫ್‌ ಆಗುತ್ತಾರೆ ಎಂದು ಅಂದುಕೊಂಡಿದ್ದೆ. ಇದು ತುಂಬ ಶಾಕಿಂಗ್‌ ಆಗಿದೆʼʼ ಎಂದರು. ತುಕಾಲಿ ಸಂತು ಮಾತನಾಡಿ ʻʻಒಳ್ಲೆಯ ಹಾರ್ಟ್‌ ಇರೋ ಮನುಷ್ಯʼʼ ಎಂದರು.

ಇದನ್ನೂ ಓದಿ: BBK Season 10: ಪ್ರತಾಪ್‌ಗೆ ಇಷ್ಟ್ರಲ್ಲೇ ಐತೆ ಎಂದಿದ್ದ ರಕ್ಷಕ್; ಸಿಡಿಯಲೇ ಇಲ್ಲ ಬುಲೆಟ್‌!

ಎಲಿಮಿನೇಶನ್‌ ಟ್ವಿಸ್ಟ್‌!

ಆಕ್ಟಿವಿಟಿ ಹಾಲ್‌ನಲ್ಲಿ ವಿನಯ್‌ ಹಾಗೂ ರಕ್ಷಕ್‌ ನಿಂತುಕೊಳ್ಳಬೇಕಿತ್ತು. ಒಂದು ಲೈಟ್‌ ಫ್ಲೇ ಆಗುತ್ತೆ. ಯಾರ ಮೇಲೆ ಉರಿಯುತ್ತೋ ಅವರು ಸೇಫ್‌ ಆದ ಹಾಗೇ. ಅಂತಿಮವಾಗಿ ವಿನಯ್ ಮೇಲೆ ಲೈಟ್ ಆನ್ ಆಯ್ತು. ಅವರು ನೆಮ್ಮದಿಯ ನಿಟ್ಟುಸಿರುಬಿಟ್ಟು, ಮನೆಯೊಳಗೆ ವಾಪಸ್ ಬಂದರು. ವಿಶೇಷವೆಂದರೆ, ಈಗ ಅವರು ಕ್ಯಾಪ್ಟನ್ ಕೂಡ ಆಗಿರುವುದರಿಂದ ಈ ವಾರ ನಾಮಿನೇಟ್ ಕೂಡ ಆಗುವುದಿಲ್ಲ.

ಕ್ಷಮೆ ಕೇಳಿದ ವಿನಯ್‌

ʻʻಯಾವುದೇ ಮಾತುಗಳು ನಾನು ಹರ್ಟ್‌ ಮಾಡಲು ಮಾತನಾಡಿಲ್ಲ. ಎಲ್ಲ ಹೆಣ್ಣು ಮಕ್ಕಳಿಗೆ ನಾನು ತುಂಬ ಗೌರವ ಕೊಡುತ್ತೇನೆ. ನನ್ನ ಹೆಂಡತಿನೇ ನನಗೆ ತುಂಬಾ ಶಕ್ತಿ ಎಂದು ನಂಬಿರುವನು ನಾನು. ನನ್ನ ಮನಸ್ಸಿನಲ್ಲಿ ಯಾವುದೇ ಹೆಣ್ಣು ಮಗುವಿನ ಮೇಲೂ ಅಗೌರವ ಇಲ್ಲ ಅಥವಾ ಕೆಟ್ಟದಾಗಿ ನಾನು ಯಾವತ್ತೂ ಮಾತನಾಡುವುದಿಲ್ಲ. ನನ್ನ ನಂಬಿ ಸಾಕಷ್ಟು ಜನರು ನನಗೆ ವೋಟ್ ಮಾಡಿದ್ದೀರಿ. ಎಲ್ಲರಿಗೂ ಥ್ಯಾಂಕ್ಯೂ.. ಈ ತಪ್ಪು ನಾನು ಬಿಗ್ ಬಾಸ್ ಮನೆಯಲ್ಲಿರುವವರೆಗೂ ಅಥವಾ ನನ್ನ ಜೀವಂತ ಇರುವವರೆಗೂ ಮತ್ತೆಂದೂ ನಡೆಯುವುದಿಲ್ಲʼʼ ಎಂದು ಪ್ರಾಮಿಸ್‌ ಮಾಡಿದರು.

ಬಿಗ್​ಬಾಸ್ ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

Exit mobile version