Site icon Vistara News

Actor Ajith Kumar: ಅಜಿತ್ ಕಾರು ಅಪಘಾತ ವಿಡಿಯೋ ವೈರಲ್; ನಟನ ಸಾಹಸಕ್ಕೆ ಮೆಚ್ಚುಗೆ

Actor Ajith Kumar

ಬೆಂಗಳೂರು: ಕಾಲಿವುಡ್ ಸ್ಟಾರ್ ನಟ ಅಜಿತ್ ಕುಮಾರ್ ಅವರ ‘ವಿದಾ ಮುಯರ್ಚಿ’ ಸಿನೆಮಾ ಶೂಟಿಂಗ್ ವೇಳೆ ನಡೆದ ಅಪಘಾತದಿಂದ ಅಭಿಮಾನಿಗಳು ಶಾಕ್ ಆಗಿದ್ದರು. ಅಜಿತ್ (Actor Ajith Kumar) ಅಪಾಯದಿಂದ ಪಾರಾಗಿದ್ದರು. ಇದೀಗ ಅಪಘಾತದ ತುಣುಕುಗಳಿರುವ 3 ವಿಡಿಯೋಗಳು ವೈರಲ್ ಆಗಿವೆ.

52 ವರ್ಷದ ತಮಿಳು ನಟ ಅಜಿತ್ ಕುಮಾರ್ ತಮ್ಮ ಚಲನಚಿತ್ರಗಳಲ್ಲಿ ತಮ್ಮದೇ ಆದ ಸಾಹಸಗಳನ್ನು ಪ್ರದರ್ಶಿಸಲು ಹೆಸರುವಾಸಿಯಾಗಿದ್ದಾರೆ. ಈ ಚಿತ್ರವನ್ನು ಮಾಗಿಜ್ ತಿರುಮೇನಿ ನಿರ್ದೇಶಿಸಿದ್ದಾರೆ. ಕಳೆದ ವರ್ಷ ಅಕ್ಟೋಬರ್ ಹಾಗೂ ನವೆಂಬರ್ ನಲ್ಲಿ ಪೂರ್ವ ಯುರೋಪಿಯನ್ ದೇಶದಲ್ಲಿ ಶೂಟಿಂಗ್ ಮಾಡುತ್ತಿದ್ದಾಗ ನಟನಿಗೆ ಅಪಘಾತವಾಗಿತ್ತು. ಲೈಕಾ ಪ್ರೊಡಕ್ಷನ್ಸ್ ಈ ವೀಡಿಯೊಗಳನ್ನು ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಂಡಿದೆ. ಈ ವಿಡಿಯೋಗಳಲ್ಲಿ ಅಜಿತ್ ಅಪಾಯಕಾರಿ ಸಾಹಸ ಮಾಡುವುದನ್ನು ತೋರಿಸಲಾಗಿದೆ. ಶೌರ್ಯಕ್ಕೆ ಮಿತಿಯಿಲ್ಲ! ಯಾವುದೇ ಸ್ಟಂಟ್ ಡಬಲ್ ಇಲ್ಲದೆ ಸ್ಟಂಟ್ ಸೀಕ್ವೆನ್ಸ್ ಮಾಡುತ್ತಿರುರುವ ಅಜಿತ್ ಕುಮಾರ್, ಇದು ಅವರ ಧೈರ್ಯ, ಕೆಲಸದ ಮೇಲಿನ ಸಮರ್ಪಣಾ ಭಾವಕ್ಕೆ ಸಾಕ್ಷಿ ಎಂದು ಬರೆಯಲಾಗಿದೆ.

ಅಜಿತ್ ಕಾರು ಚಲಾಯಿಸುತ್ತಿದ್ದು, ಕಾರು ರೋಡ್ ಸೈಡ್ ಗೆ ಬಂದಾಗ ಅದನ್ನು ಸೈಡ್‍ ಗೆ ನಿಲ್ಲಿಸುವ ಪ್ರಯತ್ನದ ಮಧ್ಯೆ ಕಾರಿನ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾರೆ. ಕಾರಿನಲ್ಲಿ ಅಜಿತ್ ಅವರ ಜೊತೆಗೆ ನಟ ಆರವ್ ಕೂಡಾ ಇದ್ದಿದ್ದರು. ಕಾರು ಮಗುಚಿ ರಸ್ತೆಯ ಬದಿಗೆ ಬಿದ್ದಿದೆ.

ನಟ ಆರವ್ ಕಾಳಜಿಗೆ ಭಾರೀ ಮೆಚ್ಚುಗೆ

ವಿಡಿಯೊದಲ್ಲಿ ಕಾರು ತಲೆಕೆಳಗಾಗಿ ಬಿದ್ದಾಗ ಅಜಿತ್ ಕುಮಾರ್ ಪಕ್ಕದಲ್ಲಿದ್ದ ನಟ ಆರವ್‌ ಅವರ ಬಗ್ಗೆ ಕಾಳಜಿವಹಿಸಿದ್ದು ಕಾಣುತ್ತದೆ. “ಆರ್‌ ಯೂ ಓಕೆ..” ಎಂದು ಪದೇ ಪದೇ ಕೇಳುತ್ತಾರೆ. ಇದು ನೆಟ್ಟಿಗರು ಮತ್ತು ಅಭಿಮಾನಿಗಳ ಮನಸ್ಸನ್ನು ಗೆದ್ದಿದೆ. ಈ ವಯಸ್ಸಿನಲ್ಲೂ ಅಜಿತ್ ಅವರು ಇಷ್ಟೊಂದು ರಿಸ್ಕ್ ತೆಗೆದುಕೊಂಡಿರುವುದಕ್ಕೆ ಮತ್ತು ಯಾವುದೇ ಡ್ಯೂಪ್ ಬಳಸದೇ ರಿಯಲ್ ಆಗಿ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅಜಿತ್ ಅವರು ಕಾರು ಓಡಿಸುವಾಗ ನಡೆದ ಅಪಘಾತದ ವಿಡಿಯೋಗಳನ್ನು ಸೆಲೆಬ್ರಿಟಿ ಮ್ಯಾನೇಜರ್ ಸುರೇಶ್ ಚಂದ್ರ ಅವರೂ ಶೇರ್ ಮಾಡಿದ್ದಾರೆ. ಆ್ಯಕ್ಸಿಡೆಂಟ್ ವಿಡಿಯೋ ಶೇರ್ ಮಾಡಿದ ಅವರು ವಿದಾ ಮುಯರ್ಚಿ ನವೆಂಬರ್ 2023 ಎಂದು ಕ್ಯಾಪ್ಶನ್ ಬರೆದಿದ್ದಾರೆ.

ಅಭಿಮಾನಿಗಳಿಗೆ ಆತಂಕ

ಉಳಿದೆರಡು ವಿಡಿಯೋಗಳು ಅದೇ ದೃಶ್ಯವನ್ನು ವಿಭಿನ್ನ ಕೋನಗಳಿಂದ ತೋರಿಸುತ್ತವೆ. ಶೂಟಿಂಗ್ ವೇಳೆ ಅಪಘಾತಕ್ಕೊಳಗಾದ ವಿಚಾರ ತಿಳಿದು ತಮಿಳು ಸಿನಿ ಪ್ರಿಯರು ಮಾತ್ರವಲ್ಲದೆ ದೇಶಾದ್ಯಂತ ಇರುವ ಅವರ ಅಭಿಮಾನಿಗಳು ಶಾಕ್ ಆಗಿದ್ದರು. ಇದೀಗ ಅಪಘಾತದ ದೃಶ್ಯ ಸೆರೆಹಿಡಿದಿರುವ ಈ ವಿಡಿಯೋಗಳು ಅಭಿಮಾನಿಗಳಿಗೆ ಆತಂಕದ ಜತೆಗೆ ಸಖತ್ ಥ್ರಿಲ್ ನೀಡಿವೆ.

ಇದನ್ನೂ ಓದಿ:Extramarital Affair: ಮನೆಯಲ್ಲಿ ಗಂಡನೂ ಇರಲಿ, ಪ್ರಿಯತಮನೂ ಇರಲಿ ಎಂದು ವಿದ್ಯುತ್ ಕಂಬ ಏರಿದಳು!

ನೀರವ್ ಶಾ ಛಾಯಾಗ್ರಹಣ, ಅನಿರುದ್ಧ ರವಿಚಂದ್ರನ್ ಸಂಗೀತ ಸಂಯೋಜನೆ ಇರುವ ಚಿತ್ರ ಇದೇ ವರ್ಷ ಬಿಡುಗಡೆಯಾಗಲಿದೆ. ಅಜಿತ್ ಕುಮಾರ್ ಅವರು ಕೊನೆಯ ಬಾರಿಗೆ ತುನಿವು ನಲ್ಲಿ ಕಾಣಿಸಿಕೊಂಡಿದ್ದರು. ವಿದಾ ಮುಯರ್ಚಿ ಯಲ್ಲಿ ಆಕ್ಶನ್ ಹಿರೋ ಆಗಿ ಕಾಣಿಸಿಕೊಂಡಿದ್ದು, ಸಿನಿಮಾ ಭಾರೀ ಕುತೂಹಲ ಮೂಡಿಸಿದೆ.

Exit mobile version