Site icon Vistara News

Ajith Kumar: ಅಜಿತ್ ಚಿತ್ರದಿಂದ ವಿಘ್ನೇಶ್ ಶಿವನ್ ಔಟ್? ಶುರುವಾಗಿದೆ ಟ್ವೀಟ್‌ ಅಭಿಯಾನ

After AK 62, Actor Ajith Kumar

ಬೆಂಗಳೂರು: ಥಾಲ ಅಜಿತ್ ಕುಮಾರ್‌ (Ajith Kumar) ಅಭಿನಯದ ‘ತುನಿವು’ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿದೆ. ಇದೀಗ ಅಜಿತ್‌ ಅಭಿಮಾನಿಗಳು ನಟರ ಮುಂದಿನ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಅಜಿತ್ ಕುಮಾರ್ ಅವರ ‘ಎಕೆ 62’ ಚಿತ್ರವನ್ನು ನಿರ್ದೇಶಕ ವಿಘ್ನೇಶ್ ಶಿವನ್ ನಿರ್ದೇಶಿಸಲಿದ್ದಾರೆ ಎಂದು ಕಳೆದ ವರ್ಷ ಘೋಷಿಸಲಾಗಿತ್ತು, ಅದು ಶೀಘ್ರದಲ್ಲೇ ತೆರೆಗೆ ಬರಲಿದೆ ಎಂದು ನಿರೀಕ್ಷಿಸಲಾಗಿತ್ತು. ವಿಘ್ನೇಶ್ ಶಿವನ್ ಈಗ ಚಿತ್ರದಿಂದ ಹೊರಗುಳಿದಿದ್ದಾರೆ ಮತ್ತು ನಿರ್ದೇಶಕ ಅಟ್ಲೀ ಅವರು ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ ಎನ್ನಲಾಗುತ್ತಿದೆ.

ನಟ ಅಜಿತ್ ಇತ್ತೀಚೆಗೆ ಲಂಡನ್‌ಗೆ ಹಾರಿದ್ದಾರೆ. ಕಳೆದೆರಡು ದಿನಗಳಿಂದ ಅಜಿತ್‌ ಅವರು ಲಂಡನ್‌ನಲ್ಲಿರುವ ವಿಡಿಯೊವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದೀಗ, ನಿರ್ದೇಶಕ ವಿಘ್ನೇಶ್ ಶಿವನ್ ಕೂಡ ಲಂಡನ್‌ಗೆ ಪ್ರಯಾಣಿಸಿರುವಂತೆ ತೋರುತ್ತಿದೆ. ಮತ್ತು ಲಂಡನ್‌ನ ಕ್ಯಾನರಿ ವಾರ್ಫ್‌ನಿಂದ ಒಂದು ಸಣ್ಣ ವಿಡಿಯೊವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ನೆಟ್ಟಿಗರು ಈ ಎರಡೂ ವಿಡಿಯೊಗಳನ್ನು ನೋಡಿ ವಿಘ್ನೇಶ್ ಶಿವನ್ ಅವರು ಅಜಿತ್ ಕುಮಾರ್ ಅವರ ‘ಎಕೆ 62’ ಸಿನಿಮಾಗೆ ನಿರ್ದೇಶಿಸಲಿದ್ದಾರೆ ಎಂದು ಕಮೆಂಟ್‌ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ‘AK62’ ಕುರಿತು ಈಗಾಗಲೇ ಅಭಿಯಾನ ಶುರುವಾಗಿದೆ. ಜಸ್ಟಿಸ್‌ ಫಾರ್‌ ಶಿವನ್‌ ಎಂಬ ಅಭಿಯಾನ ಟ್ವೀಟ್‌ನಲ್ಲಿ ಶುರುವಾಗಿದ್ದು, ಹಲವಾರು ಊಹಾಪೋಹಗಳು ಸೋಷಿಯಲ್‌ ಮೀಡಿಯಾದಲ್ಲಿ ಶುರುವಾಗಿವೆ. ಈ ಬಗ್ಗೆ ಅಜಿತ್‌ ಆಗಲಿ, ವಿಘ್ನೇಶ್ ಶಿವನ್ ಆಗಲಿ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

ಇದನ್ನೂ ಓದಿ: Ajith Kumar | `ತುನಿವು’ ಸಿನಿಮಾ ಬಿಡುಗಡೆ ವೇಳೆ ಟ್ರಕ್‌ನಿಂದ ಬಿದ್ದು ಅಜಿತ್‌ ಅಭಿಮಾನಿ ಸಾವು

ಇದನ್ನೂ ಓದಿ: Ajit Pawar | ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಇದ್ದ ಲಿಫ್ಟ್‌ 4ನೇ ಫ್ಲೋರ್‌ನಿಂದ ಕುಸಿತ, ಅದೃಷ್ಟವಶಾತ್‌ ಪಾರು

ಚಿತ್ರದ ಶೂಟಿಂಗ್ ಫೆಬ್ರವರಿ ಮೊದಲ ವಾರದಲ್ಲಿ ಮುಂಬೈನಲ್ಲಿ ಪ್ರಾರಂಭವಾಗಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇನ್ನು 35-40 ದಿನಗಳಲ್ಲಿ ಚಿತ್ರೀಕರಣ ಮುಗಿಸುವ ಯೋಜನೆ ಚಿತ್ರತಂಡಕ್ಕೆ ಇದೆ ಎನ್ನಲಾಗುತ್ತಿದೆ. ಅಟ್ಲೀ ಅವರು ಶಾರುಖ್‌ ಅವರ ಜವಾನ್‌ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ.

Exit mobile version