Site icon Vistara News

Actor Meena | ಪತಿ ಸಾವಿನ ಕಾರಣ ಬಗ್ಗೆ ವದಂತಿ ಬೇಡ ಎಂದ ನಟಿ ಮೀನಾ

Actor Meena

ಬೆಂಗಳೂರು: ಬಹುಭಾಷಾ ನಟಿ ಮೀನಾ (Actor Meena) ಅವರ ಪತಿ ವಿದ್ಯಾಸಾಗರ್‌ ಶ್ವಾಸಕೋಶದ ಸೋಂಕಿನಿಂದ ಬುಧವಾರ (ಜೂನ್‌ 29) ನಿಧನರಾಗಿದ್ದರು. ಈ ವಿಚಾರ ಕೇಳಿ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದರು. ಪತಿಯ ನಿಧನ ನಂತರ ನಟಿ ಮೀನಾ ಭಾವುಕರಾಗಿ ಇನ್ಸ್ಟಾ ಮೂಲಕ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ.

ಪತಿ ವಿದ್ಯಾಸಾಗರ್‌ ಸಾವನ್ನಪ್ಪಿದ್ದು ಕೋವಿಡ್‌ನಿಂದ ಎಂಬ ವದಂತಿಗಳು ಹರಿದಾಡುತ್ತಿದ್ದವು. ಇದರ ಬಗ್ಗೆ ನಟಿ ಮೀನಾ ಸ್ಪಷ್ಟನೆ ನೀಡಿ ಮನವಿ ಮಾಡಿದ್ದಾರೆ.

ʻನನ್ನ ಪ್ರೀತಿಯ ಪತಿ ವಿದ್ಯಾಸಾಗರ್‌ ಅಗಲಿಕೆಯಿಂದ ದುಃಖಿತಳಾಗಿದ್ದೇನೆ. ಈ ಸಂದರ್ಭದಲ್ಲಿ ನಮ್ಮ ಖಾಸಗೀತನವನ್ನು ಗೌರವಿಸಿ, ಸಹಾನುಭೂತಿಯನ್ನು ತೋರಿಸಿ ಎಂದು ಮಾಧ್ಯಮಗಳಿಗೆ ವಿನಂತಿಸುತ್ತೇನೆʼ ಎಂದು ಪತ್ರ ಬರೆದಿದ್ದಾರೆ.

ಇದನ್ನೂ ಓದಿ | ಮೀನಾ ಪತಿ‌ ವಿದ್ಯಾಸಾಗರ್‌ ಸಾವಿಗೆ ಕೋವಿಡ್‌ ಕಾರಣವಲ್ಲ ಎಂದ ನಟಿ ಖುಷ್ಬೂ ಸುಂದರ್

ಮೀನಾ ಅವರು ಈ ಸಂದರ್ಭದಲ್ಲಿ ಬೆಂಬಲಕ್ಕೆ ನಿಂತವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ. ಕಷ್ಟದ ಸಂದರ್ಭದಲ್ಲಿ ಸಹಾಯಕ್ಕೆ ನಿಂತ ವೈದ್ಯಕೀಯ ತಂಡ, ನನ್ನ ಕುಟುಂಬ, ಮುಖ್ಯ ಮಂತ್ರಿಗಳು, ಆರೋಗ್ಯ ಸಚಿವರು, ಐಎಎಸ್‌ ರಾಧಾಕೃಷ್ಣನ್‌, ಸ್ನೇಹಿತರು, ಸಹದ್ಯೋಗಿಗಳು, ಮಾಧ್ಯಮದವರು ಹಾಗೂ ಅಭಿಮಾನಿಗಳಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ನಟಿ ಮೀನಾ ಅವರ ಪತಿ ವಿದ್ಯಾಸಾಗರ್‌ ಕೋವಿಡ್‌ನಿಂದಾಗಿ ಸಾವನ್ನಪ್ಪಿದ್ದರು ಎಂಬ ವದಂತಿಗಳು ಹರಿದಾಡಿದ್ದು, ಮೀನಾ ಅವರ ಆಪ್ತ ಸ್ನೇಹಿತೆ ಖುಷ್ಬೂ ಸುಂದರ್‌ ಅವರು ʻʻಮೀನಾ ಅವರ ಪತಿ ವಿದ್ಯಾಸಾಗರ್ ಕೋವಿಡ್‌ನಿಂದಾಗಿ ಸಾವನ್ನಪ್ಪಿಲ್ಲ, ಅವರು ಶ್ವಾಸಕೋಶದ ಸೋಂಕಿನಿಂದ ಸಾವನ್ನಪ್ಪಿದ್ದುʼʼ ಎಂದು ಟ್ವೀಟ್‌ ಮೂಲಕ ಹೇಳಿದ್ದರು. ʻʻಮಾಧ್ಯಮಗಳು ಜವಾಬ್ದಾರಿಯುತವಾಗಿರಲು ನಾನು ಬಹಳ ವಿನಮ್ರವಾಗಿ ವಿನಂತಿಸುತ್ತೇನೆ. ಮೀನಾ ಅವರ ಪತಿಗೆ 3 ತಿಂಗಳ ಹಿಂದೆ ಕೋವಿಡ್ ಇತ್ತು. ಇದರಿಂದಾಗಿ ಅವರ ಶ್ವಾಸಕೋಶದ ಸ್ಥಿತಿ ಹದಗೆಟ್ಟಿತ್ತು ಎನ್ನುವ ತಪ್ಪು ಸಂದೇಶವನ್ನು ಕಳುಹಿಸಬೇಡಿ. ದಯವಿಟ್ಟು ಯಾವುದೇ ರೀತಿಯ ಭಯವನ್ನು ಸೃಷ್ಟಿಸಬೇಡಿ ಹಾಗೂ ಕೋವಿಡ್‌ನಿಂದ ನಾವು ಸಾಗರ್ ಅವರನ್ನು ಕಳೆದುಕೊಂಡಿದ್ದೇವೆ ಎಂದು ಸುದ್ದಿ ಮಾಡಬೇಡಿʼʼ ಎಂದು ಬರೆದುಕೊಂಡಿದ್ದರು.

ಮೀನಾ ಅವರ ಅಭಿಮಾನಿಗಳು ʻʻಧೈರ್ಯವಾಗಿರಿ, ನಾವು ನಿಮ್ಮ ಜತೆ ಇರುತ್ತೇವೆʼʼ ಎಂದು ಕಮೆಂಟ್‌ ಮೂಲಕ ತಿಳಿಸುತ್ತಿದ್ದಾರೆ. ಸಾಫ್ಟ್‌ವೇರ್‌ ಎಂಜಿನಿಯರ್​ ಆಗಿದ್ದ ಬೆಂಗಳೂರು ಮೂಲದ ವಿದ್ಯಾಸಾಗರ್‌ರನ್ನು 2009ರಲ್ಲಿ ಮೀನಾ ಮದುವೆಯಾಗಿದ್ದರು. ಈ ದಂಪತಿಗೆ ನೈನಿಕಾ ಎಂಬ ಮಗಳಿದ್ದಾಳೆ. ತಾಯಿಯಂತೆ ನೈನಿಕಾ ಕೂಡ ಬಾಲನಟಿಯಾಗಿದ್ದು, ತೇರಿ ಚಿತ್ರದಲ್ಲಿ ದಳಪತಿ ವಿಜಯ್‌ ಮಗಳಾಗಿ ನಟಿಸಿದ್ದಾರೆ.

 

ಇದನ್ನೂ ಓದಿ | Actor Meena | ನಟಿ ಮೀನಾ ಪತಿ ವಿದ್ಯಾಸಾಗರ್‌ ವಿಧಿವಶ, ಜೀವಕ್ಕೆ ಕಂಟಕವಾಯ್ತಾ ಕೊರೊನಾ?

Exit mobile version