Site icon Vistara News

Ajith Kumar | `ತುನಿವು’ ಸಿನಿಮಾ ಬಿಡುಗಡೆ ವೇಳೆ ಟ್ರಕ್‌ನಿಂದ ಬಿದ್ದು ಅಜಿತ್‌ ಅಭಿಮಾನಿ ಸಾವು

Ajith Kumar

ಬೆಂಗಳೂರು : ಜನವರಿ 11ರಂದು ತಮಿಳುನಾಡಿನಲ್ಲಿ ಸಂಭ್ರಮದ ದಿನವಾಗಿದೆ. ವಿಶ್ವಾದ್ಯಂತ ಅಜಿತ್ ಕುಮಾರ್ (Ajith Kumar) ಮತ್ತು ದಳಪತಿ ವಿಜಯ್ ಅಭಿಮಾನಿಗಳಿಗೆ ಹಬ್ಬವಾಗಿದೆ. ಅಜಿತ್‌ ನಟನೆಯ ‘ತುನಿವು’ ಹಾಗೂ ದಳಪತಿ ವಿಜಯ್‌ ಅಭಿನಯದ ‘ವಾರಿಸು’ ಸಿನಿಮಾಗಳು ಬಿಡುಗಡೆಗೊಂಡಿವೆ. ಈ ನಡುವೆ ದುರ್ಘಟನೆಯೊಂದು ಸಂಭವಿಸಿದೆ. ಅಜಿತ್ ಅಭಿಮಾನಿ ಚಲನಚಿತ್ರವನ್ನು ವೀಕ್ಷಿಸಲು ಹೋಗುತ್ತಿದ್ದಾಗ ಟ್ರಕ್‌ನಿಂದ ಬಿದ್ದು ಮೃತಪಟ್ಟಿದ್ದಾರೆ. ಪೊಲೀಸರ ಪ್ರಕಾರ, ಮೃತನನ್ನು ಭರತ್ ಕುಮಾರ್ (19) ಎಂದು ಗುರುತಿಸಲಾಗಿದೆ. 

ನಟ ಅಜಿತ್ ಕುಮಾರ್ ಅಭಿನಯದ ʼತುನಿವುʼ ಸಿನಿಮಾ ತಮಿಳುನಾಡಿನಾದ್ಯಂತ ಮಂಗಳವಾರ ಮಧ್ಯರಾತ್ರಿ 1 ಗಂಟೆಯಿಂದಲೇ ಥಿಯೇಟರ್‌ಗಳಲ್ಲಿ ಪ್ರದರ್ಶನ ಆರಂಭವಾಗಿತ್ತು. ಯುವಕ ಗುಂಪೊಂದು ನೀರಿನ ಟ್ಯಾಂಕರ್ ಅನ್ನು ನಿಲ್ಲಿಸಿ ಅದರ ಮೇಲೆ ಹತ್ತಿ ನೃತ್ಯ ಮಾಡುತ್ತಿದ್ದಾಗ ಭರತ್ ಕುಮಾರ್ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ANI ಪ್ರಕಾರ, ಚೆನ್ನೈನ ರೋಹಿಣಿ ಥಿಯೇಟರ್ ಬಳಿ ಪೂನಮಲ್ಲಿ ಹೆದ್ದಾರಿಯಲ್ಲಿ ಮಧ್ಯರಾತ್ರಿಯ ಸುಮಾರಿಗೆ ಈ ಘಟನೆ ಸಂಭವಿಸಿದೆ.

ಇದನ್ನೂ ಓದಿ | Ajith Kumar | ಅಜಿತ್‌ ಕುಮಾರ್‌ ಆ್ಯಕ್ಷನ್‌ ಥ್ರಿಲ್ಲರ್‌ ಸಿನಿಮಾ ʻತುನಿವುʼ ಹೊಸ ಪೋಸ್ಟರ್‌ ಔಟ್‌ !

ಎಚ್ ವಿನೋತ್ ನಿರ್ದೇಶನದ ʼತುನಿವುʼʼ ಚಿತ್ರದಲ್ಲಿ ಮಂಜು ವಾರಿಯರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಖ್ಯಾತ ಬಾಲಿವುಡ್‌ ನಿರ್ಮಾಪಕ ಬೋನಿ ಕಪೂರ್ ಈ ಚಿತ್ರ ನಿರ್ಮಾಣಕ್ಕೆ ಕೈಹಾಕಿರುವುದು ವಿಶೇಷ.

ʼವಾರಿಸುʼ ಸಿನಿಮಾ ವೆಂಕಟೇಶ್ವರ ಕ್ರಿಯೇಷನ್ಸ್‌ ಅಡಿ ದಿಲ್‌ ರಾಜು ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ ತೆಲುಗಿನ ಬೃಂದಾವನಂ, ʻಮಹರ್ಷಿʼ ಖ್ಯಾತಿಯ ವಂಶಿ ಪೈಡಿಪಲ್ಲಿ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಸಿನಿಮಾ ಏಕಕಾಲದಲ್ಲಿ ಬಿಡುಗಡೆಯಾಗಿದೆ.

ಇದನ್ನೂ ಓದಿ | Vijay Thalapathy | ದಳಪತಿ ವಿಜಯ್-ರಶ್ಮಿಕಾ ಮಂದಣ್ಣ ಅಭಿನಯದ ʻವಾರಿಸುʼ ಟ್ರೈಲರ್‌ ಔಟ್‌!

Exit mobile version