Site icon Vistara News

Golden Star | ಬಾನದಾರಿಯಲ್ಲಿ ಸಿನಿಮಾ First Look ರಿಲೀಸ್‌

ಬೆಂಗಳೂರು : ಮುಂಗಾರು ಮಳೆ ಸಿನಿಮಾವನ್ನು ನೋಡದೇ ಇರುವವರು ಯಾರು ಹೇಳಿ, ಈಗಲೂ ಎಲ್ಲರ ಬಾಯಲ್ಲಿ ಗುನುಗುವ ಸಾಹಿತ್ಯಕ್ಕೆ ಸಲಾಂ ಹೊಡಿಲೇ ಬೇಕು. ನಿರ್ದೇಶಕ ಪ್ರೀತಂ ಗುಬ್ಬಿ ಹಾಗೂ ಗಣೇಶ್‌ ಈ ಹಿಂದೆ ಸೂಪರ್‌ ಹಿಟ್‌ ಚಿತ್ರಗಳನ್ನು ನೀಡಿದ್ದಾರೆ. ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರನ್ನು ಸ್ಟಾರ್‌ ನಟನನ್ನಾಗಿ ಮಾಡಿದ ಸಿನಿಮಾ ಅಂದ್ರೆ ಅದುವೇ ಮುಂಗಾರು ಮಳೆ.

ಮುಂಗಾರು ಮಳೆ ಕಥೆ ಪ್ರೀತಂ ಗುಬ್ಬಿಯವರೇ ಬರೆದಿದ್ದು, ನಂತರ ನಿರ್ದೇಶಕ-ನಟ ಕಾಂಬಿನೇಷನ್‌ನಲ್ಲಿ ಪ್ರೀತಂ ಗಣೇಶ್‌, ಮಳೆಯಲಿ ಜೊತೆಯಲಿ-ದಿಲ್‌ರಂಗೀಲಾ, ಹಾಗೂ 99 ಚಿತ್ರಗಳಲ್ಲಿ ಜತೆಯಾಗಿ ಕೆಲಸ ಮಾಡಿದವರು. ಇದೀಗ ಮತ್ತೆ ಬಾನದಾರಿಯಲ್ಲಿ ಇವರಿಬ್ಬರು ಸೇರಿ ಹೊಸ ಪಯಣ ಶುರು ಮಾಡಿದ್ದಾರೆ.

ಮನಸ್ಸಿಗೆ ಆಹ್ಲಾದಕರವಾಗಿರುವ, ಮುದ ನೀಡುವ ಶೀರ್ಷಿಕೆ. ಸಿನಿಮಾ ಜನರಲ್ಲಿ ಭಾರಿ ಕೂತೂಹಲ ಮೂಡಿಸುವಂತಿದೆ. ʼ ನೋಡು ಎಂಥ ಚೆಂದʼ ಎಂದು ಟ್ಯಾಗ್‌ಲೈನ್‌ ಕೂಡ ನೀಡಿದ್ದು, ಮೇ ನಲ್ಲಿ ಚಿತ್ರ ಸೆಟ್ಟೇರಲಿದೆ. ಇದೀಗ ಬಾನದಾರಿಯ ಫಸ್ಟ್‌ ಲುಕ್‌ ಬಿಡುಗಡೆಗೊಂಡಿದೆ. ಯುಗಾದಿ ಹಬ್ಬದಂದು ಮೊದಲ ಪೋಸ್ಟ್‌ರನ್ನು ಚಿತ್ರತಂಡ ಹಂಚಿಕೊಂಡಿತ್ತು. ಇದರಲ್ಲಿ ಇನ್ನೂ ವಿಶೇಷ ಏನೆಂದರೆ ಬೆಂಗಳೂರು ಜತೆಗೆ ಆಫ್ರಿಕಾದಲ್ಲಿ ಕೂಡ ಶೂಟಿಂಗ್‌ ಅಗಲಿದೆ. ಬೀರಬಲ್‌ ಚಿತ್ರದ ಖ್ಯಾತಿಯ ನಟಿ ರುಕ್ಮಿಣಿ ವಸಂತ್‌ ನಟಿಯಾಗಿ ಅಭಿನಯಿಸಲಿದ್ದಾರೆ.

ಬಾನದಾರಿಯ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ನಿರ್ದೇಶಕರಾಗಿದ್ದು , ಅಭಿಲಾಶ್‌ ಕಳತ್ತಿ ಛಾಯಾಗ್ರಹಣ ಮಾಡಿದ್ದಾರೆ. ಪ್ರತೀಮ್‌ ಗುಬ್ಬಿ ಅವರ ಫಿಲ್ಮ್‌ ಬ್ಯಾನರ್‌ ಅಡಿಯಲ್ಲಿ ತೆರೆ ಕಾಣಲಿದ್ದು ಶ್ರೀ ವಾರಿ ಟಾಕಿಸ್‌ ಚಿತ್ರವನ್ನು ಪ್ರೊಡ್ಯೂಸ್‌ ಮಾಡಿದೆ.

Exit mobile version