Site icon Vistara News

Bigg Boss Malayalam : ಬಿಗ್‌ಬಾಸ್‌ ವೇದಿಕೆ ಮೇಲೆ ಸಿಟ್ಟಾಗಿ ಅರ್ಧದಲ್ಲೇ ಶೋ ಬಿಟ್ಟು ಹೋದ ಮೋಹನ್‌ಲಾಲ್‌! ನಡೆದಿದ್ದು ಏನು?

#image_title

ತಿರುವನಂತಪುರಂ: ಮಲಯಾಳಂನಲ್ಲಿ ಸದ್ಯ ಬಿಗ್‌ಬಾಸ್‌ (Bigg Boss Malayalam) ಸೀಸನ್‌ 5 ನಡೆಯುತ್ತಿದೆ. ಅದರಲ್ಲಿ ಈಸ್ಟರ್‌ ಹಬ್ಬದ ಪ್ರಯುಕ್ತ ಭಾನುವಾರದಂದು ಸ್ಪರ್ಧಿಗಳಿಗೆ ವಿಶೇಷವಾದ ಟಾಸ್ಕ್‌ ಒಂದನ್ನು ಕೊಡಲಾಗಿತ್ತು. ಆದರೆ ಈ ಟಾಸ್ಕ್‌ನಲ್ಲಿ ದೊಡ್ಡ ಮಟ್ಟದ ಜಗಳ ನಡೆದಿದ್ದು, ಕಾರ್ಯಕ್ರಮದ ನಿರೂಪಕರಾದ ಮೋಹನ್‌ಲಾಲ್‌ ಅವರು ಸ್ಪರ್ಧಿಗಳ ಮೇಲೆ ಸಿಟ್ಟಾಗಿ ಶೋ ಅನ್ನು ಅರ್ಧದಲ್ಲೇ ಬಿಟ್ಟು ಹೋಗಿದ್ದಾರೆ.

ಇದನ್ನೂ ಓದಿ: Tractor ban: ಸಿಟಿಯಲ್ಲಿ ಟ್ರ್ಯಾಕ್ಟರ್‌ ನಿಷೇಧಕ್ಕೆ ಆಕ್ರೋಶ; ಟ್ರ್ಯಾಕ್ಟರ್‌ ಏರಿ ಬಂದ ಪ್ರತಿಭಟನಾಕಾರರಿಗೆ ಬಿಗ್‌ಬಾಸ್‌ ಖ್ಯಾತಿಯ ರೂಪೇಶ್‌ ರಾಜಣ್ಣ ಸಾಥ್‌
ವಿಶೇಷ ಟಾಸ್ಕ್‌ನಲ್ಲಿ ಅಖಿಲ್‌ ಮಾರಾರ್‌ ಅವರು ಪ್ರತಿಸ್ಪರ್ಧಿಗಳೊಂದಿಗೆ ಜಗಳ ಆಡಿದ್ದಾರೆ. ಏಂಜಲೀನಾ, ಸಾಗರ್‌ ಮತ್ತು ಜುನೈಜ್‌ ಅವರಿಗೆ ಅಶ್ಲೀಲ ಪದಗಳಿಂದ ಬೈದಿದ್ದಾರೆ. ಈ ವಿಚಾರವನ್ನು ಸ್ಪರ್ಧಿಗಳು ಮೋಹನ್‌ಲಾಲ್‌ ಅವರ ಎದುರು ಹೇಳಿಕೊಂಡಿದ್ದಾರೆ. ಮೋಹನ್‌ಲಾಲ್‌ ಅವರು ಅಖಿಲ್‌ ಅವರಿಗೆ ಪ್ರತಿಸ್ಪರ್ಧಿಗಳ ಬಳಿ ಕ್ಷಮೆ ಯಾಚಿಸಲು ಹೇಳಿದ್ದು, ಅದರಂತೆ ಅವರು ಮಾಡಿದ್ದಾರೆ.‌

ಅದಾದ ನಂತರ ಅಖಿಲ್‌ ಅವರಿಗೆ ನಿಮ್ಮ ಬಳಿ ಇರುವ ಕ್ಯಾಪ್ಟನ್‌ ಬ್ಯಾಂಡ್‌ ಅನ್ನು ಸಾಗರ್‌ಗೆ ಕೊಡಿ ಎಂದು ಮೋಹಲ್‌ಲಾಲ್‌ ಹೇಳಿದ್ದಾರೆ. ಆದರೆ ಅದಕ್ಕೂ ಮೊದಲು ಅಖಿಲ್‌ ನನ್ನ ಬಳಿ ಕ್ಷಮೆ ಕೇಳಬೇಕೆಂದು ಸಾಗರ್‌ ಕೇಳಿದ್ದಾರೆ. ಈ ವಿಚಾರದಲ್ಲಿ ಬಿಗ್‌ಬಾಸ್‌ ಇಬ್ಬರೂ ಸ್ಪರ್ಧಿಗಳನ್ನು ಕನ್ಫೆಶನ್‌ ರೂಂಗೆ ಕರೆದು ಮಾತನಾಡಿದ್ದಾರೆ. ಆಗ ಇಬ್ಬರೂ ಹೊಂದಾಣಿಕೆ ಮಾಡಿಕೊಳ್ಳದೆ ಜಗಳ ಮುಂದುವರಿಸಿದ್ದಾರೆ. ಅಖಿಲ್‌ ಕ್ಯಾಪ್ಟನ್‌ ಬ್ಯಾಂಡ್ ಅನ್ನು ಸಾಗರ್‌ಗೆ ಕೊಡದೆ ಬಿಸಾಡಿದ್ದಾರೆ.

ಇದನ್ನೂ ಓದಿ: Bigg Boss Kannada | ಕರಾವಳಿ ಕುವರ ರೂಪೇಶ್‌ ಶೆಟ್ಟಿ ಮುಡಿಗೆ ಬಿಗ್‌ಬಾಸ್‌ ಕಿರೀಟ
ಈ ವಿಚಾರದಲ್ಲಿ ಸಿಟ್ಟಿಗೆದ್ದ ಮೋಹನ್‌ಲಾಲ್‌, “ನನ್ನ ಮಾತನ್ನು ಕೇಳದೆ ಕ್ಯಾಪ್ಟನ್‌ ಬ್ಯಾಂಡ್‌ ಎಸೆದು ನನಗೆ ಅವಮಾನ ಮಾಡಿದ್ದೀರಿ. ನಾನು ಈ ಕಾರ್ಯಕ್ರಮಕ್ಕಾಗಿ ಜೈಸಲ್ಮೇರ್‌ನಿಂದ 4-5 ಗಂಟೆಗಳ ಕಾಲ ಪ್ರಯಾಣ ಮಾಡಿಕೊಂಡು ಬಂದಿದ್ದೇನೆ. ಆದರೆ ನನಗಿಲ್ಲಿ ಅವಮನಾನವಾಗಿದೆ” ಎಂದು ಹೇಳಿ ಕಾರ್ಯಕ್ರಮವನ್ನು ಅರ್ಧದಲ್ಲೇ ಬಿಟ್ಟು ಹೋಗಿದ್ದಾರೆ. ಮೋಹನ್‌ಲಾಲ್‌ ಅವರು ಈ ರೀತಿ ಕಾರ್ಯಕ್ರಮವನ್ನು ಬಿಟ್ಟು ತೆರಳಿರುವುದು ಇದೇ ಮೊದಲನೇ ಬಾರಿಯಾಗಿದೆ.

Exit mobile version