Site icon Vistara News

Akshay Kumar: ತೆಲುಗು ಚಿತ್ರಕ್ಕೆ ಎಂಟ್ರಿ ಕೊಟ್ಟ ಅಕ್ಷಯ್‌ ಕುಮಾರ್‌; ಜತೆಗಿರಲಿದ್ದಾರೆ ಶಿವಣ್ಣ!

Akshay Kumar

ಬೆಂಗಳೂರು: ನಟ ಮೋಹನ್ ಬಾಬು ಮಗ ವಿಷ್ಣು ಮಂಚು (Vishnu Manchu) ಅವರು `ಕಣ್ಣಪ್ಪ’ (Kannappa Movie) ಸಿನಿಮಾದಲ್ಲಿ ನಿರತರಾಗಿದ್ದಾರೆ. ಈ ಚಿತ್ರವನ್ನು ನಟ, ರಾಜಕಾರಣಿ ಡಾ. ಮೋಹನ್ ಬಾಬು ನಿರ್ಮಿಸುತ್ತಿದ್ದಾರೆ. ಮುಖೇಶ್​ ಕುಮಾರ್​ ಸಿಂಗ್​ ನಿರ್ದೇಶನ ಮಾಡುತ್ತಿರುವ ತೆಲುಗಿನ ‘ಕಣ್ಣಪ್ಪ’ ತಂಡಕ್ಕೆ ಅಕ್ಷಯ್​ ಕುಮಾರ್ (Akshay Kumar) ಸೇರ್ಪಡೆಯಾಗುತ್ತಿದ್ದಾರೆ.

ಅಕ್ಷಯ್‌ ಕುಮಾರ್‌ ಈ ಸಿನಿಮಾದಲ್ಲಿ ಇರಲಿದ್ದಾರೆ ಎಂದು ಇಂಡಸ್ಟ್ರಿ ಟ್ರ್ಯಾಕರ್ ರಮೇಶ್ ಬಾಲಾ ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. “ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್‌ ಕುಮಾರ್‌ ಅವರು ಪ್ರತಿಷ್ಠಿತ ಪ್ಯಾನ್-ಇಂಡಿಯಾ ನಟ ವಿಷ್ಣು ಮಂಚು ಅವರ ಬಿಗ್ ಬಜೆಟ್ ಚಲನಚಿತ್ರ ʻಕಣ್ಣಪ್ಪʼ ಸಿನಿಮಾ ತಂಡಕ್ಕೆ ಸೇರಿದ್ದಾರೆ. ಪ್ರಭಾಸ್ ನಂತರ, ಮೋಹನ್‌ಲಾಲ್, ಹೀಗೆ ತಾರಾಗಣಕ್ಕೆ ಮತ್ತೊಂದು ಗ್ರ್ಯಾಂಡ್ ಸೇರ್ಪಡೆ. ಇನ್ನಷ್ಟು ರೋಚಕ ಅಪ್‌ಡೇಟ್‌ಗಳಿಗಾಗಿ ಟ್ಯೂನ್ ಮಾಡಿʼʼಎಂದು ಬರೆದುಕೊಂಡಿದ್ದಾರೆ.

ಅಕ್ಷಯ್ 1993ರಲ್ಲಿ ʻಅಶಾಂತ್ʼ ಎಂಬ ದ್ವಿಭಾಷಾ ಚಲನಚಿತ್ರದಲ್ಲಿ ನಟಿಸಿದ್ದರು ಇದು ಕನ್ನಡದಲ್ಲಿ ʻವಿಷ್ಣು ವಿಜಯʼ ಎಂದು ಬಿಡುಗಡೆಯಾಯಿತು. ಇದು ಅಕ್ಷಯ್‌ ಅವರ ಮೊದಲ ದಕ್ಷಿಣ ಭಾರತದ ಚಿತ್ರ. ವರ್ಷಗಳ ನಂತರ, ಅವರು ಶಂಕರ್ ಅವರ ʻ2018ʼರ ರಜನಿಕಾಂತ್‌ ನಟನೆಯ ʻ2.0ʼ ಸಿನಿಮಾ ಮೂಲಕ ತಮಿಳಿಗೆ ಪದಾರ್ಪಣೆ ಮಾಡಿದರು. ಇದೀಗ ʻಕಣ್ಣಪ್ಪʼ ಅಕ್ಷಯ್‌ ಕುಮಾರ್‌ ಅವರ ಮೂರನೇ ದಕ್ಷಿಣ ಭಾರತದ ಯೋಜನೆಯಾಗಿದೆ.

ಇದನ್ನೂ ಓದಿ: Pakistan Cricket: ಭಾರತಕ್ಕೆ ವಿಶ್ವಕಪ್​ ಗೆಲ್ಲಿಸಿಕೊಟ್ಟ ಕೋಚ್​ ಮೇಲೆ ಕಣ್ಣಿಟ್ಟ ಪಾಕ್​

ಅವಾ ಎಂಟರ್‌ಟೈನ್‌ಮೆಂಟ್ (Ava Entertainment) ಮತ್ತು 24 ಫ್ರೇಮ್ಸ್ ಫ್ಯಾಕ್ಟರಿ (24 Frames Factory) ಜಂಟಿಯಾಗಿ ನಿರ್ಮಿಸಿರುವ ಈ ಪ್ರಾಜೆಕ್ಟ್ ಶೀಘ್ರದಲ್ಲೇ ಚಿತ್ರೀಕರಣವನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಮಣಿಶರ್ಮಾ ಮತ್ತು ಸ್ಟೀಫನ್ ದೇವಸಿ ಅವರ ಪ್ರತಿಭಾವಂತ ಜೋಡಿ ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡುತ್ತಿದೆ.ಕಣ್ಣಪ್ಪ’ ಸಿನಿಮಾ ವ್ಯಕ್ತಿಯ ಅಚಲವಾದ ಭಕ್ತಿಯ ಮೇಲೆ ಬೆಳಕು ಚೆಲ್ಲುವ ಸಿನಿಮಾ ಆಗಿದೆ.

ನಾಸ್ತಿಕನಾದ ಕಣ್ಣಪ್ಪ ಮಹಾನ್ ಶಿವನ ಆರಾಧಕನಾಗಿ ಬದಲಾದ ವಿಸ್ಮಯಕಾರಿ ಕತೆಯನ್ನು ಸಿನಿಮಾ ಒಳಗೊಂಡಿದೆ. ಈ ಚಿತ್ರವು ಶಿವನ ಭಕ್ತನಾಗಿದ್ದ ಭಕ್ತ ಕಣ್ಣಪ್ಪನ ಜೀವನವನ್ನು ಆಧರಿಸಿದೆ ಎಂದು ವರದಿಯಾಗಿದೆ. ಬಾಲಿವುಡ್ ನಟಿ ನೂಪುರ್ ಸನೋನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ‘ಕಣ್ಣಪ್ಪ’ ಸಿನಿಮಾವು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಕಾಳಹಸ್ತಿಯಲ್ಲಿ ಸಿನಿಮಾದ ಮುಹೂರ್ತ ಮಾಡಲಾಗಿತ್ತು.

ಶಿವರಾಜ್​ಕುಮಾರ್​ ಕೂಡ ಒಂದು ಪಾತ್ರ ಮಾಡುತ್ತಾರೆ ಎಂದು ಸುದ್ದಿ ಆಗಿದೆ. ಮೋಹನ್ ಬಾಬು, ಮಧೂ, ಬ್ರಹ್ಮಾನಂದಂ, ಮುಖೇಶ್​ ರಿಷಿ, ಕುಶಾಲ್​ ಮುಂತಾದವರು ಕೂಡ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಡಾ. ರಾಜ್‌ಕುಮಾರ್ ‘ಬೇಡರ ಕಣ್ಣಪ್ಪ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಬಳಿಕ ‘ಶಿವ ಮೆಚ್ಚಿನ ಕಣ್ಣಪ್ಪ’ ಚಿತ್ರದಲ್ಲಿ ಶಿವರಾಜ್‌ಕುಮಾರ್ ಮಿಂಚಿದ್ದರು. ಇದೇ ಕಥೆಯಲ್ಲಿ ವಿಷ್ಣು ಮಂಚು ನಟಿಸುತ್ತಿದ್ದಾರೆ. ತೆಲುಗಿನಲ್ಲೂ ಕೃಷ್ಣಂರಾಜು ‘ಭಕ್ತ ಕಣ್ಣಪ್ಪ’ ಚಿತ್ರದಲ್ಲಿ ನಟಿಸಿದ್ದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಕಣ್ಣಪ್ಪ’ ನಿರ್ಮಾಣ ಮಾಡಲು ಸಿದ್ಧತೆ ನಡೆಯುತ್ತಿದೆ.

Exit mobile version