Site icon Vistara News

Kichcha Sudeep : ಆರು ವರ್ಷಗಳ ಬಳಿಕ ಒಂದಾಗ್ತಾರಾ ಸ್ಯಾಂಡಲ್​ವುಡ್​ ಸ್ಟಾರ್ಸ್​​ ಸುದೀಪ್​- ದರ್ಶನ್​​?

Actor Darshan

ಬೆಂಗಳೂರು: ಸ್ಯಾಂಡಲ್​ವುಡ್ ಸ್ಟಾರ್​ ನಟರಾದ ಕಿಚ್ಚ ಸುದೀಪ್ (Kichcha Sudeep) ಹಾಗೂ ಚಾಲೆಂಜಿಂಗ್ ಸ್ಟಾರ್​ ದರ್ಶನ್ (Darshan Toogudeepa) ಅವರು ಆರು ವರ್ಷಗಳ ಮುನಿಸನ್ನು ಕೊನೆಗೊಳಿಸ್ತಾರೆ ಎಂದು ಹೇಳಲಾಗಿದೆ. ಅವರಿಬ್ಬರ ನಡುವಿನ ಮನಸ್ತಾಪವನ್ನು ಸುಮಲತಾ ಅಂಬರೀಷ್ ಅವರು ಕೊನೆಗೊಳಿಸ್ತಾರೆ ಎಂದು ಹೇಳಲಾಗಿದೆ. ಸುಮಲತಾ ಅವರ ಜನುಮದ ದಿನ ಆಗಸ್ಟ್​​ 27ರಂದು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್​​ನಲ್ಲಿ 26 ರಾತ್ರಿ ಪಾರ್ಟಿ ಆಯೋಜಿಸಲಾಗಿದೆ. ಅದಕ್ಕೆ ಕಿಚ್ಚ ಸುದೀಪ್​ ಹಾಗೂ ದರ್ಶನ್ ಅವರಿಗೆ ಆಹ್ವಾನ ನೀಡಲಾಗಿದೆ. ಅಲ್ಲಿ ಅವರು ತಮ್ಮ ಮುನಿಸನ್ನು ತೊರೆದು ಒಂದಾಗಲಿದ್ದಾರೆ ಎಂದು ಹೇಳಲಾಗಿದೆ.

ಬೆಂಗಳೂರಿನ ಜೆಡಬ್ಲ್ಯು ಮ್ಯಾರಿಯೆಟ್ ಹೋಟೆಲ್​ನಲ್ಲಿ ಪಾರ್ಟಿ ಆಯೋಜಿಸಲಾಗಿದೆ. ಸುಮಲತಾ ಅವರ ಪುತ್ರ ಅಭಿಷೇಕ್ ಅಂಬರೀಷ್​ ಅವರು ಈ ಪಾರ್ಟಿಯನ್ನು ನಡೆಸುತ್ತಿದ್ದಾರೆ. ಇದೇ ವೇಳೆ ಸುಮಲತಾ ಅವರು ಸ್ಯಾಂಡಲ್​ವುಡ್​ನ ಸ್ಟಾರ್​ಗಳಿಗೆ ಆಹ್ವಾನ ಕೊಟ್ಟಿದ್ದಾರೆ. ಕನ್ನಡ ಇಂಡಸ್ಟ್ರಿಯ ಘಟಾನುಘಟಿಗಳು ಈ ಪಾರ್ಟಿಗೆ ಅಗಮಿಸಿದ್ದಾರೆ. ಅಂತೆಯೇ ಕನ್ನಡ ಸಿನಿಮಾ ಕ್ಷೇತ್ರದ ಜನಪ್ರಿಯ ತಾರೆಗಳಾದ ಸುದೀಪ್ ಹಾಗೂ ದರ್ಶನ್​ ಕೂಡ ಆಗಮಿಸಿದ್ದಾರೆ. ಅವರಿಬ್ಬರು ಮುನಿಸಿಕೊಂಡ ಬಳಿಕ ಒಂದೇ ಕಡೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಅವರಿಬ್ಬರ ಉಪಸ್ಥಿತಿ ಒಳ್ಳೆಯ ಸೂಚನೆ ನೀಡುತ್ತಿದೆ ಎಂದು ಸ್ಯಾಂಡಲ್​ವುಡ್​ ಕ್ಷೇತ್ರದ ಮಂದಿ ವಿಶ್ಲೇಷಣೆ ಮಾಡುತ್ತಿದ್ದಾರೆ.

ಇದನ್ನೂ ಓದಿ :Kiccha Sudeep : ಕಿಚ್ಚ ಸುದೀಪ್‌ ವಿರುದ್ಧ ಮಾನಹಾನಿಕರ ಹೇಳಿಕೆ ನೀಡದಂತೆ MN ಕುಮಾರ್‌, NM ಸುರೇಶ್‌ಗೆ ನಿರ್ಬಂಧ

12 ಗಂಟೆಗೆ ಕೇಕ್ ಕಟ್ ಮಾಡಿ ಸುಮಲತಾ ಅವರು ಬರ್ತ್​ಡೇ ಸೆಲಬ್ರೆಷನ್ ಮಾಡಲಿದ್ದಾರೆ ಎನ್ನಲಾಗಿದೆ. ಇದೇ ವೇಲೆ ಸುದೀಪ್ -ದರ್ಶನ್ ನ ಪಾರ್ಟಿ ಗೆ ಆಹ್ವಾನ ನೀಡುವ ಪ್ಲಾನ್ ಮೊದಲೇ ಆಗಿತ್ತು ಎಂದು ಮೂಲಗಳು ತಿಳಿಸಿವೆ. ಸುಮಲತಾ ಮಧ್ಯಸ್ಥಿಕೆಯಲ್ಲಿ ದೊಡ್ಡ ಸ್ಟಾರ್​ಗಳು ಒಂದಾಗುವ ಸಾಧ್ಯತೆ ಇರುವುದು ಅಭಿಮಾನಿಗಳ ಪಾಲಿಗೆ ಖುಷಿಯ ವಿಚಾರವಾಗಿದೆ.

Exit mobile version