Site icon Vistara News

KGF Movie : ಕೆಜಿಎಫ್‌ ತಲೆ ಬುಡವಿಲ್ಲದ ಸಿನಿಮಾ ಎಂದು ಹೇಳಿದ ತಪ್ಪಿಗೆ ಕ್ಷಮೆ ಯಾಚಿಸಿದ ತೆಲುಗು ನಿರ್ದೇಶಕ

#image_title

ಹೈದರಾಬಾದ್‌: ಕನ್ನಡದ ಕೆಜಿಎಫ್‌ ಸಿನಿಮಾ (KGF Movie) ವಿಶ್ವ ಮಟ್ಟದಲ್ಲಿ ಹೆಸರು ಮಾಡಿದಂತಹ ಸಿನಿಮಾ. ರಾಕಿ ಭಾಯ್‌ ಯಶ್‌ ಅವರನ್ನು ವಿಶ್ವಕ್ಕೇ ಪರಿಚಯಿಸಿಕೊಂಡ ಸಿನಿಮಾವದು. ಆದರೆ ಈ ಸಿನಿಮಾ ಬಗ್ಗೆ ವಿರುದ್ಧವಾಗಿಯೂ ಮಾತನಾಡುವವರು ಕೆಲವರು ಇದ್ದಾರೆ. ಅದೇ ರೀತಿ ಇತ್ತೀಚೆಗೆ ತೆಲುಗು ನಿರ್ದೇಶಕ ಒಬ್ಬರು ಕೆಜಿಎಫ್‌ ಸಿನಿಮಾ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿ, ಕ್ಷಮೆ ಯಾಚಿಸಿದ್ದಾರೆ.

ಇದನ್ನೂ ಓದಿ: ICC T20 Rankings: ಜೀವನ ಶ್ರೇಷ್ಠ ಟಿ20 ಶ್ರೇಯಾಂಕ ಗಿಟ್ಟಿಸಿದ ಶುಭಮನ್​ ಗಿಲ್​!

ಕೆಜಿಎಫ್‌ ಸಿನಿಮಾ ಬಗ್ಗೆ ತೆಲುಗು ನಿರ್ದೇಶಕ ವೆಂಕಟೇಶ್‌ ಮಹಾ ಅವರು ಇತ್ತೀಚೆಗೆ ನಾಲಿಗೆ ಹರಿಬಿಟ್ಟಿದ್ದರು. ಕೆಜಿಎಫ್‌ ಸಿನಿಮಾ ತಲೆ ಬುಡವಿಲ್ಲದ ಸಿನಿಮಾ ಎಂದು ಹೇಳಿದ್ದರು. ಹಾಗೆಯೇ ರಾಕಿ ಭಾಯ್‌ ಪಾತ್ರದಕ್ಕೂ ಕೂಡ ಗೌರವ ಕೊಡದೆ ಮಾತನಾಡಿದ್ದರು. ಈ ವಿಚಾರದಲ್ಲಿ ರಾಕಿ ಭಾಯ್‌ ಅಭಿಮಾನಿಗಳು ಸಿಟ್ಟಿಗೆದ್ದಿದ್ದರು. ನಮ್ಮ ಕನ್ನಡದ ಸಿನಿಮಾ ಮಾತನಾಡಿದ್ದಕ್ಕೆ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡಿದ್ದರು.  ‌

ಅಭಿಮಾನಿಗಳ ಆಕ್ರೋಶ ಹೆಚ್ಚಾದ ಬೆನ್ನಲ್ಲೇ ವೆಂಕಟೇಶ್‌ ಮಹಾ ಅಧಿಕೃತವಾಗಿ ಕ್ಷಮೆ ಯಾಚಿಸಿದ್ದಾರೆ. “ನನ್ನ ಹೇಳಿಕೆಯಿಂದ ಅನೇಕರಿಗೆ ನೋವಾಗಿದೆ. ಭಾಷೆಯ ಬಗ್ಗೆ ಮಾತನಾಡಿದ್ದಕ್ಕಾಗಿ ಕ್ಷಮೆ ಯಾಚಿಸುತ್ತೇನೆ. ಆದರೆ ಸಿನಿಮಾ ಬಗ್ಗೆ ಹೇಳಿರುವುದು ಕೇವಲ ನನ್ನ ಮಾತಲ್ಲ. ಹಲವರು ಸಿನಿಮಾ ಬಗ್ಗೆ ನೀಡಿದ ಅಭಿಪ್ರಾಯವನ್ನೇ ನಾನು ಹೇಳಿದ್ದೇನಷ್ಟೇ. ಆ ಸಿನಿಮಾ ಬಗ್ಗೆ ನಾನು ನೀಡಿರುವ ಹೇಳಿಕೆಯನ್ನು ವಾಪಸು ಪಡೆಯುವುದಿಲ್ಲ” ಎಂದು ಅವರು ವಿಡಿಯೊದಲ್ಲಿ ಹೇಳಿದ್ದಾರೆ.

Exit mobile version