Site icon Vistara News

ಮೀನಾ ಪತಿ‌ ವಿದ್ಯಾಸಾಗರ್‌ ಸಾವಿಗೆ ಕೋವಿಡ್‌ ಕಾರಣವಲ್ಲ ಎಂದ ನಟಿ ಖುಷ್ಬೂ ಸುಂದರ್

ಚೆನ್ನೈ: ಬಹುಭಾಷಾ ನಟಿ ಮೀನಾ ಅವರ ಪತಿ ವಿದ್ಯಾಸಾಗರ್‌ ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ನಿಧನರಾಗಿದ್ದಾರೆ. ಪತಿಯ ಸಾವಿನ ಆಘಾತದಿಂದ ನಟಿ ಮೀನಾ ಹಾಗೂ ಕುಟುಂಬ ಇನ್ನೂ ಹೊರಬಂದಿಲ್ಲ. ಈ ನಡುವೆ, ಮೀನಾ ಅವರ ಆಪ್ತ ಸ್ನೇಹಿತೆ ಖುಷ್ಬೂ ಸುಂದರ್‌ ಅವರು ಮೀನಾ ಅವರ ಪತಿ ವಿದ್ಯಾಸಾಗರ್ ಕೋವಿಡ್‌ನಿಂದಾಗಿ ಸಾವನ್ನಪ್ಪಿಲ್ಲ, ಅವರು ಶ್ವಾಸಕೋಶದ ಸೋಂಕಿನಿಂದ ಸಾವನಪ್ಪಿದ್ದು ಎಂದು ಹೇಳಿದ್ದಾರೆ.

ಆಪ್ತ ಸ್ನೇಹಿತೆಯ ಪತಿಯ ಸಾವಿನ ಬಗ್ಗೆ ಖುಷ್ಬೂ ಟ್ವೀಟ್ ಮಾಡಿದ್ದಾರೆ: “ಈ ಸುದ್ದಿಯಿಂದ ಶಾಕ್‌ ಆಗಿದೆ. ನಟಿ ಮೀನಾ ಅವರ ಪತಿ ವಿದ್ಯಾ ಸಾಗರ್ ನಮ್ಮೊಂದಿಗಿಲ್ಲ ಎಂದು ತಿಳಿದು ಹೃದಯ ವಿದ್ರಾವಕವಾಗಿದೆ. ಅವರು ದೀರ್ಘಕಾಲದಿಂದ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದರು. ಜೀವನವು ಕ್ರೂರವಾಗಿದೆ. ದುಃಖವನ್ನು ವ್ಯಕ್ತಪಡಿಸಲು ನನ್ನ ಹತ್ತಿರ ಪದಗಳಿಲ್ಲ. ಮೀನಾ ಹಾಗೂ ಅವರ ಮಗಳಿಗೆ ದೇವರು ದುಃಖವನ್ನು ಭರಿಸುವ ಶಕ್ತಿ ನೀಡಲಿ”ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ ಸಾಗರ್ ಅವರು ಕೋವಿಡ್‌ನಿಂದ ಸಾವನ್ನಪ್ಪಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಾಧ್ಯಮಗಳು ಸ್ವಲ್ಪ ಜವಾಬ್ದಾರಿಯುತವಾಗಿರಲು ನಾನು ಬಹಳ ವಿನಮ್ರವಾಗಿ ವಿನಂತಿಸುತ್ತೇನೆ. ಮೀನಾ ಅವರ ಪತಿಗೆ 3 ತಿಂಗಳ ಹಿಂದೆ ಕೋವಿಡ್ ಇತ್ತು. ಇದರಿಂದ್ದಾಗಿ ಅವರ ಶ್ವಾಸಕೋಶದ ಸ್ಥಿತಿ ಹದಗೆಟ್ಟಿತ್ತು ಎನ್ನುವ ತಪ್ಪು ಸಂದೇಶವನ್ನು ಕಳುಹಿಸಬೇಡಿ. ದಯವಿಟ್ಟು ಯಾವುದೇ ರೀತಿಯ ಭಯವನ್ನು ಸೃಷ್ಟಿಸಬೇಡಿ ಹಾಗೂ ಕೋವಿಡ್‌ನಿಂದ ನಾವು ಸಾಗರ್ ಅವರನ್ನು ಕಳೆದುಕೊಂಡಿದ್ದೇವೆ ಎಂದು ಸುದ್ದಿ ಮಾಡಬೇಡಿ ಎಂದು ಬರೆದಿದ್ದಾರೆ.

ಈ ನಡುವೆ, ವಿದ್ಯಾಸಾಗರ್‌ ಅವರಿಗೆ ಶ್ವಾಸಕೋಶದ ಸಮಸ್ಯೆ ಉಂಟಾಗಲು ಪಾರಿವಾಳದ ಹಿಕ್ಕೆಯೂ ಕಾರಣ ಎಂಬ ಅಭಿಪ್ರಾಯವೂ ಇದೆ.

ಇದನ್ನೂ ಓದಿ: Actor Meena | ನಟಿ ಮೀನಾ ಪತಿ ವಿದ್ಯಾಸಾಗರ್‌ ವಿಧಿವಶ, ಜೀವಕ್ಕೆ ಕಂಟಕವಾಯ್ತಾ ಕೊರೊನಾ?

Exit mobile version