Site icon Vistara News

Ravindar Chandrasekaran: ಜೈಲಿನಿಂದ ಹೊರ ಬಂದ ಗಂಡನನ್ನು ತಬ್ಬಿ ಮುದ್ದಾಡಿದ ನಟಿ ಮಹಾಲಕ್ಷ್ಮೀ!

Mahalakshmi posts new photo with Ravinder Chandrasekhar

ಬೆಂಗಳೂರು: ನಟಿ ಮಹಾಲಕ್ಷ್ಮೀ (mahalakshmi) ಪತಿ ರವೀಂದರ್ ಚಂದ್ರಶೇಖರ್ (Ravindar Chandrasekaran) ಜತೆ ಇರುವ ಫೋಟೊವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಉದ್ಯಮಿಯೊಬ್ಬರಿಗೆ 16 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ರವೀಂದರ್‌ ಇದೀಗ ಜೈಲಿನಿಂದ ಹೊರ ಬಂದಿದ್ದಾರೆ. ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಿದೆ. ಗಂಡ ಹೊರ ಬರುತ್ತಿದ್ದಂತೆ ಮಹಾಲಕ್ಷ್ಮೀ ಗಂಡನನ್ನು ತಬ್ಬಿಕೊಂಡು ಪೋಸ್‌ ಕೊಟ್ಟಿದ್ದಾರೆ.

ಗಂಡನ ಜತೆ ಫೋಟೊ ಹಂಚಿಕೊಂಡು “ನನ್ನ ಮುಖದಲ್ಲಿ ನಗು ತರಿಸಲು ನೀವು ಎಂದಿಗೂ ಸೋತಿಲ್ಲ. ನಂಬಿಕೆಯೇ ಪ್ರೀತಿಯ ಅಡಿಪಾಯ, ಅದೇ ಪ್ರೀತಿಯನ್ನು ಸುರಿಸಿ ಮತ್ತು ನನ್ನನ್ನು ಯಾವಾಗಲೂ ರಕ್ಷಿಸಿ” ಎಂದು ಅವರು ಕ್ಯಾಪ್ಷನ್‌ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ತಮಿಳು ಮಾಧ್ಯಮಗಳು ಮಹಾಲಕ್ಷ್ಮೀ ಅವರು ರವೀಂದರ್ ಬಗ್ಗೆ ಕೆಲವು ಆಘಾತಕಾರಿ ಹೇಳಿಕೆ ನೀಡಿ, ರವೀಂದರ್ ತನಗೆ ಮೋಸ ಮಾಡಿ ಮದುವೆಯಾಗಿದ್ದಾನೆ ಎಂದು ತನ್ನ ಸ್ನೇಹಿತರಿಗೆ ತಿಳಿಸಿದ್ದರು ಎಂದು ವರದಿ ಮಾಡಿತ್ತು.

ರವೀಂದರ್‌ ಅರೆಸ್ಟ್‌ ಆಗಿದ್ದೇಕೆ?

ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಯೋಜನೆಗೆ ಹೂಡಿಕೆ ಮಾಡಿದರೆ ಉತ್ತಮ ಲಾಭ ಸಿಗುತ್ತದೆ ಎಂದು ನಕಲಿ ದಾಖಲೆಗಳನ್ನು ಸಿದ್ಧಪಡಿಸಿ ಚೆನ್ನೈ ಮೂಲದ ಉದ್ಯಮಿ ಬಾಲಾಜಿ ಎಂಬುವರ ಬಳಿ 16 ಕೋಟಿ ಪಡೆದು ವಂಚಿಸಿದ್ದರು.

ಇದನ್ನೂ ಓದಿ: Actress Mahalakshmi: ಮೋಸ ಮಾಡಿ ಮದ್ವೆಯಾದ; ಗಂಡನ ವಿರುದ್ಧ ನಟಿ ಮಹಾಲಕ್ಷ್ಮಿ ಆರೋಪ?

ಮದುವೆ ವಿಚಾರದಲ್ಲಿ ಮಹಾಲಕ್ಷ್ಮೀ-ರವೀಂದರ್‌ ಫೇಮಸ್‌

ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ವಿವಾಹವಾಗಿದ್ದ ತಮಿಳು ನಟಿ, ನಿರೂಪಕಿ ಮಹಾಲಕ್ಷ್ಮೀ (Actress Mahalakshmi) ಮತ್ತು ಖ್ಯಾತ ನಿರ್ಮಾಪಕ  ರವೀಂದರ್ ಚಂದ್ರಶೇಖರ್​ ಸೆಪ್ಟೆಂಬರ್​ 1ರಂದು ವಿವಾಹ ವಾರ್ಷಿಕೋತ್ಸವನ್ನು ಆಚರಿಸಿಕೊಂಡರು. 

ಅಂದಹಾಗೆ, ಮಹಾಲಕ್ಷ್ಮೀ ಮತ್ತು ರವಿಚಂದ್ರಶೇಖರ್ ಅವರಿಬ್ಬರಿಗೂ ಇದು ಎರಡನೇ ಮದುವೆ. ವಯಸ್ಸಿನಲ್ಲೂ ತುಂಬ ಅಂತರವಿದೆ. ರವೀಂದರ್ ಚಂದ್ರಶೇಖರ್ ಅವರು ದಪ್ಪ ಇರುವ ವಿಷಯಕ್ಕೂ ಟ್ರೋಲ್​ ಆಗಿದ್ದರು. ಮಹಾಲಕ್ಷ್ಮೀ ಅವರು ರವಿಚಂದ್ರಶೇಖರ್​ ಬಳಿ ಇರುವ ಹಣ ನೋಡಿ ಮರುಳಾಗಿ ಮದುವೆಯಾಗಿದ್ದಾರೆ ಎಂದೂ ಅನೇಕರು ವ್ಯಂಗ್ಯವಾಡಿದ್ದರು. ಈ ಜೋಡಿಯ ಮಧ್ಯೆಯ ಪ್ರೀತಿಯೇನೂ ಕಡಿಮೆಯಾಗಿಲ್ಲ. ಇತ್ತೀಚೆಗೆ ಮಡದಿ ಮಹಾಲಕ್ಷ್ಮಿ ಬಗ್ಗೆ ಭಾವನಾತ್ಮಕವಾಗಿ ಬರೆದಿದ್ದ ರವಿಚಂದ್ರಶೇಖರ್​, ‘ಈಕೆ ನನ್ನ ಜೀವನದ 8ನೇ ಅಚ್ಚರಿ’ ಎಂದು ಹೇಳಿದ್ದರು.

Exit mobile version