Site icon Vistara News

Naga Shaurya: ಸಕ್ಸೆಸ್‌ ಮೀಟ್‌ ವೇಳೆ ಸಿಟ್ಟಾಗಿ ವೇದಿಕೆಯಿಂದ ಹೊರನಡೆದ ನಟ ನಾಗ ಶೌರ್ಯ!

Naga Shaurya walks out

ಬೆಂಗಳೂರು: ತೆಲುಗು ನಟ ನಾಗ ಶೌರ್ಯ ಅಭಿನಯದ ʻರಂಗಬಲಿʼ ಸಿನಿಮಾ ಬಿಡುಗಡೆಗೊಂಡು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಸಿನಿಮಾ ಸಕ್ಸೆಸ್‌ ಮೀಟ್‌ವನ್ನು ಚಿತ್ರತಂಡ ಆಯೋಜಿಸಿತ್ತು. ಈ ಸಂದರ್ಭದಲ್ಲಿ ಚಿತ್ರತಂಡ ಮಾಧ್ಯಮದವರೊಂದಿಗೆ ಪ್ರಶ್ನೋತ್ತರ ಕಾರ್ಯಕ್ರಮ ನಡೆಸಿತು. ಹೀಗಿರುವಾಗ ಪತ್ರಕರ್ತರೊಬ್ಬರು ನಾಗ ಶೌರ್ಯ ಅವರಿಗೆ ಕೇಳಿದ ಪ್ರಶ್ನೆ ನಟನಿಗೆ ಸಿಟ್ಟು ಬರುವಂತೆ ಮಾಡಿದ್ದು, ನಟ ಕಾರ್ಯಕ್ರಮದಿಂದ ಸಿಟ್ಟಾಗಿ ಎದ್ದು ಹೋಗಿದ್ದಾರೆ. ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ನಾಗ ಶೌರ್ಯ ಅವರ ಈ ವರ್ತನೆ ನೆಟ್ಟಿಗರು ಮತ್ತು ಸಿನಿಪ್ರೇಮಿಗಳಿಗೆ ಅಚ್ಚರಿ ಮೂಡಿಸಿದೆ.

ಕತೆ ನಡೆಯುವ ಕಾಲವನ್ನು ಸಿನಿಮಾದಲ್ಲಿ ತಪ್ಪಾಗಿ ತೋರಿಸಿರುವ ಬಗ್ಗೆ ಪತ್ರಕರ್ತರೊಬ್ಬರು ಪ್ರಶ್ನೆ ಮಾಡಿದರು. ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದ ನಿರ್ದೇಶಕ ಪವನ್ ಬಸಮಸೆಟ್ಟಿ ಉತ್ತರಿಸಲು ಪ್ರಯತ್ನಿಸಿದರು. ಆದರೆ ಪತ್ರಕರ್ತರು ಅವರು ನೀಡಿದ ಉತ್ತರದಿಂದ ತೃಪ್ತರಾಗಲಿಲ್ಲ. ಆಗ ನಾಗಶೌರ್ಯ ಅವರು ಪವನ್ ಅವರಿಂದ ಮೈಕ್ ತೆಗೆದುಕೊಂಡು ಪತ್ರಕರ್ತರಿಗೆ ಉತ್ತರಿಸಿದರು. ಸಿನಿಮಾದಲ್ಲಿ ಪ್ರತಿ ನಿಮಿಷದ ಮಾಹಿತಿ ನೀಡಬೇಕು ಎಂದರೆ ಪ್ರತಿ ಸಿನಿಮಾವನ್ನು 24 ಗಂಟೆಗಳ ಕಾಲ ಪ್ರದರ್ಶಿಸಬೇಕಾಗುತ್ತದೆ. ಬಾಹುಬಲಿ ಸಿನಿಮಾ 20-30 ವರ್ಷಗಳಲ್ಲಿ ನಡೆಯುವ ಕತೆ ಆ ಸಿನಿಮಾದ ಪ್ರತಿ ಡೀಟೇಲ್ ನೀಡಲು ಸಾಧ್ಯವಾಗುತ್ತದೆಯೇ? ಹಾಗೆಯೇ ಕೆಲವು ವಿಷಯಗಳನ್ನು ನಂಬಿ ಕೈಬಿಡಬೇಕು ಅದನ್ನು ಹೀಗೆ ಎಳೆದಾಡಬಾರದು” ಎಂದು ಸಿಟ್ಟಿನಿಂದ ಹೇಳಿದ್ದಾರೆ. ಇದಾದ ಬಳಿಕ ನಿರೂಪಕಿಗೆ ಮೈಕ್‌ ಕೊಟ್ಟು ಅಲ್ಲಿಂದ ಹೊರ ನಡೆದಿದ್ದಾರೆ.

ಪವನ್ ಬಸಮಶೆಟ್ಟಿ ನಿರ್ದೇಶನದ ರಂಗಬಲಿ ಪ್ರೇಕ್ಷಕರಿಂದ ಸಾಮಾನ್ಯ ಪ್ರತಿಕ್ರಿಯೆ ಪಡೆದಿದೆ. ಮೊದಲನೇ ದಿನ 1.15 ಕೋಟಿ ರೂ. ಗಳಿಕೆ ಕಂಡಿದೆ. ಇಲ್ಲಿಯವರೆಗೆ, ಚಿತ್ರವು 2.40 ಕೋಟಿ ರೂ. ಗಳಿಸಿದೆ. ನಾಗ ಶೌರ್ಯ ಅವರ ಈ ವರ್ತನೆ ನೆಟ್ಟಿಗರು ಮತ್ತು ಸಿನಿಪ್ರೇಮಿಗಳಿಗೆ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ: Actor Naga Shourya | ಬೆಂಗಳೂರು ಮೂಲದ ಹುಡುಗಿ ಜತೆ ಸಪ್ತಪದಿ ತುಳಿಯಲಿದ್ದಾರೆ ತೆಲುಗು ನಟ ನಾಗ ಶೌರ್ಯ!

ಇದುವರೆಗೆ 23 ಸಿನಿಮಾಗಳಲ್ಲಿ ನಟಿಸಿದ್ದು, 2018ರಲ್ಲಿ ಬಿಡುಗಡೆಯಾಗಿದ್ದ ‘ಚಲೋ’ ಸಿನಿಮಾ ಅವರಿಗೆ ಹೆಚ್ಚಿನ ಖ್ಯಾತಿ ತಂದುಕೊಟ್ಟಿತ್ತು. ಇದರಲ್ಲಿ ಕನ್ನಡದ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದರು. ರಶ್ಮಿಕಾ ಮಂದಣ್ಣ ಅವರಿಗೆ ಕಾಲಿವುಡ್‌ನಲ್ಲಿ ಇದು ಮೊದಲ ಸಿನಿಮಾ ಆಗಿದೆ.

Exit mobile version