Site icon Vistara News

ಶೋ ಮ್ಯಾನ್ ಪ್ರಶಾಂತ್ ನೀಲ್ Birthday: ಪ್ಯಾನ್‌ ಇಂಡಿಯಾ ಸ್ಟಾರ್‌ಗಳ ಸಮಾಗಮ

ಬೆಂಗಳೂರು : ನಿರ್ದೇಶಕ ಪ್ರಶಾಂತ್‌ ನೀಲ್‌ ಸ್ಯಾಂಡಲ್‌ವುಡ್‌ ಒಂದೇ ಅಲ್ಲ. ದೇಶಾದ್ಯಂತ ಖ್ಯಾತಿ ಪಡೆದ ನಿರ್ದೇಶಕ.  ಪರಭಾಷೆಯ ಕಲಾವಿದರೊಂದಿಗೂ ಸಿನಿಮಾ ಮಾಡುತ್ತಿರುವ ಕ್ರಿಯೇಟಿವ್‌ ಡೈರೆಕ್ಟರ್‌ ಪ್ರಶಾಂತ್‌ ನೀಲ್‌ಗೆ ಜೂನ್‌ 4 ಜನ್ಮದಿನ. ಪ್ರಶಾಂತ್‌ ನೀಲ್‌ ಬರ್ತ್‌ಡೇ ಪ್ರಯುಕ್ತ ಹೊಂಬಾಳೆ ಫಿಲ್ಮ್ಸ್‌ ಪಾರ್ಟಿಯನ್ನು ಅದ್ದೂರಿಯಾಗಿ ಆಚರಿಸಿದೆ.

ಹೊಂಬಾಳೆ ಫಿಲ್ಮ್ಸ್‌ ಸಂಸ್ಥೆಯ ವಿಜಯ್‌ ಕಿರಗಂದೂರು, ಕೆಜಿಎಫ್‌ ಚಾಪ್ಟರ್‌ -2, ಸಿನಿಮಾ ನಟ ಯಶ್‌ ಸೇರಿದಂತೆ ಹಲವಾರು ನಟರು ಭಾಗಿಯಾಗಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ ನಿರ್ದೇಶಕ ಪ್ರಶಾಂತ್‌ ನೀಲ್‌ 42ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

ಇದನ್ನೂ ಓದಿ | ಜೂ.3ರಿಂದ ಅಮೆಜಾನ್‌ ಪ್ರೈಮ್‌ನಲ್ಲಿ ಕೆಜಿಎಫ್‌ -2 ಲಭ್ಯ; ಹೆಚ್ಚುವರಿ ಹಣ ಪಾವತಿಸಬೇಕಿಲ್ಲ!

ಪ್ರಶಾಂತ್,  ಯಶ್, ವಿಜಯ್ ಕಿರಗಂದೂರು ಹಾಗೂ ಅವರ ಪತ್ನಿ ಶೈಲಜಾ ಕಿರಗಂದೂರು ಒಟ್ಟಿಗೆ ಭೇಟಿಯಾಗಿರುವ ಫೋಟೋಸ್ ಇದೀಗ ವೈರಲ್ ಆಗಿವೆ. ಕೆಜಿಎಫ್ 2, ಪ್ಯಾನ್‌ ಇಂಡಿಯಾದಲ್ಲಿ 50ದಿನಗಳನ್ನು ಪೂರೈಸಿದ ಪ್ರಯುಕ್ತ ಮತ್ತು ಪ್ರಶಾಂತ್ ಹುಟ್ಟುಹಬ್ಬ ಡಬಲ್ ಸಂಭ್ರಮವನ್ನ ಆಚರಿಸಿದ್ದಾರೆ.

ಕೆಜಿಎಫ್ 2, ಪ್ಯಾನ್‌ ಇಂಡಿಯಾದಲ್ಲಿ 50 ದಿನಗಳನ್ನು ಪೂರೈಸಿದ ಪ್ರಯುಕ್ತ ಮತ್ತು ಹುಟ್ಟುಹಬ್ಬದ ಡಬಲ್ ಸಂಭ್ರಮವನ್ನ ಪ್ರಶಾಂತ್‌ ಆಚರಿಸಿದ್ದಾರೆ. ವಿಶೇಷ ಅಂದರೆ ಹೈದರಾಬಾದ್‌ನಿಂದ ಬೆಂಗಳೂರಿಗೆ ಟಾಲಿವುಡ್‌ ನಟ ಪ್ರಭಾಸ್‌ ಹುಟ್ಟುಹಬ್ಬಕ್ಕೆ ಬಂದಿದ್ದಾರೆ. ಪೋಟೋಗಳು ಕೂಡ ಸಕತ್‌ ವೈರಲ್‌ ಆಗಿದ್ದು, ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮುಂದಿನ ನಡೆಯತ್ತ ನೀಲ್‌

ಪ್ರಶಾಂತ್‌ ನೀಲ್‌ ಅವರು ಕೆಜಿಎಫ್‌ ಹಿಟ್‌ ಆದ ಕೂಡಲೇ ಪ್ರಭಾಸ್‌ ಜತೆ ಸಲಾರ್‌ ಸಿನಿಮಾ ಮಾಡಲು ಮುಂದಾಗಿದ್ದಾರೆ. ಪ್ರಶಾಂತ್‌ ನೀಲ್‌ ಕೇವಲ ಡೈರೆಕ್ಟರ್‌ ಮಾತ್ರವಲ್ಲ. ಒಳ್ಳೆಯ ಕಥೆ ಬರಹಗಾರನೂ ಹೌದು. ಉಗ್ರಂ ಸಿನಿಮಾ ಮೂಲಕ ಡೈರೆಕ್ಷನ್‌ಗೆ ಇಳಿದ ಪ್ರಶಾಂತ್‌ ಇದೀಗ ವಿಶ್ವದಲ್ಲಿಯೇ ಹೆಸರು ಮಾಡಿದ ವ್ಯಕ್ತಿ.

ರೋರಿಂಗ್‌ ಸ್ಟಾರ್‌ ನಟ ಶ್ರೀ ಮುರುಳಿಯ ಬಘೀರ ಚಿತ್ರಕ್ಕೂ ಕಥೆ ಬರೆದಿದ್ದಾರೆ ಎನ್ನುವುದು ವಿಶೇಷ. ಶನಿವಾರ ಚಿತ್ರೀಕರಣ ಶುರುವಾಗಿದ್ದು, ತಮ್ಮ ಇ‌ನ್‌ಸ್ಟಾಗ್ರಾಂ ಮೂಲಕ ಹೇಳಿಕೊಂಡಿದ್ದರು.

ಇದನ್ನೂ ಓದಿ | ರಶ್ಮಿಕಾ ಹಾದಿಯಲ್ಲಿ ಕೆಜಿಎಫ್‌ ನಾಯಕಿ ಶ್ರೀನಿಧಿ ಶೆಟ್ಟಿ; ಸಂಭಾವನೆ ಮೊತ್ತದಲ್ಲಿ ಭರ್ಜರಿ ಏರಿಕೆ !

ಜೂನಿಯರ್‌ ಎನ್‌ಟಿಆರ್‌ ಜತೆ ಕೂಡ ಚಿತ್ರವನ್ನು ಮಾಡುತ್ತಿದ್ದು, ತಿಂಗಳ ಹಿಂದೆಯಷ್ಟೇ ಇನ್‌ಸ್ಟಾಗ್ರಾಂ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದರು. ಈ ಕುರಿತಂತೆ ನಿರ್ದೇಶಕ ಪ್ರಶಾಂತ್‌ ನೀಲ್‌ ಫಸ್ಟ್‌ ಲುಕ್‌ ರಿಲೀಸ್‌ ಮಾಡಿ, ʼʼರಕ್ತದಲ್ಲಿ ತೋಯ್ದ ಮಣ್ಣು ಮಾತ್ರ ನೆನಪಾಗಬೇಕಿರುವುದು. ಅವನ ಮಣ್ಣು, ಅವನ ಆಳ್ವಿಕೆ. ಆದರೆ ಖಂಡಿತವಾಗಿಯೂ ಅವನ ರಕ್ತವಲ್ಲ ʼʼ ಎಂದು ಕ್ಯಾಪ್ಷನ್‌ ನೀಡುವುದರ ಮೂಲಕ ಅಭಿಮಾನಿಗಳಿಗೆ ಝಲಕ್‌ ಕೊಟ್ಟಿದ್ದರು.

ಪ್ರಶಾಂತ್‌ ನೀಲ್‌ ಸಿನಿ ಪಯಣ

ರೋರಿಂಗ್‌ ಸ್ಟಾರ್‌ ಮುರುಳಿ ಅಭಿನಯದ ಉಗ್ರಂ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕನಾಗಿ ಪಾದಾರ್ಪಣೆ ಮಾಡಿದವರು ಪ್ರಶಾಂತ್‌ ನೀಲ್‌. ಉಗ್ರಂ ಬ್ಲಾಕ್‌ ಬಸ್ಟರ್‌ ಮೂವಿಯಾಗಿ ಹೊರಹೊಮ್ಮಿತು. 2018ರಲ್ಲಿ ಕೆಜಿಎಫ್‌ ಚಿತ್ರವನ್ನು ಮಾಡಿದ ಪ್ರಶಾಂತ್‌, ಪ್ಯಾನ್‌ ಇಂಡಿಯಾ ಲೆವಲ್‌ಗೆ ತೆಗೆದುಕೊಂಡು ಹೋದರು. ಪ್ರಶಾಂತ್‌ ನೀಲ್‌ ಕೇವಲ ನಿರ್ದೇಶಕರು ಮಾತ್ರವಲ್ಲ, ಒಳ್ಳೆಯ ಚಿತ್ರಕಥೆ ಬರಹಗಾರ.

ಇದನ್ನೂ ಓದಿ | ಕೆಜಿಎಫ್‌ ಸ್ಟಾರ್‌ ಯಶ್‌ ಲಕ್ಷುರಿ ಲೈಫ್‌ಸ್ಟೈಲ್‌ ಹೇಗಿದೆ ನಿಮಗೆ ಗೊತ್ತೆ?

ಉಗ್ರಂ, ಕೆಜಿಎಫ್‌ 1 ಮತ್ತು ಕೆಜಿಎಫ್‌-2 ಹಾಗೂ ಉಗ್ರಂ ವೀರಂಗೆ ಚಿತ್ರಕಥೆ ಬರೆದಿದ್ದಾರೆ. ಇನ್ನೂ ಮುರುಳಿ ಅವರ ಮುಂಬರುವ ಬಘೀರ ಚಿತ್ರಕ್ಕೂ ಕಥೆಯನ್ನು ಬರೆದಿದ್ದಾರೆ.

ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡ ನೀಲ್‌, ಫಿಲ್ಮ್‌ಫೇರ್‌ , ಸೈಮ, ಫಿಲ್ಮಿಬೀಟ್‌ ಜೀ ಕನ್ನಡ ಹೆಮ್ಮೆಯ ಕನ್ನಡಿಗ ಮುಂತಾದ ಸಾಕಷ್ಟು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅತ್ತುತ್ತಮ ನಿರ್ದೇಶಕ, ಅತ್ಯುತ್ತಮ ಡೆಬ್ಯೂಟಂಟ್‌ ಡೈರೆಕ್ಟರ್‌ ಎಂಬ ಬಿರುದುಗಳಿಗೂ ಪಾತ್ರವಾಗಿದ್ದಾರೆ ನೀಲ್‌. ಸಿನಿಮಾ ರಂಗಕ್ಕೆ ಇಳಿದಾಗಿನಿಂದಲೂ ತಮ್ಮ ಪ್ರತೀ ಸಿನಿಮಾದಲ್ಲಿ ಗೆದ್ದು, ನಗೆ ಬೀರಿರುವ ಏಕೈಕ ಡೈರೆಕ್ಟರ್‌ ಅಂದರೆ ಪ್ರಶಾಂತ್‌ ನೀಲ್‌.

ಕೆಜಿಎಫ್‌-2, 50ರ ಸಂಭ್ರಮ

ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಬಾಚಿರುವ ಕೆಜಿಎಫ್ 2 ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿ 100ನೇ ದಿನದತ್ತ ಮುಖಮಾಡಿದೆ. ಇದರ ಪ್ರಯುಕ್ತ ನಿರ್ಮಾಪಕ ವಿಜಯ್ ಕಿರಗಂದೂರು, ಯಶ್, ಪ್ರಶಾಂತ್ ನೀಲ್ 50ನೇ ದಿನದ ಸಂತಸವನ್ನ ಕೇಕ್ ಕಟ್ ಮಾಡುವ ಮೂಲಕ ಸಂತಸ ವ್ಯಕ್ತ ಪಡಿಸಿದ್ದಾರೆ.

ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ಈ ಸಿನಿಮಾ ಸಂಭ್ರಮದ ಫೋಟೋಗಳನ್ನು ತಮ್ಮ ಇನ್‌ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನೀಲ್‌ ಕೆಜಿಎಫ್‌ ಜರ್ನಿ

ಕೆಜಿಎಫ್‌ ಗೆಲುವಿನ ಹಿಂದೆ ದೊಡ್ಡ ಜರ್ನಿ ಇದೆ. ಕೆಜಿಎಫ್‌ ಎರಡು ಭಾಗ ಎಂದು ನಿರ್ಧಾರ ಆದಾಗ ಕೆಜಿಎಫ್‌ 1ಕ್ಕೆ ಬೇಕಾದ ಕೆಲವು ಅಂಶಗಳನ್ನು ತುಂಬಿಸಬೇಕಾಗಿತ್ತು. ವಿಜಯ್‌ ಕಿರಗಂದೂರ್‌ ಅವರ ಪಾತ್ರ ಇಲ್ಲಿ ದೊಡ್ಡದಿದ್ದು, ಅವರು ಇಲ್ಲದೇ ಕೆಜಿಎಫ್‌ ಸಕ್ಸಸ್‌ ಅಗುತ್ತಿರಲಿಲ್ಲ.

ಕೆಜಿಎಫ್‌ ಮೊದಲು ಸೆಟ್‌ ಹಾಕಿದ್ದಾಗ, ಸೆಟ್‌ ಬಿದ್ದು ಹೋಗಿತ್ತು. ನಂತರ 3-4 ಕೋಟಿ ಖರ್ಚಾಗಿತ್ತು. ಆದರೆ ಕಿರಗಂದೂರು ನಮಗೆ ಸಾತ್‌ ನೀಡಿದ್ದರು. ಕೆಜಿಎಫ್‌ ಎನ್ನುವುದೇ ಒಂದು ಫ್ರಾಂಚೈಸ್‌. ಫ್ರಾಂಚೈಸ್‌ ಎನ್ನುವುದೇ  ಒಂದು ಬ್ಯುಸಿನೆಸ್‌. ಅದು ಯಾವತ್ತೂ ಸಾಯುವುದಿಲ್ಲ.

ಯಶ್‌ ಕೂಡ ನನ್ನ ಕೆಲಸ ಮುಗಿಯಿತು ಎಂದು ಯಾವತ್ತೂ ಇದ್ದವರಲ್ಲ. ಅವರ ಹಾರ್ಡ್‌ವರ್ಕ್‌ ಇಲ್ಲಿ ತುಂಬಾ ಮುಖ್ಯವಾಗಿದೆ. ಯಶ್‌ ಪಾತ್ರಕ್ಕೆ ಅವರೇ ಸಂಭಾಷಣೆ ಬರೆದಿದ್ದಾರೆ. ಎಲ್ಲ ಟೆಕ್‌ನಿಷಿಯನ್‌ ಹಾರ್ಡ್‌ ವರ್ಕ್‌ ಇದರಲ್ಲಿ ಇದೆ. ಇದೀಗ ವಿಶ್ವದ್ಯಾದ್ಯಂತ 1000 ಕೋಟಿಗೂ ಹೆಚ್ಚು ಕಲೆಕ್ಷನ್‌ ಮಾಡಿದೆ, ಜನರ ಪ್ರೀತಿ ಸದಾ ನಮ್ಮ ಮೇಲೆ ಇರಲಿ ಎಂದು ನೀಲ್‌ ಮನದಾಳದ ಮಾತು ಹಂಚಿಕೊಳ್ಳುತ್ತಾರೆ.

ಇದನ್ನೂ ಓದಿ | ʼರಾಕಿ ಭಾಯ್‌ʼ ಬೆಸ್ಟ್‌ ಎಂದ ಶಿವಣ್ಣ: KGF-2 ಬಗ್ಗೆ ಶಿವರಾಜಕುಮಾರ್‌ ಮಾತು

Exit mobile version