Site icon Vistara News

Prashanth Neel | ಟ್ರೋಲಿಗರಿಗೆ ಹೆದರಿ ಸೋಷಿಯಲ್‌ ಮೀಡಿಯಾವನ್ನೇ ತೊರೆದರಾ ಕೆಜಿಎಫ್‌ ಡೈರೆಕ್ಟರ್ ಪ್ರಶಾಂತ್ ನೀಲ್?‌

ಬೆಂಗಳೂರು: ಕನ್ನಡದ ಕೆಜಿಎಫ್‌ ಸಿನಿಮಾದ ನಿರ್ದೇಶಕ ಕೆಜಿಎಫ್‌ ಕ್ಯಾಪ್ಟನ್‌ ಎಂದೇ ಕರೆಸಿಕೊಂಡಿರುವ ಪ್ರಶಾಂತ್‌ ನೀಲ್‌ (Prashanth Neel) ಅವರು ಇದ್ದಕ್ಕಿದ್ದಂತೆ ಸಾಮಾಜಿಕ ಜಾಲತಾಣಗಳಿಂದ ಹೊರಬಂದಿದ್ದಾರೆ. ಯಶ್‌ಗೆ ಹುಟ್ಟಿದ ಹಬ್ಬದ ಶುಭ ಹಾರೈಸಿದ್ದ ಅವರ ಪೋಸ್ಟ್‌ ಟ್ರೋಲ್‌ಗೆ ಒಳಗಾದ ಬೆನ್ನಲ್ಲೇ ಅವರು ಸಾಮಾಜಿಕ ಜಾಲತಾಣಗಳಿಂದ ಹೊರಬಂದಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: Actor Prabhas | ʻಸಲಾರ್‌ʼ ಬಗ್ಗೆ ಹೊಸ ಅಪ್‌ಡೇಟ್‌: ನಿಜಾನಾ ಅಂತಿದ್ದಾರೆ ಫ್ಯಾನ್ಸ್‌!

ಪ್ರಶಾಂತ್‌ ನೀಲ್‌ ಅವರು ಯಶ್‌ ಅವರ ಜನ್ಮದಿನದಂದು ಯಶ್‌ಗೆ ಉರ್ದುವಿನಲ್ಲಿ ಶುಭ ಹಾರೈಸಿದ್ದರು. ಕೆಜಿಎಫ್‌ ಸಿನಿಮಾದಲ್ಲಿ ನಟಿ ಈಶ್ವರಿ ರಾವ್‌ ಅವರು ರಾಕಿ ಭಾಯ್‌ಗೆ ಹೇಳುವ ಸಾಲುಗಳು ನಿಮಗೆ ನೆನಪಿರಬಹುದು. “ಫಲಕ್‌ ಕಾ ದಸ್ತೂರ್.. ಖುದಾ ಕಾ ಹುಕುಮ್.. ಔರ್‌ ಏಕ್ ಭಾಯಿ ಕೀ ದುವಾ ಹೈ.. ಕೀ ಹಾತೋಂ ಕೀ.. ಲಕೀರೋ ಕೋ ಭೀ ರುಕ್ಸತ್‌ ಕರ್.. ರೋಕ್ನೇಸೆ ಭೀ ನಹೀ ರುಕೇಗಿ.. ತುಮ್ಹಾರಿ ಯೇ ಸಲ್ತನತ್” ಎಂದು ಈಶ್ವರಿ ಅವರು ರಾಕಿ ಭಾಯ್‌ಗೆ ಹೇಳಿದ್ದರು. ಪ್ರಶಾಂತ್‌ ಅವರು ಇದೇ ಸಾಲುಗಳನ್ನು ಬರೆದು ಯಶ್‌ಗೆ ಹುಟ್ಟುಹಬ್ಬದ ಶುಭ ಕೋರಿದ್ದರು.‌


ಪ್ರಶಾಂತ್‌ ನೀಲ್‌ ಅವರ ಈ ಟ್ವೀಟ್‌ ಅನೇಕರ ಆಕ್ರೋಶಕ್ಕೆ ಕಾರಣವಾಗಿತ್ತು. “ಕನ್ನಡಿಗರಾಗಿದ್ದುಕೊಂಡು ಉರ್ದುವಿನ ಬಗ್ಗೆ ನಿಮಗೆ ಯಾಕಿಷ್ಟು ಮೋಹ?” ಎಂದು ಅನೇಕರು ಪ್ರಶ್ನಿಸಿದ್ದರು. ಕನ್ನಡದ ನೀರು ಕುಡಿದವರಿಗೆ ಈಗ ಕನ್ನಡ ಮರೆತುಹೋಗಿದೆ ಎಂದು ವ್ಯಂಗ್ಯವನ್ನೂ ಮಾಡಿದ್ದರು. ಹಲವು ಟ್ವೀಟ್‌ಗಳು ಸಭ್ಯತೆಯನ್ನು ಮೀರಿದ್ದವು.
ಅದೇ ಬೆನ್ನಲ್ಲಿ ಪ್ರಶಾಂತ್‌ ನೀಲ್‌ ಅವರು ಟ್ವಿಟರ್‌ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳನ್ನು ಡಿಆಕ್ಟಿವೇಟ್‌ ಮಾಡಿದ್ದಾರೆ. ತಮ್ಮ ಈ ನಡೆಗೆ ಯಾವುದೇ ಕಾರಣಗಳನ್ನು ಅವರು ಕೊಟ್ಟಿಲ್ಲ.

ಇದನ್ನೂ ಓದಿ: Actor Yash | ಕೆಜಿಎಫ್‌-3 ಚಿತ್ರದಿಂದ ‘ರಾಕಿಭಾಯ್’ ಯಶ್ ಔಟ್? ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ್ದೇನು?

ಕೆಜಿಎಫ್‌ ಸಿನಿಮಾ ಸಕ್ಸಸ್‌ ನಂತರ ಪ್ರಶಾಂತ್‌ ಅವರು ಬೇರೆ ಭಾಷೆಗಳಿಗೆ ಹಾರಿದ್ದರು. ತೆಲುಗುವಿನಲ್ಲಿ ಪ್ರಭಾಸ್‌, ಜೂನಿಯರ್‌ ಎನ್‌ಟಿಆರ್‌ ಜತೆ ಸಿನಿಮಾಗಳನ್ನು ಮಾಡಿದ್ದರು. ಈ ಬಗ್ಗೆ ಕನ್ನಡಿಗರು ಗರಂ ಆಗಿದ್ದರು. ಕನ್ನಡದಲ್ಲಿ ಹೆಸರು ಸಿಕ್ಕ ಮೇಲೆ ಬೇರೆ ಭಾಷೆಗೆ ಹಾರಿದ್ದೇಕೆ ಎಂದು ಪ್ರಶ್ನಿಸಿದ್ದರು.

Exit mobile version