Site icon Vistara News

Puneeth Rajkumar: ಯುವರತ್ನನ ಸವಿಸವಿ ನೆನಪು

Puneeth Rajkumar
#image_title

: ಆನಂದ ಜೇವೂರ್, ಕಲಬುರಗಿ

ಸೂರ್ಯನೊಬ್ಬ, ಚಂದ್ರನೊಬ್ಬ, ರಾಜನು ಒಬ್ಬ…. ಅಪ್ಪು ಕರುನಾಡಿನ ರತ್ನ, ನಗು ಮುಖದ ರಾಜಕುಮಾರ. ಶಾಲೆಯಲ್ಲಿದ್ದಾಗ ಅಪ್ಪು, ಮಿಲನ, ಜಾಕಿ, ಪೃಥ್ವಿ ಹೀಗೆ ಅವರ ಸಿನಿಮಾ ಜೊತೆಗೆ ಕನ್ನಡ ಕೋಟ್ಯಧಿಪತಿ, ಫ್ಯಾಮಿಲಿ ಪವರ್ ರಿಯಾಲಿಟಿ ಶೋಗಳನ್ನು ನೋಡುತ್ತಾ ಬೆಳೆದಿರುವೆ. ಪುನೀತ್ ರಾಜಕುಮಾರ್ ಅವರು ಸ್ಫೂರ್ತಿಯ ಸೆಲೆ. ಯುವರತ್ನರಿಂದ ಕಲಿತ ಹಲವು ವಿಚಾರಗಳಲ್ಲಿ 2 ಜೀವನದ ಪಾಠಗಳು ನಾನು ಹೇಳುವೆ.

ಸರಳ ಜೀವನ ತುಂಬಾ ವಿರಳ

ಈಗಿನ ಕಾಲದಲ್ಲಿ ಬಡವರಿಗೆ ಒಂದು ಚಿಕ್ಕ ಕಿಟ್ ಕೊಟ್ಟರು ಒಂದು ಫೋಟೋ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವ ಟ್ರೆಂಡ್ ಕಾಣಬಹುದು. ಇಷ್ಟೇ ಅಲ್ಲ ಬಣ್ಣದ ಚಿಟ್ಟೆಯಂತೆ ತಮ್ಮ ಮಾತಿನಿಂದ ನಾಡಿಗೆ ಬೆಂಕಿ ಹಚ್ಚುವುದು, ಮೋಸ ಮಾಡಿದವರನ್ನು ನಾವು ನೋಡಿರುತ್ತೇವೆ. ಆದರೆ ಅಪ್ಪು ತೆರೆಯ ಮೇಲೆ ಮಾತ್ರವಲ್ಲ ನಿಜ ಜೀವನದಲ್ಲೂ ಹೀರೋ. “ಎಡಗೈಯಿಂದ ಮಾಡಿದ ಸಹಾಯ ಬಲಗೈಗೂ ತಿಳಿಯಬಾರದೆಂಬ” ಮಾತಿನಂತೆ ಲಕ್ಷಾಂತರ ಜನರಿಗೆ ಸಹಾಯ ಮಾಡಿದರೂ ಎಲ್ಲಿಯೂ ಪ್ರಚಾರ ಮಾಡಲಿಲ್ಲ. ಮಾತ್ರವಲ್ಲ, ಯಾವಾಗಲೂ ಒಳ್ಳಯದನ್ನೇ ಮಾತನಾಡಬೇಕು, ಯೋಚಿಸಬೇಕು, ನಮ್ಮ ಬಗ್ಗೆ ಯೋಚಿಸುವವರ ಬಗ್ಗೆ ಯೋಚಿಸಿ ಎಂದು ಹೇಳುತ್ತಿದ್ದರು. ನಿಜ ಅಲ್ವಾ ಈ ಮಾತು ಪಾಲಿಸಿದರೆ, ನಮ್ಮ ಬದುಕು ಆನಂದಮಯ.

ಕಾಡುವ ಅದೊಂದು ದಿನ

21 ಮಾರ್ಚ್ 2021ರಂದು ಅಪ್ಪು ಯುವರತ್ನ ತಂಡದೊಂದಿಗೆ ಕಲಬುರಗಿಗೆ ಆಗಮಿಸಿದರು. ಆದರೆ ಅಂದು ನಾನು ಹೋಗದೆ ಮಿಸ್ ಮಾಡಿಕೊಂಡಿರುವುದು ಇಂದಿಗೂ ಕಾಡುತ್ತದೆ. ಜೊತೆಗಿರದ ಜೀವ ಎಂದಿಗೂ ಜೀವಂತ. ಅಪ್ಪು ಅವರ ಬದುಕು ನಮಗೆಲ್ಲರಿಗೂ ಸ್ಫೂರ್ತಿ. ಹಾಗಾಗಿ ಅವರ ಮಾತುಗಳನ್ನು ನಮ್ಮ ಜೀವನದಲ್ಲಿ ಪಾಲಿಸುತ್ತಾ ಪುನೀತರಾಗೋಣ.

ಇದನ್ನೂ ಓದಿ: Puneeth Rajkumar: ರಾಘಣ್ಣನ ಕುಟುಂಬದಿಂದ ಅನ್ನದಾನ, ಸಸಿಗಳ ವಿತರಣೆ

Exit mobile version