Site icon Vistara News

Jagadeesh Prathap Bandari; ಮಹಿಳೆ ಆತ್ಮಹತ್ಯೆ; ‘ಪುಷ್ಪ’ ಚಿತ್ರದ ನಟ ಅರೆಸ್ಟ್​!

Pushpa actor Jagadeesh

ಬೆಂಗಳೂರು: ಅಲ್ಲು ಅರ್ಜುನ್ ಅಭಿನಯದ `ಪುಷ್ಪ’ (agadeesh Prathap Bandari) ಚಿತ್ರದ ಮೂಲಕ ಖ್ಯಾತಿ ಗಳಿಸಿದ್ದ ಟಾಲಿವುಡ್ ನಟ ಜಗದೀಶ್ ಪ್ರತಾಪ್ ಬಂಡಾರಿ ಅವರನ್ನು ಅರೆಸ್ಟ್‌ ಮಾಡಲಾಗಿದೆ. ಮಹಿಳೆಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಅಂಜಗುಟ್ಟ ಪೊಲೀಸರು ಬುಧವಾರ (ಡಿ.6) ಬಂಧಿಸಿದ್ದಾರೆ. ಜಗದೀಶ್​ ನೀಡಿದ ಕಿರುಕುಳ ತಾಳಲಾಗದೇ ಆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೊಲೀಸರ ಪ್ರಕಾರ, ಜಗದೀಶ್ ಮತ್ತು ಆಕೆ ಕಿರುಚಿತ್ರಗಳಲ್ಲಿ ಕೆಲಸ ಮಾಡುವಾಗ ಸ್ನೇಹಿತರಾಗಿದ್ದರು. ಮಹಿಳೆ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಸಿನಿಮಾದ ಬಗ್ಗೆ ಒಲವು ಹೊಂದಿದ್ದ ಕಾರಣ ಆಕೆಗೆ ಜಗದೀಶನ ಪರಿಚಯವಾಗಿತ್ತು. ಕೆಲವು ದಿನಗಳ ಕಾಲ ಸಂಬಂಧದಲ್ಲಿದ್ದ ನಂತರ ಅವರು ಬೇರೆಯಾದರು. ಸಹ ನಟಿಯು ಬೇರೆ ಪುರುಷನ ಜತೆ ಖಾಸಗಿಯಾಗಿದ್ದ ಕ್ಷಣದ ಕೆಲವು ಫೋಟೊಗಳನ್ನು ಜಗದೀಶ್​ ಕ್ಲಿಕ್ಕಿಸಿಕೊಂಡಿದ್ದರು. ಅವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್​ಲೋಡ್​ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ಮನನೊಂದ ಮಹಿಳೆಯು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಆಕೆಯ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು. ಆಕೆ ಮೃತಪಟ್ಟ ಬಳಿಕ ಜಗದೀಶ್ ತಲೆಮರೆಸಿಕೊಂಡಿದ್ದ ಎಂದು ವರದಿಯಾಗಿದೆ. ಆದರೆ ಬುಧವಾರ (ಡಿಸೆಂಬರ್ 6) ಅವರನ್ನು ಬಂಧಿಸಿ, ಕೋರ್ಟ್​ಗೆ ಹಾಜರುಪಡಿಸಲಾಗಿದೆ. ‘ಪುಷ್ಪ’ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಅವರ ಸ್ನೇಹಿತನಾಗಿ ಕೇಶವ್​ ಎಂಬ ಪಾತ್ರವನ್ನು ಜಗದೀಶ್ ಮಾಡಿದ್ದಾರೆ. ‘ಪುಷ್ಪ 2’ ಸಿನಿಮಾದಲ್ಲೂ ಅವರ ಪಾತ್ರ ಇದೆ.

ಇದನ್ನೂ ಓದಿ: Childrens Day: ʼಚಾಚಾ ನೆಹರೂʼಗೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ; ಖರ್ಗೆ, ಸೋನಿಯಾರಿಂದ ಪುಷ್ಪನಮನ

ಕೆಲಸದ ಮುಂಭಾಗದಲ್ಲಿ, ಜಗದೀಶ್ ಕೊನೆಯದಾಗಿ ಮೈತ್ರಿ ಮೂವೀ ಮೇಕರ್ಸ್‌ನ ಸಣ್ಣ ಬಜೆಟ್ ಸಿನಿಮಾ ಸತ್ತಿಗಾನಿ ರೆಂಡು ಯೇಕರಾಲು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.ನಿತಿನ್ ಮತ್ತು ಶ್ರೀಲೀಲಾ ಅವರ ಎಕ್ಸ್‌ಟ್ರಾ ಆರ್ಡಿನರಿ ಮ್ಯಾನ್ ಮತ್ತು ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಅಂಬಾಜಿಪೇಟ ಮ್ಯಾರೇಜ್ ಬ್ಯಾಂಡ್‌ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Exit mobile version