Site icon Vistara News

Actor Rajinikanth: ರಜನಿಕಾಂತ್ ಕಂಡೊಡನೆ ʻತಲೈವಾʼ ಎಂದು ಕಿರುಚಿದ ಫ್ಯಾನ್ಸ್‌; ವಿಡಿಯೊ ವೈರಲ್‌!

Rajinikanth waves to fans outside his Chennai

ಬೆಂಗಳೂರು: ಸೂಪರ್ ಸ್ಟಾರ್ ʻರಜನಿಕಾಂತ್ʼ (Actor Rajinikanth) ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಚೆನ್ನೈನಲ್ಲಿ ಹೊಸ ವರ್ಷವನ್ನು ಆಚರಿಸಿಕೊಂಡರು. ಚೆನ್ನೈನ ಪೋಯಸ್ ಗಾರ್ಡನ್ ಮನೆಯ ಹೊರಗೆ ನೆರೆದಿದ್ದ ತಮ್ಮ ಅಭಿಮಾನಿಗಳನ್ನು ಕೈ ಬೀಸಿ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದಾರೆ. ಅಭಿಮಾನಿಗಳ ಶುಭ ಹಾರೈಕೆಗೆ ಧನ್ಯವಾದ ಕೂಡ ತಿಳಿಸಿದ್ದಾರೆ. ರಜನಿಕಾಂತ್ ಅವರು ‘ವೆಟ್ಟೈಯನ್’ ಚಿತ್ರೀಕರಣದಿಂದ ಸ್ವಲ್ಪ ಬ್ರೇಕ್‌ ತೆಗೆದುಕೊಂಡು ಪತ್ನಿ, ಲತಾ, ಪುತ್ರಿಯರು ಮತ್ತು ಮೊಮ್ಮಕ್ಕಳೊಂದಿಗೆ ವಿಶೇಷ ದಿನವನ್ನು ಕಳೆದಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಸ್ನೇಹಿತ ಹಾಗೂ ನಟ ವಿಜಯಕಾಂತ್ ಅವರ ಅಂತಿಮ ದರ್ಶನ ಪಡೆಯಲು ಎರಡು ದಿನಗಳ ಹಿಂದೆ ಚೆನ್ನೈಗೆ ಬಂದಿದ್ದರು. ಜನವರಿ 1ರಂದು ಚೆನ್ನೈನ ಪೋಯಸ್ ಗಾರ್ಡನ್ ನಿವಾಸದ ಹೊರಗೆ ಬಂದ ಅಭಿಮಾನಿಗಳಿಗೆ ರಜನಿಕಾಂತ್ ಶುಭಾಶಯ ಕೋರಿದರು. ರಜನಿ ಕಂಡು ಅವರ ಫ್ಯಾನ್ಸ್‌ ಕೈ ಬೀಸಿ ‘ತಲೈವಾ’ ಎಂದು ಕಿರುಚಿದ್ದಾರೆ. ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ರಜನಿಕಾಂತ್ ಶೀಘ್ರದಲ್ಲೇ ‘ವೆಟ್ಟೈಯನ್’ ಚಿತ್ರೀಕರಣವನ್ನು ಶುರು ಮಾಡಲಿದ್ದಾರೆ. ಇತ್ತೀಚೆಗೆ, ಶೂಟಿಂಗ್ ಸ್ಪಾಟ್‌ನಲ್ಲಿ ಫಹಾದ್ ಫಾಸಿಲ್ ಜತೆ ಇರುವ ಕ್ಲಿಪ್‌ ವೈರಲ್‌ ಆಗಿತ್ತು.

ಇದನ್ನೂ ಓದಿ: Actor Rajinikanth: ಪ್ರವಾಹದಿಂದಾಗಿ ರಜನಿಕಾಂತ್‌ಗೂ ಎಂತಹ ಪರಿಸ್ಥಿತಿ ಬಂತು ನೋಡಿ!

ವೆಟ್ಟೈಯನ್ (Vettaiyan) ಎಂದರೆ ತಮಿಳಿನಲ್ಲಿ ʼಬೇಟೆಗಾರ (Hunter) ಎಂದು ಅರ್ಥ. ಇದು ಮಲ್ಟಿಸ್ಟಾರರ್‌ ಚಿತ್ರವಾಗಿದ್ದು, ಅಮಿತಾಭ್‌ ಬಚ್ಚನ್, ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್ ಸೇರಿದಂತೆ ಪ್ರಮುಖ ಕಲಾವಿದರು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಿನಿಮಾ ಚಿತ್ರೀಕರಣ ಕೂಡ ಭರದಿಂದ ಸಾಗುತ್ತಿದೆ.ಲೈಕಾ ಪ್ರೊಡಕ್ಷನ್ಸ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದು,‌ ಸಿನಿಮಾಗೆ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಇರಲಿದೆ. ವೆಟ್ಟಯ್ಯನ್ ಟೈಟಲ್‌ ಟೀಸರ್‌ನಲ್ಲಿ ಲಾಠಿ ಹಿಡಿದು ರಜಿನಿಕಾಂತ್ ಸ್ಟೈಲಿಸ್ಟ್ ಆಗಿ ನಡೆದುಕೊಂಡು ಬಂದಿದ್ದಾರೆ. “ಬೇಟೆ ಆರಂಭವಾದಾಗ ಆಹಾರ ತಪ್ಪದೇ ಸಿಗುತ್ತದೆ” ಎಂಬದು ತಮಿಳಿನಲ್ಲಿ ಡೈಲಾಗ್ ಹೇಳಿದ್ದಾರೆ. ಸಿನಿಮಾದಲ್ಲಿ ರಜನಿಕಾಂತ್ ನಿವೃತ್ತ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದು, ಪ್ರಕರಣವೊಂದನ್ನು ರೀ ಓಪನ್ ಮಾಡಿ ನ್ಯಾಯ ಒದಗಿಸುವ ಕೆಲಸವನ್ನು ಮಾಡಲಿದ್ದಾರೆ ಎನ್ನಲಾಗಿದೆ.

Exit mobile version