Site icon Vistara News

Rashmika Mandanna: ಸಹಾಯಕಿಯ ಮೇಲೆ ರಶ್ಮಿಕಾ ಗರಂ; ಸಿಬ್ಬಂದಿ ತಡೆದರೂ ಕೂಲ್‌ ಆಗಲಿಲ್ಲ ನ್ಯಾಷನಲ್‌ ಕ್ರಶ್‌!

Rashmika Mandanna gets pretty upset, video goes viral

ಬೆಂಗಳೂರು: ರಶ್ಮಿಕಾ ಮಂದಣ್ಣ (Rashmika Mandanna) ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಮೇಕಪ್​ ಮಾಡಲು ಬಂದ ಸಹಾಯಕಿಯ ಮೇಲೆ ನಟಿ ಗರಂ ಆಗಿ, “ಟ್ಯಾಲೆಂಟ್​ಗೆ ಇಲ್ಲಿ ಬೆಲೆಯೇ ಇಲ್ಲ. ಟ್ಯಾಲೆಂಟ್​ಗೆ ಎಲ್ಲಿ ಬೆಲೆ ಇದೆಯೋ ಅಲ್ಲಿಗೆ ನಾನು ಹೋಗುತ್ತೇನೆ’ ಎಂದು ಎದ್ದು ಹೋಗಿರುವ ವಿಡಿಯೊ ವೈರಲ್‌ ಆಗಿದೆ. ವೈರಲ್‌ ಆಗಿರುವ ವಿಡಿಯೊದಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ಸಿಬ್ಬಂದಿ ತಡೆದದ್ದು ಕಾಣಬಹುದು. ಇದೀಗ ರಶ್ಮಿಕಾ ಅಭಿಮಾನಿಗಳನ್ನು ಈ ವಿಡಿಯೊ ಗೊಂದಲಕ್ಕೀಡುಮಾಡಿದೆ. ಈ ಘಟನೆ ನಿಜವಾಗಿಯೂ ನಡೆದಿದೆಯೇ ಅಥವಾ ಸಿನಿಮಾ ಅಥವಾ ಪ್ರಚಾರದ ಭಾಗವೇ ಎಂದು ಚರ್ಚೆಗಳು ಆಗುತ್ತಿವೆ.

ರಶ್ಮಿಕಾ ಮಂದಣ್ಣ ಅವರ ಒಂದು ವಿಡಿಯೊ ವೈರಲ್​ ಆಗಿದೆ. ತಮಗೆ ಮೇಕಪ್​ ಮಾಡಲು ಬಂದ ಸಹಾಯಕಿಯ ಮೇಲೆ ಅವರು ರೇಗಾಡಿದ್ದಾರೆ. ‘ಏನ್​ ನಡೀತಾ ಇದೆ? ಟ್ಯಾಲೆಂಟ್​ಗೆ ಇಲ್ಲಿ ಬೆಲೆಯೇ ಇಲ್ಲ. ಟ್ಯಾಲೆಂಟ್​ಗೆ ಎಲ್ಲಿ ಬೆಲೆ ಇದೆಯೋ ಅಲ್ಲಿಗೆ ನಾನು ಹೋಗುತ್ತೇನೆ’ ಎಂದು ಅವರು ಸಿಟ್ಟಾಗಿ ಎದ್ದದು ಹೋಗುತ್ತಾರೆ. ದೃಶ್ಯವನ್ನು ಮೊಬೈಲ್​ನಲ್ಲಿ ಶೂಟ್​ ಮಾಡಲಾಗುತ್ತಿತ್ತು. ರೆಕಾರ್ಡಿಂಗ್​ ನಿಲ್ಲಿಸುವಂತೆ ರಶ್ಮಿಕಾ ಅವರ ಸಿಬ್ಬಂದಿ ತಾಕೀತು ಮಾಡಿದ್ದಾರೆ. ಆದರೆ ಇದೆಲ್ಲವೂ ಡ್ರಾಮಾ ಎಂಬುದು ಈಗ ಬಯಲಾಗಿದೆ. ರಶ್ಮಿಕಾ ಮಂದಣ್ಣ ಅವರು ಈ ರೀತಿ ಮಾಡಿದ್ದು ಒಂದು ಖಾಸಗಿ ಕಂಪನಿಯ ಜಾಹೀರಾತಿನ ಸಲುವಾಗಿ. ಕ್ಲಿಪ್ ಪ್ಲೇಯರ್‌ಜರ್‌ಪಾಟ್, ಕ್ಯಾಶುಯಲ್ ಗೇಮ್‌ನ (Playerzrpot, a casual game) ಪ್ರಚಾರದ ಒಂದು ಭಾಗವಾಗಿದೆ ಎಂಬುದು ಸ್ಪಷ್ಟವಾಗಿದೆ. ಇದೀಗ ನೆಟ್ಟಿಗರು ʻʻಏನು ಡ್ರಾಮʼʼಎಂದು ಟ್ರೋಲ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ: Rashmika Mandanna: ನಟಿ ಐಶ್ವರ್ಯಾ ರಾಜೇಶ್ ಜತೆಗಿನ ವಿವಾದಕ್ಕೆ ಅಂತ್ಯ ಹಾಡಿದ ರಶ್ಮಿಕಾ ಮಂದಣ್ಣ

ವೈರಲ್‌ ವಿಡಿಯೊ

ಜಾಹಿರಾತುಗಳಿಂದ ಟ್ರೋಲ್‌ಗೆ ಗುರಿಯಾಗುತ್ತಲೇ ಇರುತ್ತಾರೆ ರಶ್ಮಿಕಾ

ನಟಿ ರಶ್ಮಿಕಾ ಅನೇಕ ಜಾಹೀರಾತುಗಳಲ್ಲಿ ಮಿಂಚಿದ್ದಾರೆ. ಕೆಲವು ಜಾಹೀರಾತುಗಳು ವಿವಾದಕ್ಕೂ ಎಡೆಮಾಡಿ ಕೊಟ್ಟಿವೆ. ವಿಕ್ಕಿ ಕೌಶಲ್ ಜತೆ ಒಳ ಉಡುಪಿನ ಜಾಹೀರಾತಿನಲ್ಲಿ ಕಾಣಿಸಿಕೊಂಡ ರಶ್ಮಿಕಾ ಸಖತ್ ಟ್ರೋಲ್ ಆಗಿದ್ದರು. ರಶ್ಮಿಕಾ ಜಂಕ್ ಫುಡ್ ಬ್ರ್ಯಾಂಡ್‌ಗಳನ್ನು, ಚಿಕನ್ ಬರ್ಗರ್ ಹೀಗೆ ಹಲವು ಜಾಹಿರಾತುಗಳನ್ನು ನೀಡುತ್ತಲೇ ಇರುತ್ತಾರೆ. ಈ ಮೊದಲು ನಟಿ ತಾನು ಸಸ್ಯಹಾರಿ ಎಂದು ಹೇಳಿಕೊಂಡಿದ್ದರು. ಆದರೆ ಜಾಹಿರಾತಿಗಾಗಿ ನಟಿ ಮಾಂಸವನ್ನು ತಿಂದಿರುವ ಬಗ್ಗೆ ಟ್ರೋಲ್‌ಗೆ ಗುರಿಯಾಗಿದ್ದರು.

ರಶ್ಮಿಕಾ ಕೊನೆಯದಾಗಿ ವಿಜಯ್ ಅಭಿನಯದ ʻವಾರಿಸುʼ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸಂದೀಪ್ ರೆಡ್ಡಿ ವಂಗಾ ಅವರ ಹಿಂದಿ ಚಲನಚಿತ್ರ ʻಅನಿಮಲ್ʼ ಸಿನಿಮಾದಲ್ಲೂ ನಟಿಸಿದ್ದಾರೆ. ರಣಬೀರ್ ಕಪೂರ್ ಜತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಶ್ರೀನಿವಾಸ್ ಬೆಲ್ಲಂಕೊಂಡ ʻಛತ್ರಪತಿʼ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರವನ್ನು ವಿವಿ ವಿನಾಯಕ್ ನಿರ್ದೇಶಿಸಿದ್ದಾರೆ ಮತ್ತು ಎಸ್ಎಸ್ ರಾಜಮೌಳಿ ಅವರ ತಂದೆ ಮತ್ತು ಹಿರಿಯ ಬರಹಗಾರ ವಿ ವಿಜಯೇಂದ್ರ ಪ್ರಸಾದ್ ಬರೆದಿದ್ದಾರೆ. ಛತ್ರಪತಿ ಟ್ರೈಲರ್ ಮುಂಬೈನಲ್ಲಿ ಬಿಡುಗಡೆ ಮಾಡಲಾಯಿತು. ಚಿತ್ರದಲ್ಲಿ ನುಶ್ರತ್ ಭರುಚ್ಚ ಕೂಡ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಅವರ ಕೈಯಲ್ಲಿ, ಪುಷ್ಪ 2, ಅನಿಮಲ್, ʻರೈನ್ಬೋʼ , ನಿತಿನ್ ಜತೆಗಿನ ಹೊಸ ಸಿನಿಮಾ, ವಿಕ್ಕಿ ಕೌಶಲ್ ಜತೆ ‘ಛವಾ’ ಸಿನಿಮಾಗಳಿವೆ.

Exit mobile version