Site icon Vistara News

Actor Darshan: ದರ್ಶನ್‌ ಪ್ರಕರಣ; ಶಿವಣ್ಣನ ವಿರುದ್ಧ ಪ್ರಶಾಂತ್‌ ಸಂಬರಗಿ ಆಕ್ರೋಶ!

Actor Darshan incident shivarajkumar against by prashant sambaragi

ಬೆಂಗಳೂರು: ದರ್ಶನ್‌ ಅರೆಸ್ಟ್‌ ಆದ ಬಳಿಕ (Actor Darshan) ಪ್ರಶಾಂತ್‌ ಸಂಬರಗಿ ಅವರು ಒಂದಲ್ಲ ಒಂದು ಹೇಳಿಕೆ ಪೋಸ್ಟ್‌ ಮಾಡುತ್ತಲೇ ಇದ್ದಾರೆ. ಇದೀಗ ದರ್ಶನ್‌ ಕುರಿತಾದ ಹೊಸ ಪೋಸ್ಟ್‌ ಜತೆಗೆ ನಟ ಶಿವರಾಜ್‌ಕುಮಾರ್‌ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಮಾಧ್ಯಮವೊಂದರ ಸಂದರ್ಶನದಲ್ಲಿ ʻʻಶಿವಣ್ಣ ಅವರು ದರ್ಶನ್‌ ವಿಚಾರದಲ್ಲಿ ಸೈಲೆಂಟ್‌ ಆಗಿರುವುದು ಯಾಕೆ? ನಿಮ್ಮ ಮೌನ ಸಮ್ಮತಿ ಇದೆಯಲ್ಲ.. ಎಲ್ಲೋ ಒಂದು ಕಡೆ ದುಷ್ಟರನ್ನು, ರೌಡಿಯನ್ನು ಬೆಳೆಸುತ್ತದ್ದೀರಾ ಎಂದು ನೇರ ಆಪಾದನೆ ಮಾಡುತ್ತೇನೆʼʼಎಂದು ಹೇಳಿಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ಸಂಬರಗಿ ಮಾತನಾಡಿ ʻʻಶಿವರಾಜಕುಮಾರ್‌ ಅವರಲ್ಲಿ ನಾನು ಕೇಳುವುದು ಏನಂದರೆ ಈ ಘಟನೆಗೆ ನಿಮ್ಮ ಮೌನ ಸಮ್ಮತಿ ಸೂಚಿಸುತ್ತದೆ. ನೀವು ಈವರೆಗೂ ಒಂದೇ ಒಂದು ಮಾತನಾಡದೇ ಇರುವುದು ದರ್ಶನ್‌ ಮಾಡಿರುವ ಕರ್ಮಕಾಂಡಕ್ಕೆ ಸಮ್ಮತಿ ಸೂಚಿಸಿದಂತಾಗುತ್ತದೆ. ದರ್ಶನ್‌ ಅಟ್ಟಹಾಸಕ್ಕ ಮೊದಲು ನೀವು ಬಂದು ಮಾತನಾಡಬೇಕಿದೆ. ಅನೇಕ ಸಣ್ಣ ವಿಚಾರಗಳನ್ನು ಮಾತನಾಡುವ ನೀವು. ಈ ವಿಚಾರದಲ್ಲಿ ಸೈಲೆಂಟ್‌ ಆಗಿರುವುದು ಯಾಕೆ? ನಿಮ್ಮ ಮೌನ ಸಮ್ಮತಿ ಇದೆಯಲ್ಲ ಎಲ್ಲೋ ಒಂದು ಕಡೆ ದುಷ್ಟರನ್ನು, ರೌಡಿಯನ್ನು ಬೆಳೆಸುತ್ತದ್ದೀರಾ ಎಂದು ನೇರ ಆಪಾದನೆ ಮಾಡುತ್ತೇನೆ ಎಂದಿದ್ದಾರೆ. ಇನ್ನು ಹಲವು ಪೋಸ್ಟ್‌ಗಳನ್ನು ಮಾಡಿದ ಪ್ರಶಾಂತ್‌ ಸಂಬರಗಿ ಮತ್ತೊಂದು ದರ್ಶನ್‌ ವಿರುದ್ಧ ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: Actor Darshan: ದರ್ಶನ್‌ಗೆ 40 ಲಕ್ಷ ರೂ ನೀಡಿದ ವ್ಯಕ್ತಿ ಈಗ ನಾಪತ್ತೆ! ಯಾರೀ ಆಸಾಮಿ?

ಪ್ರಶಾಂತ್‌ ಸಂಬರಗಿ ಪೋಸ್ಟ್‌

ʻಸೈಕೋ ಮುಲಾಮ್ ರಾಜಾ. ರೇಣುಕಾ ಸ್ವಾಮಿಗೆ ನ್ಯಾಯ ಸಿಗಲಿ.
ಡಿ ಬಾಸ್ IED ಎಂಬ ಮಾನಸಿಕ ಅಸ್ವಸ್ಥತೆಯಿಂದ ಬಳತಾದ್ದಾನೆ. (Intermittent Explosive Disorder).
ಕನ್ನಡದಲ್ಲಿ ಈ ಮಾನಸಿಕ ಕಾಯಿಲೆ ಮರುಕಳಿಸುವ ಸ್ಫೋಟಕ ಅಸ್ವಸ್ಥತೆ ಅಂತ ಕರೀತಾರೆ. ನಿಂದನೀಯ, ಆಕ್ರಮಣಕಾರಿ ಮತ್ತು ಹಿಂಸ್ಮಾಕರಾದ ಪ್ರವೃತಿ ಈ ಕಾಹಿಲೆಯ ಲಕ್ಷಣ ಇನ್ನು ಈ ಸ್ಥಿತಿನಲ್ಲಿ ಇವನು ಕುಡಿದು ಮಾದಕ ಸೇವನೆ ಮಾಡಿದಾಗ ಇವನ ಕೈಗೆ ಸಿಕಾಡ್ಕೊಂಡ್ಬಿಟ್ರೆ ಶತ ಕೋಟಿ ದೇವರುಗಳು ಬಡಪಾಯಿಗಳನ್ನ ಉಳಿಸಕ್ಕೆ ಆಗಲ್ಲ.
ಫ್ರೆಂಡ್ಸ್ ನೀವು ಗಮನಿಸಿ ಈ ಸೈಕೋ ವ್ಯಕ್ತಿ ಯ ಎಲ್ಲಾ ಟಿವಿ ಸಂದರ್ಶನಗಳು ಮತ್ತು ಸಾರ್ವಜನಿಕ ಜಾಲತಾಣ ದಲ್ಲಿ ಲಭ್ಯವಿರುವ ಫೋಟೋಗಳನ್ನು ಸರಿಯಾಗಿ ಗಮನಿಸಿ ,ಇವನ ಬಲಗೈ ನಲ್ಲಿ ಬ್ಯಾಂಡೇಜ್ ಇರತ್ತೆ ,ಯಾಕೆ ಅಂದ್ರೆ ಇವನ ಹಿಂದಿನ ರಾತ್ರಿ ಯಾರೋ ಬಡಪಾಯಿಗೆ ಇವನ ವಿಶ್ವ ರೂಪ ನೋಡಿಸಿರ್ತಾನೆ. ಇವನ ಈ ವಿಚಿತ್ರ ನಡವಳಿಕೆ, ರೌಡಿಸಿಮ್ ಕೃತ್ಯಗಳು,ಅನೇಕರ ಮೇಲೆ ಹಲ್ಲೆಗಳು ಎಷ್ಟೋ ಜನರು ನೋಡಿದ್ದರೆ ,ಈ ಹಿಂಸಾ ಕೃತ್ಯವನ್ನು ಹಲವಾರು ಬಾರಿ ಪೊಲೀಸ್ ದೂರಿನ ಮೂಲಕ ದಾಖಲಿಸಲಾಗಿದೆ ಮತ್ತು ಈ ರಾಕ್ಷಸನಿಂದ ಹಲ್ಲೆ ಮತ್ತು ನಿಂದನೆಗೊಳಗಾದ ಜನರ ಪಟ್ಟಿ ದಿನ ದಿನಕ್ಕೆ ಹನುಮಂತನ ಬಾಲ ತರ ಬೆಳಿತಾಯಿದೆ. ಇನೊಂದು ಈ ಸೈಕೋದ ವಿಚಿತ್ರ ನಡವಳಿಕೆ ಗೊತ್ತ?
ಹೇಳ್ತಿನಿ ಕೇಳಿ ಮಾಡೋದಲ್ಲ ಮಾಡ್ಬಿಟ್ಟು ಇವನು ಮರುದಿನ ಬೆಳಿಗ್ಗೆ ತನ್ನ ಕೊಳಕು ವರ್ತನೆಗೆ ಪಶ್ಚಾತ್ತಾಪ ಮಾಡ್ಕೊಂಡು ಅವನೇ ಖುದ್ದಾಗಿ ಹಲ್ಲೆ ಮಾಡಿದ ಬಲಿಪಶುವಿಗೆ ಮುಲಾಮು ಹಚ್ತಾನಂತೆ ಈ ಮುಲಾಮು ರಾಜಾ ,ಮತ್ತೆ ರಾತ್ರಿಯಲ್ಲಿ ಅದೇ ಕ್ರೂರ ದಾಳಿಯನ್ನು ಪುನರಾವರ್ತಿಸುತ್ತಾನೆ.
Dasa is psyco he needs treatment.
ಇವಾಗ ನೀವೇ ಹೇಳಿ ಇವನ್ನನ ಬಿಡಬೇಕಾ?.
ಒಂದ್ angle ನಲ್ಲಿ ನೋಡಿದ್ರೆ ಪಾಪ ಅನ್ಸತ್ತೆ. Dasa needs treatmentʼʼಎಂದು ಬರೆದುಕೊಂಡಿದ್ದಾರೆ.

ರೇಣುಕಾ ಸ್ವಾಮಿ ಕೊಲೆ (Renuka Swamy Murder Case) ಪ್ರಕರಣವನ್ನು ಮುಚ್ಚಿ ಹಾಕಲು ನಟ ದರ್ಶನ್‌ (Actor Darshan) ತನ್ನ ಸಹಚರರಿಗೆ ನೀಡಿದ್ದ 30 ಲಕ್ಷ ರೂ. ಹಣವನ್ನು ಒಬ್ಬ ಮಾಜಿ ಕಾರ್ಪೊರೇಟರ್‌ನಿಂದ ಪಡೆದಿದ್ದು ಗೊತ್ತಾಗಿದೆ. ಈ ಕುರಿತು ಈ ವ್ಯಕ್ತಿಯನ್ನು ಪೊಲೀಸರು ಪ್ರಶ್ನಿಸಲು ಮುಂದಾಗಿದ್ದಾರೆ. ಆದರೆ ಈ ಆಸಾಮಿ ಯಾರ ಕಣ್ಣಿಗೂ ಬೀಳದೆ (Absconded) ನಾಪತ್ತೆಯಾಗಿದ್ದಾರೆ.

ರೇಣುಕಾ ಸ್ವಾಮಿ ಕೇಸ್‌ನಲ್ಲಿ ಮತ್ತೊಬ್ಬ ವ್ಯಕ್ತಿಯ ಕೈವಾಡ ಇರುವುದು ಪತ್ತೆಹಚ್ಚಿದ ಪೊಲೀಸರಿಗೆ ಗೊತ್ತಾಗಿರುವುದು ದರ್ಶನ್‌ಗೆ ಲಕ್ಷ ಲಕ್ಷ ಹಣ ನೀಡಿದ ಆ ವ್ಯಕ್ತಿಯ ಬಗ್ಗೆ. ಕೊಲೆ‌ ನಡೆದ ಬೆನ್ನಲ್ಲೇ ದರ್ಶನ್ ಆ ವ್ಯಕ್ತಿಯಿಂದ ಹಣ ಪಡೆದಿದ್ದಾನೆ. ಸಾಕ್ಷಿ ನಾಶ ಮಾಡುವುದಕ್ಕೆಂದೇ 40 ಲಕ್ಷ ರೂ. ಹಣವನ್ನು ಇವರಿಂದ ದರ್ಶನ್‌ ಪಡೆದಿದ್ದ. ಆ 40 ಲಕ್ಷ ಹಣವನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಇದೀಗ ಹಣದ ಬಗ್ಗೆ ಆ ವ್ಯಕ್ತಿಯನ್ನು ಪ್ರಶ್ನಿಸಬೇಕಿದೆ.

ಮಾಜಿ ಕಾರ್ಪೊರೇಟರ್‌ ಆಗಿರುವ ಮೋಹನ್ ರಾಜ್ ಎಂಬಾತನೇ ಈ ವ್ಯಕ್ತಿಯಾಗಿದ್ದು, ಈತನಿಂದ ದರ್ಶನ್‌ಗೆ ಹಣ ಸಂದಾಯವಾಗಿದೆ. ದರ್ಶನ್‌ಗೆ ಆಪ್ತ ಸ್ನೇಹಿತ ಆಗಿರುವ ಮೋಹನ್ ರಾಜ್, ಆತನಿಗೆ 40 ಲಕ್ಷ ರೂ. ಹಣ ನೀಡಿದ್ದಾನೆ. ಈ ಹಣವನ್ನು ತನ್ನ ಸಹಚರರಿಗೆ ನೀಡಿರುವ ದರ್ಶನ್‌, ತನ್ನ ಹೆಸರು ಎಲ್ಲಿಯೂ ಕಾಣಿಸಿಕೊಳ್ಳದಂತೆ ತಿಳಿಸಿದ್ದಾನೆ. ಇದೀಗ ಇರುವ ಪ್ರಶ್ನೆಯೆಂದರೆ, ಈ ಹಣ ಪಡೆಯುವಾಗ ಮೋಹನ್‌ ರಾಜ್‌ಗೆ ಈ ಕೊಲೆಯ ಬಗ್ಗೆ ತಿಳಿದಿತ್ತೇ ಇಲ್ಲವೇ ಎಂಬುದು. ತಿಳಿದಿತ್ತು ಎಂದಾದರೆ, ಕೊಲೆ ಪ್ರಕರಣ ಮೋಹನ್‌ ರಾಜ್‌ ಕೊರಳಿಗೂ ಸುತ್ತಿಕೊಳ್ಳಲಿದೆ.

Exit mobile version