Site icon Vistara News

Actor Darshan: ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಭೇಟಿ ಬಳಿಕ ಡಿಕೆ ಶಿವಕುಮಾರ್‌ ಹೇಳಿದ್ದೇನು?

Actor Darshan wife Vijayalakshmi Met DCM DK Shivakumar

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ನಟ ದರ್ಶನ್ ಜೈಲು ಸೇರಿದ್ದಾರೆ. ಇಂದು (ಜುಲೈ 24) ವಿಜಯಲಕ್ಷ್ಮಿ ದರ್ಶನ್ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಿವಾಸಕ್ಕೆ ತೆರಳಿ ಭೇಟಿ ಮಾಡಿದ್ದಾರೆ. ಜೊತೆಗೆ ದರ್ಶನ್ ಸಹೋದರ ದಿನಕರ್ ತೂಗುದೀಪ ಸಹ ಇದ್ದರು. ರೇಣುಕಾ ಸ್ವಾಮಿ ಕೊಲೆ ವಿಚಾರವಾಗಿ ಚರ್ಚಿಸಲೆಂದೇ ವಿಜಯಲಕ್ಷ್ಮಿ ಅವರು ಡಿಕೆ ಶಿವಕುಮಾರ್ ಅವರನ್ನು ಭೇಟಿ ಆಗಿದ್ದಾರೆ ಎನ್ನಲಾಗಿತ್ತು. ಆದರೆ ಭೇಟಿಯ ಬಳಿಕ ಮಾತನಾಡಿರುವ ಶಿವಕುಮಾರ್, ಮಗನ ವಿಷಯವಾಗಿ ಮಾತನಾಡಲು ಬಂದಿದ್ದರು ಎಂದಿದ್ದಾರೆ. ಈ ಬಗ್ಗೆ ಡಿಕೆಶಿ ಮಾಧ್ಯಮದವರ ಮುಂದೆ ಹೇಳಿಕೆ ನೀಡಿದ್ದು ಹೀಗೆ.

ಡಿಸಿಎಂ ಶಿವಕುಮಾರ್ ಮಾತನಾಡಿ ʻʻನೆನ್ನೆ ಭೇಟಿಗೆ ವಿಜಯಲಕ್ಷ್ಮಿ ಬಂದಿದ್ರು , ಅಲ್ಲಿ ಭೇಟಿಗೆ ನಾನು ಒಪ್ಪಲಿಲ್ಲ.ಬೆಳಗ್ಗೆ ಮನೆಯಲ್ಲಿ ಭೇಟಿಯಾಗುವಂತೆ ಹೇಳಿದ್ದೆ. ಹಿಂದೆ ಅವರ ಮಗುಗೆ ನನ್ನ ಸ್ಕೂಲ್‌ಗೆ ಸೀಟ್ ಕೊಟ್ಟಿದ್ದೆ. ಅವರ ಮಗ ವಿನೀಶ್‌ ನಮ್ಮ ಶಾಲೆಯಲ್ಲಿ ಓದುತ್ತಿದ್ದ, ಆ ನಂತರ ಬೇರೆ ಶಾಲೆಗೆ ಸೇರಿಸಿದ್ದರು. ಈಗ ಮತ್ತೆ ನಮ್ಮ ಶಾಲೆಗೆ ಸೇರಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ನಾನು ಫ್ರಿನ್ಸಿಫಲ್ ಗೆ ಹೇಳುತ್ತೇನೆ ಎಂದು ಭರವಸೆ ಕೊಟ್ಟಿದ್ದೀನಿ, ಕೇಸ್ ವಿಚಾರವಾಗಿ ಮಾತನಾಡಲು ಅವರು ಬಂದಿರಲಿಲ್ಲ’ ಎಂದಿದ್ದಾರೆ.

ʻʻಈ ಕೇಸ್‌ಗೆ ನಾವು ಇಂಟರ್‌ಫೀಯರ್‌ ಆಗಲು ಆಗಲ್ಲ. ಸಮಸ್ಯೆ, ತೊಂದರೆ ಆಗಿದ್ದರೆ ಕಾನೂನು ಇದೆ. ನಿನ್ನೆ ನಮ್ಮ ಕ್ಷೇತ್ರದ ಹುಡುಗರು ಗಲಾಟೆ ಮಾಡಿ ಕೂಗಿದ್ದರು. ಯಾವ ಬಾಸ್ ಗೊತ್ತಿಲ್ಲ, ಬಾಸ್ ಬಾಸ್ ಅಂತ ಕೂಗುತ್ತಿದ್ದರು. ಮಗುಗೆ ಸಹಾಯ ಮಾಡುತ್ತೇನೆ. ಮಾಧ್ಯಮದಲ್ಲಿ ‌ಏನು ಬರ್ತಿದೆ ಎಂದು ನೋಡಲು ನನಗೆ ಸಮಯವಿ ಲ್ಲ.ಒಂದೊಂದು ಟಿವಿಯಲ್ಲಿ ಒಂದೊಂದು ಬರ್ತದೆ. ನಾನು ಗೃಹ ಸಚಿವ‌ ಅಲ್ಲ. ಪೊಲೀಸ್‌ ತನಿಖೆಯಲ್ಲಿ ನಾವು ಇಂಟರ್ ಫಿಯರ್ ಆಗಲು ಸಾಧ್ಯವಿಲ್ಲ. ಮಗು ಶಿಕ್ಷಣದ ಬಗ್ಗೆ ಅವರಿಗೆ ಕನ್ಸರ್ನ್‌ ಇದೆ , ಮಕ್ಕಳ ವಿಚಾರ ದೊಡ್ಡದು. ಹೆಣ್ಣು ಮಗಳು ಏನಾದರೂ ಅನ್ಯಾಯ ಆಗಿದ್ರೆ ಅವರಿಗೆ ಸಹಾಯ ಮಾಡಿರುತ್ತಿದ್ದೆ. ಆದರೆ ಈಗ ಕಾನೂನು ಕ್ರಮ ನಡೆಯುತ್ತಿದೆ. ಇಂಥಹಾ ಸಮಯದಲ್ಲಿ ಮಧ್ಯೆ ಪ್ರವೇಶ ಮಾಡಲು ಆಗುವುದಿಲ್ಲ. ಕಾನೂನು ಚೌಕಟ್ಟು ಅಡಿ ಏನಾದರೂ ಮಾಡೋಣ ಅಂತ ನಿನ್ನೆ ಹೇಳಿದ್ದೆ, ಹುಡುಗರು ನಿನ್ನೆ ಒತ್ತಾಯ ಮಾಡಿದ್ದರು. ನಾನು ಈ ವಿಚಾರದಲ್ಲಿ ಮಧ್ಯ ಬರೋದಿಲ್ಲ, ಸ್ಕೂಲ್ ವಿಚಾರದಲ್ಲಿ ಅಷ್ಟೇ ನಾನು ಮಾತನಾಡುತ್ತೇವೆ, ಸಹಾಯ ಮಾಡುತ್ತೇನೆʼʼಎಂದರು.

ಇದನ್ನೂ ಓದಿ: Actor Suriya: ಕಾಲಿವುಡ್‌ ನಟ ಸೂರ್ಯ ಸಿನಿಮಾಗಾಗಿ ಈ ಕನ್ನಡ   ಸ್ಟಾರ್ ಹೀರೋಗೆ ಬಂದಿತ್ತು ಆಫರ್‌!

ಇನ್ನು ನಿರ್ದೇಶಕ ಪ್ರೇಮ್‌ ಕೂಡ ಇದೇ ಹೇಳಿಕೆ ಕೊಟ್ಟಿದ್ದಾರೆ. ʻʻಈ ಬಗ್ಗ ಜೋಗಿ ಪ್ರೇಮ್‌ ಮಾತನಾಡಿ ʻʻನಟ ದರ್ಶನ್ ವಿಚಾರಕ್ಕೂ ನನಗೂ ಸಂಬಂಧ ಇಲ್ಲ. ನಾನು ದರ್ಶನ್ ವಿಚಾರ ಮಾತನಾಡೋಕೆ ಬಂದಿರಲಿಲ್ಲ ನಾನು ಆಗಾಗ ಡಿಸಿಎಂನ ಭೇಟಿ ಮಾಡೊಕೆ ಬರ್ತಾ ಇರ್ತೀನಿ. ದರ್ಶನ್ ವಿಚಾರಕ್ಕೂ ನನಗೂ ಸಂಬಂಧ ಇಲ್ಲ. ಅವರ ಪತ್ನಿ ಮತ್ತು ದರ್ಶನ್‌ ಸಹೋದರ ಭೇಟಿ ಮಾಡೋಕೆ ಬಂದಿದ್ದಾರೆ. ದರ್ಶನ್ ಮಗ ವಿನೀಶ್ ಸ್ಕೂಲ್ ವಿಚಾರ ಮಾತಾಡೋಕೆ ಬಂದಿದ್ದರು.ನನ್ನ ಮಗ ಅವರ ಮಗ ಇಬ್ಬರು ಒಂದೇ ಕಡೆ ಓದುತ್ತ ಇದ್ದರು. ವಿನೀಶ್ ಈಗ ಬೇರೆ ಸ್ಕೂಲ್ ಶಿಷ್ಟ್ ಆಗಿದ್ದಾನೆ. ಹಾಗಾಗಿ ಭೇಟಿ ಮಾಡಿ ಮಾತು ಕತೆ ನಡೆಸಿದ್ದೇವೆ. ದರ್ಶನ್ ನನ್ನ ಸ್ನೇಹಿತ. ಅದರ ಬಗ್ಗೆ ಎರಡು ಮಾತಿಲ್ಲ. ಆದರೆ ಈ ಭೇಟಿಗೂ ಇದಕ್ಕೂ ಸಂಬಂಧ ಇಲ್ಲʼʼಎಂದಿದ್ದಾರೆ.

Exit mobile version