Site icon Vistara News

Puneeth Parva | ಗಂಧದ ಗುಡಿಗೆ ಅಮಿತಾಭ್‌ ಬಚ್ಚನ್ ಹಾರೈಕೆ, ಸಂಭ್ರಮದೊಂದಿಗೆ ʼಪುನೀತ ಪರ್ವʼ ಸಮಾರೋಪ

Puneeth Parva

ಬೆಂಗಳೂರು: ಅಕ್ಟೋಬರ್‌ 21ರಂದು ನಡೆದ ʻಪುನೀತ ಪರ್ವʼ (Puneeth Parva) ಕಾರ್ಯಕ್ರಮ ಹಲವು ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಹಲವು ಗಣ್ಯರು, ನಟ ನಟಿಯರು ಸಾಕ್ಷಿಯಾದರು. ಪುನೀತ್‌ ಅವರ ಜತೆ ಕಳೆದ ನೆನಪುಗಳನ್ನು, ಅವರ ನಟನೆ, ಮಾನವೀಯತೆ ಗುಣ ಸೇರಿ ಹಲವು ವಿಷಯಗಳನ್ನು ಗಣ್ಯರು ಮೆಲುಕು ಹಾಕಿದರು. ಕಾರ್ಯಕ್ರಮದ ಅಂತಿಮ ಘಟ್ಟದಲ್ಲಿ ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಹಾಗೂ ನಟ ಕಮಲ್‌ ಹಾಸನ್‌ ವಿಡಿಯೊ ಮೂಲಕ ಸಂದೇಶ ರವಾನಿಸಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಸವರಾಜ್‌ ಬೊಮ್ಮಾಯಿ ಗಂಧದ ಗುಡಿ ಚಿತ್ರಕ್ಕೆ ಕರ್ನಾಟಕದಲ್ಲಿ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ.

ಪುನೀತ್‌ ಅವರು ಅಭಿಮಾನಿಗಳನ್ನು ಸದಾ ನಗುತ್ತೀರಿ ಎಂದು ಹೇಳುತ್ತಲೇ ಇರುತ್ತಾರೆ. ಹಾಗಾಗಿ ಸರ್‌ಪ್ರೈಸ್ ಒಂದನ್ನು ಅಭಿಮಾನಿಗಳಿಗೆ ನೀಡಿದ್ದಾರೆ ಎಂದು ವೇದಿಕೆ ಮೇಲೆ ನಿರೂಪಕಿ ಅನುಶ್ರೀ ಹೇಳಿದ್ದಾರೆ.

ಅಮಿತಾಭ್‌ ಬಚ್ಚನ್‌ ವಿಡಿಯೊ ಮೂಲಕ ಮಾತನಾಡಿ ʻʻಡಾ ರಾಜ್‌ ಮಾಡಿದ ನೆರವನ್ನು ನನ್ನ ಕುಟುಂಬ ಮರೆಯಲು ಸಾಧ್ಯವಿಲ್ಲ. ರಾಜ್‌ ಕುಟುಂಬ ನನ್ನ ಕುಟುಂಬಕ್ಕೆ ತುಂಬಾ ಹತ್ತಿರ. ಪುನೀತ್‌ ಅವರನ್ನು ನಾನು ಮೊದಲು ಅವರು ಚಿಕ್ಕವರಿದ್ದಾಗ ಭೇಟಿ ಮಾಡಿದ್ದೆ. ಯಾವಾಗಲೂ ನಾನು ಭೇಟಿ ಮಾಡುವಾಗಲೂ ಅವರು ನಗುತ್ತಿದ್ದರು. ಅವರ ಅಗಲಿಕೆ ತುಂಬಾ ಬೇಸರದ ಸಂಗತಿ. ಗಂಧದ ಗುಡಿ ಮ್ಯಾಜಿಕಲ್‌ ಜರ್ನಿ ಆಗಿದೆ. ಗಂಧದ ಗುಡಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರುʼʼಎಂದರು.

ಇದನ್ನೂ ಓದಿ | Puneeth Parva | ಅಪ್ಪು ಸ್ಮರಣಾರ್ಥ ರಾಜ್ಯದ 25 ಜಿಲ್ಲೆಗಳಿಗೆ ಆಂಬ್ಯುಲೆನ್ಸ್‌, ಯಶ್‌ ಮಹತ್ವದ ಘೋಷಣೆ

Exit mobile version