Site icon Vistara News

Vinay Gowda: ʻಡೆವಿಲ್ʼ ಸಿನಿಮಾದಲ್ಲಿ ನಾನೇ ವಿಲನ್, ಪ್ರಾಜೆಕ್ಟ್‌ ಏನಾಗುತ್ತೋ ಗೊತ್ತಿಲ್ಲ ಎಂದ ʻಬಿಗ್ ಬಾಸ್ʼ ಆನೆ ವಿನಯ್ ಗೌಡ!

Vinay Gowda acted darshan devil Movie and says Futture cant be predict

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಜೈಲು ಸೇರಿದ್ದಾರೆ. ಹೀಗಾಗಿ ಅವರ ʻಡೆವಿಲ್‌ʼ ಸಿನಿಮಾ ಚಿತ್ರೀಕರಣ ಅರ್ಧಕ್ಕೆ ನಿಂತಿದೆ. ಇದೇ ವೇಳೆ ಈ ಸಿನಿಮಾದಲ್ಲಿ ವಿಲನ್ ಆಗಿ ನಟಿಸುತ್ತಿರುವ ಬಿಗ್‌ಬಾಸ್ ಖ್ಯಾತಿಯ ವಿನಯ್ ಗೌಡ (Vinay Gowda) ವಿಲನ್ ಆಗಿ ನಟಿಸುತ್ತಿದ್ದಾರೆ. ವಿನಯ್‌ ಸಂದರ್ಶನವೊಂದರಲ್ಲಿ ಡೆವಿಲ್‌ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಜತೆಗೆ ʻʻಪ್ರಾಜೆಕ್ಟ್‌ ಆರ್ಧಕ್ಕೆ ನಿಂತಿದೆ ಪ್ರಾಜೆಲ್ಟ್‌ ಭವಿಷ್ಯ ಯಾರಿಗೂ ಗೊತ್ತು, ಆದರೆ ಸೂಪರ್‌ ಪ್ರಾಜೆಕ್ಟ್ʼʼಎಂದು ಹೇಳಿಕೆ ನೀಡಿದ್ದಾರೆ.‌

ವಿನಯ್‌ ಗೌಡ ಮಾತನಾಡಿ ʻʻಬಿಗ್‌ ಬಾಸ್‌ ಮುಗಿಸಿದ ಬಳಿಕ ʻಡೆವಿಲ್‌ʼ ಸಿನಿಮಾ ಚಾನ್ಸ್‌ ಸಿಕ್ಕಿತು. ಈ ಸಿನಿಮಾ ಪರಿಚಯ ಹೇಗಾಯ್ತು ಎಂದರೆ ಪ್ರಕಾಶ್‌ ಅವರ ಜತೆ ಮುಂಚೆ ಕೆಲಸ ಮಾಡಿದ್ದೆ. ಒಂದಷ್ಟು ಧಾರಾವಾಹಿಗಳು ಮಾಡಿದ್ದೆ. ನನ್ನ ನಟನೆ ಗೊತ್ತು ಅವರಿಗೆ. ಈ ರೀತಿ ವಿಲನ್‌ ಕ್ಯಾರಕ್ಟರ್‌ ಬಗ್ಗೆ ಹೇಳಿದರು. ಬಳಿಕ ನಾನು ಸಿನಿಮಾಗೆ ಒಪ್ಪಿಗೆ ನೀಡಿದೆ. ಅವರ ಕೆಲಸ ಅಂತೂ ತುಂಬ ಕ್ಲೀನ್‌ ಹಾಗೂ ಕ್ಲೀಯರ್‌. ನಂದು ಡೆವಿಲ್‌ ಸಿನಿಮಾದಲ್ಲಿ 30% ಶೂಟ್‌ ಆಗಿದೆ. ಫೈಟ್‌ ಸೀಕ್ವೆನ್ಸ್‌ ಬಾಕಿ ಇದೆ. ಟೈಲಾಗ್‌ ಸ್ವಲ್ಪ ಬಾಕಿ ಉಳಿದೆʼʼ ಎಂದರು.

ಮುಂದೆ ಏನಾಗುತ್ತೆ? ಎಲ್ಲಿರವರೆಗೆ ಹೋಗುತ್ತೆ ಗೊತ್ತಿಲ್ಲ

ದರ್ಶನ್‌ ವಿವಾದದ ಬಗ್ಗೆ ಮಾತನಾಡಿ ʻʻನಾನು ಯಾರ ಬಗ್ಗೆ ಮಾತಾಡಲ್ಲ. ನಾವು ಈ ಉದ್ಯಮಕ್ಕೆ ಲೇಟ್‌ ಆಗಿ ಬಂದು ಕಡಿಮೆ ಕೊಡುಗೆ ಕೊಟ್ಟಿರಬಹುದು. ಆದರೆ ಈಗ ನಾನು ಇಂಡಸ್ಟ್ರಿಯಲ್ಲಿ ಇದ್ದೇನೆ. ಇಲ್ಲಿ ಈ ಬಗ್ಗ ಪ್ರಶ್ನೆ ಬಂದಾಗ. ಹೌದು ತೊಂದರೆ ಆಗಿದೆ. ಮುಂದೆ ಏನಾಗುತ್ತೆ? ಎಲ್ಲಿರವರೆಗೆ ಹೋಗುತ್ತೆ ಗೊತ್ತಿಲ್ಲ. ನಾನು ಈ ಚಿತ್ರರಂಗದ ಒಂದು ಭಾಗವೆಂದು ಅಂದುಕೊಂಡಿದ್ದೇನೆ. ಈಗ ಇಂತಹದ್ದೊಂದು ಘಟನೆ ನಡೆದಿದೆ. ಅದನ್ನು ಜಡ್ಜ್‌ ಮಾಡುವುದಕ್ಕೆ ನಾವ್ಯಾರೂ ಅಲ್ಲ. ಮಾಡಿರುವುದು ನಿಜನಾ? ಸುಳ್ಳಾ? ಅದ್ಯಾವುದೂ ನಮಗೆ ಗೊತ್ತಿಲ್ಲ. ಅದಕ್ಕೆ ಕಮೆಂಟ್ ಮಾಡುವುದು ನನಗೆ ಸೂಟ್ ಆಗುತ್ತೆ ಅಂತ ಅನಿಸುತ್ತಿಲ್ಲ.” ಎಂದು ವಿನಯ್ ಗೌಡ ಹೇಳಿದ್ದಾರೆ.

ಇದನ್ನೂ ಓದಿ: Pavithra Gowda : ಜೈಲಿನಲ್ಲಿರುವ ಪವಿತ್ರಾ ಗೌಡಗೆ ಬ್ಯಾಗ್​ ತುಂಬಾ ಸಾಮಗ್ರಿ ತಂದು ಕೊಟ್ಟ ಸಹೋದರ

ಸೂಪರ್‌ ಪ್ರಾಜೆಕ್ಟ್

ʻʻಈ ಘಟನೆ ಬಗ್ಗೆ ಹೇಳೋದೆನಂದರೆ ಒಂದು ಕಮೆಂಟ್‌ ಎಲ್ಲಿಯ ಹಂತದವರೆಗೆ ಹೋಗಿದೆ ನೋಡಿ. ಒಂದು ತಪ್ಪು ಕೆಲಸ ಮಾತ್ರ ಹೈಲೈಟ್‌ ಆಗತ್ತೆ. ತಪ್ಪು ಎಲ್ಲಿದೆ, ನೆಗೆಟಿವ್‌ ಎಲ್ಲಿದೆ ಅದು ಮಾತ್ರ ಹೈಲೈಟ್‌ ಆಗತ್ತೆ. ಪ್ರಾಜೆಕ್ಟ್‌ ಆರ್ಧಕ್ಕೆ ನಿಂತಿದೆ ಪ್ರಾಜೆಲ್ಟ್‌ ಭವಿಷ್ಯ ಯಾರಿಗೂ ಗೊತ್ತು, ಆದರೆ ಸೂಪರ್‌ ಪ್ರಾಜೆಕ್ಟ್.‌ ಆದರೆ ಬೇಜಾರಾಗತ್ತೆ. ಮುಂದೆ ಸರಿ ಹೋಗುತ್ತೆ ಎನ್ನುವ ನಂಬಿಕೆ ಅನ್ನೋದು ಇದೆಯಲ್ಲ. ಆ ಪ್ರಾಜೆಕ್ಟ್ ರಿಲೀಸ್ ಆದ್ಮೇಲೆ ಹಬ್ಬ ಇದೆಯಲ್ಲ. ಅದರ ಬಗ್ಗೆ ಯೋಚನೆ ಮಾಡುತ್ತಿರುತ್ತೇನೆ. ನಾನು ನೆಗೆಟಿವ್ ಯೋಚನೆ ಮಾಡುವುದಿಲ್ಲʼʼಎಂದರು.

ಕಾಟೇರ ಯಶಸ್ಸಿನ ಬಳಿಕ ಡೆವಿಲ್‌ ಎಂಬ ಸಿನಿಮಾದಲ್ಲಿ ದರ್ಶನ್‌ ನಟಿಸುತ್ತಿದ್ದಾರೆ. ಈ ವರ್ಷ ಚಿತ್ರಮಂದಿರಗಳಿಗೆ ಆಗಮಿಸುವ ನಿರೀಕ್ಷೆಯಿತ್ತು. ಈ ಸಿನಿಮಾದ ಶೂಟಿಂಗ್‌ ಭರದಿಂದ ನಡೆಯುತ್ತಿತ್ತು. ಈ ಚಿತ್ರದ ಗ್ಲಿಂಪ್ಸ್‌ ವಿಡಿಯೋ ಕೂಡ ರಿಲೀಸ್‌ ಮಾಡಲಾಗಿತ್ತು.ಡೆವಿಲ್‌ನಲ್ಲಿ ಬಾಲಿವುಡ್‌ ನಟ ಮಹೇಶ್‌ ಮಂಜ್ರೇಕರ್‌ ಕೂಡ ನಟಿಸುತ್ತಿದ್ದಾರೆ. ಪ್ರಕಾಶ್‌ ವೀರ್‌ ನಿರ್ದೇಶನದ ಡೆವಿಲ್‌ ಸಿನಿಮಾದ ಭವಿಷ್ಯ ಏನಾಗಬಹುದು ಎಂಬ ಆತಂಕ ಫ್ಯಾನ್ಸ್‌ಗೆ ಇದೆ.

Exit mobile version