Site icon Vistara News

Jr NTR: ಸಿನಿಮಾ ಮುಹೂರ್ತದಲ್ಲಿ ಜ್ಯೂ. ಎನ್​ಟಿಆರ್ ಧರಿಸಿದ ವಾಚ್ ಬೆಲೆ ಕೇಳಿದರೆ ನೀವು ಬೆರಗಾಗೋದು ಖಚಿತ​!

Jr NTR luxury watch at Hyderabad event

ಬೆಂಗಳೂರು: ಜೂನಿಯರ್‌ ಎನ್ ಟಿಆರ್ (Jr NTR) ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಇನ್ನೂ ಶೀರ್ಷಿಕೆ ಅಂತಿಮವಾಗದ ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್‌ ಶುಭ ಶುಕ್ರವಾರದಂದು ಘೋಷಣೆ ಮಾಡಿದ್ದಾರೆ. ಈ ಬಿಗ್ ಬಜೆಟ್ ಸಿನಿಮಾ 2026ರ ಜನವರಿ 9 ರಂದು ಬಿಡುಗಡೆಯಾಗಲಿದೆ. ಅದ್ಧೂರಿಯಾಗಿ ಮುಹೂರ್ತ ಕಾರ್ಯಕ್ರಮವೂ ಜರುಗಿದ್ದು, ಇನ್ನೇನು ಶೀಘ್ರದಲ್ಲಿ ಶೂಟಿಂಗ್‌ ಸಹ ಶುರುವಾಗಲಿದೆ.ಸಿನಿಮಾದ ಮುಹೂರ್ತಕ್ಕೆ ಆಗಮಿಸಿದ್ದಾಗ ವಾಚ್ ಒಂದನ್ನು ಜೂ ಎನ್​ಟಿಆರ್ ಧರಿಸಿದ್ದರು. ಕೈಗೆ ತೊಟ್ಟಿದ್ದ ಗಡಿಯಾರ ಸಖತ್ ಗಮನ ಸೆಳೆಯಿತು. ಅಂದಹಾಗೆ ಈ ಗಡಿಯಾರದ ಬೆಲೆಗೆ ಒಂದು ಸಣ್ಣ ಬಜೆಟ್​ನ ಸಿನಿಮಾ ನಿರ್ಮಾಣ ಮಾಡಿಬಿಡಬಹುದು.

ಜೂ ಎನ್​ಟಿಆರ್ ಕಪ್ಪು ಬಣ್ಣದ ಲೆದರ್ ಬೆಲ್ಟ್ ಹೊಂದಿರುವ ನೀಲಿ-ಚಿನ್ನದ ಬಣ್ಣದ ಡಯಲ್ ಹೊಂದಿರುವ, ನೋಡಲು ತೀರ ಅದ್ಧೂರಿ ಎಂದೇನೂ ಅನಿಸದಿದ್ದ ವಾಚ್ ಒಂದನ್ನು ಧರಿಸಿದ್ದರು. ಇದರ ಬೆಲೆ ಬರೋಬ್ಬರಿ 2.53 ಕೋಟಿ ರೂಪಾಯಿಗಳು. ಜೂ ಎನ್​ಟಿಆರ್ ಧರಿಸಿದ್ದು ಪೆಟೆಕ್ ಫಿಲಿಫ್ ಸಂಸ್ಥೆಯ ವಾಚ್‌. ಫಿಲಿಪ್ 5370 ಪಿ ಸ್ಪ್ಲಿಟ್-ಸೆಕೆಂಡ್ಸ್ ಕ್ರೊನೊಗ್ರಾಫ್ ವಾಚ್. ಸೆಲ್ಫ್​ ವೆಂಡಿಂಗ್ ಮೆಕ್ಯಾನಿಕಲ್ ಮೂಮೆಂಟ್ ಹೊಂದಿದೆ. ಅಪರೂಪದ ಮಾಡೆಲ್​ನ ಈ ವಾಚಿನಲ್ಲಿ ಬಿಳಿ ಚಿನ್ನದ ಬಳಕೆಯನ್ನೂ ಸಹ ಮಾಡಲಾಗಿದೆ.

ಇದನ್ನೂ ಓದಿ: Vinay Rajkumar: ವಿನಯ್ ರಾಜ್ ಕುಮಾರ್ ‘ಪೆಪೆ’ ಸಿನಿಮಾ ವಿತರಣೆ ಮಾಡಲಿದೆ ಕೆ ಆರ್ ಜಿ!

ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಅಭಿನಯದ ಈ ಸಿನಿಮಾದ ಲಾಂಚಿಂಗ್‌ ಇವೆಂಟ್‌ ಶುಕ್ರವಾರ ಹೈದರಾಬಾದ್‌ನಲ್ಲಿ ನಡೆಯಿತು. ಯಾವುದೇ ಪೂರ್ವ ಮಾಹಿತಿ ಇಲ್ಲದೆ ಸರಳವಾಗಿ ಈ ಮುಹೂರ್ತ ಸಮಾರಂಭವನ್ನು ನಡೆಸಲಾಯಿತು. ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಚಿತ್ರದ ಉದ್ಘಾಟನಾ ಕಾರ್ಯಕ್ರಮದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಜೊತೆಗೆ ಕಲ್ಯಾಣ್ ರಾಮ್ ಮತ್ತು ಚಿತ್ರದ ನಿರ್ಮಾಪಕರು ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಈಗಾಗಲೇ ಎನ್‌ಟಿಆರ್‌ ಮತ್ತು ನೀಲ್‌ ಜೋಡಿಯ ಸಿನಿಮಾ ಘೋಷಣೆ ಆಗಿಯೇ ವರ್ಷಗಳು ಕಳೆದಿವೆ. ಆದರೆ, ಮುಂದುವರಿದು ಯಾವುದೇ ಅಪ್ಡೇಟ್‌ ಹೊರಬಂದಿರಲಿಲ್ಲ. ಇದೀಗ ಎನ್‌ಟಿಆರ್‌ ಮತ್ತು ನೀಲ್‌ ಕಾಂಬಿನೇಷನ್‌ ಸಿನಿಮಾ ಸೆಟ್ಟೇರಿದೆ. ಈ ಸುದ್ದಿ ತಿಳಿದ ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಮುಹೂರ್ತ ಮಾತ್ರವಲ್ಲದೆ, ಚಿತ್ರದ ಬಿಡುಗಡೆಯ ದಿನಾಂಕವನ್ನೂ ಘೋಷಣೆ ಮಾಡಲಾಗಿದೆ. 2026ರ ಸಂಕ್ರಾಂತಿಗೆ ಈ ಸಿನಿಮಾ ತೆರೆಗೆ ಅಪ್ಪಳಿಸಲಿದೆ. ಮೂಲ ತೆಲುಗು ಜತೆಗೆ, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂನಲ್ಲಿ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ.

ಬ್ಲಾಕ್‌ಬಸ್ಟರ್ ಹಿಟ್‌ ಸಿನಿಮಾಗಳಿಂದಲೇ ಹೆಸರುವಾಸಿಯಾದ ಪ್ರಶಾಂತ್ ನೀಲ್, ಎನ್‌ಟಿಆರ್‌ ಜತೆಗಿನ ಈ ಸಿನಿಮಾಕ್ಕೆ ಇನ್ನಷ್ಟು ಶ್ರಮ ಹಾಕುತ್ತಿದ್ದಾರೆ. ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರವನ್ನು ಕಲ್ಯಾಣ್ ರಾಮ್ ನಂದಮೂರಿ, ನವೀನ್ ಯೆರ್ನೇನಿ, ರವಿಶಂಕರ್ ಯಲಮಂಚಿಲಿ ಮತ್ತು ಹರಿಕೃಷ್ಣ ಕೊಸರಾಜು ಅವರು ಮೈತ್ರಿ ಮೂವೀ ಮೇಕರ್ಸ್ ಮತ್ತು ಎನ್‌ಟಿಆರ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ. ಕೆಜಿಎಫ್‌, ಸಲಾರ್‌ ಖ್ಯಾತಿಯ ಭುವನ್ ಗೌಡ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಲಿದ್ದು, ರವಿ ಬಸ್ರೂರ್ ಸಂಗೀತ ಸಂಯೋಜಿಸಲಿದ್ದಾರೆ. ಚಿತ್ರದ ಪಾತ್ರವರ್ಗ ಇನ್ನಷ್ಟೇ ಅಂತಿಮವಾಗಬೇಕಿದೆ.

Exit mobile version