Site icon Vistara News

Actor Dhanush: ಧನುಷ್‌ ತಮ್ಮ ಮಗ ಎಂದು ಕೋರ್ಟ್‌ ಮೆಟ್ಟಿಲೇರಿದ್ದ ವ್ಯಕ್ತಿಯ ಸಾವು

Actor Dhanush Kathiresan Who Claims and Died Due To Illness

ಕಾಲಿವುಡ್‌ ನಟ ಧನುಷ್‌ (Actor Dhanush) ಅವರ ತಂದೆ ಎಂದು ಹೇಳಿಕೊಂಡು ಬಂದು ಕೋರ್ಟ್‌ ಮೆಟ್ಟಿಲೇರಿದ್ದ ಕದಿರೇಶನ್ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಏ. 13ರ ಶುಕ್ರವಾರ ಕದಿರೇಷನ್ (72) ರಾತ್ರಿ ಕೊನೆಯಿಸಿರೆಳೆದಿದ್ದಾರೆ ಎಂದು ವರದಿಯಾಗಿದೆ. ಅನಾರೋಗ್ಯದಂದಾಗಿ (Kathiresan) ಮಧುರೈನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಕದಿರೇಶನ್ ಮತ್ತು ಮೀನಾಕ್ಷಿ ಮಧುರೈನ ಮೇಲೂರು ತಾಲೂಕಿನ ಮಲಂಪಟ್ಟಿ ಗ್ರಾಮದ ನಿವಾಸಿಗಳು. ಧನುಷ್ ತಮಗೆ ಹುಟ್ಟಿದ ಮೂರನೇ ಮಗ ಎಂದು ಹೇಳಿಕೊಂಡು ಕಾನೂನು ಸಮರ ನಡೆಸಿತ್ತು ಈ ಜೋಡಿ. ನಿರ್ದೇಶಕ ಕಸ್ತೂರಿ ರಾಜ ಮತ್ತು ವಿಜಯಲಕ್ಷ್ಮಿ ದಂಪತಿ ಪುತ್ರ ಧನುಷ್‌ ಎಂಬುದೇ ಗೊತ್ತಿರುವ ವಿಚಾರ. ಆದರೆ ಈ ಕದಿರೇಶನ್ ಜೋಡಿ ಆರೋಪ ಮಾಡಿದ್ದು ಬೇರೆಯಾಗಿತ್ತು. 11ನೇ ತರಗತಿಯಲ್ಲಿ ಓದಲು ಮನೆ ತೊರೆದ ಮಗ ಮರಳಿ ಮನೆಗೆ ಬಾರಲಿಲ್ಲ. ಅದೇ ಸಮಯಕ್ಕೆ ಧನುಷ್‌ ಕಸ್ತೂರಿ ರಾಜ ಮನೆಯ ದತ್ತು ಮಗನಾದ. ಆ ಮಗನೇ ಈಗಿನ ಧನುಷ್‌ ಎಂದು ಕದಿರೇಶನ್ ಮತ್ತು ಅವರ ಪತ್ನಿ ಮೀನಾಕ್ಷಿ ಕೋರ್ಟ್‌ನಲ್ಲಿ ಹೇಳಿಕೊಂಡಿದ್ದರು. ಮಾತ್ರವಲ್ಲ ತಮಗೆ ಪರಿಹಾರ ನೀಡುವಂತೆ ಕೋರ್ಟ್‌ನಲ್ಲಿ ಕೇಳಿಕೊಂಡಿದ್ದರು ದಂಪತಿ. ಇದಾದ ಬಳಿಕ ಮೇಲೂರು ನ್ಯಾಯಾಲಯದಲ್ಲಿ ದಂಪತಿ ಸಲ್ಲಿಸಿದ್ದ ಪ್ರಕರಣವನ್ನು ಚೆನ್ನೈ ಹೈಕೋರ್ಟ್ ವಜಾಗೊಳಿಸಿತ್ತು.‌

ಇದರ ಜತೆಗೆ ಕದಿರೇಶನ್‌ ಆರೋಗ್ಯ ಸಂಪೂರ್ಣ ಹಾಳಲಾಗಿತ್ತು. ಇದೇ ಕೊರಗಿನಲ್ಲಿದ್ದ ಕದಿರೇಶನ್ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: Actor Dhanush: ಧನುಷ್‌-ರಶ್ಮಿಕಾ ಅಭಿನಯದ ಸಿನಿಮಾದ ಟೈಟಲ್‌ ರಿವೀಲ್‌!

ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ ನಟ ಧನುಷ್-ಐಶ್ವರ್ಯಾ ರಜನಿಕಾಂತ್!

ನಟ ಧನುಷ್ (Actor Dhanush) ಹಾಗೂ ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್ ಇತ್ತೀಚೆಗೆ ಚೆನ್ನೈ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಪರಸ್ಪರ ಒಪ್ಪಿಗೆ ಮೇರೆಗೆ ಜೋಡಿ ವಿಚ್ಛೇದನ ಸಲ್ಲಿಸಿದೆ. ಶೀಘ್ರದಲ್ಲೇ ಜೋಡಿಯ ಪ್ರಕರಣದ ವಿಚಾರಣೆ ನಡೆಯಲಿದೆ ಎಂದು ವರದಿಯಾಗಿದೆ. ಕಳೆದ ಎರಡು ವರ್ಷಗಳಿಂದ ಧನುಷ್ ಮತ್ತು ಐಶ್ವರ್ಯ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ.

ಧನುಷ್ ಹಾಗೂ ಐಶ್ವರ್ಯಾ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಮದುವೆಯಾಗಿ ಬರೋಬ್ಬರಿ 18 ವರ್ಷಗಳ ಬಳಿಕ ದೂರಾಗುತ್ತಿರುವುದಾಗಿ ಹೇಳಿದ್ದರು. ವಿಚ್ಛೇದನ ವಿಚಾರ ಘೋಷಣೆ ಬಳಿಕ ಇಬ್ಬರು ತಮ್ಮ ಮಕ್ಕಳಾದ ಯಾತ್ರಾ ಮತ್ತು ಲಿಂಗ ಶಾಲೆಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು.

Exit mobile version