Site icon Vistara News

Actor Suriya: ಹೊಸ ಸಿನಿಮಾ ಅನೌನ್ಸ್‌ ಮಾಡಿದ ಕಾಲಿವುಡ್‌ ನಟ ಸೂರ್ಯ: ಅಚ್ಚರಿಯಾಗಿದೆ ಪೋಸ್ಟರ್‌!

Actor Suriya announces film

ಬೆಂಗಳೂರು: ಕೆಲವು ದಿನಗಳ ಹಿಂದೆಯಷ್ಟೇ ʻಕಂಗುವʼ ಟೀಸರ್‌ ಔಟ್‌ ಆಗಿತ್ತು. ಇದರ ಬೆನ್ನಲ್ಲೇ ತಮ್ಮ ಮುಂದಿನ ಸಿನಿಮಾ ಯಾವುದು ಎಂದು ಅನೌನ್ಸ್‌ ಮಾಡಿದ್ದಾರೆ ಸೂರ್ಯ (Actor Suriya). ತಮ್ಮ ಮುಂದಿನ ಚಿತ್ರಕ್ಕಾಗಿ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ (Karthik Subbaraj) ಅವರೊಂದಿಗೆ ಕೈಜೋಡಿಸಿರುವುದಾಗಿ ನಟ ಗುರುವಾರ (ಮಾ.28) ಘೋಷಿಸಿದರು. ಸೂರ್ಯ ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟರ್ ಹಂಚಿಕೊಂಡಿದ್ದಾರೆ.

‘ಪ್ರೀತಿ , ನಗು, ಯುದ್ಧ’!

ಪೋಸ್ಟರ್‌ ಬಹಳ ಕುತೂಹಲಕಾರಿಯಾಗಿದ್ದು, ಮರದ ಹಿಂದೆ ಕಾರು ಧಗ ಧಗ ಉರಿದಿದೆ. ಮರದಲ್ಲಿ ಹೃದಯವನ್ನು ಕೆತ್ತಲಾಗಿದೆ. ಅದಕ್ಕೆ ಬಾಣ ಚುಚ್ಚಿದೆ. ‘ಪ್ರೀತಿ , ನಗು, ಯುದ್ಧ’ ಎಂದು ಅಡಿ ಬರಹ ನೀಡಲಾಗಿದೆ. ಈ ಪೋಸ್ಟರ್‌ ಕಂಡು ಸಿನಿಪ್ರಿಯರು ಅಚ್ಚರಿಗೆ ಒಳಗಾಗಿದ್ದಾರೆ.

“ಹೊಸ ಆರಂಭ..! ನಿಮ್ಮೆಲ್ಲರ ಶುಭ ಹಾರೈಕೆಗಳು ಬೇಕು!” ಎಂದು ಸೂರ್ಯ ಈ ಪೋಸ್ಟರ್‌ ಶೇರ್‌ ಮಾಡಿಕೊಂಡಿದ್ದಾರೆ. ಕಾರ್ತಿಕ್‌ ಜತೆ ಇರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ʻವಾಡಿ ವಾಸಲ್; ಚಿತ್ರಕ್ಕಾಗಿ ಸೂರ್ಯ ನಿರ್ದೇಶಕ ವೆಟ್ರಿಮಾರನ್ ಜತೆ ಕೈಜೋಡಿಸಬೇಕಿತ್ತು. ಆದರೆ ಸೂರ್ಯ ಅನೌನ್ಸ್‌ ಮಾಡಿದ್ದೇ ಬೇರೆಯಾಗಿದೆ. ಇದು ಸೂರ್ಯ ಅವರ 44ನೇ ಸಿನಿಮಾ ಆಗಿದೆ. 42ನೇ ಚಿತ್ರ ʻಕಂಗುವʼ ಸಿನಿಮಾ ರಿಲೀಸ್‌ಗಾಗಿ ಸೂರ್ಯ ಫ್ಯಾನ್ಸ್‌ ಕಾಯುತ್ತಿದ್ದಾರೆ. ಕಾರ್ತಿಕ್ ಅವರ ಕೊನೆಯ ಚಿತ್ರ ʻಜಿಗರ್ತಂಡ ಡಬಲ್ ಎಕ್ಸ್ʼ 2023ರಲ್ಲಿ ಬಿಡುಗಡೆಯಾಗಿ ಉತ್ತಮ ವಿಮರ್ಶೆಗಳನ್ನು ಪಡೆದಿತ್ತು. ಇದೀಗ ಕಾರ್ತಿಕ್‌ ಸೂರ್ಯ ಜತೆ ಸಿನಿಮಾ ಮಾಡುತ್ತಿದ್ದಾರೆ. ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಾಗಿದೆ.

ಇದನ್ನೂ ಓದಿ: Actor Suriya: `ಸುಧಾ ಕೊಂಗರ’ ನಿರ್ದೇಶನದ ಸಿನಿಮಾ ಇನ್ನೂ ಸೆಟ್ಟೇರಲೇ ಇಲ್ಲ! ಸೂರ್ಯ ಹೇಳಿದ್ದೇನು?

ಕ್ರೂರ ಅವತಾರ ತಾಳಿದ ಬಾಬಿ ಡಿಯೋಲ್​

ಇನ್ನು ಕಂಗುವ ವಿಚಾರಕ್ಕೆ ಬಂದರೆ ಈಗಾಲೇ ಸಿನಿಮಾದ ಟೀಸರ್‌ ಔಟ್‌ ಆಗಿದೆ. ಬಾಲಿವುಡ್​ ನಟ ಬಾಬಿ ಡಿಯೋಲ್​ ಕೂಡ ಹೊಸ ಅವತಾರ ತಾಳಿದ್ದಾರೆ. ವೀಕ್ಷಕರಂತೂ ಸೂರ್ಯ ಅವರ ರಗಡ್‌ ಲುಕ್‌ಗೆ ಫಿದಾ ಆಗಿದ್ದಾರೆ.ಯುವಿ ಕ್ರಿಯೇಷನ್ಸ್ ಸಹಯೋಗದಲ್ಲಿ ಸ್ಟುಡಿಯೋ ಗ್ರೀನ್ ನಿರ್ಮಾಣ ಸಂಸ್ಥೆಯು ಸೂರ್ಯ ಮತ್ತು ದಿಶಾ ಪಟಾನಿ ಅಭಿನಯದ ‘ಕಂಗುವ’ ಚಿತ್ರವನ್ನು ನಿರ್ಮಿಸುತ್ತಿದೆ. ಇದು ಸಾಹಸಮಯ ಚಿತ್ರವಾಗಿದ್ದು, 2024ರ ಆರಂಭದಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದೆ. ಖ್ಯಾತ ಕಾಲಿವುಡ್ ನಟ ಸೂರ್ಯ (Actor Suriya) ಅವರು ಸಿರುತೈ ಶಿವ ನಿರ್ದೇಶನದ ಬಹು ನಿರೀಕ್ಷಿತ ಪ್ರಾಜೆಕ್ಟ್ ʻಕಂಗುವʼ ಚಿತ್ರವನ್ನು 38 ಭಾಷೆಗಳಲ್ಲಿ ಬಿಡುಗಡೆ ಮಾಡುವುದಾಗಿ ಇತ್ತೀಚಿನ ಸಂದರ್ಶನವೊಂದರಲ್ಲಿ ಚಿತ್ರದ ನಿರ್ಮಾಪಕ ಕೆ.ಇ.ಜ್ಞಾನವೇಲ್ ರಾಜಾ ಅವರು ಹೇಳಿದ್ದಾರೆ. ‘ಕಂಗುವ’ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಾತ್ರವಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಬಿಡುಗಡೆ ಮಾಡುವ ಆಲೊಚನೆಯನ್ನು ನಿರ್ಮಾಪಕರು ಹಾಕಿಕೊಂಡಿದ್ದಾರೆ.

ಮೂಲಗಳ ಪ್ರಕಾರ ಈ ಸಿನಿಮಾದಲ್ಲಿ ನಟ ಐದು ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವೆಂಕಟೇರ್, ಅರತಾರ್, ಮಂದಾಂಕರ್, ಮುಕಾತಾರ್ ಮತ್ತು ಪೆರುಮಾನಾಥರ್ ಎಂಬ ಐದು ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ದಿಶಾ ಪಟಾನಿ ಈ ಚಿತ್ರದ ಮೂಲಕ ತಮಿಳಿಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇದರಲ್ಲಿ ಕೋವೈ ಸರಳಾ, ಯೋಗಿ ಬಾಬು, ಆನಂದ್ ರಾಜ್, ರೆಡಿನ್ ಕಿಂಗ್ಸ್ಲಿ, ರವಿ ರಾಘವೇಂದ್ರ ಮತ್ತು ಇತರರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

Exit mobile version