Site icon Vistara News

Venu Swamy: ಚೈತು-ಶೋಭಿತಾದು ಜಾತಕ ಮಾತ್ರವಲ್ಲ ನಿಶ್ಚಿತಾರ್ಥ ಮುಹೂರ್ತವೇ ಸರಿಯಿಲ್ಲ ಎಂದ ಜ್ಯೋತಿಷಿ ವೇಣುಸ್ವಾಮಿ!

Venu Swamy Prediction On Naga Chaitanya And Sobhita Dhulipala Engagement

ಬೆಂಗಳೂರು: ಜ್ಯೋತಿಷಿ ವೇಣುಸ್ವಾಮಿ (Venu Swamy) . ತೆಲುಗು ಚಿತ್ರರಂಗದವರ (Tollywood), ರಾಜಕಾರಣಿಗಳ ಭವಿಷ್ಯ ಹೇಳಿ ಜನಪ್ರಿಯವಾಗಿದ್ದ ಸೆಲೆಬ್ರಿಟಿ ಜ್ಯೋತಿಷಿ ರಶ್ಮಿಕಾ, ಸಮಂತಾ, ನಯನತಾರಾ ಹೀಗೆ ಹಲವು ಟಾಪ್‌ ನಟಿಯರ ಭವಿಷ್ಯ ನುಡಿದು ಫೇಮಸ್‌ ಆದವರು ವೇಣುಸ್ವಾಮಿ. ಈ ಮುಂಚೆ ಚೈತನ್ಯ-ಸಮಂತಾ ಜಾತಕಗಳ ಪ್ರಕಾರ ಅವಿಬ್ಬರ ಮದುವೆ ಸಂಬಂಧ ಬಹಳ ದಿನ ಉಳಿಯಲ್ಲ ಎಂದಿದ್ದರು. ವೇಣುಸ್ವಾಮಿಹೇಳಿದಾಗ ಎಲ್ಲರೂ ಟೀಕಿಸಿದ್ದರು. ಅದೇ ನಿಜವಾದಾಗ ಹುಬ್ಬೇರಿಸಿದ್ದರು. ಇದೀಗ ಮತ್ತೆ ನಾಗ ಚೈತನ್ಯ ಹಾಗೂ ಶೋಭಿತಾ ಅವರ ಭವಿಷ್ಯ ನುಡಿದಿದ್ದಾರೆ.

ವೇಣುಸ್ವಾಮಿ ಚೈತು-ಶೋಭಿತಾ ಮದುವೆ ಜೀವನದ ಬಗ್ಗೆ ಭವಿಷ್ಯ ನುಡಿದಿದ್ದಾರೆ. “ನಾಗ ಚೈತನ್ಯ- ಶೋಭಿತಾ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ನಾಗಾರ್ಜುನ ಅಧಿಕೃತವಾಗಿ ಘೋಷಿಸಿದ್ದಾರೆ. ಯಾವ ಮುಹೂರ್ತದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬುದನ್ನು ಯಾವ ಜ್ಯೋತಿಷಿಯೂ ಹೇಳಬಲ್ಲರು. ಅವರ ನಿಶ್ಚಿತಾರ್ಥ ಉತ್ತರಾ ನಕ್ಷತ್ರದಲ್ಲಿ ನಡೆದಿದೆ. ನಾಗ ಚೈತನ್ಯಾ ರಾಶಿ ಕರ್ಕಾಟಕ. ಶೋಭಿತಾದು ರಾಶಿ ಧನು ರಾಶಿ. ನಾಗ ಚೈತನ್ಯಗೆ 6 ಮತ್ತು ಶೋಭಿತಾಗೆ 8. ಇಬ್ಬರ ಜಾತಕ ಹೊಂದುವುದಿಲ್ಲ ಸಮಂತಾ, ಶೋಭಿತಾ ಜಾತಕಗಳನ್ನು ನೋಡಿದರೆ ಇಬ್ಬರ ಜಾತಕಗಳಲ್ಲಿ ಶನಿ ದೃಷ್ಟಿ ಕುಜನ ಮೇಲಿದೆ. ಶೋಭಿತಾ ಜಾತಕದಲ್ಲಿ ಶನಿ ದೃಷ್ಟಿ ಶುಕ್ರ, ಗುರುವಿನ ಮೇಲೆಯೂ ಇದೆ. ಇದನ್ನು ನೋಡಿದರೆ 2027ರಿಂದ ಸಮಸ್ಯೆ ಎದುರಾಗುವಂತಿದೆ. ಎಂದಿದ್ದಾರೆ.

ʻʻಜಾತಕ ಮಾತ್ರವಲ್ಲ ನಿಶ್ಚಿತಾರ್ಥ ಮುಹೂರ್ತವೇ ಸರಿಯಿಲ್ಲ. ಚೈತನ್ಯ-ಸಮಂತಾಗೆ ನಾನು 100ಕ್ಕೆ 50 ಅಂಕ ಕೊಡ್ತೀನಿ. ಆದರೆ ಚೈತು-ಶೋಬಿತಾಗೆ 10 ಅಂಕ ಮಾತ್ರ ಕೊಡ್ತೀನಿʼʼಎಂದಿದ್ದಾರೆ.

ಇದನ್ನೂ ಓದಿ: Venu Swamy: ನನ್ನ ಹೇಳಿಕೆ ಸುಳ್ಳಾಯ್ತು, ಟಿಡಿಪಿ ಪಕ್ಷ ಗೆದ್ದಿತು; ಇನ್ನೆಂದೂ ಭವಿಷ್ಯ ನುಡಿಯಲಾರೆ ಎಂದ ಖ್ಯಾತ ಜ್ಯೋತಿಷಿ!

ಜ್ಯೋತಿಷಿ ವೇಣುಸ್ವಾಮಿ (Venu Swamy) ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಗೆ ಮುನ್ನ, ಜಗನ್​ ಪಕ್ಷ ಮತ್ತೆ ಗೆಲ್ಲುತ್ತದೆ, ಮತ್ತೆ ಜಗನ್ ಸಿಎಂ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಅವರ ಭವಿಷ್ಯ ಸುಳ್ಳಾಗಿತ್ತು. ರಾಜಕೀಯ ಮತ್ತು ಚಿತ್ರರಂಗದ ಗಣ್ಯರ ವೈಯಕ್ತಿಕ ಜೀವನದ ಬಗ್ಗೆ ಇನ್ನು ಮುಂದೆ ಭವಿಷ್ಯ ಹೇಳುವುದಿಲ್ಲ ಎಂದು ಜ್ಯೋತಿಷಿ ವೇಣು ಸ್ವಾಮಿ ವಿಡಿಯೊ ಮೂಲಕ ಹೇಳಿಕೊಂಡಿದ್ದರು.

ಆಗಸ್ಟ್ 8ರ ದಿನಾಂಕಕ್ಕೂ ಸಮಂತಾ ಮತ್ತು ನಾಗಚೈತನ್ಯಗೂ (Naga Chaitanya) ನಂಟಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಕೆಲ ವರ್ಷಗಳ ಹಿಂದೆ ‘ಏ ಮಾಯಾ ಚೇಸಾವೆ’ ಸಿನಿಮಾ ಮಾಡುವಾಗ ಆ.8ರ ದಿನಾಂಕದಂದು ನಾಗಚೈತನ್ಯಗೆ ಸಮಂತಾ ಪ್ರೇಮ ನಿವೇದನೆ ಮಾಡಿದ್ದರು. ಹಾಗಾಗಿ ಈ ದಿನ ಇಬ್ಬರ ಪಾಲಿಗೆ ವಿಶೇಷವಾಗಿತ್ತು. ಈಗ ಬೇಕಂತಲೇ ಮಾಜಿ ಪತ್ನಿ ವಿರುದ್ಧ ಸೇಡು ತೀರಿಸಿಕೊಳ್ಳಲು ನಟ ಆಗಸ್ಟ್‌ 8ರಂದೇ ಶೋಭಿತಾ ಧೂಳಿಪಾಲ ಜತೆ ಎಂಗೇಜ್‌ ಆಗಿದ್ದಾರೆ ಎನ್ನಲಾಗಿದೆ.

Exit mobile version