Venu Swamy: ಚೈತು-ಶೋಭಿತಾದು ಜಾತಕ ಮಾತ್ರವಲ್ಲ ನಿಶ್ಚಿತಾರ್ಥ ಮುಹೂರ್ತವೇ ಸರಿಯಿಲ್ಲ ಎಂದ ಜ್ಯೋತಿಷಿ ವೇಣುಸ್ವಾಮಿ! - Vistara News

ಟಾಲಿವುಡ್

Venu Swamy: ಚೈತು-ಶೋಭಿತಾದು ಜಾತಕ ಮಾತ್ರವಲ್ಲ ನಿಶ್ಚಿತಾರ್ಥ ಮುಹೂರ್ತವೇ ಸರಿಯಿಲ್ಲ ಎಂದ ಜ್ಯೋತಿಷಿ ವೇಣುಸ್ವಾಮಿ!

Venu Swamy: ʻʻಜಾತಕ ಮಾತ್ರವಲ್ಲ ನಿಶ್ಚಿತಾರ್ಥ ಮುಹೂರ್ತವೇ ಸರಿಯಿಲ್ಲ. ಚೈತನ್ಯ-ಸಮಂತಾಗೆ ನಾನು 100ಕ್ಕೆ 50 ಅಂಕ ಕೊಡ್ತೀನಿ. ಆದರೆ ಚೈತು-ಶೋಬಿತಾಗೆ 10 ಅಂಕ ಮಾತ್ರ ಕೊಡ್ತೀನಿʼʼಎಂದಿದ್ದಾರೆ. ಈ ಮುಂಚೆ ಚೈತನ್ಯ-ಸಮಂತಾ ಜಾತಕಗಳ ಪ್ರಕಾರ ಅವಿಬ್ಬರ ಮದುವೆ ಸಂಬಂಧ ಬಹಳ ದಿನ ಉಳಿಯಲ್ಲ ಎಂದಿದ್ದರು. ವೇಣುಸ್ವಾಮಿಹೇಳಿದಾಗ ಎಲ್ಲರೂ ಟೀಕಿಸಿದ್ದರು.

VISTARANEWS.COM


on

Venu Swamy Prediction On Naga Chaitanya And Sobhita Dhulipala Engagement
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಜ್ಯೋತಿಷಿ ವೇಣುಸ್ವಾಮಿ (Venu Swamy) . ತೆಲುಗು ಚಿತ್ರರಂಗದವರ (Tollywood), ರಾಜಕಾರಣಿಗಳ ಭವಿಷ್ಯ ಹೇಳಿ ಜನಪ್ರಿಯವಾಗಿದ್ದ ಸೆಲೆಬ್ರಿಟಿ ಜ್ಯೋತಿಷಿ ರಶ್ಮಿಕಾ, ಸಮಂತಾ, ನಯನತಾರಾ ಹೀಗೆ ಹಲವು ಟಾಪ್‌ ನಟಿಯರ ಭವಿಷ್ಯ ನುಡಿದು ಫೇಮಸ್‌ ಆದವರು ವೇಣುಸ್ವಾಮಿ. ಈ ಮುಂಚೆ ಚೈತನ್ಯ-ಸಮಂತಾ ಜಾತಕಗಳ ಪ್ರಕಾರ ಅವಿಬ್ಬರ ಮದುವೆ ಸಂಬಂಧ ಬಹಳ ದಿನ ಉಳಿಯಲ್ಲ ಎಂದಿದ್ದರು. ವೇಣುಸ್ವಾಮಿಹೇಳಿದಾಗ ಎಲ್ಲರೂ ಟೀಕಿಸಿದ್ದರು. ಅದೇ ನಿಜವಾದಾಗ ಹುಬ್ಬೇರಿಸಿದ್ದರು. ಇದೀಗ ಮತ್ತೆ ನಾಗ ಚೈತನ್ಯ ಹಾಗೂ ಶೋಭಿತಾ ಅವರ ಭವಿಷ್ಯ ನುಡಿದಿದ್ದಾರೆ.

ವೇಣುಸ್ವಾಮಿ ಚೈತು-ಶೋಭಿತಾ ಮದುವೆ ಜೀವನದ ಬಗ್ಗೆ ಭವಿಷ್ಯ ನುಡಿದಿದ್ದಾರೆ. “ನಾಗ ಚೈತನ್ಯ- ಶೋಭಿತಾ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ನಾಗಾರ್ಜುನ ಅಧಿಕೃತವಾಗಿ ಘೋಷಿಸಿದ್ದಾರೆ. ಯಾವ ಮುಹೂರ್ತದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬುದನ್ನು ಯಾವ ಜ್ಯೋತಿಷಿಯೂ ಹೇಳಬಲ್ಲರು. ಅವರ ನಿಶ್ಚಿತಾರ್ಥ ಉತ್ತರಾ ನಕ್ಷತ್ರದಲ್ಲಿ ನಡೆದಿದೆ. ನಾಗ ಚೈತನ್ಯಾ ರಾಶಿ ಕರ್ಕಾಟಕ. ಶೋಭಿತಾದು ರಾಶಿ ಧನು ರಾಶಿ. ನಾಗ ಚೈತನ್ಯಗೆ 6 ಮತ್ತು ಶೋಭಿತಾಗೆ 8. ಇಬ್ಬರ ಜಾತಕ ಹೊಂದುವುದಿಲ್ಲ ಸಮಂತಾ, ಶೋಭಿತಾ ಜಾತಕಗಳನ್ನು ನೋಡಿದರೆ ಇಬ್ಬರ ಜಾತಕಗಳಲ್ಲಿ ಶನಿ ದೃಷ್ಟಿ ಕುಜನ ಮೇಲಿದೆ. ಶೋಭಿತಾ ಜಾತಕದಲ್ಲಿ ಶನಿ ದೃಷ್ಟಿ ಶುಕ್ರ, ಗುರುವಿನ ಮೇಲೆಯೂ ಇದೆ. ಇದನ್ನು ನೋಡಿದರೆ 2027ರಿಂದ ಸಮಸ್ಯೆ ಎದುರಾಗುವಂತಿದೆ. ಎಂದಿದ್ದಾರೆ.

ʻʻಜಾತಕ ಮಾತ್ರವಲ್ಲ ನಿಶ್ಚಿತಾರ್ಥ ಮುಹೂರ್ತವೇ ಸರಿಯಿಲ್ಲ. ಚೈತನ್ಯ-ಸಮಂತಾಗೆ ನಾನು 100ಕ್ಕೆ 50 ಅಂಕ ಕೊಡ್ತೀನಿ. ಆದರೆ ಚೈತು-ಶೋಬಿತಾಗೆ 10 ಅಂಕ ಮಾತ್ರ ಕೊಡ್ತೀನಿʼʼಎಂದಿದ್ದಾರೆ.

ಇದನ್ನೂ ಓದಿ: Venu Swamy: ನನ್ನ ಹೇಳಿಕೆ ಸುಳ್ಳಾಯ್ತು, ಟಿಡಿಪಿ ಪಕ್ಷ ಗೆದ್ದಿತು; ಇನ್ನೆಂದೂ ಭವಿಷ್ಯ ನುಡಿಯಲಾರೆ ಎಂದ ಖ್ಯಾತ ಜ್ಯೋತಿಷಿ!

ಜ್ಯೋತಿಷಿ ವೇಣುಸ್ವಾಮಿ (Venu Swamy) ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಗೆ ಮುನ್ನ, ಜಗನ್​ ಪಕ್ಷ ಮತ್ತೆ ಗೆಲ್ಲುತ್ತದೆ, ಮತ್ತೆ ಜಗನ್ ಸಿಎಂ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಅವರ ಭವಿಷ್ಯ ಸುಳ್ಳಾಗಿತ್ತು. ರಾಜಕೀಯ ಮತ್ತು ಚಿತ್ರರಂಗದ ಗಣ್ಯರ ವೈಯಕ್ತಿಕ ಜೀವನದ ಬಗ್ಗೆ ಇನ್ನು ಮುಂದೆ ಭವಿಷ್ಯ ಹೇಳುವುದಿಲ್ಲ ಎಂದು ಜ್ಯೋತಿಷಿ ವೇಣು ಸ್ವಾಮಿ ವಿಡಿಯೊ ಮೂಲಕ ಹೇಳಿಕೊಂಡಿದ್ದರು.

ಆಗಸ್ಟ್ 8ರ ದಿನಾಂಕಕ್ಕೂ ಸಮಂತಾ ಮತ್ತು ನಾಗಚೈತನ್ಯಗೂ (Naga Chaitanya) ನಂಟಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಕೆಲ ವರ್ಷಗಳ ಹಿಂದೆ ‘ಏ ಮಾಯಾ ಚೇಸಾವೆ’ ಸಿನಿಮಾ ಮಾಡುವಾಗ ಆ.8ರ ದಿನಾಂಕದಂದು ನಾಗಚೈತನ್ಯಗೆ ಸಮಂತಾ ಪ್ರೇಮ ನಿವೇದನೆ ಮಾಡಿದ್ದರು. ಹಾಗಾಗಿ ಈ ದಿನ ಇಬ್ಬರ ಪಾಲಿಗೆ ವಿಶೇಷವಾಗಿತ್ತು. ಈಗ ಬೇಕಂತಲೇ ಮಾಜಿ ಪತ್ನಿ ವಿರುದ್ಧ ಸೇಡು ತೀರಿಸಿಕೊಳ್ಳಲು ನಟ ಆಗಸ್ಟ್‌ 8ರಂದೇ ಶೋಭಿತಾ ಧೂಳಿಪಾಲ ಜತೆ ಎಂಗೇಜ್‌ ಆಗಿದ್ದಾರೆ ಎನ್ನಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಟಾಲಿವುಡ್

Prashanth Neel-Jr Ntr:‌ ಸೆಟ್ಟೇರಿತು ಪ್ರಶಾಂತ್ ನೀಲ್- ಜ್ಯೂ.ಎನ್‌ಟಿಆರ್ ಸಿನಿಮಾ; ರಿಲೀಸ್‌ ಡೇಟ್‌ ಅನೌನ್ಸ್!

Prashanth Neel: ಕೆಲವು ವರ್ಷಗಳ ಹಿಂದೆ ಈ ಚಿತ್ರ ಘೋಷಿಸಲ್ಪಟ್ಟಿದ್ದರೂ, ಜೂನಿಯರ್ ಎನ್ಟಿಆರ್ ಮತ್ತು ಪ್ರಶಾಂತ್ ನೀಲ್ ಅವರ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಸಿನಿಮಾ ವಿಳಂಬವಾಯಿತು. ಚಿತ್ರೀಕರಣವು ಸೆಪ್ಟೆಂಬರ್ 2024 ರಲ್ಲಿ ಪ್ರಾರಂಭವಾಗಲಿದೆ ಎಂಬ ವದಂತಿಗಳಿವೆ.

VISTARANEWS.COM


on

Prashanth Neel-Jr Ntr Gets A Release Date
Koo

ಬೆಂಗಳೂರು: ಡೈರೆಕ್ಟರ್ ಪ್ರಶಾಂತ್ ನೀಲ್ (Prashanth Neel) ಮತ್ತು ಜ್ಯೂ.ಎನ್‌ಟಿಆರ್ (Jr.Ntr) ಕಾಂಬಿನೇಷನ್‌ನ ಹೊಸ ಸಿನಿಮಾದ ಮುಹೂರ್ತ (ಆ.9) ಹೈದರಾಬಾದ್‌ನಲ್ಲಿ ಸರಳವಾಗಿ ಜರುಗಿದೆ.ಬಹು ನಿರೀಕ್ಷಿತ ಚಿತ್ರವನ್ನು ತಾತ್ಕಾಲಿಕವಾಗಿ NTR31 ಎಂದು ಹೆಸರಿಡಲಾಗಿದೆ. 2026 ರಜನವರಿ 9ರಂದು ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಡಲಿದೆ.

ಮೈತ್ರಿ ಮೂವಿ ಮೇಕರ್ಸ್‌ ಅಧಿಕೃತ X ಹ್ಯಾಂಡಲ್ (ಚಿತ್ರದ ನಿರ್ಮಾಣ ಸಂಸ್ಥೆ), ಹೊಸ ಪೋಸ್ಟರ್ ಜೊತೆಗೆ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಿದೆ. “ಈ ಬಾರಿ, ಅವರ ಆಳ್ವಿಕೆಯಲ್ಲಿ ಭೂಮಿ ಕಂಪಿಸುತ್ತದೆ! MAN OF MASSES ʼʼಎಂದು ಬರೆದುಕೊಂಡಿದೆ. ಹೈದರಾಬಾದ್‌ನ ರಾಮನಾಯ್ಡು ಸ್ಟುಡಿಯೋದಲ್ಲಿ ಜ್ಯೂ.ಎನ್‌ಟಿಆರ್ ನಟನೆಯ 31ನೇ ಸಿನಿಮಾದ ಮುಹೂರ್ತ ಕಾರ್ಯಕ್ರಮ ಸಂಭ್ರಮದಿಂದ ಜರುಗಿದೆ. ಈ ವೇಳೆ, ಚಿತ್ರತಂಡದ ಜೊತೆ ತಾರಕ್ ಸಹೋದರ ಕಲ್ಯಾಣ್ ರಾಮ್ ಕುಟುಂಬ, ಪ್ರಶಾಂತ್ ನೀಲ್ ಕುಟುಂಬಸ್ಥರಷ್ಟೇ ಭಾಗಿಯಾಗಿದ್ದರು.

ಕೆಲವು ವರ್ಷಗಳ ಹಿಂದೆ ಈ ಚಿತ್ರ ಘೋಷಿಸಲ್ಪಟ್ಟಿದ್ದರೂ, ಜೂನಿಯರ್ ಎನ್ಟಿಆರ್ ಮತ್ತು ಪ್ರಶಾಂತ್ ನೀಲ್ ಅವರ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಸಿನಿಮಾ ವಿಳಂಬವಾಯಿತು. ಚಿತ್ರೀಕರಣವು ಸೆಪ್ಟೆಂಬರ್ 2024 ರಲ್ಲಿ ಪ್ರಾರಂಭವಾಗಲಿದೆ ಎಂಬ ವದಂತಿಗಳಿವೆ.

ಇದನ್ನೂ ಓದಿ: Prashanth Neel: ʼಸಲಾರ್‌ʼ ಬಿಗ್‌ ಅಪ್‌ಡೇಟ್‌; ಕಥೆಯ ಗುಟ್ಟು ಬಿಟ್ಟುಕೊಟ್ಟ ಪ್ರಶಾಂತ್‌ ನೀಲ್‌!

ಚಿತ್ರಕ್ಕೆ ʻಡ್ರ್ಯಾಗನ್ʼ ಎಂದು ಹೆಸರಿಡಬಹುದು ಎಂಬ ಊಹಾಪೋಹವಿದೆ. ಹಲವಾರು ತಿಂಗಳುಗಳಿಂದ ಪ್ರೀ-ಪ್ರೊಡಕ್ಷನ್ ನಡೆಯುತ್ತಿದೆ. ಇಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಮಾಡೋದಾಗಿ ಘೋಷಣೆ ಮಾಡಿದ್ರೂ ಕೂಡ ಇತ್ತೀಚೆಗೆ ಈ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಿ ಮುಹೂರ್ತ ಕಾರ್ಯಕ್ರಮ ಮಾಡಿರೋದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.

ಜ್ಯೂನಿಯರ್‌ ಎನ್‌ಟಿಆರ್‌ ಅವರ ಜನ್ಮದಿನವಾದ ಜನವರಿ 8 ರಂದು, ‘ದೇವರ’ ನಿರ್ಮಾಪಕರು ಫಸ್ಟ್‌ ಲುಕ್‌ವನ್ನು ಹಂಚಿಕೊಂಡಿದ್ದರು, ಅಲ್ಲಿಂದ ಸಿನಿಮಾ ಬಗ್ಗೆ ಸಿನಿರಸಿಕರಿಗೆ ನಿರೀಕ್ಷೆ ಹೆಚ್ಚಾಗಿತ್ತು. ಸೈಫ್ ಅಲಿಖಾನ್ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಕಾರಣಗಳಿಂದಾಗಿ ದೇವರ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಲಾಗಿದೆ.

ಜ್ಯೂನಿಯರ್‌ ಎನ್‌ಟಿಆರ್‌, ಸೈಫ್ ಅಲಿ ಖಾನ್ ಮತ್ತು ಜಾನ್ವಿ ಕಪೂರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ದೇವರ’ ಚಿತ್ರವನ್ನು ಕೊರಟಾಲ ಶಿವ ನಿರ್ದೇಶಿಸಿದ್ದಾರೆ. 2016ರಲ್ಲಿ ಇವರು ಜನತಾ ಗ್ಯಾರೇಜ್ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದರು. ಅದರಲ್ಲಿ ಕೂಡ ಜ್ಯೂನಿಯರ್ ಎನ್​ಟಿಆರ್ ನಾಯಕನಾಗಿದ್ದರು. ಅದಾದ ಮೇಲೆ ಕೊರಟಾಲ ಶಿವ ಅವರೊಟ್ಟಿಗೆ ಜ್ಯೂ.ಎನ್​ಟಿಆರ್ ಯಾವುದೇ ಸಿನಿಮಾವನ್ನೂ ಮಾಡಿರಲಿಲ್ಲ.

. ದೇವರ ಸಿನಿಮಾದಲ್ಲಿ ಜ್ಯೂನಿಯರ್ ಎನ್​ಟಿಆರ್​ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಯೂ ಇದೆ. ಅಪ್ಪ-ಮಗ ಎರಡೂ ಪಾತ್ರದಲ್ಲಿ ಇವರೇ ಅಭಿನಯ ಮಾಡಲಿದ್ದಾರಂತೆ. ಇದೊಂದು ಪಕ್ಕಾ ಆ್ಯಕ್ಷನ್​ ಚಿತ್ರದಂತೆ ಕಾಣಿಸುತ್ತಿದೆ. ಯುವಸುಧಾ ಆರ್ಟ್ಸ್ ಮತ್ತು ಜ್ಯೂನಿಯರ್‌ ಎನ್‌ಟಿಆರ್‌ ಆರ್ಟ್ಸ್ ಈ ಚಿತ್ರವನ್ನು ನಿರ್ಮಿಸಿದ್ದು, ನಂದಮೂರಿ ಕಲ್ಯಾಣ್ ರಾಮ್ ಅವರು ಪ್ರಸ್ತುತಪಡಿಸಿದ್ದಾರೆ.

ಈ ಚಿತ್ರದ OTT ಹಕ್ಕುಗಳನ್ನು ಸ್ಟ್ರೀಮಿಂಗ್ ಕಂಪನಿ ನೆಟ್ಫ್ಲಿಕ್ಸ್ ಭಾರಿ ಬೆಲೆಗೆ ಪಡೆದುಕೊಂಡಿದೆ. ಮಾಹಿತಿಯ ಪ್ರಕಾರ, ನೆಟ್ಫ್ಲಿಕ್ಸ್ 155 ಕೋಟಿ ರೂಪಾಯಿ ನೀಡಿ ಈ ಚಿತ್ರದ OTT ಹಕ್ಕುಗಳನ್ನು ಪಡೆದುಕೊಂಡಿದೆ ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Continue Reading

ಸಿನಿಮಾ

Double iSmart: ʻಡಬಲ್ ಇಸ್ಮಾರ್ಟ್ ʼಸಿನಿಮಾದ ಬಿಗ್ ಬುಲ್ ಸಾಂಗ್ ಔಟ್‌!

Double iSmart: ಭಾಸ್ಕರಭಟ್ಲ ರವಿಕುಮಾರ್ ಅವರ ಸಾಹಿತ್ಯವು ಬಿಗ್ ಬುಲ್ ಪಾತ್ರವನ್ನು ಪರಿಚಯಸಿದೆ. ಪೃಧ್ವಿ ಚಂದ್ರ ಮತ್ತು ಸಂಜನಾ ಕಲ್ಮಂಜೆ ಅವರ ಗಾಯನವು ಹಾಡಿಗೆ ಮತ್ತಷ್ಟು ಶಕ್ತಿಯನ್ನು ತುಂಬಿದೆ. ಮಣಿ ಶರ್ಮಾ ಸಂಗೀತ ಒದಗಿಸಿದ್ದಾರೆ.

VISTARANEWS.COM


on

Double iSmart bull bull song Out
Koo

ಬೆಂಗಳೂರು: ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ʻಡಬಲ್ ಇಸ್ಮಾರ್ಟ್ʼ ಥಿಯೇಟ್ರಿಕಲ್ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಉಸ್ತಾದ್ ರಾಮ್ ಪೋತಿನೇನಿ ಮತ್ತು ಡೈನಾಮಿಕ್ ಡೈರೆಕ್ಟರ್ ಪೂರಿ ಜಗನ್ನಾಥ್ ಜೋಡಿ ಚಿತ್ರವು ಆಗಸ್ಟ್ 15 ರಂದು ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ.

ಇಂದು, ಚಿತ್ರತಂಡ ಬಿಗ್ ಬುಲ್ ಎಂಬ ವಿಶೇಷ ಹಾಡನ್ನು ಬಿಡುಗಡೆ ಮಾಡಿದೆ. ಪೂರಿ ಜಗನ್ನಾಥ್ ಅವರು ತಮ್ಮ ಖಳನಾಯಕರನ್ನು ಅಷ್ಟೇ ಶಕ್ತಿಶಾಲಿ ಪಾತ್ರಗಳಲ್ಲಿ ಪ್ರಸ್ತುತಪಡಿಸಲು ಹೆಸರುವಾಸಿಯಾಗಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿ, ಅವರು ಡಬಲ್ ಇಸ್ಮಾರ್ಟ್ ನಲ್ಲಿ ಮುಖ್ಯ ಖಳನಾಯಕನ ಮೇಲೆ ಹಾಡನ್ನು ತಯಾರಿಸಿದ್ದಾರೆ. ಬಿಗ್ ಬುಲ್ ಪಾತ್ರವನ್ನು ಸಂಜಯ್ ದತ್ ನಿರ್ವಹಿಸಿದ್ದಾರೆ.

ಭಾಸ್ಕರಭಟ್ಲ ರವಿಕುಮಾರ್ ಅವರ ಸಾಹಿತ್ಯವು ಬಿಗ್ ಬುಲ್ ಪಾತ್ರವನ್ನು ಪರಿಚಯಸಿದೆ. ಪೃಧ್ವಿ ಚಂದ್ರ ಮತ್ತು ಸಂಜನಾ ಕಲ್ಮಂಜೆ ಅವರ ಗಾಯನವು ಹಾಡಿಗೆ ಮತ್ತಷ್ಟು ಶಕ್ತಿಯನ್ನು ತುಂಬಿದೆ. ಮಣಿ ಶರ್ಮಾ ಸಂಗೀತ ಒದಗಿಸಿದ್ದಾರೆ.

ಇದನ್ನೂ ಓದಿ: Duniya Vijay: ರಾಜ್ಯಾದ್ಯಂತ `ಭೀಮ’ ಸಿನಿಮಾ ರಿಲೀಸ್; ಬ್ಲಾಕ್‌ ಕೋಬ್ರಾಗೆ ಭರ್ಜರಿ ವೆಲ್‌ಕಮ್‌ ಮಾಡಿದ ಫ್ಯಾನ್ಸ್‌!

ಡಬಲ್ ಇಸ್ಮಾರ್ಟ್ ಚಿತ್ರ ಪುರಿ ಕನೆಕ್ಟ್ಸ್ ಬ್ಯಾನರ್ ಅಡಿಯಲ್ಲಿ ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ನಿರ್ಮಿಸಿದ್ದಾರೆ. ಸ್ಯಾಮ್ ಕೆ ನಾಯ್ಡು ಮತ್ತು ಗಿಯಾನಿ ಗಿಯಾನ್ನೆಲಿ ಕ್ಯಾಮೆರಾ ಹಿಡಿದಿದ್ದಾರೆ.

ಸ್ವಾತಂತ್ರ್ಯ ದಿನದಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರವು ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Continue Reading

ಟಾಲಿವುಡ್

Naga Chaitanya: ಸಮಂತಾಗೆ ಪ್ರಪೋಸ್‌ ಮಾಡಿದ ದಿನವೇ ಎಂಗೇಜ್‌ ಆದ ನಾಗಚೈತನ್ಯ! ಮಾಜಿ ಪತ್ನಿ ವಿರುದ್ಧ ಸೇಡು ತೀರಿಸಿಕೊಂಡ್ರಾ ನಟ?

Naga Chaitanya: 37 ವರ್ಷದ ನಟ ನಾಗ ಚೈತನ್ಯ ಅವರು 32 ವರ್ಷದ ಶೋಭಿತಾಗೆ ತಮ್ಮ ಹೈದರಾಬಾದ್ನ ಮನೆಯಲ್ಲಿ ಉಂಗುರ ತೊಡಿಸಿದ್ದಾರೆ. ಈ ಜೋಡಿ ನಡುವೆ 5 ವರ್ಷಗಳ ಏಜ್ ಗ್ಯಾಪ್ ಇದೆ. ನಾಗ ಚೈತನ್ಯಗಿಂತ ಶೋಭಿತಾ 5 ವರ್ಷ ಚಿಕ್ಕವರಾಗಿದ್ದಾರೆ.

VISTARANEWS.COM


on

Naga Chaitanya got engaged on the day he proposed to Samantha
Koo

ಬೆಂಗಳೂರು: ಆಗಸ್ಟ್ 8ರ ದಿನಾಂಕಕ್ಕೂ ಸಮಂತಾ ಮತ್ತು ನಾಗಚೈತನ್ಯಗೂ (Naga Chaitanya) ನಂಟಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಕೆಲ ವರ್ಷಗಳ ಹಿಂದೆ ‘ಏ ಮಾಯಾ ಚೇಸಾವೆ’ ಸಿನಿಮಾ ಮಾಡುವಾಗ ಆ.8ರ ದಿನಾಂಕದಂದು ನಾಗಚೈತನ್ಯಗೆ ಸಮಂತಾ ಪ್ರೇಮ ನಿವೇದನೆ ಮಾಡಿದ್ದರು. ಹಾಗಾಗಿ ಈ ದಿನ ಇಬ್ಬರ ಪಾಲಿಗೆ ವಿಶೇಷವಾಗಿತ್ತು. ಈಗ ಬೇಕಂತಲೇ ಮಾಜಿ ಪತ್ನಿ ವಿರುದ್ಧ ಸೇಡು ತೀರಿಸಿಕೊಳ್ಳಲು ನಟ ಆಗಸ್ಟ್‌ 8ರಂದೇ ಶೋಭಿತಾ ಧೂಳಿಪಾಲ ಜತೆ ಎಂಗೇಜ್‌ ಆಗಿದ್ದಾರೆ ಎನ್ನಲಾಗಿದೆ.

ನಾಗ ಚೈತನ್ಯ (Naga Chaitanya) ಮತ್ತು ಶೋಭಿತಾ ಧೂಳಿಪಾಲ ಅವರು ಆಗಸ್ಟ್ 8 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಜೋಡಿ ಹೈದರಾಬಾದ್‌ನಲ್ಲಿ ನಾಗಾರ್ಜುನ ಅವರ ಮನೆಯಲ್ಲಿ ಎಂಗೇಜ್‌ಮೆಂಟ್‌ ಮಾಡಿಕೊಂಡಿದೆ. ನಿಶ್ಚಿತಾರ್ಥ ಸಮಾರಂಭದ ಫೋಟೋಗಳನ್ನು ಸೂಪರ್‌ಸ್ಟಾರ್ ನಾಗಾರ್ಜುನ ಹಂಚಿಕೊಂಡು ಜೋಡಿಗೆ ಆಶೀರ್ವದಿಸಿದರು.

37 ವರ್ಷದ ನಟ ನಾಗ ಚೈತನ್ಯ ಅವರು 32 ವರ್ಷದ ಶೋಭಿತಾಗೆ ತಮ್ಮ ಹೈದರಾಬಾದ್ನ ಮನೆಯಲ್ಲಿ ಉಂಗುರ ತೊಡಿಸಿದ್ದಾರೆ. ಈ ಜೋಡಿ ನಡುವೆ 5 ವರ್ಷಗಳ ಏಜ್ ಗ್ಯಾಪ್ ಇದೆ. ನಾಗ ಚೈತನ್ಯಗಿಂತ ಶೋಭಿತಾ 5 ವರ್ಷ ಚಿಕ್ಕವರಾಗಿದ್ದಾರೆ.

ಇದನ್ನೂ ಓದಿ: Naga Chaitanya: ನಿಶ್ಚಿತಾರ್ಥದ ಮೊದಲು ಮಾಜಿ ಪತ್ನಿಯ ಪೋಟೊ ಡಿಲಿಟ್‌ ಮಾಡಿದ ನಾಗ ಚೈತನ್ಯ!

ಮೇ 2022ರಲ್ಲಿ, ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಮೊದಲ ಬಾರಿಗೆ ಹೈದರಾಬಾದ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಶೋಭಿತಾ ಧೂಳಿಪಾಲ ತಮ್ಮ ʻಮೇಜರ್ʼ ಚಿತ್ರದ ಪ್ರಚಾರಕ್ಕಾಗಿ ನಗರಕ್ಕೆ ಬಂದಿದ್ದರು. ಆ ಸಮಯದಲ್ಲಿ ನಟಿ ಚಿತ್ರದ ಪ್ರಚಾರ ಮಾತ್ರವಲ್ಲದೆ ಮೇ 31 ರಂದು ಜನ್ಮದಿನ ಆಚರಣೆ ಮಾಡಿಕೊಂಡಿದ್ದರು. ನಾಗ ಚೈತನ್ಯ ಅವರು ಆಚರಣೆಯ ಭಾಗವಾಗಿದ್ದರು. ಬಳಿಕ ಅಲ್ಲಿಂದ ಇಬ್ಬರೂ ಸ್ನೇಹಿತರಾದರು. ಅವರ ಸ್ನೇಹ ಬಲವಾಗಿ ಡೇಟಿಂಗ್ ಪ್ರಾರಂಭಿಸಿದರು. ಎರಡು ವರ್ಷಗಳ ಕಾಲ ಒಟ್ಟಿಗೆ ಸಮಯ ಕಳೆದಿದ್ದರು. ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ವಕೇಶನ್‌ಗೆ ಹೋಗಿರುವ ಹಲವಾರು ಫೋಟೊಗಳು ವೈರಲ್‌ ಆಗಿವೆ. ಆದರೆ ಪ್ರತಿ ಬಾರಿ ಡೇಟಿಂಗ್‌ ವಂದತಿ ಹಬ್ಬಿದ್ದಾಗಲೂ ಜೋಡಿ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿರಲಿಲ್ಲ. ಇದೀಗ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರು ಆಗಸ್ಟ್ 8 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

Continue Reading

ಟಾಲಿವುಡ್

Pushpa 2 New Poster: ಲುಂಗಿಯುಟ್ಟು ಒಂದು ಕೈಯಲ್ಲಿ ಕೊಡಲಿ, ಇನ್ನೊಂದು ಕೈಯಲ್ಲಿ ಗನ್ ಹಿಡಿದು ಅಬ್ಬರಿಸಿದ ಫಹಾದ್ ಫಾಸಿಲ್! ​

Pushpa 2 New Poster: ಬನ್ವರ್​ ಸಿಂಗ್​ ಶೆಕಾವತ್​ ಎಂಬುದು ಆ ಪಾತ್ರದ ಹೆಸರು. ಹುಟ್ಟುಹಬ್ಬದ ಪ್ರಯುಕ್ತ ಅವರ ಪಾತ್ರದ ಫಸ್ಟ್​ ಲುಕ್​ ಬಿಡುಗಡೆ ಮಾಡಲಾಗಿದೆ.ರಶ್ಮಿಕಾ ಮಂದಣ್ಣ ಸಹ ನಟ ಫಹಾದ್ ಫಾಸಿಲ್‌ಗೆ ಶುಭ ಹಾರೈಸಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಪೋಸ್ಟರ್ ಅನ್ನು ಹಂಚಿಕೊಂಡ ರಶ್ಮಿಕಾ, “ನಿಮಗೆ ಜನ್ಮದಿನದ ಶುಭಾಶಯಗಳು ಸರ್” ಎಂದು ಬರೆದಿದ್ದಾರೆ.

VISTARANEWS.COM


on

Pushpa 2 New Poster Fahadh Faasil Birthday Treat
Koo

ಬೆಂಗಳೂರು: ಫಹಾದ್ ಫಾಸಿಲ್ ಆಗಸ್ಟ್‌ 8ರಂದು ತಮ್ಮ 42ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಫಹಾದ್ ಫಾಸಿಲ್ (Pushpa 2 New Poster) ಹುಟ್ಟುಹಬ್ಬಕ್ಕೆ ಪುಷ್ಪಾ 2 ತಂಡ ( Fahadh Faasil’s Birthday ) ಹೊಸ ಪೋಸ್ಟರ್ ಅನಾವರಣಗೊಳಿಸಿದೆ. ಗನ್​, ಕೊಡಲಿ ಹಿಡಿದು ಫಹಾದ್​ ಪಾಸಿಲ್​ ಪೋಸ್​ ನೀಡಿದ್ದಾರೆ. ಬನ್ವರ್​ ಸಿಂಗ್​ ಶೆಕಾವತ್​ ಎಂಬುದು ಆ ಪಾತ್ರದ ಹೆಸರು. ಹುಟ್ಟುಹಬ್ಬದ ಪ್ರಯುಕ್ತ ಅವರ ಪಾತ್ರದ ಫಸ್ಟ್​ ಲುಕ್​ ಬಿಡುಗಡೆ ಮಾಡಲಾಗಿದೆ.

ಪೋಸ್ಟರ್‌ನಲ್ಲಿ ಫಹಾದ್ ಫಾಸಿಲ್ ಲುಂಗಿ ಧರಿಸಿರುವುದನ್ನು ಕಾಣಬಹುದು. ಒಂದು ಕೈಯಲ್ಲಿ ಪಿಸ್ತೂಲು ಮತ್ತು ಇನ್ನೊಂದು ಕೈಯಲ್ಲಿ ಗುದ್ದಲಿ ಹಿಡಿದಿರುವುದನ್ನು ಕಾಣಬಹುದು. ರಶ್ಮಿಕಾ ಮಂದಣ್ಣ ಸಹ ನಟ ಫಹಾದ್ ಫಾಸಿಲ್‌ಗೆ ಶುಭ ಹಾರೈಸಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಪೋಸ್ಟರ್ ಅನ್ನು ಹಂಚಿಕೊಂಡ ರಶ್ಮಿಕಾ, “ನಿಮಗೆ ಜನ್ಮದಿನದ ಶುಭಾಶಯಗಳು ಸರ್” ಎಂದು ಬರೆದಿದ್ದಾರೆ.

ಡಿಸೆಂಬರ್‌ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಕೆಲವು ದಿನಗಳ ಹಿಂದೆ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ತೆಗೆದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಕೆಲವರು ಮೈತ್ರಿ ಮೂವಿ ಮೇಕರ್ಸ್‌ಗಳಿಗೆ ಕ್ರಮ ತೆಗೆದುಕೊಳ್ಳುವಂತೆ ಕೇಳಿದ್ದಾರೆ. ಒಬ್ಬರು ʻನೀವು ವೀಡಿಯೊವನ್ನು ಏಕೆ ಲೀಕ್ ಮಾಡುತ್ತಿದ್ದೀರಿʼಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ದಯವಿಟ್ಟು ವಿಡಿಯೊವನ್ನು ಡಿಲಿಟ್‌ ಮಾಡಿ ಎಂದು ಕಮೆಂಟ್‌ ಮಾಡಿದ್ದಾರೆ.ಸುಕುಮಾರ್ ಅವರು ‘ಪುಷ್ಪ 2’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಡಾಲಿ ಧನಂಜಯ್ ಸೇರಿ ಅನೇಕರು ಸಿನಿಮಾದಲ್ಲಿ ಇದ್ದಾರೆ.

ಇದನ್ನೂ ಓದಿ; Pushpa 2: ಪುಷ್ಪ 2 ಕ್ಲೈ ಮ್ಯಾಕ್ಸ್‌ ದೃಶ್ಯ ಲೀಕ್‌; ಕೋಪ ಹೊರ ಹಾಕಿದ ಅರ್ಜುನ್‌ ಫ್ಯಾನ್ಸ್‌!

2021ರಲ್ಲಿ ತೆರೆಕಂಡು ಬಾಕ್ಸ್‌ ಆಫೀಸ್‌ನಲ್ಲಿ ಮ್ಯಾಜಿಕ್‌ ಮಾಡುದ್ದ ಪ್ಯಾನ್‌ ಇಂಡಿಯಾ ಸಿನಿಮಾ ʼಪುಷ್ಪʼದ ಮುಂದುವರಿದ ಭಾಗ ಇದು. ಸುಕುಮಾರ್ ನಿರ್ದೇಶನದ ‘ಪುಷ್ಪ 2’ ಚಿತ್ರದ ಮೊದಲ ಹಾಡು ಈಗಾಗಲೇ ರಿಲೀಸ್‌ ಆಗಿ ಧೂಳೆಬ್ಬಿಸುತ್ತಿದೆ. ಅದರಲ್ಲಿಯೂ ಯೂಟ್ಯೂಬ್‌ನಲ್ಲಿ ದಾಖಲೆಯ ವೀಕ್ಷಣೆ ಕಂಡಿದೆ. ʻಪುಷ್ಪ ಪುಷ್ಪʼ ಎಂದು ಶುರುವಾಗುವ ಹಾಡಿಗೆ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದು, ಇದರಲ್ಲಿನ ಹುಕ್ ಸ್ಟೆಪ್ ವೈರಲ್‌ ಆಗಿದೆ. ಎರಡನೇ ಹಾಡು ಕೂಡ ಔಟ್‌ ಆಗಿದ್ದು, ಅಲ್ಲು ಅರ್ಜುನ್‌ ಜತೆ ರಶ್ಮಿಕಾ ಹೆಜ್ಜೆ ಹಾಕಿದ್ದಾರೆ. ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದೆ.

Continue Reading
Advertisement
love jihad mohammad ishphaq vismaya
ಕರ್ನಾಟಕ2 mins ago

Vis: ಕೇರಳದ ಯುವಕನನ್ನು ಮದುವೆಯಾದ ಮಂಗಳೂರಿನ ಹಿಂದೂ ಯುವತಿ; ಹಿಂದೂ ಸಂಘಟನೆಗಳ ಹೋರಾಟ ನಿಷ್ಫಲ

Heart attack
ಉಡುಪಿ8 mins ago

Heart Attack : ಮಲಗಿದ್ದಲೇ ಹೃದಯ ಸ್ತಬ್ಧ! ನಾಲ್ಕೈದು ದಿನದ ಬಳಿಕ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

Paris Olympics
ಪ್ರಮುಖ ಸುದ್ದಿ19 mins ago

Paris Olympics Medal Table: ಪಾಕಿಸ್ತಾನ 1 ಪದಕ ಗೆದ್ದರೂ ಪದಕ ಪಟ್ಟಿಯಲ್ಲಿ ಮೇಲೆ, ಭಾರತ 6 ಪದಕ ಗೆದ್ದರೂ ಕೆಳಗೆ ಏಕೆ?

John Abraham slams actors for endorsing paan masala
ಬಾಲಿವುಡ್28 mins ago

John Abraham : ನಾನು ಸಾವನ್ನು ಮಾರಲ್ಲ ಎಂದು ಶಾರುಖ್ ಖಾನ್, ಅಜಯ್ ದೇವಗನ್‌ಗೆ ಪರೋಕ್ಷವಾಗಿ ತಿರುಗೇಟು ಕೊಟ್ಟ ಜಾನ್ ಅಬ್ರಹಾಂ!

ಚಿನ್ನದ ದರ37 mins ago

Gold Rate Today: ಮತ್ತೆ ಏರಿಕೆಯಾದ ಚಿನ್ನದ ಬೆಲೆ; ಇಂದಿನ ದರ ಚೆಕ್‌ ಮಾಡಿ

Viral Video
Latest46 mins ago

Viral Video: ವೇಗವಾಗಿ ಬಂದು ಅಪ್ಪಳಿಸಿದ ಸ್ಕಾರ್ಪಿಯೋ; ಒಂದೇ ಕುಟುಂಬದ ಮೂವರು ಪಾರಾಗಿದ್ದೇ ಅಚ್ಚರಿ!

anganawadi worker
ಕೊಪ್ಪಳ52 mins ago

Anganawadi workers: ಮಕ್ಕಳ ತಟ್ಟೆಗೆ ಬಡಿಸಿದ್ದ ಮೊಟ್ಟೆಯನ್ನೇ ಎಗರಿಸುತ್ತಿದ್ದ ಅಂಗನವಾಡಿ ಶಿಕ್ಷಕಿ, ಸಹಾಯಕಿ ವಜಾ!

Hindenburg
ವಾಣಿಜ್ಯ1 hour ago

Hindenburg: ಶೀಘ್ರದಲ್ಲೇ ಭಾರತದಲ್ಲಿ ಬಹುದೊಡ್ಡ ಸಂಚಲನ ಸೃಷ್ಟಿಯಾಗಲಿದೆ; ಹೊಸದೊಂದು ಬಾಂಬ್‌ ಸಿಡಿಸಿದ ಹಿಂಡನ್‌ಬರ್ಗ್‌

Indian Men’s Hockey Team
ಕ್ರೀಡೆ1 hour ago

Indian Men’s Hockey Team: ತವರಿಗೆ ಮರಳಿದ ಕಂಚು ವಿಜೇತ ಭಾರತ ಹಾಕಿ ತಂಡ; ದಿಲ್ಲಿಯಲ್ಲಿ ಭರ್ಜರಿ ಸ್ವಾಗತ

Road Accident
ರಾಯಚೂರು1 hour ago

Road Accident : ಜವರಾಯನಂತೆ ಬಂದ ಟಾಟಾಏಸ್‌ ಚಾಲಕ; ಪಾದಯಾತ್ರೆ ಹೊರಟಿದ್ದ ತಾಯಿ ದುರ್ಮರಣ, ಮಗಳು ಗಂಭೀರ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು4 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ4 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ6 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 week ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌