Site icon Vistara News

Thala-Thalapathy Fans War | ತಾರಕಕ್ಕೇರಿದ ಅಜಿತ್‌, ವಿಜಯ್‌ ಫ್ಯಾನ್ಸ್‌ ವಾರ್‌: ಪೋಸ್ಟರ್ ಹರಿದು ಕಿತ್ತಾಟ!

Thala-Thalapathy Fans War

ಬೆಂಗಳೂರು : ಕಾಲಿವುಡ್‌ ನಟ ಅಜಿತ್‌ ಕುಮಾರ್‌ ಅಭಿನಯದ ತುನಿವು ಹಾಗೂ ದಳಪತಿ ವಿಜಯ್‌ ನಟನೆಯ ವಾರಿಸು ಸಿನಿಮಾ (Thala-Thalapathy Fans War ) ಜನವರಿ 11ರಂದು ವಿಶ್ವಾದ್ಯಂತ ಬಿಡುಗಡೆಗೊಂಡಿದೆ. ಕಾಲಿವುಡ್‌ನಲ್ಲಿ ಫ್ಯಾನ್ಸ್‌ಗಳ ಮಧ್ಯೆ ಗಲಾಟೆ ತಾರರಕ್ಕೇರಿದೆ. ಎಂಟು ವರ್ಷಗಳ ನಂತರ ಇಬ್ಬರು ನಟರ ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುತ್ತಿರುವುದು ಇದೇ ಮೊದಲು. ಮೊದಲ ದಿನದ ಮೊದಲ ಪ್ರದರ್ಶನವನ್ನು ಆನಂದಿಸಲು ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ಜಮಾಯಿಸಿದ್ದಾರೆ. ವಿಜಯ್ ಅತ್ತು ಅಜಿತ್ ಅಭಿಮಾನಿಗಳಿಬ್ಬರೂ ಚಿತ್ರದ ಪೋಸ್ಟರ್ ಹರಿದು ಕಿತ್ತಾಡಿಕೊಳ್ಳುವ ಮಟ್ಟಕ್ಕೆ ತಲುಪಿದೆ.

ದಳಪತಿ ವಿಜಯ್ ನಟನೆಯ ʻವಾರಿಸುʼ ಸಿನಿಮಾ ಮತ್ತು ಅಜಿತ್ ಕುಮಾರ್ ನಟನೆಯ ʻತುನಿವುʼ ಸಿನಿಮಾ ಒಂದೇ ದಿನ ತೆರೆಗೆ ಬಂದಿದೆ. ಸಂಕ್ರಾಂತಿ ಹಬ್ಬಕ್ಕೂ ಮೊದಲು ತೆರೆಗೆ ಬಂದ ತುನಿವು ಮತ್ತು ವಾರಿಸು ಸಿನಿಮಾಗಳು ಅಭಿಮಾನಿಗಳನ್ನು ರಂಜಿಸಿದ್ದಕ್ಕಿಂತ ಹೆಚ್ಚಾಗಿ ಕಿತ್ತಾಟಕ್ಕೆ ಕಾರಣವಾಗಿದೆ. ಕಾಲಿವುಡ್ ಬಾಕ್ಸ್ ಆಫೀಸ್ ವಾರ್‌ಗಿಂತ ಅಭಿಮಾನಿಗಳ ವಾರ್ ಜೋರಾಗಿದೆ. 

ಇದನ್ನೂ ಓದಿ | Vijay Thalapathy | ದಳಪತಿ ವಿಜಯ್-ರಶ್ಮಿಕಾ ಮಂದಣ್ಣ ಅಭಿನಯದ ʻವಾರಿಸುʼ ಟ್ರೈಲರ್‌ ಔಟ್‌!

ವರದಿ ಪ್ರಕಾರ ರೋಹಿಣಿ ಥಿಯೇಟರ್ ಬಳಿ ನೃತ್ಯ ಮಾಡುತ್ತಿದ್ದಾಗ ಲಾರಿಯಿಂದ ಬಿದ್ದು ಅಜಿತ್ ಕುಮಾರ್ ಅವರ ಅಭಿಮಾನಿಯೊಬ್ಬರು ಮೃತಪಟ್ಟಿದ್ದಾರೆ. ಚಿತ್ರಮಂದಿರದ ಹೊರಭಾಗದಲ್ಲಿದ್ದ ವಾರಿಸು ಪೋಸ್ಟರ್ ಅನ್ನು ಅಜಿತ್ ಅಭಿಮಾನಿಗಳು ಹರಿದು ಹಾಕಿದರು. ಅದೇ ಸಮಯಕ್ಕೆ ವಿಜಯ್ ಅಭಿಮಾನಿಗಳು ಸಹ ತುಣಿವು ಪೋಸ್ಟರ್ ಹರಿದು ಹಾಕಿದರು. ಪೋಸ್ಟರ್ ಹರಿದುಹಾಕುವ ಮೂಲಕ ಪ್ರಾರಂಭವಾದ ಜಗಳ ತಾರಕಕ್ಕೇರಿತು. ಪೋಸ್ಟರ್ ಬೆಂಕಿ ಹಚ್ಚಲು ಪ್ರಯತ್ನಿಸಿದರು. ಪೊಲೀಸರು ಅಜಿತ್ ಮತ್ತು ವಿಜಯ್ ಅಭಿಮಾನಿಗಳ ಮೇಲೆ ಲಾಠಿ ಚಾರ್ಜ್ ಮಾಡಿ ಅಭಿಮಾನಿಗಳನ್ನು ಚದುರಿಸಿದ್ದಾರೆ ಎಂದು ವರದಿಯಾಗಿದೆ.

ಎಚ್ ವಿನೋತ್ ನಿರ್ದೇಶನದ ʼತುನಿವುʼʼ ಚಿತ್ರದಲ್ಲಿ ಮಂಜು ವಾರಿಯರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಖ್ಯಾತ ಬಾಲಿವುಡ್‌ ನಿರ್ಮಾಪಕ ಬೋನಿ ಕಪೂರ್ ಈ ಚಿತ್ರ ನಿರ್ಮಾಣಕ್ಕೆ ಕೈಹಾಕಿರುವುದು ವಿಶೇಷ. ʼವಾರಿಸುʼ ಸಿನಿಮಾ ವೆಂಕಟೇಶ್ವರ ಕ್ರಿಯೇಷನ್ಸ್‌ ಅಡಿ ದಿಲ್‌ ರಾಜು ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ ತೆಲುಗಿನ ಬೃಂದಾವನಂ, ʻಮಹರ್ಷಿʼ ಖ್ಯಾತಿಯ ವಂಶಿ ಪೈಡಿಪಲ್ಲಿ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಸಿನಿಮಾ ಏಕಕಾಲದಲ್ಲಿ ಬಿಡುಗಡೆಯಾಗಿದೆ.

ಇದನ್ನೂ ಓದಿ | Ajith Kumar | `ತುನಿವು’ ಸಿನಿಮಾ ಬಿಡುಗಡೆ ವೇಳೆ ಟ್ರಕ್‌ನಿಂದ ಬಿದ್ದು ಅಜಿತ್‌ ಅಭಿಮಾನಿ ಸಾವು

Exit mobile version