Site icon Vistara News

Vikrant Rona Movie | ರಕ್ತಕ್ಕೆ ರಕ್ತ, ಕ್ರಾಂತಿಯ ಬೆಂಕಿ : Trailer ಇವೆಂಟ್‌ನಲ್ಲಿ ನಿರ್ದೇಶಕರ ದಂಡು

Vikrant Rona Movie Event

ಬೆಂಗಳೂರು: ʼನೆತ್ತರ ಹನಿ ಮಣ್ಣಿನಲ್ಲಿ ಬಿದ್ದು ಮನದಲ್ಲಿ ಈಗ ಕ್ರಾಂತಿಯ ಬೆಂಕಿ, ರಕ್ತಕ್ಕೆ ರಕ್ತʼ ಎನ್ನುವ ಮೂಲಕ ವಿಕ್ರಾಂತ್‌ ರೋಣ ಸಿನಿಮಾ ಟ್ರೈಲರ್‌ ಲಾಂಚ್‌ ಆಗಿದೆ. ಸ್ಯಾಂಡಲ್‌ವುಡ್‌ ಬಾದ್‌ಷಾ ಕಿಚ್ಚ ಸುದೀಪ್‌ ಅಭಿನಯದ ಪ್ಯಾನ್‌ ವರ್ಲ್ಡ್‌ ವೈಡ್‌ ಸಿನಿಮಾ ವಿಕ್ರಾಂತ್‌ ರೋಣ ಸಿನಿಮಾ (Vikrant Rona Movie) ಟ್ರೈಲರ್‌ ಲಾಂಚ್‌ ಇವೆಂಟ್‌ ಹಮ್ಮಿಕೊಂಡಿತ್ತು. ಟ್ರೈಲರ್‌ ಬಿಡುಗಡೆಗೂ ಮುಂಚೆಯೇ ಚಿತ್ರತಂಡ ಸುದ್ದಿಗೋಷ್ಟಿ ಕರೆದಿದ್ದು, ಸ್ಯಾಂಡಲ್‌ವುಡ್‌ ದಂಡೇ ಭಾಗಿಯಾಗಿದ್ದು ವಿಶೇಷವಾಗಿತ್ತು.

ಸ್ಯಾಂಡಲ್‌ವುಡ್‌ ದಂಡಿನ ಮಧ್ಯೆ ಟ್ರೈಲರ್‌ ಲಾಂಚ್‌ ಇವೆಂಟ್‌

ಬೆಂಗಳೂರಿನಲ್ಲಿ ಆಯೋಜಿಸಿದ್ದ ಇವೆಂಟ್‌ನಲ್ಲಿ ಸ್ಯಾಂಡಲ್‌ವುಡ್‌ ನಟ ನಟಿಯರು ಭಾಗಿಯಾಗಿದ್ದರು. ಎಲ್ಲ ನಟರು ಒಟ್ಟಿಗೆ ʼವಿಕ್ರಾಂತ್‌ ರೋಣ ಟ್ರೈಲರ್‌ ಲಾಂಚ್‌ ಆಲ್‌ ದ ಬೆಸ್ಟ್‌ʼ ಎಂದು ಅನೌನ್ಸ್‌ ಮಾಡುವುದರ ಮೂಲಕ ಟ್ರೈಲರ್‌ ಲಾಂಚ್‌ ಮಾಡಲಾಯಿತು.

ಟ್ರೈಲರ್‌ ಕುರಿತು ಮಾತನಾಡಿದ ಶಿವಣ್ಣ, ʼಸುದೀಪ್‌ ನಮ್ಮ ಫ್ಯಾಮಿಲಿ ಎಂದರೆ ತಪ್ಪಿಲ್ಲ. ಕೊರೊನಾ ಸಂದರ್ಭದಲ್ಲಿ ಈ ಸಿನಿಮಾ ಮಾಡಿ ಬೇರೆಯವರಿಗೂ ದಾರಿ ಮಾಡಿಕೊಡುವಂತೆ ದೈರ್ಯವನ್ನು ತುಂಬಿದ್ದರು. ಜಾಕ್ವೆಲಿನ್ ಫರ್ನಾಂಡಿಸ್ ಅವರು ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಬಂದಿರುವುದು ಸಂತಸದ ವಿಷಯ ಎಂದರು.

ರಮೇಶ್‌ ಅರವಿಂದ್‌ ಮಾತನಾಡಿ, ವಿಷ್ಯುವಲ್‌ ನೋಡಿ ತುಂಬಾ ಖುಷಿಯಾಯಿತು. 3ಡಿಯಲ್ಲಿ ನೋಡುವಾಗ ಈ ಜಗತ್ತಿನಲ್ಲಿ ಇನ್ನೊಂದು ಜಗತ್ತನ್ನು ಕ್ರಿಯೇಟ್‌ ಮಾಡಿರುವಂತೆ ಕಾಣುತ್ತಿತ್ತು ಎಂದು ಸಂತವನ್ನು ಹಂಚಿಕೊಂಡರು.

ನಟ ಮತ್ತು ನಿರ್ದೇಶಕ ರಿಷಬ್‌ ಶೆಟ್ಟಿ ಮಾತನಾಡಿ, ಖಂಡಿತವಾಗಲೂ ಸುದೀಪ್‌ ಸರ್‌ ಪಾತ್ರ ಸ್ಪೆಷಲ್‌ ಆಗಿರುತ್ತದೆ. ಸುದೀಪ್‌ ಅವರನ್ನು ಸಿನಿಮಾದಲ್ಲಿ ನೋಡಲು ಥ್ರಿಲ್‌ ಆಗಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ | ವಿಕ್ರಾಂತ್‌ ರೋಣ : ಜೂನ್‌ 23ರಂದು ಟ್ರೈರ್‌ ರಿಲೀಸ್‌

ಸುದೀಪ್‌ ಅವರೊಂದಿಗೆ ವೇದಿಕೆ ಮೇಲೆ ಬಂದ ಕ್ರೇಜಿ ಸ್ಟಾರ್‌ ರವಿಚಂದ್ರನ್‌ ಅನಿಸಿಕೆ ಹಂಚಿಕೊಂಡರು. VR ಎಂದು ನೋಡುವಾಗ ಕೇವಲ ವಿಕ್ರಾಂತ್‌ ರೋಣ ಮಾತ್ರವಲ್ಲ. ವಿಆರ್‌ ಎಂದರೆ ವಿ. ರವಿಚಂದ್ರನ್‌ ರವಿಚಂದ್ರನ್‌ ಕೂಡ ಇದ್ದಾನೆ ಎಂದು ತಮಾಷೆಯಾಗಿ ಮಾತನಾಡಿದರು. ವಿಕ್ರಾಂತ್‌ ರೋಣ ಸಿನಿಮಾ ಒಂದು ಪ್ರಪಂಚಕ್ಕೆ ಕಂಡೊಯ್ಯುತ್ತದೆ. ಸಿನಿಮಾ ನೋಡುವಾಗ ಮಾಡುವ ಉದ್ದೇಶ ಚೆನ್ನಾಗಿದೆ. ನನ್ನ ಜತೆ ಕನಸು ಕಾಣುವರು ತುಂಬಾ ಜನರು ಇದ್ದಾರೆ. ಇನ್ನೂ ಸಾಕಷ್ಟು ಸಿನಿಮಾಗಳು ಬರಬೇಕು ಎಂದು ಹೇಳಿದರು.

ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಮಾತನಾಡಿ, ಕನ್ನಡ ಚಿತ್ರರಂಗಕ್ಕೆ ಬರುವ ಮೊದಲು ಸುದೀಪ್‌ ಅವರನ್ನು ಮೀಟ್‌ ಮಾಡಿದ ಮೇಲೆ ಅವರೆ ನನಗೆ ಹಿರೋ ಆದರು. ತುಂಬಾ ಸಲ ಅವರು ನಮ್ಮನ್ನು ಅಪ್ರಿಷಿಯೇಟ್‌ ಮಾಡುತ್ತಾ ಇರುತ್ತಾರೆ. ನಿರ್ದೆಶಕ ಅನೂಪ್‌ ಭಂಡಾರಿ ಕೂಡ ಬಿಗ್‌ ಡ್ರೀಮರ್‌ ಆಗಿದ್ದಾರೆ ಎಂದು ಸಂತಸ ಹಂಚಿಕೊಂಡರು.

ಗುರುವಾರ(ಜೂನ್‌ ೨೩) ಸಂಜೆ 5:02ಕ್ಕೆ ಕಿಚ್ಚನ ಅಭಿಮಾನಿಗಳಿಗೆ ‘ವಿಕ್ರಾಂತ್ ರೋಣ’ ಟ್ರೈಲರ್ ದರ್ಶನ ಆಗಲಿದೆ. ಜುಲೈ 28ಕ್ಕೆ ‘ವಿಕ್ರಾಂತ್ ರೋಣ’ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಲಿದೆ. ಅದರಲ್ಲೂ 3-ಡಿ ರೂಪದಲ್ಲಿ ರಿಲೀಸ್ ಆಗಲಿರುವುದು ಇನ್ನೂ ವಿಶೇಷ.

ಟ್ರೇಲರ್ ರಿಲೀಸ್ ಬಗ್ಗೆ ಟ್ವೀಟ್‌ ಮಾಡಿದ ಕಿಚ್ಚ

ಸೋಷಿಯಲ್ ಮೀಡಿಯಾ ಮೂಲಕ ಸಿನಿಮಾ ಟೀಮ್ ಬಿಗ್ ಅನೌನ್ಸ್ ಮಾಡಿತ್ತು. ನಾಳೆ ಬಿಗ್ ಅನೌನ್ಸ್ ಮೆಂಟ್ ಎಂದು ಬರೆದು, ಸಖತ್ ಕ್ಯೂರಿಯಾಸಿಟಿ ಮೂಡಿಸಿತ್ತು. ಸುದೀಪ್ ಟ್ವೀಟ್ ಮೂಲಕ ವಿಕ್ರಾಂತ್ ರೋಣ ಟ್ರೇಲರ್ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ.

14 ಭಾಷೆಗಳಲ್ಲಿ 3ಡಿ ರೂಪದಲ್ಲಿ ರಿಲೀಸ್‌

ಕಿಚ್ಚ ಸುದೀಪ್ ನಟಿಸಿರುವ ಪ್ಯಾನ್ ವರ್ಲ್ಡ್ ಸಿನಿಮಾವನ್ನು ಅನೂಪ್ ಬಂಢಾರಿ ನಿರ್ದೇಶನ ಮಾಡಿದ್ದು, ಜಾಕ್ ಮಂಜು ಚಿತ್ರದ ನಿರ್ಮಾಣ ಮಾಡಿದ್ದಾರೆ. ಕನ್ನಡ ಹಿಂದಿ, ತೆಲುಗು, ತಮಿಳು ಹಾಗು ಇಂಗ್ಲೀಷ್ ಭಾಷೆಗೆ ಕಿಚ್ಚ ಸುದೀಪ್ ಅವರೇ ವಾಯ್ಸ್ ಡಬ್ ಮಾಡಿರುವುದು ಇನ್ನೂ ವಿಶೇಷ ವಿಕ್ರಾಂತ್ ರೋಣ 14 ಭಾಷೆಗಳಲ್ಲಿ 3ಡಿ ರೂಪದಲ್ಲಿ ಬಿಡುಗಡೆಯಾಗಲಿದೆ. ಜೂನ್ 28ರಂದು ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಇದನ್ನೂ ಓದಿ | ಕಿಚ್ಚ ಸುದೀಪ್‌ V/S ಅಜಯ್‌ ದೇವಗನ್‌: ʼThank Godʼ ಸಿನಿಮಾ ರಿಲೀಸ್‌ ಡೇಟ್‌ ಮುಂದಕ್ಕೆ, ವಿಕ್ರಾಂತ್‌ ರೋಣ ಫಿಕ್ಸ್‌

ಟ್ರೈಲರ್‌ ಇವೆಂಟ್‌ ಲಾಂಚ್‌ ಇವೆಂಟ್‌ನಲ್ಲಿ ಶಿವಣ್ಣ, ರವಿಚಂದ್ರನ್ ಮುಖ್ಯ ಅತಿಥಿಗಳು ಭಾಗಿಯಾಗಿದ್ದರು. ಜಾಕ್ವೆಲಿನ್ ಫೆರ್ನಾಂಡಿಸ್‌, ಸುದೀಪ್‌ ಪತ್ನಿ ಹಾಗೂ ರಾಜ್‌ ಬಿ ಶೆಟ್ಟಿ, ಸೃಜನ್‌ ಲೊಕೇಶ್‌, ಲಂಕೇಶ್‌, , ರಕ್ಷಿತ್‌ ಶೆಟ್ಟಿ, ಅರ್ಜುನ್‌ ಜನ್ಯ, ರಮೇಶ್‌ ಅರವಿಂದ್‌, ಡಾಲಿ ಧನಂಜಯ್‌ ಮುಂತಾದ ನಟ ನಟಿಯರು ಪಾಲೊಂಡಿದ್ದು ವಿಶೇಷವಾಗಿತ್ತು.

ಚಿತ್ರದಲ್ಲಿ ಕಿಚ್ಚ ಸುದೀಪ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಜಾಕ್ವೆಲಿನ್ ಫೆರ್ನಾಂಡಿಸ್ ಚಿತ್ರದಲ್ಲಿ ಗಡಂಗ್ ರಕ್ಕಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಲಿಯಂ ಡೇವಿಡ್ ಛಾಯಾಗ್ರಹಣವಿದ್ದರೆ, ಅಜನೀಶ್ ಬಿ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.

ಇದನ್ನೂ ಓದಿ | Vikrant Rona | ನಿರ್ಮಾಪಕ ಜಾಕ್ ಮಂಜುಗೆ ಅನಾರೋಗ್ಯ: ಟ್ವೀಟ್‌ನಲ್ಲಿ ಸುದೀಪ್‌ ಹೇಳಿದ್ದೇನು?

Exit mobile version