Site icon Vistara News

ದಾರಿ ಬಿಡಿ ಎಂದ ಕಾಲೇಜು ವಿದ್ಯಾರ್ಥಿಯನ್ನು ಚಾಕುವಿನಿಂದ ಇರಿದು ಓಡಿದ ಬಾಲಕರು; ಯುವಕ ಆಸ್ಪತ್ರೆಯಲ್ಲಿ ಸಾವು

Two killed as two bikes collide head on

ಇಂದೋರ್​: ಆರು ಮಂದಿ ಅಪ್ರಾಪ್ತ ವಯಸ್ಸಿನ ಬಾಲಕರು ಸೇರಿ 22 ವರ್ಷದ ಕಾಲೇಜು ಯುವಕನೊಬ್ಬನನ್ನು ಮಧ್ಯ ರಸ್ತೆಯಲ್ಲಿ, ಚಾಕುವಿನಿಂದ ಇರಿದು ಕೊಂದಿದ್ದಾರೆ. ‘ನಮ್ಮ ಬೈಕ್​ ಹೋಗಲು ದಾರಿಬಿಡಿ’ ಎಂದು ಹೇಳಿದ್ದಕ್ಕೆ ಆವೇಶಗೊಂಡ ಬಾಲಕರು ಈ ಕೃತ್ಯ ಎಸಗಿದ್ದಾರೆ.

ಮೃತ ಯುವಕನ ಹೆಸರು ಆಯುಷ್​. ಡಿಸೆಂಬರ್​ 31ರಂದು ರಾತ್ರಿ ಹೊಸವರ್ಷದ ಪಾರ್ಟಿ ನಿಮಿತ್ತ ಇಂದೋರ್​ನ ಭನ್ವಾರ್ಕುವಾನ್ ಏರಿಯಾದ ಮುಖ್ಯರಸ್ತೆ ಜನರಿಂದ ತುಂಬಿ ತುಳುಕುತ್ತಿತ್ತು. ಆಗ ಆಯುಷ್​ ಮತ್ತು ಅವನ ಸ್ನೇಹಿತರು ಬೈಕ್​​ನಲ್ಲಿ ಹೋಗುತ್ತಿದ್ದರು. ಆಯುಷ್​ ಹಿಂಬದಿಗೆ ಕುಳಿತಿದ್ದ. ರಸ್ತೆ ಮೇಲೆ ವಾಹನ ಸವಾರರಿಗೆ ಜಾಗ ಕೊಡದೆ ಹೋಗುತ್ತಿದ್ದ ಅಪ್ರಾಪ್ತ ವಯಸ್ಸಿನ ಹುಡುಗರ ಬಳಿ, ಸ್ವಲ್ಪ ಸರಿಯಿರಿ. ನಮಗೆ ದಾರಿಬಿಡಿ ಎಂದು ಹೇಳಿದ್ದಾನೆ. ಅಷ್ಟಕ್ಕೇ ಬಾಲಕರು ಕ್ರೋಧಗೊಂಡಿದ್ದಾರೆ. ಜನಸಂದಣಿ ಮಧ್ಯೆ ನಿಧಾನವಾಗಿ ಹೋಗುತ್ತಿದ್ದ ಬೈಕ್​​ನ್ನು ಬೆನ್ನಟ್ಟಿ ಬಂದ ಬಾಲಕರು ಆಯುಷ್​​ಗೆ ಚಾಕುವಿನಿಂದ ಇರಿದು ಓಡಿ ಹೋಗಿದ್ದಾರೆ. ಆಯುಷ್​​ನನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ಬಾಲಕರೆಲ್ಲ ಬಂಧಿತರಾಗಿದ್ದು, ಅದರಲ್ಲಿ ಇಬ್ಬರು 9ನೇ ತರಗತಿಯವರು ಎಂದು ಹೇಳಲಾಗಿದೆ. ಬಾಲಕರು ಸೇರಿ ಯುವಕನಿಗೆ ಚಾಕುವಿನಿಂದ ಇರಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದರಲ್ಲಿ ಒಬ್ಬ ಬಾಲಕ ಆಯುಷ್​​ಗೆ ಇರಿಯುತ್ತಿದ್ದಂತೆ, ಎಲ್ಲರೂ ಸ್ಥಳದಿಂದ ಪರಾರಿಯಾಗಿದ್ದಾರೆ.

ಇದನ್ನೂ ಓದಿ: Accident In Delhi | ದೆಹಲಿ ಯುವತಿ ಆ್ಯಕ್ಸಿಡೆಂಟ್​ ಕೇಸ್​​ನಲ್ಲಿ ಬಿಜೆಪಿ ಮುಖಂಡ ಅರೆಸ್ಟ್​; ರಾಜಕೀಯ ಸ್ವರೂಪ ಪಡೆದ ಪ್ರಕರಣ

Exit mobile version