Site icon Vistara News

ಪ್ರೀತಿಸಿದ ಹುಡುಗಿಗೆ ಮೆಸೇಜ್ ಮಾಡುತ್ತಿದ್ದ ಸ್ನೇಹಿತನನ್ನು ಕೊಂದು, ಖಾಸಗಿ ಅಂಗ ಕತ್ತರಿಸಿದ ಯುವಕ; ಗರ್ಲ್​ಫ್ರೆಂಡ್​ಗೆ ಫೋಟೋ ಕಳಿಸಿದ!

A Man Beheads Friend for texting his Girlfriend in Hyderabad

#image_title

ಹೈದರಾಬಾದ್: ತಾನು ಪ್ರೀತಿಸಿದ ಹುಡುಗಿಗೆ ಮೆಸೇಜ್​, ಕರೆ ಮಾಡಿದ ಎಂಬ ಕಾರಣಕ್ಕೆ 22 ವರ್ಷದ ಯುವಕನೊಬ್ಬ ತನ್ನ ಸ್ನೇಹಿತನನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಆತನ ತಲೆ ಕಡಿದು, ಎದೆ ಬಗೆದು ಹೃದಯವನ್ನು ಹೊರತೆಗೆದಿದ್ದಾನೆ. ಖಾಸಗಿ ಅಂಗ, ಕೈ ಬೆರಳುಗಳನ್ನು ಕತ್ತರಿಸಿದ್ದಾನೆ. ಬಳಿಕ ತಾನೇ ಹೋಗಿ ಪೊಲೀಸರಿಗೆ ಶರಣಾಗಿದ್ದಾನೆ.

ಆರೋಪಿ ಹೆಸರು ಹರಿಹರ ಕೃಷ್ಣ ಮತ್ತು ಕೊಲೆಯಾದವನ ಹೆಸರು ನವೀನ್​. ಈ ಹತ್ಯೆಗೆ ಕಾರಣ ಒಬ್ಬಳು ಹುಡುಗಿ. ಹರಿಹರಕೃಷ್ಣ ಮತ್ತು ನವೀನ್​ ಇಬ್ಬರೂ ಹೈದರಾಬಾದ್​ನ ದಿಲ್‌ಸುಖ್‌ನಗರದ ಕಾಲೇಜಿನಲ್ಲಿ ಒಟ್ಟಿಗೇ ಓದಿದ್ದಾರೆ. ಇಬ್ಬರೂ ಸ್ನೇಹಿತರು. ಹುಡುಗಿ ಕೂಡ ಇದೇ ಕಾಲೇಜಿನಲ್ಲಿಯೇ ಓದುತ್ತಿದ್ದಳು. ಮೊದಲು ನವೀನ್ ಹೋಗಿ ಆಕೆಗೆ ಪ್ರಪೋಸ್​ ಮಾಡಿದ್ದ. ಆಕೆಯೂ ಒಪ್ಪಿಕೊಂಡು, ಇಬ್ಬರೂ ಸ್ನೇಹ-ಪ್ರೀತಿಯಿಂದ ಇದ್ದರು. ಒಂದು ವರ್ಷವಾದ ಬಳಿಕ ಇವರು ಬೇರ್ಪಟ್ಟರು.

ಇದನ್ನೂ ಓದಿ: Anekal Shootout | ಆನೇಕಲ್‌ನಲ್ಲಿ ಇಬ್ಬರು ಕಿರಾತಕರಿಗೆ ಗುಂಡೇಟು; ಕ್ರೈಂ ಲೋಕದ ಪಾತಕಿಗಳಿಗೆ ಪೊಲೀಸರ ಖಡಕ್ ವಾರ್ನಿಂಗ್

ಅದಾದ ಮೇಲೆ ಹರಿಹರಕೃಷ್ಣ ಹೋಗಿ ಅದೇ ಹುಡುಗಿಗೆ ಪ್ರಪೋಸ್​ ಮಾಡಿದ. ನವೀನ್​ ಜತೆ ಬ್ರೇಕ್​ಅಪ್ ಮಾಡಿಕೊಂಡಿದ್ದ ಆಕೆ ಹರಿಹರಕೃಷ್ಣನ ಪ್ರೀತಿಯನ್ನು ಒಪ್ಪಿಕೊಂಡಳು. ಆದರೆ ನವೀನ್​ ಆ ಹುಡುಗಿಯೊಂದಿಗೆ ಪ್ರೀತಿ ಮುರಿದುಬಿದ್ದಿದ್ದರೂ ಅವಳಿಗೆ ಕರೆ ಮಾಡುವುದು, ಮೆಸೇಜ್​ ಮಾಡುವುದನ್ನು ಮುಂದುವರಿಸಿದ್ದ. ಇದರಿಂದ ಹರಿಹರಕೃಷ್ಣ ತುಂಬ ಖೇದಗೊಂಡಿದ್ದ. ಅವನಿಗೆ ಇದನ್ನು ಸಹಿಸಲು ಸಾಧ್ಯವೇ ಆಗುತ್ತಿರಲಿಲ್ಲ. ಅವನ ಪೊಸೆಸ್ಸಿವ್​ನೆಸ್ ಮಿತಿಮೀರಿತ್ತು.

ಫೆ.17ರಂದು ಇದೇ ವಿಷಯಕ್ಕೆ ನವೀನ್​ ಮತ್ತು ಹರಿಹರಕೃಷ್ಣ ಜೋರಾಗಿ ಜಗಳ ಮಾಡಿಕೊಂಡಿದ್ದಾರೆ. ಅದೂ ಬೇರೆ ಇಬ್ಬರೂ ಮದ್ಯ ಕುಡಿದಿದ್ದರು. ಅದರಲ್ಲಿ ಹರಿಹರ ಕೃಷ್ಣ ಅತ್ಯಂತ ಕ್ರೋಧಗೊಂಡು, ನವೀನ್​​ನ್ನು ಥಳಿಸಿ ಸಾಯಿಸಿದ್ದಾನೆ. ಅದಾದ ಬಳಿಕ ಅವನ ತಲೆ, ಖಾಸಗಿ ಅಂಗ, ಹೃದಯ, ಬೆರಳುಗಳನ್ನೆಲ್ಲ ದೇಹದಿಂದ ಬೇರೆ ಮಾಡಿದ್ದಾನೆ. ಅಷ್ಟೇ ಅಲ್ಲ, ಅದನ್ನು ಫೋಟೋ ತೆಗೆದು ತನ್ನ ಗರ್ಲ್​ಫ್ರೆಂಡ್​ಗೆ ಕಳಿಸಿ, ನಮ್ಮಲ್ಲಿಗೆ ಬಂದು ಶರಣಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Exit mobile version