Site icon Vistara News

ಮಾಟ ಮಾಡಿಸಿದ್ದಾಳೆ ಎಂಬ ಭ್ರಮೆಯಲ್ಲಿ ತಮ್ಮ, ಪ್ರೇಯಸಿ ಜತೆ ಸೇರಿ ತಾಯಿಯನ್ನೇ ಕೊಂದ ಡ್ರೈವರ್‌

murder

ಮುಂಬಯಿ: ಇದು ಪ್ರೀತಿಯ ಮಾಯೆಯೋ ಅಥವಾ ಮೂಢನಂಬಿಕೆಯ ಪರಮಾವಧಿಯೋ? ಗೊತ್ತಿಲ್ಲ. ಆದರೆ, ತನಗೆ ಮಾಟ ಮಾಡಿಸಿದ್ದಾಳೆ ಎಂಬ ಭ್ರಮೆಗೊಳಗಾದ ಬಸ್‌ ಡ್ರೈವರ್‌ ಒಬ್ಬ ತನ್ನ ಪ್ರೇಯಸಿ ಮತ್ತು ಅಪ್ರಾಪ್ತ ಸಹೋದರನ ಜತೆ ಸೇರಿ ಹೆತ್ತ ತಾಯಿಯನ್ನೇ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಮುಂಬಯಿಯ ವಡಾಲಾದಲ್ಲಿ ಈ ದುರ್ಘಟನೆ ಜೂನ್‌ ನಾಲ್ಕರಂದು ನಡೆದಿದೆ.

ಬೆಸ್ಟ್‌ ಬಸ್‌ ಡ್ರೈವರ್‌ʼ ಅಕ್ಷಯ ಠಾಕೂರ್‌, ಆತನ ಪ್ರೇಯಸಿ ಕೋಮಲ್ ಭೋಯಿಲ್ಕರ್‌, ಮತ್ತು ಅಕ್ಷಯನ ಅಪ್ರಾಪ್ತ ವಯಸ್ಸಿನ ಕಿರಿಯ ಸಹೋದರ ಈ ಕೃತ್ಯದ ಭಾಗಿದಾರರು. ಕೊಲೆಯಾಗಿರುವ ಮಹಿಳೆಯ ಹೆಸರು ನಿರ್ಮಲಾ ವಿಜಯ ಠಾಕೂರ್(42).

ಏನಿದು ಭ್ರಮೆ, ಕೊಲೆಗಳ ಕಥೆ?
ಸೆಕ್ಯೂರಿಟಿ ಕಂಪನಿಯಲ್ಲಿ ಸೂಪರ್‌ ವೈಸರ್‌ ಆಗಿ ಕೆಲಸ ಮಾಡುತ್ತಿದ್ದ ವಿಜಯ ಠಾಕೂರ್‌ ಜೂನ್‌ ನಾಲ್ಕರ ಮುಂಜಾನೆ ಕೆಲಸ ಮುಗಿಸಿ ವಡಾಲಾದ ಪಂಚಶೀಲ ಮನೆಗೆ ಬಂದಾಗ ಪತ್ನಿ ಮುಖದ ಮೇಲೆ ಹೊದಿಕೆ ಹೊದ್ದು ಮಲಗಿದ್ದರು. ಆದರೆ, ಎಷ್ಟು ಹೊತ್ತಾದರೂ ಏಳದೆ ಇದ್ದಾಗ ವಿಜಯ್‌ ಮುಖದ ಮೇಲಿನ ಹೊದಿಕೆ ತೆಗೆದರು. ನೋಡಿದರೆ ನಿರ್ಮಲಾ ಠಾಕೂರ್‌ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂತು. ಆತಂಕಗೊಂಡು ಕೂಡಲೇ ವಡಾಲಾ ಪೊಲೀಸರಿಗೆ ಮಾಹಿತಿ ನೀಡಿದರು.

ಇದನ್ನು ಕಂಡ ಕೂಡಲೇ ಪೊಲೀಸರಿಗೆ ಮೊದಲು ಇದು ಯಾರೋ ದರೋಡೆಕೋರರು ಮಾಡಿರುವ ಕೃತ್ಯ ಅಂತ ಅನಿಸಿತು. ಠಾಕೂರ್‌ ಅವರ ಮಕ್ಕಳು ಊರಲ್ಲಿ ಇರುವುದಿಲ್ಲ ಎಂದು ಹೇಳಿದ್ದರು. ಆದರೆ, CCTVಯನ್ನು ಗಮನಿಸಿದಾಗ ಅಕ್ಷಯ, ಕಿರಿಯ ಸಹೋದರ ಹಾಗೂ ಪ್ರೇಯಸಿ ಕೋಮಲ ಮುಂಜಾನೆ ಹೊತ್ತು ಆ ಪ್ರದೇಶದಿಂದ ಹೊರಹೋಗುವುದು ಕಂಡಿದೆ. ಈ ಕುರಿತು ಅವರನ್ನು ವಿಚಾರಿಸಿದಾಗ ಅವರು ʻನಾವು ಮನೆಯಲ್ಲಿ ಇಲ್ಲ, ಲೋನಾವಾಲಾ ಸುತ್ತಾಡಲು ಬಂದಿದ್ದೇವೆ” ಅಂತ ಹೇಳಿದರು. ಆದರೆ ಅವರ ಕಾಲ್‌ ಡಿಟೇಲ್‌ ರೆಕಾರ್ಡ್‌ (CDR) ಲೊಕೇಶನ್‌ ನೋಡಿದಾಗ ಅದು ಬೇರೆ ಜಾಗ ತೋರಿಸುತ್ತಾ ಇತ್ತು. ಆಗ ಸಂಶಯ ಬಂದು ನಮ್ಮ ತಂಡವನ್ನು ಅವರನ್ನು ಹಿಡಿದು ತರಲು ಪೊಲೀಸರನ್ನು ಕಳುಹಿಸಲಾಯಿತು. ಈ ಕುರಿತು ಮೂವರನ್ನು ಪ್ರತ್ಯೇಕವಾಗಿ ವಿಚಾರಿಸಿದಾಗ ಮೂವರು ಬೇರೆ ಬೇರೆಯದೆ ಕಹಾನಿ ಹೇಳಿದ್ದಾರೆ. ಆದರೆ ಅಕ್ಷಯನನ್ನು ಸ್ವಲ್ಪ ಪೊಲೀಸ್‌ ಭಾಷೆಯಲ್ಲಿ ಕೇಳಿದಾಗ ಸತ್ಯ ಬಾಯಿ ಬಿಟ್ಟಿದ್ದಾನೆ.

ತಾಯಿಯ ವಿರೋಧದ ಆಕ್ರೋಶ

ಅಕ್ಷಯ ಹಾಗೂ ಕೋಮಲ್‌ ಒಬ್ಬರನ್ನೊಬ್ಬರು ಪ್ರೀತಿ ಮಾಡುತಿದ್ದು, ಇವರ ಪ್ರೀತಿಗೆ ತಾಯಿಯ ವಿರೋಧವಿತ್ತು ಎನ್ನಲಾಗಿದೆ. ಈ ನಡುವೆ ಕೆಲವು ದಿನಗಳ ಹಿಂದೆ ಅಕ್ಷಯನಿಗೆ ಬೈಕು ಅಪಘಾತವಾಗಿತ್ತು. ಕೆಲ ಕಾಲ ಆಸ್ಪತ್ರೆಯಲ್ಲಿ ಇದ್ದ ಅವನಿಗೆ ಒಂದು ಕಾಲಿಗೆ ರಾಡ್‌ ಹಾಕಲಾಗಿತ್ತು, ಇದಾದ ಸ್ವಲ್ಪ ದಿನಗಳಲ್ಲೇ ಅಪೆಂಡಿಕ್ಸ್‌ ಚಿಕಿತ್ಸೆಗೆ ಒಳಗಾಗಬೇಕಾಯಿತು.

ತನ್ನ ಮದುವೆಯನ್ನು ವಿರೋಧಿಸುತ್ತಿರುವ ತಾಯಿಯೇ ತನಗೆ ಮಾಟ-ಮಂತ್ರ ಮಾಡಿಸುತ್ತಿದ್ದಾಳೆ. ಇದರಿಂದಾಗಿಯೇ ತನಗೆ ಈ ರೀತಿ ತೊಂದರೆಗಳಾಗುತ್ತಿವೆ ಎಂದು ಅಕ್ಷಯ್‌ಗೆ ಅನಿಸಲು ತೊಡಗಿತ್ತು.

ಹಾಗಾಗಿ ಅವಳೇ ಇದೆಲ್ಲಾ ನಡೆಯುವ ಹಾಗೆ ನಮ್ಮ ಮೇಲೆ ಮಾಟ -ಮಂತ್ರ ಮಾಡಿಸುತ್ತಿದ್ದಾಳೆ ಅಂತ ಭಾವಿಸಿದ ಅಕ್ಷಯ ಹಾಗೂ ಕೋಮಲ್‌ ಇಬ್ಬರೂ ಸೇರಿ ಅಕ್ಷಯ ಕಿರಿಯ ಸಹೋದರನಿಗೆ ತಾಯಿಯ ಬಗ್ಗೆ ಇಲ್ಲ ಸಲ್ಲದ್ದನ್ನು ಹೇಳಿ ಅವಳ ಚಾರಿತ್ರ್ಯ ವಧೆ ಮಾಡಿ, ಕೊಲೆಗೆ ಸ್ಪೂರ್ತಿ ನೀಡಿದ್ದಾರೆ. ನಂತರ ಮೂವರು ಸೇರಿ ನಿರ್ಮಲಾ ಬೆನ್ನು, ಕುತ್ತಿಗೆ, ಹೊಟ್ಟೆ ಭಾಗದಲ್ಲಿ ಚಾಕೂವಿನಿಂದ ಇರಿದು ಕೊಲೆ ಮಾಡಿದ್ದಾರೆ .ಅಂತಾ ಇನಸ್ಪೆಕ್ಟರ್‌ ಪವಾರ್‌ ಇ ಕುರಿತು ಮಾಹಿತಿ ನೀಡಿದ್ದಾರೆ.ಕೊಲೆಯಾಗಿರುವ ಮಹಿಳೆ ಹೆಸರು ನಿರ್ಮಲಾ ವಿಜಯ ಠಾಕೂರ್‌. ಈಕೆಯ ಮಕ್ಕಳಾದ ಅಕ್ಷಯ ಠಾಕೂರ್‌(25) ಪ್ರೇಯಸಿ ಕೋಮಲಾ (22) ಅಕ್ಷಯ ಕಿರಿಯ ಸಹೋದರನನ್ನು ‌ಪೊಲೀಸರು ಬಂದಿಸಿದ್ದಾರೆ. ಸಧ್ಯ ಅಕ್ಷಯ ಹಾಗೂ ಇತನ ಪ್ರೇಯಸಿ ಕೊಮಲನನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಹಾಗೂ ಅಕ್ಷಯ ಕಿರಿಯ ಸಹೋದರನನ್ನು ರಿಹಾಬ್‌ನ ಡೊಂಗ್ರಿ ಬಾಲನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ: ಓದುವ ವಯಸ್ಸಿನಲ್ಲಿ ಕೊಲೆಗೆ ಯತ್ನ; ಆರೋಪಿಗಳ ಬಂಧನ

Exit mobile version