Site icon Vistara News

ಪ್ರೀತಿಯನ್ನು ಒಪ್ಪಲಿಲ್ಲ ಎಂದು 15 ವರ್ಷದ ಹುಡುಗಿಯ ಪ್ರಾಣ ತೆಗೆದ ಪಾಗಲ್​​; ತಲೆಗೇ ಗುಂಡಿಟ್ಟು ಕೊಂದ ಕಿರಾತಕ

girl shot Dead After Reject love in Uttar Pradesh

ಲಖನೌ: ತನ್ನ ಪ್ರೀತಿ ಒಪ್ಪಲಿಲ್ಲ ಎಂಬ ಕಾರಣಕ್ಕೆ ಯುವಕನೊಬ್ಬ, ಇನ್ನೂ 18 ತುಂಬದ ಹುಡುಗಿಯನ್ನು ಗುಂಡಿಟ್ಟುಕೊಂದಿದ್ದಾನೆ. ಉತ್ತರ ಪ್ರದೇಶದ ಭಾದೋಹಿ ಎಂಬಲ್ಲಿ ಈ ದುರ್ಘಟನೆ ನಡೆದಿದೆ.

15ವರ್ಷದ ಹುಡುಗಿ ಅನುರಾಧಾ ಬಿಂಡ್​​ ತನ್ನ ಸಹೋದರ ಸಂಬಂಧಿ ನೇಹಾ ಎಂಬುವಳೊಂದಿಗೆ ಕೋಚಿಂಗ್​ ಕೇಂದ್ರದಿಂದ ವಾಪಸ್​ ಮನೆಗೆ ಬರುತ್ತಿದ್ದಳು. ಆಗ ಅಲ್ಲಿಗೆ ಬಂದ ಅರವಿಂದ್​ ವಿಶ್ವಕರ್ಮ (22) ಎಂಬಾತ ಮೊದಲು ಏನೋ ಮಾತಾಡಿದ್ದಾನೆ. ಹಾಗೇ, ತಕ್ಷಣವೇ ಆಕೆಯ ತಲೆಗೆ ಗುಂಡಿಟ್ಟಿದ್ದಾನೆ. ಅನುರಾಧಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಆರೋಪಿ ಅರವಿಂದ್ ಪರಾರಿಯಾಗಿದ್ದಾನೆ. ಆತನನ್ನು ಪತ್ತೆ ಮಾಡುವ ಕಾರ್ಯಾಚರಣೆ ನಡೆಯುತ್ತಿದೆ. ಅರವಿಂದ್​ ವಿಶ್ವಕರ್ಮ ಅನುರಾಧಾಳನ್ನು ಪ್ರೀತಿಸುವುದಾಗಿ ಹೇಳಿಕೊಂಡಿದ್ದ. ಪದೇಪದೇ ಆಕೆಗೆ ಪ್ರಪೋಸ್​ ಕೂಡ ಮಾಡಿದ್ದ. ಅವಳ ಬಳಿ ಹೋಗಿ, ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದ. ಆದರೆ ಆಕೆ ಒಪ್ಪಿಕೊಂಡಿರಲಿಲ್ಲ. ಇದೇ ಕಾರಣಕ್ಕೆ ಗುಂಡಿಟ್ಟು ಕೊಂದಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಅನಿಲ್​ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: Woman murder : ಪ್ರೀತಿಸಲು ನಿರಾಕರಿಸಿದ ಯುವತಿಯನ್ನು ಮನೆಯಂಗಳದಲ್ಲೇ ಕೊಂದು ಹಾಕಿದ್ದ ಕಿರಾತಕ ಅರೆಸ್ಟ್‌

Exit mobile version