Site icon Vistara News

ಉದ್ಯೋಗವಿಲ್ಲದ ಮಗ ಮಾದಕ ವ್ಯಸನಿಯಾದ; ಕೆಲಸ ಮಾಡು ಎಂದ ಅಜ್ಜಿ, ಅಪ್ಪ-ಅಮ್ಮ, ಸೋದರಿಯನ್ನು ಹತ್ಯೆಗೈದ!

Bhatkal exposed the reason behind the massacre of four members of the same family Police are on the lookout for the accused

25 ವರ್ಷದ ಹುಡುಗನೊಬ್ಬ ತನ್ನ ಅಜ್ಜಿ, ಅಪ್ಪ-ಅಮ್ಮ, ಸಹೋದರಿಯನ್ನು ಹತ್ಯೆ ಮಾಡಿದ್ದಾನೆ. ನೈಋತ್ಯ ದೆಹಲಿಯ ಪಾಲಮ್​ನಲ್ಲಿರುವ ಈ ಹುಡುಗನ ಮನೆಯಲ್ಲಿ ಮಂಗಳವಾರ ದೊಡ್ಡ ಜಗಳವಾಗಿದೆ. ಅದರ ಬೆನ್ನಲ್ಲೇ ಆತ ಎಲ್ಲರನ್ನೂ ಹತ್ಯೆಗೈದಿದ್ದಾನೆ. ಸದ್ಯ ಅವನೀಗ ಅರೆಸ್ಟ್ ಆಗಿದ್ದಾನೆ. ಆರೋಪಿ ಹೆಸರು ಕೇಶವ್​ ಎಂದಾಗಿದ್ದು, ಆತ ತನ್ನ ಅಜ್ಜಿ ದಿವಾನೋ ದೇವಿ (75), ಅಪ್ಪ ದಿನೇಶ್ ಮತ್ತು ತಾಯಿ ದರ್ಶನಾ ಮತ್ತು ಸಹೋದರಿ ಊರ್ವಶಿ ಅವರನ್ನು ಮಾರಕಾಸ್ತ್ರಗಳಿಂದ ಕೊಂದು ಹಾಕಿದ್ದಾನೆ ಎಂದು ತನಿಖಾಧಿಕಾರಿ ಮಾಹಿತಿ ನೀಡಿದ್ದಾರೆ.

ಕೇಶವ್​ ಮಾದಕ ವ್ಯಸನಿಯಾಗಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲೇ ಗೊತ್ತಾಗಿದೆ. ಈತನಿಗೆ ಒಂದು ಸ್ಥಿರವಾದ ಉದ್ಯೋಗ ಇರಲಿಲ್ಲ. ಇದೇ ಕಾರಣಕ್ಕೆ ಮನೆಯಲ್ಲಿ ಗಲಾಟೆಯಾಗುತ್ತಿತ್ತು. ಮನೆಯಲ್ಲಿ ಯಾರೇನೇ ಹೇಳಿದರೂ ಅವರ ಬಳಿ ಆತ ಜಗಳಕ್ಕೆ ಹೋಗುತ್ತಿದ್ದ. ಮಂಗಳವಾರವೂ ಅದೇ ಆಯಿತು. ಆದರೆ ಗಲಾಟೆ ಜೋರಾಗಿ ಕೇಶವ್​ ಎಲ್ಲರನ್ನೂ ಕೊಂದು ಹಾಕಿದ್ದಾನೆ. ಅವರ ನೆರೆಮನೆಯವರು ನಮಗೆ ರಾತ್ರಿ 10.30ರ ಹೊತ್ತಿಗೆ ಮಾಹಿತಿ ನೀಡಿದರು. ಅಲ್ಲಿಗೆ ಹೋಗುವಷ್ಟರಲ್ಲಿ ಬಾಗಿಲು ಹಾಕಿತ್ತು, ಒಳಗಿನಿಂದ ಚಿಲಕವೂ ಹಾಕಿಕೊಂಡಿತ್ತು. ನಾವು ಬಾಗಿಲು ಒಡೆದು ಹೋಗುವಷ್ಟರಲ್ಲಿ ನಾಲ್ಕೂ ಜನ ಹೆಣವಾಗಿ ಬಿದ್ದಿದ್ದರು. ಆರೋಪಿ ಕೇಶವ್​ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ. ನಾವು ಅದನ್ನು ತಡೆದು, ಬಂಧಿಸಿದ್ದೇವೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Shraddha Murder Case | ಶ್ರದ್ಧಾ ವಾಳ್ಕರ್​ ಹತ್ಯೆ ಕೇಸ್​​ ಸಿಬಿಐಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದ ದೆಹಲಿ ಹೈಕೋರ್ಟ್​

Exit mobile version