Site icon Vistara News

ಬಿಟ್ಟು ಹೋಗಿದ್ದ ಮಡದಿ ಮತ್ತೆ ಬಂದಳು; ಲವರ್​ ಜತೆ ಸೇರಿ, ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ಪತಿಯ ಜೀವ ತೆಗೆದಳು

Road Accident

ಮುಂಬಯಿ: ಪತಿ-ಸಂಸಾರ ಯಾವುದೂ ಬೇಡ ಎಂದು ಬಿಟ್ಟು ಹೋದವಳು ಕೆಲ ವರ್ಷಗಳ ಬಳಿಕ ವಾಪಸ್ ಬಂದು, ತನ್ನ ಲವರ್ ಜತೆ ಸೇರಿ ಅವನ ಪ್ರಾಣ ತೆಗೆದಿದ್ದಾಳೆ.

ಮಹಿಳೆ ಹೆಸರು ಕವಿತಾ. ಈಕೆಯ ಪತಿ ಕಮಲಕಾಂತ್ ಮತ್ತು ಪ್ರಿಯಕರನ ಹೆಸರು ಹಿತೇಶ್ ಜೈನ್. ಕವಿತಾ ತನ್ನ ಪತಿಯನ್ನು ಬಿಟ್ಟು ಹೋದವಳು, ಮಕ್ಕಳ ಭವಿಷ್ಯಕ್ಕಾಗಿ ವಾಪಸ್ ಬರುತ್ತೇನೆ ಎಂದು ಹೇಳಿ ಬಂದಿದ್ದಳು. ಆಕೆ ಹೀಗೆ ಬಂದ ಕೆಲ ದಿನಗಳಲ್ಲಿ ಕಮಲಕಾಂತ್ ಅಮ್ಮ ಏಕಾಏಕಿ ತೀರಿಹೋದರು. ಅವರಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.

ಅದಾಗಿ ಕೆಲವು ತಿಂಗಳ ಬಳಿಕ ಕಮಲಕಾಂತ್ ಗೆ ಹೊಟ್ಟೆ ಕಾಯಿಲೆ ಶುರುವಾಯಿತು. ಆತನ ಆರೋಗ್ಯ ಕ್ಷೀಣಿಸಿತು. ಆಸ್ಪತ್ರೆಗೆ ದಾಖಲಿಸಿ ತಪಾಸಣೆ ನಡೆಸಿದಾಗ, ಶಾಕಿಂಗ್ ವರದಿ ಹೊರಬಿದ್ದಿತ್ತು. ಕಮಲಕಾಂತ್ ದೇಹದಲ್ಲಿ ಅರ್ಸಾನಿಕ್ ಮತ್ತು ಥಾಲಿಯಂ ಪ್ರಮಾಣ ವಿಪರೀತ ಎನ್ನುವಷ್ಟು ಹೆಚ್ಚಿತ್ತು. ವಿಷ ರಕ್ತಕ್ಕೆ ಸೇರಿತ್ತು. ಇದು ತೀರ ಅಸಹ ಅನ್ನಿಸಿದ್ದರಿಂದ ಪೊಲೀಸರಿಗೂ ಆಸ್ಪತ್ರೆಯಿಂದ ಮಾಹಿತಿ ನೀಡಲಾಯಿತು. ಒಮ್ಮೆಗೇ ವಿಷ ಸೇವನೆ ಮಾಡಿದ್ದಲ್ಲ. ಬದಲಿಗೆ ನಿಧಾನಕ್ಕೆ ಇವರ ದೇಹಕ್ಕೆ ವಿಷಕಾರಿ ಅಂಶಗಳನ್ನು ಸೇರಿಸಿರಬಹುದು ಎಂಬ ಅಭಿಪ್ರಾಯವನ್ನು ವೈದ್ಯರು ಹೇಳಿದರು.

ಪೊಲೀಸರು ಅಲರ್ಟ್​ ಆಗಿ ತನಿಖೆ ನಡೆಸಿ, ಕವಿತಾಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆಕೆಯೇ ಸತ್ಯ ಬಾಯ್ಬಿಟ್ಟಿದ್ದಾಳೆ. ನಾನು ಮತ್ತು ಹಿತೇಶ್​ ಒಟ್ಟಿಗೇ ಬದುಕಬೇಕಿತ್ತು. ಅದಕ್ಕಾಗಿ ಕಮಲಕಾಂತ್​ ದೇಹಕ್ಕೆ ಸ್ಲೋಪಾಯ್ಸನ್​ ನೀಡುತ್ತ ಬಂದೆ ಎಂದು ಒಪ್ಪಿಕೊಂಡಿದ್ದಾಳೆ. ಆತ ತಿನ್ನುವ ಆಹಾರದಲ್ಲಿ ವಿಷ ಹಾಕುತ್ತಿದ್ದೆ ಎಂದು ಹೇಳಿದ್ದಾಳೆ. ಇನ್ನು ಕಮಲಕಾಂತ್​ ತಾಯಿ ಕೂಡ ಹೀಗೆ ಮೃತಪಟ್ಟಿದ್ದರಿಂದ, ಆಕೆಗೂ ಏನಾದರೂ ವಿಷ ಪ್ರಾಶನ ಆಗಿದೆಯಾ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Suicide case | ಮದುವೆಯಾಗಿ ಒಂದೂವರೆ ವರ್ಷದೊಳಗೆ ಗೃಹಿಣಿ ಆತ್ಮಹತ್ಯೆ; ಪತಿ, ಮನೆಯವರ ಮೇಲೆ ದೂರು ದಾಖಲು

Exit mobile version