Site icon Vistara News

ಫೇಸ್​​ಬುಕ್​ ಲೈವ್​​ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಅಯೋಧ್ಯೆ ಅರ್ಚಕ; ಪೊಲೀಸರ ವಿರುದ್ಧ ಆರೋಪ

Priest kills self in Facebook live At Ayodhya

#image_title

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ನರಸಿಂಹ ದೇವಸ್ಥಾನದ 28ವರ್ಷದ ಅರ್ಚಕ ರಾಮ್​ ಶಂಕರ್ ದಾಸ್​ (28) ಎಂಬುವರು ಫೇಸ್​ಬುಕ್ ಲೈವ್ (Facebook Live)​​ ಮಾಡುತ್ತಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರ ಕಿರಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದವರು ಹೇಳಿದ್ದಾರೆ. ರಾಯ್​ಗಂಜ್​ ಪೊಲೀಸ್ ಔಟ್​ಪೋಸ್ಟ್​​ ಠಾಣೆಯ ಮುಖ್ಯ ಅಧಿಕಾರಿ ಮತ್ತು ಕಾನ್​ಸ್ಟೆಬಲ್​ವೊಬ್ಬರ ವಿರುದ್ಧ ರಾಮಶಂಕರ್​ ದಾಸ್​ ಗಂಭೀರ ಆರೋಪ ಮಾಡಿದ್ದಾರೆ.

ಇದೇ ವರ್ಷ ಜನವರಿಯಲ್ಲಿ ನರಸಿಂಹ ದೇವಸ್ಥಾನದ ಹಿರಿಯ ಅರ್ಚಕ ರಾಮ್​ ಶರಣ್ ದಾಸ್ (80) ನಾಪತ್ತೆಯಾಗಿದ್ದಾರೆ. ಅವರ ಕಣ್ಮರೆಗೆ ಕೇಸ್​​ಗೆ ಸಂಬಂಧಿಸಿದಂತೆ ರಾಮ್​ ಶಂಕರ್​ ದಾಸ್​ ವಿರುದ್ಧ ಕೆಲವೇ ದಿನಗಳ ಹಿಂದೆ ಪೊಲೀಸರು ಎಫ್​ಐಆರ್​ ದಾಖಲು ಮಾಡಿದ್ದಾರೆ. ಆ ಅರ್ಚಕ ರಾಮ್​ ಶಂಕರ್​​ ದಾಸ್ ಇದೇ ವಿಷಯ ಇಟ್ಟುಕೊಂಡು ಫೇಸ್​ಬುಕ್​ ಲೈವ್​ನಲ್ಲಿ ಪೊಲೀಸರ ವಿರುದ್ಧ ಆರೋಪ ಮಾಡಿದ್ದಾನೆ. ದೇವಸ್ಥಾನದ ಆವರಣದಲ್ಲಿಯೇ ಕೋಣೆಯೊಂದರಲ್ಲಿ ವಾಸವಾಗಿದ್ದ ರಾಮ ಶಂಕರ್ ದಾಸ್​ ಎರಡು ದಿನಗಳಾದರೂ ರೂಮಿನ ಬಾಗಿಲು ತೆಗೆಯದೆ ಇದ್ದಾಗ, ಪೊಲೀಸರೇ ಕೋಣೆಯ ಬಾಗಿಲು ಒಡೆದು ಒಳಹೋಗಿದ್ದಾರೆ. ಬಟ್ಟೆಯಿಂದಲೇ ಆತ ನೇಣು ಬಿಗಿದುಕೊಂಡಿದ್ದಾನೆಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Nepal plane crash | ವೈರಲ್‌ ವಿಡಿಯೊ| ಯೇತಿ ಏರ್‌ಲೈನ್ಸ್‌ನ ಕೊನೆಯ ಕ್ಷಣಗಳು ಫೇಸ್‌ಬುಕ್‌ನಲ್ಲಿ ದಾಖಲು!

ಮೃತ ರಾಮ್​ ಶಂಕರ್ ದಾಸ್​ ಆರೋಪವನ್ನು ಕೊತ್ವಾಲಿ ಪೊಲೀಸ್ ಠಾಣೆ ಅಧಿಕಾರಿ ಮನೋಜ್ ಶರ್ಮಾ ಅಲ್ಲಗಳೆದಿದ್ದಾರೆ. ರಾಮ್​ ಶಂಕರ್​ ದಾಸ್​ ಮಾದಕ ವಸ್ತು ವ್ಯಸನಿಯಾಗಿದ್ದ. ಡ್ರಗ್ಸ್​ ಸೇವಿಸಿ, ಅದರ ಅಮಲಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರ ವಿರುದ್ಧ ಅವನು ಮಾಡಿರುವ ಆರೋಪ ಅಪ್ಪಟ ಸುಳ್ಳು ಎಂದಿದ್ದಾರೆ. ತನಿಖೆ ಮುಂದುವರಿಸಿದ್ದಾರೆ.

Exit mobile version