Site icon Vistara News

Gujarat | ಅಮಲೇರಿಸಿಕೊಂಡು ಡ್ರೈವ್​ ಮಾಡಿದ ಕಾಂಗ್ರೆಸ್ ಶಾಸಕನ ಅಳಿಯ; 6 ಮಂದಿಯ ಜೀವ ತೆಗೆದ !

Car Accident In Gujarat

ನವ ದೆಹಲಿ: ಗುಜರಾತ್​​ನ ಆನಂದ್​ ಜಿಲ್ಲೆಯಲ್ಲಿ ಎಸ್​ಯುವಿಯೊಂದು ಬೈಕ್​ ಮತ್ತು ಆಟೋಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಮೃತಪಟ್ಟಿದ್ದಾರೆ. ಈ ಎಸ್​ಯುವಿ ಚಾಲನೆ ಮಾಡುತ್ತಿದ್ದವನು ಕಾಂಗ್ರೆಸ್​ ಶಾಸಕ (Congress MLA)ನೊಬ್ಬನ ಅಳಿಯನಾಗಿದ್ದು, ಆತನಿಗೂ ಗಾಯಗಳಾಗಿವೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ, ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆನಂದ್​ ನಗರವನ್ನು ತಾರಾಪುರ್​ನೊಂದಿಗೆ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ, ಸೋಜಿತ್ರಾ ಗ್ರಾಮದ ಬಳಿ ಗುರುವಾರ ಸಂಜೆ ಅಪಘಾತ ನಡೆದಿದೆ. ಎಸ್​ಯುವಿ ಚಾಲಕ ಅಮಲೇರಿದ ಸ್ಥಿತಿಯಲ್ಲಿದ್ದ ಎಂದೂ ಪೊಲೀಸರು ತಿಳಿಸಿದ್ದಾರೆ.

ಈ ಎಸ್​ಯುವಿ ವಾಹನ, ಸೋಜಿತ್ರಾ ವಿಧಾನಸಭಾ ಕ್ಷೇತ್ರದ ಶಾಸಕ ಪುನಂಭಾಯಿ ಮಾಧಭಾಯಿ ಪರ್ಮಾರ್ ಅಳಿಯ ಖೇತನ್​ ಪಾದಿಯಾರ್​ಗೆ ಸೇರಿದ್ದು ಎಂದು ಎಎಸ್​​ಪಿ ಅಭಿಷೇಕ್​ ಗುಪ್ತಾ ತಿಳಿಸಿದ್ದಾರೆ. ಹಾಗೇ, ಕಾರು ಮಾಲೀಕ ಮತ್ತು ಚಾಲಕ ಖೇತನ್​ ನಿರ್ಲಕ್ಷ್ಯದಿಂದಲೇ ಈ ಅಪಘಾತ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಮೃತಪಟ್ಟವರೆಲ್ಲ, ಸೋಜಿತ್ರಾ ಮತ್ತು ಬೋರಿಯಾವಿ ಗ್ರಾಮದವರು ಎಂದು ಸ್ಥಳೀಯ ಎಸ್​​ಪಿ ಅಜಿತ್​​ ರಜಿನ್​ ತಿಳಿಸಿದ್ದಾರೆ. ಖೇತನ್​ ವಿರುದ್ಧ ಭಾರತೀಯ ದಂಡ ಸಂಹಿತೆ 304ರಡಿ, ನರಹತ್ಯೆ ಪ್ರಕರಣ ದಾಖಲು ಮಾಡಲಾಗುವುದು. ಮೃತರಾದ ಆರೂ ಮಂದಿಯ ಸಂಪೂರ್ಣ ವಿವರವನ್ನೂ ಕಲೆಹಾಕಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ. ಈ ವಿಚಾರವನ್ನು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಕೂಡ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಹೆಬ್ಬಾಳ ಬಳಿ ಸರಣಿ ಅಪಘಾತ, ಪ್ರಾಣಾಪಾಯದಿಂದ ಪಾರಾದ ಕಾರು ಚಾಲಕರು

Exit mobile version