Site icon Vistara News

Honeytrap Case: ಹನಿಟ್ರ್ಯಾಪ್‌ ಮೂಲಕ ನಿರ್ಮಾಪಕನಿಗೆ ನಿರ್ದೇಶಕ ಬ್ಲ್ಯಾಕ್‌ಮೇಲ್!

Raveendra Honeytrap sandalwood

ಬೆಂಗಳೂರು: ಹನಿಟ್ರ್ಯಾಪ್‌ ಮಾಡಿ ಯುವತಿಯರ ಮೂಲಕ (Honeytrap Case) ನಿರ್ಮಾಪಕನಿಂದ ಹಣ ಕಿತ್ತ ನಿರ್ದೇಶಕನನ್ನು ಪೊಲೀಸರು ಬಂಧಿಸಿದ್ದಾರೆ. ರವೀಂದ್ರ ಎಂಬ ಚಲನಚಿತ್ರ ನಿರ್ದೇಶಕ ಈ ಕೃತ್ಯ ಎಸಗಿದ್ದಾನೆ. ನಿರ್ಮಾಪಕ ಚಿಂಗಾರಿ ಮಹಾದೇವ್ ಅವರಿಗೆ ಹುಡುಗಿಯರ ಮುಖಾಂತರ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ರವೀಂದ್ರ. ಮಾತ್ರವಲ್ಲ ಹಲವು ನಿರ್ಮಾಪಕರಿಗೆ ಹಣಕ್ಕಾಗಿ ಬೇಡಿಕೆ ಇಟ್ಟಿರುವುದಾಗಿಯೂ ತಿಳಿದು ಬಂದಿದೆ.

ನಿರ್ಮಾಪಕ ಚಿ೦ಗಾರಿ ಮಹಾದೇವ ಅನ್ನಪೂರ್ಣೇಶ್ಮರಿ ನಗರ ಠಾಣೆಯಲ್ಲಿ ನಿರ್ದೇಶಕ ರವೀ೦ದ್ರ ವಿರುದ್ಧ ದೂರು ನೀಡಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. “ಚಿ೦ಗಾರಿ’, “ಶ್ರೀಕ೦ಠ’, ‘ಶಿಶಿರ’ ಸಿನಿಮಾಗಳನ್ನು ಚಿ೦ಗಾರಿ ಮಹದೇವ ನಿರ್ಮಾಣ ಮಾಡಿದ್ದಾರೆ.

ನಿರ್ಮಾಪಕ ಚಿ೦ಗಾರಿ ಮಹಾದೇವ
ರವೀಂದ್ರ ಚಲನಚಿತ್ರ ನಿರ್ದೇಶಕ

ಇದನ್ನೂ ಓದಿ: Belgavi News : ಹನಿಟ್ರ್ಯಾಪ್‌ ಮಾಡಿದಳೆಂದು ಚಪ್ಪಲಿ ಹಾರ ಹಾಕಿ ಮೆರವಣಿಗೆ!

‘ಬಾರಬಾತ್‌’ ಸಿನಿಮಾ ನಿರ್ದೇಶಕ ರವೀಂದ್ರ ಯುವತಿಯರ ಮೂಲಕ ಹನಿಟ್ರ್ಯಾಪ್‌ ಮಾಡಿ ಬೆದರಿಸಿ ಹಣ ಪಡೆದ ಆರೋಪ ಕೇಳಿಬ೦ದಿದ್ದು, ಪೊಲೀಸರು ಕ್ರಮಕೈಗೊಂಡಿದ್ದಾರೆ.

Exit mobile version