Site icon Vistara News

Astrology Answers | ನನಗೆ ಆರೋಗ್ಯದ ಸಮಸ್ಯೆ ತುಂಬಾ ಇದೆ, ಏನು ಮಾಡುವುದು ಗುರೂಜಿ?

ಭವಿಷ್ಯ ಪ್ರಶ್ನೋತ್ತರ rajaguru

rajaguru

ಪ್ರಶ್ನೆ: ಆರೋಗ್ಯ ಸಮಸ್ಯೆ ತುಂಬಾ ಇದೆ. ಯಾವುದು ಮೊದಲು, ಯಾವುದು ನಂತರ ಚಿಕಿತ್ಸೆ ಮಾಡಿಸಿಕೊಳ್ಳಬೇಕು ಎಂದು ಗೊತ್ತಾಗದಷ್ಟು ರೋಗಗಳಿವೆ. ಮನೆಯಲ್ಲಿ ಮನದಲ್ಲಿ ನೆಮ್ಮದಿ ಇಲ್ಲ. ಈಗ ಏನು ಮಾಡುವುದು ಗುರೂಜಿ?
ಜನ್ಮದಿನಾಂಕ : 11-07-1976 ನಕ್ಷತ್ರ: ಪೂರ್ವಾಷಾಢ

ಪರಿಹಾರ: ನಿಮ್ಮ ಜಾತಕ ನೋಡುತ್ತಿದ್ದರೆ ನೀವು ಗುರು ವಾಕ್ಯ ಪರಿಪಾಲನೆ ಮಾಡುತ್ತಿಲ್ಲವೆನಿಸುತ್ತಿದೆ. ನೀವು ದೇವರಲ್ಲಿ ಯಾವುದೇ ಪ್ರಾರ್ಥನೆ ಮಾಡಿದರೂ ಅದರಲ್ಲಿ ಸತ್ಯ, ವಿನಯವಿರಬೇಕು. ನಡೆ-ನುಡಿಯಲ್ಲಿ ಸೌಜನ್ಯವಿರಬೇಕು. ಆಗ ದೇವರೂ ನಿಮ್ಮ ಕೈಹಿಡಿದು, ಅರೋಗ್ಯವನ್ನು ನೀಡುತ್ತಾನೆ.

ನಿಮ್ಮಗಿದ್ದ ಸಾಡೇಸಾತ್‌ ಶನಿ ದೋಷ ಇದೇ ಜನವರಿ 17ರಿಂದ ಮುಕ್ತಾಯವಾಗುತ್ತಿದೆ. ನಿಮಗೆ ಮುಂದೆ ಒಳ್ಳೆಯ ಕಾಲ ಬರುತ್ತಿದೆ. ಆರೋಗ್ಯದ ಸಮಸ್ಯೆಗಳೂ ದೂರವಾಗುತ್ತವೆ. ಇದಕ್ಕಾಗಿ ಶ್ರೀ ದುರ್ಗಾ ಅಷ್ಟೋತ್ತರ ಪಾರಾಯಣ ಮಾಡಿ. ಪ್ರತಿನಿತ್ಯ ಸಂಜೆ ಧನ್ವಂತರಿ ಅಷ್ಟೋತ್ತರ ಓದಿ. ನಿಮ್ಮ ಜಾತಕದ ಹನ್ನೆರಡನೇ ಮಾನೆಯಲ್ಲಿ ಕೇತು ಇರುವುದರಿಂದ ನಿಮ್ಮ ಆರೋಗ್ಯದ ಸಮಸ್ಯೆಗಳು ಬಗೆಹರಿಯಲು ವೈದ್ಯರ ಸಲಹೆ-ಮಾರ್ಗದರ್ಶನ ಅವಶ್ಯಕ. ಶ್ರೀಗುರು ಚರಿತ್ರೆಯ 30, 31, 32 ನೇ ಅಧ್ಯಾಯವನ್ನು ಓದಿ. ಶ್ರೀ ಗುರು ದತ್ರಾತ್ರೇಯನು ನಿಮ್ಮ ನಿರೋಗಿಗಳನ್ನಾಗಿ, ಆರೋಗ್ಯವಂತರನ್ನಾಗಿ, ಆಯುಷ್ಯವಂತರನ್ನಾಗಿ ಮಾಡುತ್ತಾನೆ. ನಿಮಗೆ ರಾಹು ದಶಾ ಬುಧ ಭುಕ್ತಿ ನಡೆಯುತ್ತಿರುವುದರಿಂದ ಶ್ರೀ ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿದರೆ‌ ಸದೃಢವಾದ ದೇಹ ನಿಮ್ಮದಾಗುತ್ತದೆ. ಒಳ್ಳೆಯದಾಗಲಿ.

ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್‌ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್‌. ದ್ವಾರಕನಾಥ್‌ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್‌ ವಿಳಾಸ: janasamparka@vistaranews.com

ಇದನ್ನೂ ಓದಿ | Weekly Horoscope | ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

Exit mobile version