Site icon Vistara News

Astrology Answers : ಉದ್ಯೋಗದಲ್ಲಿ ಬಹಳ ಕಿರಿಕಿರಿಯಾಗುತ್ತಿದೆ ಪರಿಹಾರ ತಿಳಿಸಿ ಗುರೂಜಿ

ಭವಿಷ್ಯ ಪ್ರಶ್ನೋತ್ತರ rajaguru

rajaguru

ಪ್ರಶ್ನೆ: ಗುರುಗಳೇ, ನಾನು ಎಂದಿನಂತೆಯೇ ಕೆಲಸ ಮಾಡುತ್ತಿದ್ದರೂ ಕೆಲವು ದಿನಗಳಿಂದ ಉದ್ಯೋಗದಲ್ಲಿ ಬಹಳ ಕಿರಿಕಿರಿಯಾಗುತ್ತಿದೆ. ಪರಿಹಾರ ತಿಳಿಸಿ.
ರಾಶಿ: ತುಲಾ ನಕ್ಷತ್ರ: ವಿಶಾಖ

ಪರಿಹಾರ: ನಿಮ್ಮ ಜೀವನದಲ್ಲಿನ ಕಗ್ಗತ್ತಲ್ಲನ್ನು ದೂರ ಮಾಡಲು ಸೂರ್ಯನೇ ಬಂದಿದ್ದಾನೆ. ಹೆದರಬೇಡಿ, ಎಲ್ಲವನ್ನೂ ಆತನೇ ನೋಡಿಕೊಂಡು, ನಿಮ್ಮನ್ನು ಮುಂದೆ ಸಾಗಿಸುತ್ತಾನೆ. ನಿಮ್ಮದು ವಿಶಾಖ ನಕ್ಷತ್ರ. ಈ ನಕ್ಷತ್ರದ ಅಧಿಪತಿ ಗುರು. ಆತ ನಿಮ್ಮನ್ನು ಕಾಯುತ್ತಾನೆ. ನೀವು ಉದ್ಯೋಗದಲ್ಲಿ ಕಿರಿಕಿರಿಯಾಗುತ್ತದೆ ಎಂದು ಹೆದರಬೇಡಿ. ಹೆದರಿಕೆಯಿಂದ ಯಾವುದೇ ಪ್ರಯೋಜನವಿಲ್ಲ. ನೀವು ಚಿಂತೆಯನ್ನು ಬಿಟ್ಟು ಎಂದಿನಂತೆ ಕೆಲಸದಲ್ಲಿ ಮುನ್ನುಗ್ಗಿ. ಶನಿಯು ಪಂಚದಲ್ಲಿರುವುದರಿಂದ ಉದ್ಯೋಗ ಸ್ಥಳದಲ್ಲಿ ಎಲ್ಲರೊಂದಿಗೂ ಸಂಯಮದಿಂದ ವರ್ತಿಸಿ. ನಗುನಗುತ್ತಲೇ ಪರಿಸ್ಥಿತಿಯನ್ನು ನಿಭಾಯಿಸಿ. ಅನಗತ್ಯ ಚರ್ಚೆಗೆ ಅವಕಾಶ ಮಾಡಿಕೊಡದಿದ್ದರೆ ನಿಮ್ಮ ಸುಖಕ್ಕೆ, ಕ್ಷೇಮಕ್ಕೆ ಧಕ್ಕೆಯು ಬರುವುದಿಲ್ಲ. ಏಪ್ರಿಲ್‌ ನಂತರ ನಿಮಗೆ ಒಳ್ಳೆಯದಾಗಲಿದೆ. ಶುಭವಾಗಲಿ.

ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್‌ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್‌. ದ್ವಾರಕನಾಥ್‌ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ಇ-ಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕೇಳಲು ನಮ್ಮ ಇ-ಮೇಲ್‌ ವಿಳಾಸ: janasamparka@vistaranews.com

ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.

ಇದನ್ನೂ ಓದಿ : Yearly Horoscope 2023 | ಹೊಸ ವರ್ಷದಲ್ಲಿ ಯಾವೆಲ್ಲಾ ಗ್ರಹಗಳ ಸಂಚಾರವಿರಲಿದೆ? ದ್ವಾದಶ ರಾಶಿಗಳ ಮೇಲೆ ಪರಿಣಾಮವೇನು?

Exit mobile version